ಆಕರ್ಷಕ ವೇಷ ಭೂಷಣಗಳಿಂದ ಸೆಳೆಯುವ ಗೊರವರ ಕಲೆಯನ್ನು ಚಿಕ್ಕಂದಿನಲ್ಲಿಯೇ ಕಲಿತು ಕುಣಿತ ಆರಂಭಿಸಿದ ಕೆಂಚಮಾದೇಗೌಡ ಈ ಜಾನಪದ ಕಲೆಯ ವೈವಿಧ್ಯತೆಯನ್ನು ನಾಡಿಗೆಲ್ಲ ಹಂಚುವ ಕಾಯಕದಲ್ಲಿ ನಿರತರಾಗಿದ್ದಾರೆ.
ಗೊರವರ ಕುಣಿತಕ್ಕೆ ಅಗತ್ಯವಾದ ಎಲ್ಲ ಗತ್ತು ಗಮ್ಮತ್ತುಗಳನ್ನು ತಿಳಿದುಕೊಂಡಿರುವ ಕೆಂಚಮಾದೇಗೌಡ ಕಣ್ಮನ ಸೆಳೆಯುವಂತೆ ಕುಣಿಯುವ ಅಪರೂಪದ ಕಲಾವಿದ. ಗೊರವ ಕುಣಿತದ ಪ್ರದರ್ಶನವನ್ನು ದೇಶ-ವಿದೇಶಗಳಲ್ಲಿ ಪ್ರದರ್ಶಿಸಿರುವ ಕೆಂಚಮಾದೇಗೌಡ, ಹೊಸ ಪೀಳಿಗೆಯ ಗೊರವರ ಕುಣಿತ ಕಲಾವಿದರನ್ನು ತಯಾರು ಮಾಡುವಲ್ಲಿ ನಿರತರಾಗಿದ್ದಾರೆ. ಈ ಜನಪದ ಕಲೆಗೆ ಜೀವ ತುಂಬುತ್ತಿರುವ ಕೆಂಚಮಾದೇಗೌಡರಿಗೆ ಕರ್ನಾಟಕ ಜಾನಪದ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಸಂದಿದೆ.
Categories
ಕೆಂಚಮಾದೇಗೌಡ
