ಉಡುಪಿ ಜಿಲ್ಲೆಯ ಅಮ್ಮೆಂಬಳದವರಾದ ಅಮ್ಮೆಂಬಳ ಆನಂದ ಮಾಧ್ಯಮ ಕ್ಷೇತ್ರದಲ್ಲಿ ಅವಿರತವಾಗಿ ದುಡಿದ ಹಿರಿಯ ಜೀವ, ತತ್ವನಿಷ್ಠ ಪತ್ರಕರ್ತರು.
ಬಂಟ್ವಾಳದಲ್ಲಿ ೧೯೨೬ರಲ್ಲಿ ಜನಿಸಿದ ಆನಂದ ಅವರು ಮಾಧ್ಯಮ ಲೋಕದಲ್ಲಿ ಕೃಷಿಗೈದವರು. ಕೇಂದ್ರದ ಮಾಜಿ ಸಚಿವರಾದ ಜಾರ್ಜ್ ಫರ್ನಾಂಡಿಸ್ ಅವರ ಸಹಪಾಠಿ. ದಿನಕರ ದೇಸಾಯಿ ಅವರ ಜನಸೇವಕ ಪತ್ರಿಕೆಯಲ್ಲಿ ಹದಿನೆಂಟು ವರ್ಷಗಳ ಕಾಲ ಸಂಪಾದಕರಾಗಿ ದುಡಿದವರು. ನವಭಾರತ, ಪ್ರಜಾವಾಣಿ, ಸಂಯುಕ್ತಕರ್ನಾಟಕ ಹಾಗೂ ಉದಯವಾಣಿಯ ವರದಿಗಾರರಾಗಿ ಅಕ್ಷರ ಸೇವೆ ಸಲ್ಲಿಸಿದವರು. ೪೦ರ ದಶಕದಲ್ಲಿ ಮುಂಬಯಿ ಹೊಟೇಲ್ ಮಾಣಿಗಳಿಗಾಗಿ ರಾತ್ರಿ ಕನ್ನಡ ಶಾಲೆ ತೆರೆದು ಕನ್ನಡ ಕಲಿಸಿದವರು. ಸಮಾಜವಾದಿ ಆದರ್ಶಕ್ಕೆ ಒಳಗಾಗಿ ಸಾಮಾಜಿಕ ಬದ್ಧತೆಯಿಂದ ದುಡಿದವರು. ಜನಪ್ರಗತಿ ಪತ್ರಿಕೆಗೆ ಬರೆಯುತ್ತಿದ್ದ ಅವರು ಪತ್ರಿಕೋದ್ಯಮದಲ್ಲಿ ಐವತ್ತು ವರ್ಷಗಳ ಕಾಲ ಸೇವೆಸಲ್ಲಿಸಿದ ಆದರ್ಶವಾದಿ.
Categories