Categories
e-ದಿನ

ಆಗಸ್ಟ್-8

 

ಪ್ರಮುಖ ಘಟನಾವಳಿಗಳು:

1509: ದಕ್ಷಿಣ ಭಾರತದಲ್ಲಿ ವಿಜಯನಗರ ಸಾಮ್ರಾಜ್ಯದ ಪುನರುತ್ಥಾನವ ಚಕ್ರವರ್ತಿ ಕೃಷ್ಣದೇವರಾಯರ ಪಟ್ಟಾಭಿಷೇಕದಿಂದ ಆರಂಭವಾಯಿತು.

1549: ಫ್ರಾನ್ಸ್ ಇಂಗ್ಲೆಂಡಿನ ಮೇಲೆ ಯುದ್ಧ ಸಮರ ಸಾರಿತು.

1576: ಆ ಕಾಲಮಾನದ ವಿಶ್ವದ ಅತ್ಯಾಧುನಿಕ ಸಂಶೋಧನಾ ಸಂಸ್ಥೆಯಾದ ಡೆನ್ಮಾರ್ಕಿನ ಯುರಾನಿಬಾರ್ಗ್ ನಲ್ಲಿರುವ ಟೈಕೋ ಬ್ರಹೆಯವರ ವೀಕ್ಷಣಾಲಯಕ್ಕೆ ಅಡಿಪಾಯ ಹಾಕಲಾಯಿತು.

1609: ವೆನೆಷಿಯನ್ ಸೆನೇಟ್ ಗೆಲೀಲಿಯೋ ಟೆಲಿಸ್ಕೋಪನ್ನು ಪರೀಕ್ಷಿಸಿದರು.

1700: ಡೆನ್ಮಾರ್ಕ್ ಮತ್ತು ಸ್ವೀಡನ್ನಿನ ನಡುವೆ ಶಾಂತಿ ಒಪ್ಪಂದಕ್ಕೆ ಸಹಿ ಮಾಡಲಾಯಿತು.

1786: ಅಮೇರಿಕಾದ ಕಾಂಗ್ರೆಸ್ ಬೆಳ್ಳಿ ಡಾಲರ್ ಮತ್ತು ಹಣದ ದಶಮಾಂಶ ವ್ಯವಸ್ಥೆಯನ್ನು ಅಳವಡಿಸಿಕೊಂಡಿತು.

1854: ಲೋಹದ ಬುಲೆಟ್ ಸಿಡಿಮದ್ದುಗಳಿಗೆ ಸ್ಮಿತ್ ಮತ್ತು ವೆಸ್ಸನ್ ಪೇಟೆಂಟ್ ಪಡೆದರು.

1876: ಥಾಮಸ್ ಎಡಿಸನ್ ಮಿಮಿಯೋಗ್ರಾಫ್ (ನಕಲುಯಂತ್ರವನ್ನು) ಪೇಟೆಂಟ್ ಪಡೆದರು.

1911: ಭಾರೀ ಮಳೆಯ ಪರಿಣಾಮ ಭಾರತದ ಹಲವು ಪ್ರದೇಶಗಳಲ್ಲಿ ಭಾಗದಲ್ಲಿ ಕಾಲರಾ ಸಾಂಕ್ರಾಮಿಕ ರೋಗವುಂಟಾಯಿತು.

1919: ರಾವಲ್ಪಿಂಡಿ ಚರ್ಚೆಯಂತೆ ಬ್ರಿಟನ್ ಅಪ್ಘಾನಿಸ್ತಾನದ ಸ್ವಾತಂತ್ರ್ಯವನ್ನು ಅನುಮೋದಿಸಿತು.

1936: ಭಾರತದ ಮೊದಲ ರಾಷ್ಟ್ರೀಯ ಉದ್ಯಾನವನವಾದ ಕಾರ್ಬೆಟ್ ಉದ್ಯಾನವನ್ನು ತೆರೆಯಲಾಯಿತು.

1942: ಮಹಾತ್ಮ ಗಾಂಧಿಯವರು ಮುಂಬೈಯ ಬ್ರಿಟಿಷ್ ಆಳ್ವಿಕೆಯ ಸ್ವಾತಂತ್ರಕ್ಕಾಗಿ ಕ್ವಿಟ್ ಇಂಡಿಯಾ ಚಳುವಳಿಯನ್ನು ಪ್ರಾರಂಭಿಸಿದರು.

1945: ಸೋವಿಯೆತ್ ಯೂನಿಯನ್ ಎರಡನೇ ವಿಶ್ವಯುದ್ಧದಲ್ಲಿ ಜಪಾನಿನ ವಿರುದ್ಧ ಯುದ್ಧ ಘೋಷಿಸಿತು.

1946: ಭೂತಾನ್ ದೇಶಕ್ಕೆ 32 ಮೈಲಿ ಪ್ರದೇಶವನ್ನು ನೀಡಲು ಭಾರತ ಸಮ್ಮತಿಸಿತು.

1949: ಭಾರತವು ಭೂತಾನಿನ ಜೊತೆಗೆ ಮೈತ್ರಿ ಮಾಡಿಕೊಂಡಿತು.

1966: ಭಾರತವು ಪರಮಾಣು ನಿಷೇಧ ಒಪ್ಪಂದವನ್ನು ಭಾಗಶಃ ಅನುಮೋದಿಸಿತು.

1988: 9 ವರ್ಷದ ಯುದ್ಧದ ನಂತರ ರಷ್ಯಾದ ಸೇನೆ ಅಫ್ಘಾನಿಸ್ತಾನದಿಂದ ಹಿಂದಿರುಗಲು ಆರಂಭಿಸಿತು.

1990: ಮಂಡಲ್ ಆಯೋಗದ ವರದಿಯ ಅನುಷ್ಟಾನದ ವಿರೋಧವಾಗಿ ಬಿಹಾರದಲ್ಲಿ ಹಿಂಸಾತ್ಮಕ ಪ್ರತಿಭಟನೆಯುಂಟಾಯಿತು.

1991: ಭಾರತ ಮತ್ತು ಸೋವಿಯೆತ್ ಒಕ್ಕೂಟವು 20 ವರ್ಷಗಳ ಅವಧಿಗೆ ಪರಸ್ಪರ ಶಾಂತಿ, ಸ್ನೇಹ ಮತ್ತು ಸಹಕಾರಗಳ ಒಪ್ಪಂದವನ್ನು ವಿಸ್ತರಿಸಿತು.

2000: ಪಾಟ್ನಾದ ಬಳಿ ಅಲಯನ್ಸ್ ವಿಮಾನ ದುರಂತವನ್ನು ತನಿಖೆ ಮಾಡಲು ಏರ್ ಮಾರ್ಷಲ್ ಪಿ.ರಾಜಕುಮಾರ್ ಅವರನ್ನು ಮುಖ್ಯಸ್ಥರನ್ನಾಗಿ ನ್ಯಾಯಾಲಯದ ಆದೇಶದಂತೆ ಸರ್ಕಾರವು ನೇಮಕ ಮಾಡಿತು.

ಪ್ರಮುಖ ಜನನ/ಮರಣ:

1921: ಭಾರತೀಯ ರೋಗಶಾಸ್ತ್ರಜ್ಞ ಮತ್ತು ಶಿಕ್ಷಣ ತಜ್ಞ ವುಲಿಮಿರಿ ರಾಮಲಿಂಗಸ್ವಾಮಿ ಜನಿಸಿದರು.

1934: ಭಾರತೀಯ ನಟ, ನಿರ್ದೇಶಕ ಮತ್ತು ಚಿತ್ರಕಥೆಕಾರರಾಗಿದ್ದ ಶರತ್ ಪುಜಾರಿ ಜನಿಸಿದರು.

1940: ಭಾರತೀಯ ಕ್ರಿಕೆಟ್ ಆಟಗಾರ ದಿಲಿಪ್ ಸರ್ದೇಸಾಯ್ ಜನಿಸಿದರು.

1948: ವಿಜ್ಞಾನಿ ಮತ್ತು ನೋಬಲ್ ಪ್ರಶಸ್ತಿ ವಿಜೇತರಾದ ಡಾ.ಎಲ್ಲಪ್ರಗಡ ಸುಬ್ಬರಾವ್ ನಿಧನರಾದರು.

1952: ಭಾರತೀಯ ಕ್ರಿಕೆಟ್ ಪಟು ಸುಧಾಕರರಾವ್ ಜನಿಸಿದರು.

1988: ಭಾರತದ ಬೇಸ್ಬಾಲ್ ಆಟಗಾರ ರಿಂಕು ಸಿಂಗ್ ಜನಿಸಿದರು.

1990: ಪ್ರಸಿದ್ಧ ಉದ್ಯಮಿ ನವಲ್ ಗೋದ್ರೇಜ್ ನಿಧನರಾದರು.

2000: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ನಿಜಲಿಂಗಪ್ಪ ನಿಧನರಾದರು.