ದಿನಾಚರಣೆಗಳು:
ವಿಶ್ವ ಪಾರಂಪರಿಕ ದಿನ
ಅಂತರರಾಷ್ತ್ರೀಯ ಪಾರಂಪರಿಕ ತಾಣಗಳು ಮತ್ತು ಸ್ಮಾರಕಗಳ ವೈವಿಧ್ಯಮಯ ಸಂಸ್ಕೃತಿಗಳ ಕುರಿತಾಗಿ ಆಸಕ್ತಿ ಮತ್ತು ಅವುಗಳನ್ನು ಉಳಿಸಲು ಅಗತ್ಯವಾದ ಜಾಗೃತಿ ಮೂಡಿಸಲು ಏಪ್ರಿಲ್ 18 ದಿನಾಂಕವನ್ನು ವಿಶ್ವ ಪಾರಂಪರಿಕ ದಿನವನ್ನಾಗಿ ಆಚರಿಸಲಾಗುತ್ತಿದೆ. 1982ರ ವರ್ಷದಲ್ಲಿ ಇಂಟರ್ ನ್ಯಾಷನಲ್ ಕೌನ್ಸಿಲ್ ಆಫ್ ಮಾನ್ಯುಮೆಂಟ್ಸ್ ಮತ್ತು ಸೈಟ್ಸ್ ಸಂಸ್ಥೆಯು ಮುಂದಿಟ್ಟಿದ ಪ್ರಸ್ತಾವನೆಯನ್ನು ಯುನೆಸ್ಕೋ 1983 ವರ್ಷದ ತನ್ನ ಸಭೆಯಲ್ಲಿ ಅಂಗೀಕರಿಸಿತು.
ಪ್ರಮುಖಘಟನಾವಳಿಗಳು:
1521: ಮಾರ್ಟಿನ್ ಲೂಥರ್ ಅವರ ವಿಚಾರಣೆಯು ಆರಂಭಗೊಂಡಿತು. ತಮಗೆ ಬಹಿಷ್ಕಾರ ಹಾಕುವ ಸಾಧ್ಯತೆಗಳ ಕುರಿತು ವಿಚಲಿತರಾಗದ ಅವರು ತಮ್ಮ ಭೋಧನೆಗಳನ್ನು ತ್ಯಜಿಸಲು ನಿರಾಕರಿಸಿದರು.
1859: ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಯೋಧರಾದ ತಾಂತ್ಯಾ ಟೋಪೆ ಅವರನ್ನು ಬ್ರಿಟಿಷ್ ಸರ್ಕಾರ ಗಲ್ಲಿಗೇರಿಸಿತು.
1898: ಭಾರತೀಯ ಕ್ರಾಂತಿಕಾರಿ ದಾಮೋದರ ಹರಿ ಚಾಪೇಕರ್ ಅವರನ್ನು ಬ್ರಿಟಿಷ್ ಆಡಳಿತವು ಗಲ್ಲಿಗೇರಿಸಿತು. 1897ರಲ್ಲಿ ಇಬ್ಬರು ಬ್ರಿಟಿಷ್ ಅಧಿಕಾರಿಗಳನ್ನು ಹತ್ಯೆಗೈದುದಕ್ಕಾಗಿ ಅವರಿಗೆ ಈ ಶಿಕ್ಷೆ ವಿಧಿಸಲಾಯಿತು.
1906: ಭೂಕಂಪ ಮತ್ತು ಬೆಂಕಿಯಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ನಗರವು ಬಹುತೇಕವಾಗಿ ನಾಶಗೊಂಡಿತು.
1912: ಆರ್.ಎಮ್.ಎಸ್. ಟೈಟಾನಿಕ್ ದುರಂತದಲ್ಲಿ ಬದುಕುಳಿದ 705 ಜನರನ್ನು ಕುನಾರ್ಡ್ ನೌಕೆಯಾದ ಆರ್.ಎಮ್.ಎಸ್. ಕರ್ಪಾಥಿಯಾದಲ್ಲಿ ನ್ಯೂಯಾರ್ಕ್ ನಗರಕ್ಕೆ ತರಲಾಯಿತು.
1930: ಚಿತ್ತಗಾಂಗ್ ಶಸ್ತ್ರಾಗಾರದ ಮೇಲೆ ಭಾರತೀಯ ಕ್ರಾಂತಿಕಾರಿಗಳಿಂದ ದಾಳಿ ನಡೆಯಿತು. ಕ್ರಾಂತಿಕಾರಿ ಸೂರ್ಯ ಸೇನ್ ನೇತೃತದಲ್ಲಿ ಇಂಡಿಯನ್ ರಿಪಬ್ಲಿಕನ್ ಆರ್ಮಿಯ 62 ಮಂದಿ ಕ್ರಾಂತಿಕಾರಿಗಳು ಚಿತ್ತಗಾಂಗಿನಲ್ಲಿದ್ದ ಪೊಲೀಸ್ ಮತ್ತು ಬ್ರಿಟಿಷ್ ಪಡೆಗಳ ಶಸ್ತ್ರಾಗಾರದ ಮೇಲೆ ದಾಳಿ ನಡೆಸಿದರು.
2006: ಅಮೆರಿಕದ ಪಾನ್ ಆಮ್ ವಿಮಾನದಲ್ಲಿ ವಿಮಾನ ಅಪಹರಣಕಾರರ ವಿರುದ್ಧ ಸೆಣೆಸಿ ಮಡಿದ ಗಗನಸಖಿ ಚಂಡೀಗಢದ ನೀರಜಾ ಭಾನೋಟ್ ಅವರಿಗೆ ಅಮೆರಿಕದ ಅತ್ಯುಚ್ಛ ಶೌರ್ಯ ಪ್ರಶಸ್ತಿ ಘೋಷಿಸಲಾಯಿತು.
2007: ಕೈಮಗ್ಗ ಉತ್ಪನ್ನಗಳ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿರುವ ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೆ ಅವರು ವಿಶ್ವಸಂಸ್ಥೆಯ ಪ್ರತಿಷ್ಠಿತ `ವಿಮೆನ್ ಟುಗೆದರ್ ಅವಾರ್ಡ್ -2007′ ಗೌರವಕ್ಕೆ ಆಯ್ಕೆಯಾದರು.
2007: ಭಾರತದ ಮಹತ್ವಾಕಾಂಕ್ಷೆಯ ಹಗುರ ಸಾರಿಗೆ ವಿಮಾನ ‘ಸರಸ್’ ತನ್ನ ಪರೀಕ್ಷಾರ್ಥ ಹಾರಾಟವನ್ನು ಯಶಸ್ವಿಯಾಗಿ ಪೂರೈಸಿತು. ಸ್ವದೇಶೀ ನಿರ್ಮಿತ ಮೊದಲ ನಾಗರಿಕ ವಿಮಾನವಾದ ಇದನ್ನು ರಾಷ್ಟ್ರೀಯ ವಿಮಾನಾಂತರಿಕ್ಷ ಪ್ರಯೋಗಾಲಯ (ಎನ್ ಎ ಎಲ್) ಅಭಿವೃದ್ಧಿ ಪಡಿಸಿತು.
2007: ಗಂಟೆಗೆ 200 ಕಿ.ಮೀ. ವೇಗದಲ್ಲಿ ಚಲಿಸುವ ಚೀನಾದ ಬುಲೆಟ್ ರೈಲು ತನ್ನ ಮೊದಲ ಸಂಚಾರವನ್ನು ಬೀಜಿಂಗ್ ನಗರದಲ್ಲಿ ಆರಂಭಿಸಿತು.
2009: ಜಪಾನಿನ ಟೊಟ್ಟೊರಿ ಸಮುದ್ರ ತೀರದಲ್ಲಿ ಮರಳು ಕಲಾಕೃತಿಗಳ ಉತ್ಸವ ಆರಂಭವಾಯಿತು. ವಿಶ್ವದ ಕಾಲ್ಪನಿಕ ಕಥೆಗಳನ್ನು ವಸ್ತುವಾಗಿಟ್ಟುಕೊಂಡು 10 ದೇಶದ ಕಲಾವಿದರು ಈ ಮರಳು ಕಲಾಕೃತಿಗಳ ಉತ್ಸವದಲ್ಲಿ ಪಾಲ್ಗೊಂಡರು.
2008: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿ (ಐಪಿಎಲ್) ಉದ್ಘಾಟನೆಗೊಂಡಿತು.
ಪ್ರಮುಖಜನನ/ಮರಣ:
1858: ಮಹರ್ಷಿ ಕರ್ವೆ ಎಂದೇ ಪ್ರಖ್ಯಾತರಾದ ಮಹಾನ್ ಸಮಾಜ ಸುಧಾರಕರಾದ ಮಹರ್ಷಿ ಧೊಂಡೋ ಕೇಶವ ಕರ್ವೆ ಅವರು ಮಹಾರಾಷ್ಟ್ರದ ಮುರುದ್ ಎಂಬಲ್ಲಿ ಜನಿಸಿದರು. ಮಹಿಳಾ ಶಿಕ್ಷಣ ಹಾಗೂ ಹಿಂದು ವಿಧವೆಯರ ಮರುವಿವಾಹಕ್ಕೆ ಬೆಂಬಲ ನೀಡಿದ ಇವರು ಈ ನಿಟ್ಟಿನಲ್ಲಿ ಅಪಾರ ಕೆಲಸ ಮಾಡಿದ್ದರು. 100ನೇ ಜನ್ಮದಿನದ ಸಂದರ್ಭದಲ್ಲಿ ಈ ಮಹನೀಯರನ್ನು ‘ಭಾರತರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇವರು 1962ರಲ್ಲಿ ತಮ್ಮ 105ನೆಯ ವಯಸ್ಸಿನಲ್ಲಿ ನಿಧನರಾದರು.
1859: ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಯೋಧರಾದ ತಾಂತ್ಯಾ ಟೋಪೆ ಅವರನ್ನು ಬ್ರಿಟಿಷ್ ಸರ್ಕಾರ ಗಲ್ಲಿಗೇರಿಸಿತು.
1898: ಭಾರತೀಯ ಕ್ರಾಂತಿಕಾರಿ ದಾಮೋದರ ಹರಿ ಚಾಪೇಕರ್ ಅವರನ್ನು ಬ್ರಿಟಿಷ್ ಆಡಳಿತವು ಗಲ್ಲಿಗೇರಿಸಿತು. 1897ರಲ್ಲಿ ಇಬ್ಬರು ಬ್ರಿಟಿಷ್ ಅಧಿಕಾರಿಗಳನ್ನು ಹತ್ಯೆಗೈದುದಕ್ಕಾಗಿ ಅವರಿಗೆ ಈ ಶಿಕ್ಷೆ ವಿಧಿಸಲಾಯಿತು.
1942: ಅಮೆರಿಕದ ಶಿಲ್ಪಿ, ಕಲಾ ವಸ್ತುಗಳ ಸಂಗ್ರಹಗಾರ್ತಿ ಮತ್ತು ವಿಟ್ನಿ ಮ್ಯೂಸಿಯಂ ಆಫ್ ಅಮೆರಿಕನ್ ಆರ್ಟ್ ಸ್ಥಾಪಕಿ ಗೆರ್ಟ್ರೂಡ್ ವಾಂಡರ್ಬಿಲ್ಟ್ ವಿಟ್ನಿ ನ್ಯೂಯಾರ್ಕ್ ನಗರದಲ್ಲಿ ನಿಧನರಾದರು.
1945: ವ್ಯಾಕ್ಯೂಮ್ ಟ್ಯೂಬ್ ಸಂಶೋಧಿಸಿದ ಇಂಗ್ಲಿಷ್ ಬೌತವಿಜ್ಞಾನಿ ಜಾನ್ ಆಂಬ್ರೋಸ್ ಇಂಗ್ಲೆಂಡಿನ ಸಿಡ್ಮೌತ್ ಎಂಬಲ್ಲಿ ನಿಧನರಾದರು.
2006: ಹಿರಿಯ ಮರಾಠಿ ಚಲನಚಿತ್ರ ಮತ್ತು ರಂಗಭೂಮಿ ನಟ ಶರದ್ ಅಲಿಯಾಸ್ ದಲ್ ಜೇಮ್ ನೀಸ್ ಅವರು ತಮ್ಮ 72ನೆಯ ವಯಸ್ಸಿನಲ್ಲಿ ಕೊಲ್ಹಾಪುರದಲ್ಲಿ ನಿಧನರಾದರು.