ರಾಮನಗರ ಜಿಲ್ಲೆಯ ಸಣ್ಣ ಹಳ್ಳಿಯಲ್ಲಿ ದಲಿತ ಕುಟುಂಬದಲ್ಲಿ ಜನಿಸಿದ ಇವರು ಬಾಲ್ಯದಿಂದಲೇ ಅಜ್ಜಿಯ ಜನಪದ ಹಾಡಿನ ಮೋಡಿಗೆ ಒಳಗಾಗಿ ಮುಂದೆ ಗಾಯಕರಾಗಿ ಬಹು ಎತ್ತರಕ್ಕೆ ಬೆಳೆದವರು. ಇವರು ತತ್ವಪದಗಳ ಬಗ್ಗೆ ಡಿ.ಲಿಟ್ ಸಂಶೋಧನೆಯನ್ನು ಕೈಗೊಂಡಿದ್ದಾರೆ.
ಮೂಲಧಾಟಿಯ ಜನಪದ ಗೀತೆಗಳಿಗೆ ಜೀವಂತಿಕೆ ತುಂಬಿದ ಅಪರೂಪದ ಗಾಯಕರಲ್ಲಿ ಒಬ್ಬರಾದ ಅಪ್ಪಗೆರೆ ತಿಮ್ಮರಾಜು ಗ್ರಾಮೀಣ ಭಾಗಗಳಲ್ಲಿ ಈಗಲೂ ಹಾಡುವ ಅನೇಕ ಗೀತೆಗಳನ್ನು ಸಂಗ್ರಹಿಸಿ ಅದಕ್ಕೊಂದು ಹೊಸ ರೂಪವನ್ನು ಕೊಟ್ಟಿದ್ದಾರೆ.
ದೇಶದ ತುಂಬ ತಮ್ಮ ಸಿರಿಕಂಠದಿಂದ ಮೋಡಿ ಮಾಡಿರುವ ಇವರು ವಿದೇಶಗಳಲ್ಲಿಯೂ ಅನೇಕ ಕಾರ್ಯಕ್ರಮಗಳನ್ನು ನೀಡಿ ಜನಮನ ಸೂರೆಗೊಂಡಿದ್ದಾರೆ.
Categories