Categories
e-ದಿನ

ಏಪ್ರಿಲ್-25

ಪ್ರಮುಖಘಟನಾವಳಿಗಳು:

1859: ಸುಯೆಜ್ ಕಾಲುವೆಗಾಗಿ ಅದರ ಯೋಜಕ ಫರ್ಡಿನಾಂಡ್ ಡಿ ಲೆಸ್ಸೆಪ್ಸ್ ಮಾರ್ಗದರ್ಶನದಲ್ಲಿ ನೆಲ ಅಗೆಯಲು ಆರಂಭಿಸಲಾಯಿತು. ಸರಿಯಾಗಿ ಇದರ 100 ವರ್ಷಗಳ ನಂತರದಲ್ಲಿ 1959ರಲ್ಲಿ ಅಟ್ಲಾಂಟಿಕ್ ಸಾಗರಕ್ಕೆ ಗ್ರೇಟ್ ಲೇಕ್ಸ್ ಅನ್ನು ಸಂಪರ್ಕಿಸುವ ಸೇಂಟ್ ಲಾರೆನ್ಸ್ ಸಮುದ್ರಮಾರ್ಗವನ್ನು ರಾಣಿ ಎರಡನೇ ಎಲಿಜಬೆತ್ ಹಾಗೂ ಅಧ್ಯಕ್ಷ ಐಸೆನ್ ಹೂವರ್ ಅವರುಗಳು ಜಂಟಿಯಾಗಿ ಉದ್ಘಾಟಿಸಿದರು.

1901: ಅಮೆರಿಕದಲ್ಲೇ ಮೊದಲಬಾರಿಗೆ ವಾಹನಗಳಿಗೆ ಲೈಸೆನ್ಸ್ ಫಲಕಗಳನ್ನು ಹಾಕುವುದನ್ನು ನ್ಯೂಯಾರ್ಕ್ ನಗರದಲ್ಲಿ ಕಡ್ಡಾಯಗೊಳಿಸಲಾಯಿತು.

1945: ವಿಶ್ವ ಸಂಸ್ಥೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಸ್ಯಾನ್ಫ್ರಾನ್ಸಿಸ್ಕೋ ನಗರದಲ್ಲಿ 50 ದೇಶಗಳು ಒಟ್ಟುಗೂಡಿದವು.

1953: ಫ್ರಾನ್ಸಿಸ್ ಕ್ರಿಕ್ ಮತ್ತು ಜೇಮ್ಸ್ ವಾಟ್ಸನ್ ಅವರು ‘ಡಬ್ಬಲ್ ಹೆಲಿಕ್ಸ್ ಸ್ಟ್ರಕ್ಚರ್ ಆಫ್ ಡಿಎನ್.ಎ’ ಅನ್ನು ವಿವರಿಸುವ ‘ಮಾಲೆಕ್ಯುಲರ್ ಸ್ಟ್ರಕ್ಚರ್ ಆಫ್ ನ್ಯೂಕ್ಲಿಯಿಕ್ ಆಸಿಡ್ಸ್: ಎ ಸ್ಟ್ರಕ್ಚರ್ ಆಫ್ ದಿಯೋಕ್ಸಿರಿಬೋಸ್ ನ್ಯೂಕ್ಲಿಯಿಕ್ ಆಸಿಡ್’ ಅನ್ನು ಪ್ರಕಟಿಸಿದರು.

1954: ‘ಬೆಲ್ ಟೆಲಿಫೋನ್ ಲ್ಯಾಬೋರೇಟರಿ’ಯು ಪ್ರಥಮ ವಿಶ್ವಸನೀಯ ಸೋಲಾರ್ ಸೆಲ್ ಅನ್ನು ಸಾರ್ವಜನಿಕವಾಗಿ ಪ್ರದರ್ಶಿಸಿತು.

1960: ಅಮೆರಿಕದ ನೌಕಾಪಡೆಯ ಜಲಾಂತರ್ಗಾಮಿಯಾದ ‘ಯು.ಎಸ್.ಎಸ್ ಟ್ರಿಟಾನ್’ ಪ್ರಥಮ ಅಂತರ್ಜಲ ಪ್ರದಕ್ಷಿಣೆಯನ್ನು ಯಶಸ್ವಿಯಾಗಿ ಪೂರೈಸಿತು.

1961: ರಾಬರ್ಟ್ ನಾಯ್ಸೆ ಅವರಿಗೆ ‘ಇಂಟಿಗ್ರೇಟೆಡ್ ಸರ್ಕ್ಯೂಟಿ’ಗೆ ಪೇಟೆಂಟ್ ನೀಡಲಾಯಿತು.

1981: ಜಪಾನಿನ ತ್ಸುರುಗ ಪರಮಾಣು ವಿದ್ಯುತ್ ಘಟಕದಲ್ಲಿ ದುರಸ್ತಿ ಕೈಗೊಳ್ಳುವಾಗ ನೂರಕ್ಕೂ ಹೆಚ್ಚು ಜನರಿಗೆ ವಿಕಿರಣದ ಪರಿಣಾಮ ತಗುಲುವಂತಾಯಿತು.

ಸತ್ಯಜಿತ್ ರೇ ಅವರ ‘ಶತ್ ರಂಜ್ ಕಿ ಖಿಲಾಡಿ’ ಸಿನಿಮಾ ಪ್ರಸಾರದೊಂದಿಗೆ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ವರ್ಣರಂಜಿತ ರಾಷ್ಟ್ರೀಯ ಪ್ರಸಾರ ಆರಂಭಗೊಂಡಿತು.

1983: ಅಮೆರಿಕದ ಶಾಲಾ ಬಾಲಕಿಯೊಬ್ಬಳು ಸೋವಿಯತ್ ನಾಯಕರಿಗೆ ಪತ್ರವೊಂದನ್ನು ಬರೆದು ಅಣ್ವಸ್ತ್ರ ಯುದ್ಧದ ಕುರಿತಾಗಿ ಭೀತಿ ವ್ಯಕ್ತಪಡಿಸಿದಳು. ಇದನ್ನು ಓದಿದ ಸೋವಿಯತ್ ಯೂನಿಯನ್ನಿನ ನಾಯಕರಾದ ಯೂರಿ ಆಂಡ್ರಪಾವ್ ಅವರು ಆ ಬಾಲಕಿಯನ್ನು ಸೋವಿಯತ್ ಯೂನಿಯನ್ನಿಗೆ ಭೇಟಿ ನೀಡಲು ಆಹ್ವಾನಿಸಿದರು.

1983: ಪಯನಿಯರ್ 10 ಪ್ಲೂಟೋ ಕಕ್ಷೆಯನ್ನೂ ಮೀರಿ ಪಯಣಿಸಿತು.

2008: ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ (ಎನ್ ಎಫ್ ಡಿ ಸಿ) ಅಧ್ಯಕ್ಷರನ್ನಾಗಿ ಹಿರಿಯ ನಟ ಓಂಪುರಿ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿತು.

2008: ಹಿರಿಯ ಕಲಾವಿದ ಡಾ. ಶ್ರೀರಾಮ್ ಲಾಗೂ ಅವರಿಗೆ ಮುಂಬೈನಲ್ಲಿ ಗಾಯಕಿ ಲತಾ ಮಂಗೇಶ್ಕರ್ ಅವರು ದೀನಾನಾಥ್ ಮಂಗೇಶ್ಕರ್ ಪ್ರಶಸ್ತಿ ಪ್ರದಾನ ಮಾಡಿದರು.

2015: ನೇಪಾಳದಲ್ಲಿ ಉಂಟಾದ 7.8 ಪ್ರಮಾಣದ ಭೂಕಂಪನದಲ್ಲಿ ಸುಮಾರು 9100 ಜನ ಅಸುನೀಗಿದರು.

ಪ್ರಮುಖಜನನ/ಮರಣ:

1874: ಇಟಾಲಿಯನ್ ಉದ್ಯಮಿ, ಸಂಶೋಧಕ, ಭೌತವಿಜ್ಞಾನಿ ಗುಗ್ಲೈಲ್ಮೊ ಮಾರ್ಕೊನಿ ಅವರು ಬೋಲಾಗ್ನೋ ಎಂಬಲ್ಲಿ ಜನಿಸಿದರು. ದೂರವಾಹಕ ರೇಡಿಯೋ ಸಂಪರ್ಕ, ಮಾರ್ಕೊನಿ ಲಾ ಮತ್ತು ರೇಡಿಯೋ ಟೆಲಿಗ್ರಾಫ್ ಮುಂತಾದ ಸಂಶೋಧನೆಗಳಿಗೆ ಹೆಸರಾದ ಇವರಿಗೆ ವೈರ್ಲೆಸ್ ಟೆಲಿಗ್ರಫಿ ಕುರಿತಾದ ಮಹತ್ವದ ಕೊಡುಗೆಗಾಗಿ 1909 ವರ್ಷದ ನೊಬೆಲ್ ಭೌತಶಾಸ್ತ್ರದ ಪ್ರಶಸ್ತಿ ಸಂದಿತ್ತು.

1900: ಆಸ್ತ್ರಿಯನ್-ಸ್ವಿಸ್ ಭೌತವಿಜ್ಞಾನಿ ವುಲ್ಫ್ ಗ್ಯಾಂಗ್ ಪೌಲಿ ಅವರು ವಿಯೆನ್ನಾದಲ್ಲಿ ಜನಿಸಿದರು. ‘ದಿ ಎಕ್ಸ್ಕ್ಲೂಶನ್ ಪ್ರಿನ್ಸಿಪಲ್’ ಅಥವಾ ‘ಪೌಲಿ ಪ್ರಿನ್ಸಿಪಲ್’ ಎಂದು ಹೆಸರಾದ ಇವರ ಸಂಶೋಧನೆಗಾಗಿ 1945 ವರ್ಷದ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತು.

1916: ಗಮಕ ಗಂಧರ್ವರೆನಿಸಿದ್ದ ಬಿ. ಎಸ್. ಎಸ್. ಕೌಶಿಕ್ ಅವರು ಕೃಷ್ಣರಾಜಪೇಟೆ ತಾಲ್ಲೂಕಿನ ಹೇಮಗಿರಿ ಕುಪ್ಪಹಳ್ಳಿಯಲ್ಲಿ ಜನಿಸಿದರು. 2017 ಜನವರಿ 19ರಂದು ನಿಧನರಾದ ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಗಮಕ ಸಮ್ಮೇಳನದ ಅಧ್ಯಕ್ಷತೆಯೇ ಮುಂತಾದ ಅನೇಕ ಗೌರವಗಳು ಇವರಿಗೆ ಸಂದಿದ್ದವು.

1955: ಅಂತರರಾಷ್ಟ್ರೀಯ ಮ್ಯಾನೇಜ್ಮೆಂಟ್ ಗುರು ಮತ್ತು ಆಧ್ಯಾತ್ಮಿಕ ಗುರು ಎಂದು ಪ್ರಸಿದ್ಧರಾದ ಸ್ವಾಮಿ ಸುಖಬೋಧಾನಂದ ಅವರು ಬೆಂಗಳೂರಿನಲ್ಲಿ ಜನಿಸಿದರು. 2005 ವರ್ಷದಲ್ಲಿ ಸ್ವಿಟ್ಜರ್ಲ್ಯಾಂಡ್ ದೇಶದ ಲಾವೋಸ್ ನಗರದಲ್ಲಿ ನಡೆದ ‘ವರ್ಲ್ಡ್ ಎಕನಾಮಿಕ್ ಫೋರಂ’ನಲ್ಲಿ ಇವರು ಹಿಂದೂ ಧರ್ಮದ ಪ್ರತಿನಿಧಿಗಳಾಗಿ ಆಹ್ವಾನಿತರಾಗಿದ್ದರು. ಅನೇಕ ಕೃತಿಗಳನ್ನು ರಚಿಸಿರುವ ಇವರ ‘ಮನಸೇ ರಿಲ್ಯಾಕ್ಸ್ ಪ್ಲೀಸ್’ ವಿಶ್ವದ ಅನೇಕ ಭಾಷೆಗಳಲ್ಲಿ ಮೂಡಿ ಪ್ರಸಿದ್ಧಿ ಪಡೆದಿದೆ.

1955: ಅಂತರರಾಷ್ಟ್ರೀಯ ಕಾಫಿ ಮಳಿಗೆಗೆ ಪ್ರಸಿದ್ಧವಾಗಿರುವ ‘ಸ್ಟಾರ್ ಬಕ್ಸ್’ ಸಹ ಸಂಸ್ಥಾಪಕ ಜೆವ್ ಸೀಗಲ್ ಅವರು ಕ್ಯಾಲಿಫೋರ್ನಿಯಾದ ಅಲ್ಮೇಡಾ ಎಂಬಲ್ಲಿ ಜನಿಸಿದರು.

1968: ಪ್ರಖ್ಯಾತ ಹಿಂದೂಸ್ಥಾನಿ ಸಂಗೀತಕಾರರಾದ ಬಡೇ ಗುಲಾಂ ಅಲಿ ಅಲಿ ಖಾನ್ ಅವರು ಹೈದರಾಬಾದಿನಲ್ಲಿ ತಮ್ಮ 66ನೆಯ ವಯಸ್ಸಿನಲ್ಲಿ ನಿಧನರಾದರು. ಪಾಟಿಯಾಲ ಘರಾಣಾ ಮತ್ತು ಖಯಾಲ್ ಹಾಡುಗಾರಿಕೆಯನ್ನು ಜನಪ್ರಿಯಗೊಳಿಸಿದವರಲ್ಲಿ ಇವರು ಪ್ರಮುಖರೆನಿಸಿದ್ದಾರೆ. ಪದ್ಮಭೂಷಣ ಮತ್ತು ಸಂಗೀತ ನಾಟಕ ಅಕಾಡೆಮಿ ಗೌರವಗಳನ್ನೂ ಒಳಗೊಂಡ ಅನೇಕ ಪುರಸ್ಕಾರಗಳು ಇವರಿಗೆ ಸಂದಿದ್ದವು.

2005: ಶ್ರೀ ರಾಮಕೃಷ್ಣ ಮಿಷನ್ನಿನ ಅಧ್ಯಕ್ಷರಾಗಿದ್ದ ಸ್ವಾಮಿ ರಂಗನಾಥಾನಂದ ಅವರು ಬೇಲೂರು ಮಠದಲ್ಲಿ ಜನಿಸಿದರು.

2009: ಭಾರತೀಯ ಮೂಲದ ಅಮೆರಿಕ ಕಾದಂಬರಿಗಾರ್ತಿ, ಪತ್ರಕರ್ತೆ ಶಾಂತಾ ರಾಮರಾವು ಅವರು ತಮ್ಮ 86ನೆಯ ವಯಸ್ಸಿನಲ್ಲಿ ನ್ಯೂಯಾರ್ಕಿನಲ್ಲಿ ನಿಧನರಾದರು. ಈಸ್ಟ್ ಆಫ್ ಹೋಮ್, ವೇ ಟು ದ ಸೌತ್ ಈಸ್ಟ್, ಮೈ ರಷ್ಯನ್ ಜರ್ನಿ ಇತ್ಯಾದಿ ಕೃತಿಗಳನ್ನು ನೀಡಿದ ಶಾಂತಾ ಅವರ ಆತ್ಮಕತೆ ‘ಗಿಫ್ಟ್ಸ್ ಆಫ್ ಪ್ಯಾಸೇಜ್’. ಇ ಎಂ ಫಾಸ್ಟರ್ ಅವರ ‘ಎ ಪ್ಯಾಸೇಜ್ ಟು ಇಂಡಿಯಾ’ ಕಾದಂಬರಿಯನ್ನು ರಂಗಕ್ಕೆ ಅಳವಡಿಸಿದ ಕೀರ್ತಿ ಸಹಾ ಇವರದ್ದಾಗಿದೆ.