Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಶಿಲ್ಪಕಲೆ

ಕೆ.ಜ್ಞಾನೇಶ್ವ‌ರ್‌

ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಶಿಲ್ಪಕಲಾವಿದರಲ್ಲಿ ಕೆ.ಜ್ಞಾನೇಶ್ವರ್ ಅವರದ್ದು ಅಚ್ಚಳಿಯದ ಹೆಸರು. ಸಾಂಪ್ರದಾಯಿಕ ಶಿಲ್ಪಕಲೆಯಲ್ಲಿ ತಮ್ಮದೇ ವೈಶಿಷ್ಟ್ಯದಿಂದ ಜನಜನಿತರು.
ಶಿಕಾರಿಪುರದ ಸುಪ್ರಸಿದ್ಧ ಚಿತ್ರಕಲಾವಿದರಾದ ತಿಪ್ಪಾಜಿ ವಂಶದ ಕುಡಿ ಕೆ.ಜ್ಞಾನೇಶ್ವರ್. ಶಿವಮೊಗ್ಗದಲ್ಲಿ ೧೯೪೬ರ ಆಗಸ್ಟ್ ೨೧ರಂದು ಜನಿಸಿದ ಜ್ಞಾನೇಶ್ವರ್ ಅವರಿಗೆ ಚಿತ್ರ, ಶಿಲ್ಪಕಲಾಸಕ್ತಿ ಹುಟ್ಟಿನಿಂದಲೇ ಬಂದ ಬಳುವಳಿ. ತಾತ ಶಿಕಾರಿಪುರದ ಪರಶುರಾಮಪ್ಪನವರೇ ಮೊದಲ ಗುರು. ಬಿಎಸ್‌ ಎಸ್ಸಿ ಪದವಿ ಪಡೆದರೂ ಕಲೆಯೇ ಕಾಯಕಕ್ಷೇತ್ರ ಹುಬ್ಬಳ್ಳಿಯ ಶ್ರೀ ವಿಜಯ ಮಹಾಂತೇಶ ಲಲಿತಕಲಾ ವಿದ್ಯಾಲಯದಲ್ಲಿ ಕಲಾಶಿಕ್ಷಣ. ೧೯೭೫ರಿಂದ ವೃತ್ತಿಪರ ಕಲಾವಿದರಾಗಿ ಕಲಾಜೀವನ, ಸಾಂಪ್ರದಾಯಿಕ, ಭಾವಶಿಲ್ಪ ಹಾಗೂ ದೇವಾಲಯ ವಾಸ್ತುಶಿಲ್ಪಗಳಲ್ಲಿ ಸಿದ್ಧಹಸ್ತರು. ಶಿವಮೊಗ್ಗ, ಕೊಯಮತ್ತೂರು, ಮಧುರೈ, ಮಂಗಳೂರು, ಬೆಂಗಳೂರು, ಹುಬ್ಬಳ್ಳಿ ಮಾತ್ರವಲ್ಲದೆ, ವಿದೇಶಗಳಲ್ಲೂ ಇವರ ಶಿಲ್ಪಕಲಾಕೃತಿಗಳು ನೆಲೆನಿಂತಿರುವುದು ಸಾಧನೆಯ ಕೈಗನ್ನಡಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಸದಸ್ಯತ್ವ, ವಾರ್ಷಿಕ ಗೌರವ ಪ್ರಶಸ್ತಿಗಳಿಂದ ಭೂಷಿಸಲ್ಪಟ್ಟಿರುವ ಜ್ಞಾನೇಶ್ವರ್ ಅವರು ನಾಲ್ಕೂವರೆ ದಶಕದಿಂದ ಕಲಾಸೇವೆಯಲ್ಲಿ ನಿರತ ಶಿಲ್ಪಕಲಾಕೋವಿದರು.