೧೫ನೇ ವಯಸ್ಸಿಗೆ ಕರಡಿ ಮಜಲು ಕಲಾಕ್ಷೇತ್ರಕ್ಕೆ ಕಾಲಿಟ್ಟ ಗುರುಲಿಂಗಪ್ಪ ವೀರಸಂಗಪ್ಪ ಕರಡಿ ಅವರು ನಿರಂತರವಾಗಿ ಆರು ದಶಕಗಳಿಂದ ಕರಡಿ ಮಜಲು ಕಲೆಯನ್ನು ಪ್ರದರ್ಶಿಸುತ್ತ ಬದುಕು ಸಾಗಿಸುತ್ತಿದ್ದಾರೆ. ಮಲ್ಲಿಕಾರ್ಜುನ ಅಸುಂಡಿಯವರಿಂದ ಸಂಗೀತ ದೀಕ್ಷೆ ಪಡೆದ ವೀರಸಂಗಪ್ಪನವರು ಇದನ್ನು ಕಲೆ ಹಾಗೂ ದೈವಿಕ ಕಾರ್ಯವೆಂದು ಭಾವಿಸಿ ಅದರೊಂದು ಅವಿನಾಭಾವ ಅನುಸಂಧಾನ ಕೈಗೊಂಡಿದ್ದಾರೆ.
ಕರಡಿ ಮಜಲು ಕಲೆಯಲ್ಲಿ ಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡ ವೀರಸಂಗಪ್ಪ ಕರಡಿ ಅವರು ಕರ್ನಾಟಕದ ಬಹುತೇಕ ಕಲಾ ಮಹೋತ್ಸವಗಳಲ್ಲಿ ಕರಡಿ ಮಜಲು ಕಲೆಯನ್ನು ಪ್ರದರ್ಶಿಸುವ ಮೂಲಕ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಕರಡಿ ಮಜಲು ಕಲೆಯನ್ನು ಮುಂದಿನ ಪೀಳಿಗೆಗೂ ಕರೆದೊಯ್ಯುವ ನಿಟ್ಟಿನಲ್ಲಿ ಯುವಕರಿಗೆ ಮಾರ್ಗದರ್ಶನ ನೀಡುತ್ತಿರುವ ಗುರುಲಿಂಗಪ್ಪ ವೀರಸಂಗಪ್ಪನವರು ಕರ್ನಾಟಕ ಜಾನಪದ ಅಕಾಡೆಮಿ, ಜಾನಪದ ಲೋಕ ಪ್ರಶಸ್ತಿ, ಲೋಕೋತ್ಸವ ಪ್ರಶಸ್ತಿ ಹೀಗೆ ಹಲವಾರು ಗೌರವಗಳನ್ನು ಪಡೆದಿದ್ದು, ಸಾರ್ಕ್, ದಕ್ಷಿಣ ವಲಯ ಸಾಂಸ್ಕೃತಿಕ ಉತ್ಸವ, ಭಾರತ ಅಂತರರಾಷ್ಟ್ರೀಯ ಸಂಗೀತ ಮಹೋತ್ಸವ ಸೇರಿದಂತೆ ಅನೇಕ ಪ್ರತಿಷ್ಟಿತ ಕಲಾ ಮಹೋತ್ಸವಗಳಲ್ಲಿ ಕರಡಿ ಮಜಲು ಪ್ರದರ್ಶಿಸಿದ ಹೆಗ್ಗಳಿಕೆ ಇವರದು.
Categories