Categories
ಕ್ರೀಡೆ ರಾಜ್ಯೋತ್ಸವ 2004 ರಾಜ್ಯೋತ್ಸವ ಪ್ರಶಸ್ತಿ

ಆ ಮತದ ವರ ಶ್ರೀ ಪೈಲ್ವಾನ್ ಮಗ ಉರುಫ್ ರುದ್ರ

ಮೈಸೂರಿನಲ್ಲಿ ಕುಸ್ತಿ ಕಲೆಯನ್ನು ಜಾತ್ರೆಯಂತೆ ಬೆಳೆಸಿದವರು ಪೈಲ್ವಾನ್ ರುದ್ರ ಉರುಫ್ ಮೂಗ ಅವರು.
ಮೈಸೂರಿನ ಹೆಸರಾಂತ ಕುಸ್ತಿ ಪಟು ಶ್ರೀ ಪುಟ್ಟನಂಜಣ್ಣ ಮತ್ತು ಶ್ರೀಮತಿ ನಾಗಮ್ಮ ಅವರ ಮಗ ಶ್ರೀ ರುದ್ರಪ್ಪ, ಪೈಲ್ವಾನ್ ತಂದೆಯ ಮಾರ್ಗದರ್ಶನದಲ್ಲಿ ಕುಸ್ತಿ ಕಲೆಯ ಆರಂಭದ ಕಲಿಕೆ. ಮಾಯಣ್ಣನವರ ಗರಡಿಯಲ್ಲಿ ಕುಸ್ತಿ ಕಲೆಯ ಅಭ್ಯಾಸ.
ಸುಮಾರು ೪ ದಶಕಗಳ ಕಾಲ ತಮ್ಮ ಜೀವನವನ್ನೇ ಕುಸ್ತಿಗಾಗಿ ಮೀಸಲಾಗಿಟ್ಟು, ಮೈಸೂರಿಗೆ ಹೊರಜಿಲ್ಲೆಗಳಿಂದ ಬಂದಂತಹ ಪೈಲ್ವಾನರನ್ನು ಎದುರಿಸಿದವರು. ಪ್ರಸಿದ್ಧ ಕುಸ್ತಿ ಪಟುಗಳು ಮತ್ತು ಪೈಲ್ವಾನ್ ಅಗಡಿ ಅಬ್ದುಲ, ಸಾಂಬಾಜಿ ಪವಾರ್, ಅಸಂಗಿ ದಾವತ್, ಚುವ್ವಲತೀಫ್, ಕುಸಗಲ್ ಮುದಕಪ್ಪ, ಸಾಂಗ್ಲಿ ಸಹದೇವ್ ಮುಂತಾದವರೊಂದಿಗೆ ಸೆಣಸಿದ್ದಾರೆ. ೧೯೭೨ರಲ್ಲಿ ಕೊಲ್ಲಾಪುರದ ಪೈಲ್ವಾನ್ ರಸೂಲ್ ಹನೀಫ್ ಅವರ ಮೇಲೆ ೩ ಗಂಟೆ ೪೫ ನಿಮಿಷ ಸೆಣಸಿ ಕುಸ್ತಿ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯದಲ್ಲಿ ದಾಖಲೆ ಸ್ಥಾಪಿಸಿದ್ದಾರೆ. ಅನೇಕ ಸಂಘಸಂಸ್ಥೆಗಳು ಇವರನ್ನು ಸನ್ಮಾನಿಸಿ ಗೌರವಿಸಿವೆ.
ಮೈಸೂರಿನಲ್ಲಿ ಮನೆಮಾತಾಗಿ ಜನಪ್ರಿಯರಾಗಿರುವ ಇಂದಿಗೂ ಮೂಗಣ್ಣನ ಗರಡಿಯ ಉಸ್ತಾದರಾಗಿ ಯುವಕರಿಗೆ ಮಾರ್ಗದರ್ಶನ ನೀಡುತ್ತಿರುವವರು ಶ್ರೀ ಪೈಲ್ವಾನ್ ರುದ್ರಮೂಗ ಅವರು.