ಪಲ್ಲವಿ : ಓಂಕಾರ ಮಂತ್ರವು ಸುತ್ತಲೂ ಸುತ್ತುತಿದೆ
ಜೀವರಾಶಿಗಳನು ನಡೆಸುತ ನುಡಿದಿದೆ
ಚರಣ : ಯಮನ ಕಾಲಕೆ ತಾಳವ ಹಾಕಿದೆ
ಕಾಲ ನಿರ್ಣಯ ತಾನೆ ಮಾಡಿದೆ
ನನ್ನನು ಗೆಲ್ಲಲು ಅಸದಳ ಎಂದಿದೆ
ಸ್ಥೂಲ ಸೂಕ್ಷ್ಮದಿ ತಾನೇ ಮೆರೆದಿದೆ
ಕೈಗೆ ಕಣ್ಣಿಗೆ ಎಟುಕದೆ ಇರುತಿದೆ
ಗಾತ್ರವು ಬಣ್ಣವು ಇಲ್ಲದೆ ಆಗಿದೆ
ಸಾಧಕರೆಲ್ಲರ ಮನದಲಿ ನಿಂತಿದೆ
ಸಚ್ಚಿದಾನಂದರ ಯೋಗಕೆ ಒಲಿದಿದೆ
Leave A Comment