ಕಂಡು ಬಾಗೂರ ಸೆಟ್ಟಿಗಳೆಲ್ಲ ಸಹವಾಗಿ ಎಂದ ಮಾತನು ಕೇಳಿ ೭೩[2]ನೊಂದು ಚಿಂತಿಸುತಲಿ೭೩[3] ಅಪ್ಪಾಜಿ ಕೇಳೆನ್ನ ಗೋವಿಂದ ನೊಸಲೊಳು ಆರ ಮಗನ ನಾನಾರಿಗೆ ಕೊಡಲಪ್ಪ ಎಂದ ಮಾತನು ಕೇಳುತ ಕಾಚಣ್ಣನು ಬಂದು ಹೋಗುವನಲ್ಲ ತಂದೆ ಸಿರುಮನಾಣೆ ಕಾಳಗಕಾಗಿ ನೀ ಬಂದುದಿಲ್ಲವೊ ಕಾಚ ನಿನ್ನ ಪಟ್ಟಣದೊಳು ಹೆಣ್ಣೆಂಬರೆಲ್ಲರು ಹಿಂದಣ ಸತ್ಯಪ್ರಮಾಣಕೆ ಗೋವಿಂದ ಎದ್ದು ಕೈಮುಗಿದು ಕಾಚ ಗೋವಿಂದಗೆ ಉಕ್ಕುವ ಕಂಬನಿ ಸಹಿತ ಗೋವಿಂದನು ಎನ್ನೊಡನಿಂದು ಸಾವೊ ಬಂಟರು ಬನ್ನಿ ಉಡುದಾರವ ಕಿತ್ತು ಮುಂಗೈಗೆ ಕಟ್ಟಿದರು ಆಳುವೇರಿಯನೇರಿ ಕಾಚಯ್ಯ ಹಿಡಿಸಿದ ಚಂದ್ರಪುರದ ಬಾಗಿಲ ಸಾರಿಸಿ ಕಾಚ ತಳರು . . .ಯ ಮಾಡಿ ಬಂಟರು ನಡೆದರು ನೆಟ್ಟ ತಳಿಯ ಕಿತ್ತು ಹೊತ್ತು ಸೂರೆಯ ಮಾಡಿ ಬಲ್ಲಿದ ಬಂಟರು ಕಡಿದಾಡುತಿರಲಾಗಿ ಆಳಾಳುಗಳ ಮೆಟ್ಟಿ ಹೊಯ್ಯುತ ನಡೆದನು ಕಲಕಿತು ಬಲವು ಅವರಿವರೆನ್ನದೆ ೮೧[14]ಅದ್ದಲಿಸುತ೮೧[15] ನರಸಿಂಹನವರು ಸ- ಒಡನೆ ಬೆರಸಿ ಬಹ ಪರಿವಾರ ಗುಜ್ಜಲೋಬ ಹೇಳಿದ ಮಾತನು ಕೇಳುತ ಕಾಚಯ್ಯ ಗೆಜ್ಜೆ ಕಾಲಾಟದ ಹರಿಗೆಯ ಬಂಟರು ನರಸಿಂಹನ ದಂಡ ಹೊರಟು ತಿಮ್ಮಯ್ಯನ ಏರಿದ ವಾರುವ ಹರಿದಾಳು ಸಿಕ್ಕದೆ ಉಪ್ಪಿನಮಾಳಿಗೆ ಬಂದನು ಕಾಚಯ್ಯ ಬಿದಿರಿನ ಕಹಳೆಯ ಕೇಳುತ ಕಾಚನೆಂ ಹೊಕ್ಕು ಬಂದನು ತಂದೆ ಸಿರುಮೇಂದ್ರನೋಲಗಕೆ ಮೋಸವ ಮಾಡಿ ಬಾಗೂರ ಗೋವಿಂದನ ಗೋವಿಂದನಾಯಕಗೆ ಹೇಳದೆ ಬಂದೆಯ ಹೇಳದಿಳಿದು ಬಂಧ ಗೋವಿಂದನಾಯಕಗೆ ತೋರಿದ ಶೌರ್ಯ ಪ್ರತಾಪಗಳೆಲ್ಲವು ಕಂದ ಕಾಚನ ಕೋಪವ ಕಂಡು ಸಿರುಮೇಂದ್ರ ಹಂದೆತನದಿ ಗೋವಿಂದಗೆ ಹೇಳದೆ ಹೀಗೆಂದು ಹೇಳೆ ಹಾಗಹುದೆಂದು ಸಿರುಮೇಂದ್ರ ಬಲುಹಿಂದ ಬಲವ ಕಲಕಿ ಹೊಕ್ಕು ಬಾಗೂರ ಹೋಗಲಿ ಕಾಚನು ಕೇಳು ನರಸಿಂಹರಾಯ ಈಶ್ವರನಾಯಕನ ನುಡಿಗೇಳಿ ನರಸಿಂಹ ಛಲವಿಕ್ಕಿ ಮಲತು ನಡೆದು ದೊರೆಗಳ ಮುಂದೆ ಏನು ಎಳ್ಳನಿತು ಕಾಣಿಸದಂತೆ ಬಾಗೂರ [1] ೭೨ ಈ ಪದ್ಯ “ಶಿ” ಪ್ರತಿಯಲ್ಲಿ ಇಲ್ಲ. ಇಲ್ಲಿ ಪ್ರಾಸ ತಪ್ಪಿದೆ. ಎರಡು ಪದ್ಯಗಳು ಒಂದಾಗಿರಬಹುದು (ಸಂ) [2] ೭೩-೭೩ದನು ಗೋವಿಂದ (ಶಿ) [3] ೭೩-೭೩ದನು ಗೋವಿಂದ (ಶಿ) [4] ೭೪-೭೪ ಕಾಚನ ಕೈಯಾರೆ ಗೋ (ಶಿ). [5] ೭೪-೭೪ ಕಾಚನ ಕೈಯಾರೆ ಗೋ (ಶಿ). [6] ೭೫ ಈ ಪದ್ಯ “ಹ” ಪ್ರತಿಯಲ್ಲಿ ಮಾತ್ರವಿದೆ (ಸಂ) [7] ೭೬ ಈ ಪದ್ಯ “ಶಿ” ಪ್ರತಿಯಲ್ಲಿ ಮಾತ್ರವಿದೆ (ಸಂ) [8] ೭೭–೭೭ ಜನರಿ(ಶಿ), *_*ಮೂರು (ಶಿ,ಹ). [9] ೭೭–೭೭ ಜನರಿ(ಶಿ), *_*ಮೂರು (ಶಿ,ಹ). [10] ೭೮. ಈ ಪದ್ಯದ ಉತ್ತರಾರ್ಧ “ಶಿ” ಪ್ರತಿಯಲ್ಲಿ ಇಲ್ಲ (ಸಂ) [11] ೭೯. ಈ ಪದ್ಯದ ಪೂರ್ವಾರ್ಧ “ಶಿ” ಪ್ರತಿಯಲ್ಲಿ ಇಲ್ಲ (ಸಂ). [12] ೮೦–೮೦ ಬಿದ್ದಾನೆ (ಶಿ) [13] ೮೦–೮೦ ಬಿದ್ದಾನೆ (ಶಿ) [14] ೮೧–೮೧ ಆಧರಿಸುತ (ಶಿ) [15] ೮೧–೮೧ ಆಧರಿಸುತ (ಶಿ) [16] *-* ಟ (ಶಿ, ಹ) [17] *-* ಟ (ಶಿ, ಹ) [18] *_* x(ಶಿ, ಹ). [19] *_* x(ಶಿ, ಹ).
ಮಂಡಲಪತಿಯೆ ನಾವಿನ್ನು
ಕೊಡು ಕಾಚನ ಕೈಸೆರೆಯ ನಮಗೆಯೆಂದು
ನುಡಿದನೀಶ್ವರಿ ನಾಯಕನು೭೨
ಬಂಧುಜನರ ಕರೆಸಿದನು
ಇಂದೆನ್ನ ೭೪[4]ಕಂದ ಕಾಚನ ಕೈಸೆರೆಯ ಗೋ೭೪[5]
ವಿಂದನಾಯಕ ಕೊಡೆನೆಂದ ||೧೫೩||
ತಪ್ಪದಿದೆ ವಿಧಿಲಿಖಿತವೆಂದ
ಕಪ್ಪವ ಕೊಟ್ಟು ಬದುಕು ನರಸಿಂಹಗೆ
ಒಪ್ಪಿಸೆಂದನು ಕಾಚೇಂದ್ರಪತಿ ||೧೫೪||
ಧೀರ ಕಾಚಣ್ಣ ಬೂದಿಹಾಳ್ಗೆ[ಇ]ರದೆ ಹೋಗು ನಾವು ನರಸಿಂಹನ ಕಂಡು
ಧಾರುಣಿಯೊಳು ಬದುಕುವೆವು ||೧೫೫||
ನೊಂದು ಮಮ್ಮಲನೆ ಮರುಗುತಲಿ
ಕುಂದದೆ ನರಸಿಂಹನೊಡನೆ ಯುದ್ಧವ ಮಾಡಿ
ಹಿಂದೆನಾ ಹೋಗುವೆನೆಂದ೭೫[6] ||೧೫೬||
ಸಂದೇಹ ಬೇಡ ನೋಡೆಂದ
ಮುಂದುಗೆಡಿಸಿ ನರಸಿಂಹನ ದಂಡನು ಪೆನು
ಗೊಂಡೆ ಬಾಗಿಲ ಹೊಗಿಸುವೆನು೭೬[7] ||೧೫೭||
ಸೂಳೆ ೭೭[8]ಬೆನಕಿ೭೭[9]ಗಾಗಿ ಬಂದೆ
ಹೇಳಿದ ಮಾತಿಗೆ ಹೋಗಲಿಲ್ಲವೊ ಎಂದು
ತಾಳಿದ ಮನದಿ ರೋಷವನು ||೧೫೮||
ನನ್ನ ತಾಯಿ ಸಮಾನ
ಬಿನ್ನೈಸಿ ನುಡಿದನು ಕಾಚ ಗೋವಿಂದಗೆ
ಮನ್ನಣೆಯಲಿ *[ಮರು]*ಮಾತ ||೧೫೯||
ತಂದೆ ಸಿರುಮ ಕಳುಹಿದನು
ಕುಂದಿನ ಮಾ[ತ]ನಾಡಿದೆಯೆಂದು ಕಾಚಣ್ಣ
ನೊಂದೆದ್ದ ತನ್ನ ಮನದಲ್ಲಿ ||೧೬೦||
ಬುದ್ಧಿಯ ಮಾತ ಹೇಳಿದನು
ಇದ್ದ ದಂಡನು ಕಡಿವುತ ಬೂದಿಹಾಳಿಗೆ
ನಿರ್ಧರದಲಿ ಪೋಪೆನೆಂದ ||೧೬೧||
ತರ್ಕೈಸಿ ಉಡುಗೊರೆ ಇತ್ತು
ಮಕ್ಕಳ ಮಾಣಿಕ ಕಂದ ಕಾಚಯ ನೀನು
ಸಿಕ್ಕದೆ ಪೋಗು ಬೂದಿಹಾಳಿಗೆ ||೧೬೨||
ಚಿನ್ನಗಾಳೆಯ ಹಿಡಿಸಿದನು
ಮನ್ನೆಯ ಕಾಚನ ಮುನ್ನೂರು ಪರಿವಾ[ರ]
ಉನ್ನಿಸಿದರು ತಮತಮಗೆ ||೧೬೩||
ಕಡುಗಲಿಗಳು ಪಂಥದಲಿ
ಸಿಡಿಲ ಸೆರೆಯ ಬಿಟ್ಟಂದದಿ ಬಂದರು
ಒಡೆಯ ಕಾಚನ ಎಡಬಲದಿ ||೧೬೪||
ಕಹಳೆಯನಾಗ ಬೇಗದಲಿ
ಸಾಳುವ ನರಸಿಂಹನ ಪಾಳ್ಯ ಜತನವೆಂದು
ಕೋಳುಗೊಂಬೆನು ಇಂದಿನಿರುಳೆ ||೧೬೫||
ಬಂದನು ಆನೆವಾಳದಲಿ
ಹೊಂದಿದ ಬಾಗಿಲ ಹನುಮಗೆ ಶರಣೆಂದು
ಮಂದಿ ಸಹಿತ ಪೊರವೊಂಟ೭೮[10] ||೧೬೬||
ಇಳಿವುತಿರ್ದುರು ಸೊಬಗಿನಲಿ
ಸೆಳೆದು ಗುಡಾರವ ಹರಿದು ಸೂರೆಯ ಮಾಡಿ
ಕೊಲಲೋ ಎಂದು ಬೊಬ್ಬಿರಿದು೭೯[11] ||೧೬೭||
ಅಷ್ಟಮದವು ಕವಿದಂತೆ
ಕುಟ್ಟಿ ಸಂಹರಮಾಡಿ ಬಂಟರು ನಡೆದರು
ಪಟ್ಟದಾನೆಯು ಕಾಚನ ||೧೬೮||
ಬಾಳೆ ಕದಳಿ ಬಿದ್ದಂತೆ
ಸಾಳುವ ನರಸಿಂಹನ ದಂಡಿನೊಳಗೆ ಹೊಕ್ಕು
ಬೀಳಲಿರಿದು ಕೆಡಹಿದರು ||೧೬೯||
ಕಾಳೆಯನಾಯಕ ಕರಿಯ
ಘೋಳೆಂದು ನರಸಿಂಹನ ಪಾಳಯದೊಳು
ಕೋಳುಗೊಂಡನು ಗೊಲ್ಲ ಕಾಚ ||೧೭೦||
ಕೊಲಲೋ ಎಂದು ಬೊಬ್ಬಿರಿದು
ಅಲಗಿನ ಮೊನೆಯಲಿ ಹೊಯ್ಯಲು ಕಿಡಿಸೂಸಿ
ಬಲಗೈಯ್ಯ ಕತ್ತಿ ೮೦[12]ಬಿದ್ದೋಡೆ೮೦[13] ||೧೭೧||
ಮುದ್ರದ ತೆರೆಗಳಂದದಲಿ
ಎದ್ದು ಬರಲು ಬೇಗ ಕಾಚನ ಬಂಟರು ಉ-
ಬ್ಬೆದ್ದು ಕಡಿಯೆ ಪರಬಲವ ||೧೭೨||
ತಡೆಯ ಬಂದರೇನೋ ಹೇಳೊ
ಮಿಡಿಯ ಗಾಯವು ತಾಕಿ ಹಡಪದ ತಿಮ್ಮನು
ನಡೆಯಲಾರದೆ ಬರುತಹನೆ ||೧೭೩||
ಪಾಳೆಯಕಾಗಿ ತಿರುಗಿದನು
ಆಳುವ ಧನಿ ಬಂದು ಹಡಪದ ತಿಮ್ಮನ
ತೋಳುಗೈಯ್ಯಿಕ್ಕಿ ತಂದೊಡನೆ ||೧೭೪||
ವಜ್ರಾಂಗಿಯ ಜೋಡ ತೊಟ್ಟು
ಮಝ ಭಾಪುರಿ ಎಂದು ನಲಿದಾಡಿ ಬಂ*[16][ದ]*[17]ರು
ಹೆಜ್ಜೆ ಹೆಜ್ಜೆಗೆ ಬೀಳಲಿರಿದು ||೧೭೫||
ಹರಿಗೆಯೊಳಗೆ ಹಾಕಿ ಹೊತ್ತು
ಬರುತ ಬೂದಿಯಹಾಳ ದಾರಿಯ ತಪ್ಪಿಸಿ
ಹರಿದರು ನೀರಗುಂದಕಾಗಿ ||೧೭೬||
ನೇರಲಗೇರಿಗೆ ಬಂದವರು
ಧೀರ ಕಾಚಯ್ಯನು ಮುಖಮಜ್ಜನ ಮಾಡಿ
ಮೀರಿ ನಡೆ[ದ] ಬೂದಿಹಾಳಿಗೆ ||೧೭೭||
ತಪ್ಪದೆ ಕಹಳೆ ಹಿಡಿಸಿದನು
ಛಪ್ಪನ್ನ ದೇಶದ ನರಸಿಂಹನವರಿನ್ನು
ತೆಪ್ಪತ್ತುಗೊಂಡು ತಿಳಿಯರು ||೧೭೮||
ದರಿದನು ಸಿರುಮಭೂವರನು
ಅರಸಿ ಚಿಕ್ಕಾಯ ಕೂಡೆ ಹೇಳುತಲಾಗ
ಹೊರಚಾವಡಿಗೆದ್ದು ಬಂದ ||೧೭೯||
ಎಕ್ಕಟಿಗರು ಸಹವಾಗಿ
ದೊಕ್ಕನೆ ಶರಣೆಂದು ನಿಂದ ಕಾಚನ ಕಂಡು
ಬೆಕ್ಕಸ ಬೆರಗಾದರೆಲ್ಲ ||೧೮೦||
ಆಸೆಯ ಕೆಡಿಸಿ ನೀ ಬಂದೆ
ದೇಶದೊಳಗೆ ಅಪಕೀರ್ತಿಯ ಮಾಡಿದೆ
ಹೇಸಿ ಬಂಟನು ಕಾಚಯ್ಯ ||೧೮೧||
ಜೀವದಾಸೆಯಲಿ ಕಾಚಯ್ಯ
ಆವ ಪರಿಯಲಿಯಾದರೆ ಕಾಯ ಸ್ಥಿರವಲ್ಲ
ಸಾವು ತಪ್ಪದು ಕಂದ ನಮಗೆ ||೧೮೨||
ಕೇಳಬೇಡವೊ ಸಿರುಮೇಂದ್ರ
ಸಾಳುವ ನರಸಿಂಹನ ದಂಡ ಕಡಿವೆನು
ವೀಳ್ಯವ ಪಾಲಿಸೆಂದ ಮಲ್ಲಣ್ಣ ||೧೮೩||
ನೀರಿನ ಹೋಮಗಳೆಂದ
ಧಾರುಣಿಯೊಳು ನಾವು ದಂಡಿನೊಳಗೆ ಹೋಗಿ
ಸೇರಿ ಸಾವೊನು ನಡೆಯೆಂದ ||೧೮೪||
ನೊಂದುಕೊಂಡನು ಮನದೊಳಗೆ
ಸಂದೇಹ ಬೇಡ ಮಲ್ಲಣ್ಣನ ಮಾತಿಗೆ
ಇಂದು ಕೋಪಿಸುವರೆ ಮಗನೆ ||೧೮೫||
ಬಂದೆನಾದರೆ ನಿನ್ನ ಬಸುರ
ಬಂದ ಮಗನು ಅಲ್ಲ ತಂದೆ ಸಿರುಮ ಕೇಳು
ಸಂದೇಹ ಬೇಡ ನಿನ್ನಾಣೆ ||೧೮೬||
ಮಾಗಿಯ ಕೋಗಿಲಂತಾದ
ಬಾಗೂರಲತ್ತಲಿ ನರಸಿಂಹರಾಯನು
ಆಗ ಈಶ್ವರಗೆ ಇಂತೆಂದ ||೧೮೭||
ಕೊಲೆಗೇಡಿ ಸಿರುಮನ ಮಗನು
ಹುಲಿ ಹೊಕ್ಕು ಹುಲ್ಲೆಯ ಹಿಂಡ ಕಲಕಿದಂತೆ
ಗೆಲವಿಂದ ಹೋದ ಗೊಲ್ಲ ಕಾಚ ||೧೮೮||
ಬಾಗೂರ ಸಾಧ್ಯವ ಮಾಡಿ
ಬೇಗ ಬೂದಿಯಹಾಳ ಸೆರೆವಿಡಿವೆನು ಎಂದು
ಆಗ ಈಶ್ವರ ನುಡಿದನು ||೧೮೯||
ರೋಷದಿಂದಲಿ ನೋಡಿದನು
ಮೀಸೆಯ ತಿರುಹಿ ಬಾಗೂರ ಕೋಟೆಯ ನೋಡಿ
ವಾಸಿಯಿಂದಲಿ ನಡೆದನು ||೧೯೦||
ಕಲಹಕೆ ಕಲಿಗಳೇರಿದರು
ಅಲಗಾಯುಧವ ಕಿತ್ತು ಅಡರಿತಾಕ್ಷ*[18][ಣ]*[19]ದೊಳು
ಅಳುಕದೆ ಹರಿಗೆಯ ಭಟರು ||೧೯೧||
ಜೇನ ಹುಳುಗಳು [ಮುತ್ತಿದಂತೆ]
ಆನೆ ಕುದುರೆ ಸೇನೆ ಕವಿಯೆ ಸಮರದೊಳು
ಏಳು ಬೀಳುತ ಕಾದುತಿರಲು ||೧೯೨||
Leave A Comment