ಕಾಳಗದೊಳು ಕೋಳು ಹೋಗದು ಕೋಟೆಯು
ಸಾಳುವ ನರಸಿಂಹ ಕಂಡು
ಬಾಳ ಜಡಿದು ನಡೆದಲ್ಲಿ ಹೊರಕೇರಿಯ
ಧೂಳಿಕೋಟೆಯ ಮಾಡಿಕೊಂಡ ||೧೯೩||
ಕೆಟ್ಟೆನೆನುತ ಬಾಯಬಿಟ್ಟು ಗೋವಿಂದನು
ಸೆಟ್ಟಿಗಳೆಲ್ಲರ ಕರೆಸಿ
ದಿಟ್ಟ ನರಸಿಂಹಗೆ ಕಾಣಿಕೆ ಕಪ್ಪವ
ಕೊಟ್ಟು ನಮ್ಮನು ಕಾಣಿಸೆಂದ ||೧೯೪||
ಎಂದ ಮಾತನು ಕೇಳಿ ನೊಂದು ಬಾಗೂರ ಪ್ರಜೆ
ಒಂದಾಗಿ ಕೂಡಿ ಮಾತಾಡಿ
ಸಂದೇಹ ಬಿಟ್ಟಿತೆನುತ ಬುದ್ಧಿವಂತರು
ಬಂದು ಕೋಟೆಯ ಮೆಟ್ಟಿ ನಿಂದು ||೧೯೫||
ಇಡಬೇಡ * ಎಂದ ಮಾತನು ಕೇಳಿ ಈಶ್ವರಿನಾಯಕ ಹೀಗೆಂಬ ರಾಜಕಾರ್ಯಕೆ ಗಂಗಯ್ಯ ಹೋಗಿ ಲೇಸಿನ ನುಡಿಯ ಕೇಳುತ ನರಸಿಂಹರಾಯ ಎಂದ ಮನ್ನಣೆಯ ಮಾತಿಗೀಶ್ವರಿನಾಯಕ ಬರಿಯ ಮಾತಿಲಿ ಫಲವಿಲ್ಲ ನರಸಿಂಹಗೆ ನಿನ್ನ ತಮ್ಮನ ಶ್ರೀರಂಗರಾಜನ ತಂದು ಆಗಳಾಲೋಚಿಸಿ ಆವಿಗೆ ಕಿಚ್ಚಿನಂತೆ ಬಾಣ ತಾಕಿದ ಮೃಗದಂತೆ ಗೋವಿಂದನು ತನ್ನ ಮರಳುತನವು ಬೇಡ ಅಣ್ಣಾಜಿ ಗೋವಿಂದ ಸಿಕ್ಕಿ ಕಂಗೆಟ್ಟು ಗೋವಿಂದನಾಯಕ ಮೂರು ಬಾಗೂರ ಸೆಟ್ಟಿಸಮಯರು ಸಹಿತ ಬಂದು ಆ ವೇಳೆಯಲಿ ಈಶ್ವರಿನಾಯಕ ತಾನು ಅಕ್ಕಟೆನುತ ಗೋವಿಂದನಾಯಕ ಹೆ ಮಿಕ್ಕ ಹೊನ್ನಿಗೆ ಹರಿತವ ಕಾಣದೆ ಮಿಗೆ ಪಟ್ಟೆಯ ಸಕಲಾತಿ ಝಲ್ಲಿಯ ಪೆಟ್ಟಿಗೆ ಒಳಹೊರ ಲಾಯದ ಕುದುರೆ ಸಹಿತ ಮುಂದೆ ಉಟ್ಟ ಸೀರೆವೆರಸಿ ಅರಮನೆಯಿಂದಲಿ ಕಂಗೆಡುತಲಿ ಗೋವಿಂದನಾಯಕ ತಾನು ಮೊರೆಯಿಟ್ಟು ಸತಿಯರು ಸುರಿವ ಕಂಬನಿಗಳ ಎಕ್ಕಟಿ ಗಂಗನ ವಶಕೆ ಗೋವಿಂದನ ಹೊನ್ನುಳ್ಳವರ ಹೇಳ್ವೆನೀಶ್ವರನಾಯಕ ಈತನು ಅಧಿಕಾರಿ ಬೊಮ್ಮರಸಯ್ಯನು ಆಗ ಪ್ರಧಾನ ರಾಮರಸನ ತೋರಿದ ಕಡುಕಿನ ಬ್ರಾಹ್ಮಣಗೆ ಮಡಿಲಲ್ಲಿ ಜಾಳಿಗೆ ಹಿಡಿತನ್ನಿ ಗಾಣದ ತಿಪ್ಪಣ್ಣನ ಬೇಗ *[7]ದೊಡ್ಡ ದೊಡ್ಡವರನು ಹಿಡಿದಾಗ ಸುತ್ತರೆ ಪ್ರಭು ಪ್ರಜೆಯೆನ್ನದೆ ಸಭೆಗಳ ಕೂಡಿಸಿ ಸೆಟ್ಟಿಗಳೆಲ್ಲಾಗ ಈಶ್ವರಿನಾಯಕ ಸೊಪ್ಪಿನ ಕೇರಿಯೆಪ್ಪತ್ತು ಸಾವಿರ ಹೊನ್ನ ಬಿಡದೆ ರಾಟಾಳವ ತಿರುಹುವರ ಕೈಯ್ಯ ಊರೊಳಗಣ ಕೇರಿ ಕಟ್ಟಿನ ಸೂಳೇರ ಸೂಳೆ ಬೆಲಕಿಯೆಂಬವಳ ಕೈಯಲಿ ಮಿಗೆ ಸೂಜಿಯನುಗುರೊಳಗೇರಿಸಿ ಹಣಗಳ ಅಲಗಿನ ಮೊನೆಗಳ ಮೇಲಡ್ಡ ಮಲಗಿಸಿ ಬಾಗೂರ ಒಳಯಕೆ ಹೊಕ್ಕು ಜನರ ಬಾಧಿಸುತಿರೆ ಛಂದ ಛಂದದ ಹಣ ಹೊನ್ನು ಬಂಗಾರವ ಕೂಡಿದ ಹಣ ಬಾಳವನು ಕಂಡು ನರಸಿಂಹ ನರಸಿಂಹ ಬಾಗೂರ ಕೊಂಡನೆಂಬುದ ಕೇಳಿ [1] *_* ಇಂದೆ (ಶಿ, ಹ). [2] *_* ಇಂದೆ (ಶಿ, ಹ). [3] ೮೨–೮೨ ನಸ್ಸು(ಹ). [4] ೮೨–೮೨ ನಸ್ಸು(ಹ). [5] ೮೩–೮೩ ಉಳ್ಳವರ(ಶಿ). [6] ೮೩–೮೩ ಉಳ್ಳವರ(ಶಿ). [7] *ಇಲ್ಲಿಂದ “ಹ” ಪ್ರತಿಯಲ್ಲಿ ಒಂದು ಗರಿ ಕಳೆದಿದೆ. ಹೀಗಾಗಿ “ದೊಡ್ಡದೊಡ್ಡವರು . . . ” “ಸೊಪ್ಪಿನ ಕೇರಿಯ . . . . ” ಈ ಎರಡನ್ನೂ ಒಳಗೊಂಡ ಪದ್ಯಗಳು ಇಲ್ಲಿ ಸಿಗುವುದಿಲ್ಲ (ಸಂ). [8] *ಇಲ್ಲಿಂದ “ಹ” ಪ್ರತಿಯಲ್ಲಿ ಒಂದು ಗರಿ ಕಳೆದಿದೆ. ಹೀಗಾಗಿ “ದೊಡ್ಡದೊಡ್ಡವರು . . . ” “ಸೊಪ್ಪಿನ ಕೇರಿಯ . . . . ” ಈ ಎರಡನ್ನೂ ಒಳಗೊಂಡ ಪದ್ಯಗಳು ಇಲ್ಲಿ ಸಿಗುವುದಿಲ್ಲ (ಸಂ). [9] * ಈ ಪದ್ಯ “ಹ” ಪ್ರತಿಯಲ್ಲಿ “ಕೂಡಿದ ಹಣ . . . .” ಪದ್ಯದ ಬಳಿಕ ಬಂದಿದೆ (ಸಂ). [10] ೮೪–೮೪ ಮುಂದಿರಿಸಿದ ನರಸಿಂಹನ(ಶಿ), [11] ೮೪–೮೪ ಮುಂದಿರಿಸಿದ ನರಸಿಂಹನ(ಶಿ), [12] ೮೫ ಅಂತು ಸಂಧಿ ೨ಕ್ಕಂ ಪದನು ೩೭೨ಕ್ಕಂ ಮಂಗಳ ಮಹಾ ಶ್ರೀ
ಒಡೆಯ ನರಸಿಂಹನಾಣೆನಲು
ಕೊಡುವೆವು ಬೇಡಿದ ಕಾಣಿಕೆ ಕಪ್ಪವ
ಕೆಡಿಸಬೇಡ[ವೊ] ಬಾಗೂರ ||೧೯೬||
ನಿಂದನಗುಳ ದಂಡೆಯಲಿ
ಇಂದಿನ ಸ್ಥಿತಿಯ ಎಕ್ಕಟಿಗ ಗಂಗಯ್ಯ
ಮುಂದೆ ರಾಯನಿಗೆ ಬಿನ್ನೈಸು ||೧೯೭||
ಬೇಗ ನರಸಿಂಹನಡಿಗೆರಗಿ
ಬಾಗೂರ ಅರಮನೆಯನುಳುಹಬೇಕ್ಕೆ ಸ್ವಾಮಿ
ಈಗ ಮುತ್ತಿಗೆ ತೆಗೆಸೆಂದ ||೧೯೮||
ಈಶ್ವರಿನಾಯಕನ ಕರಸಿ
ಘಾಸಿ ಮಾಡದೆ ಮುತ್ತಿಗೆಯ ತೆಗೆಸೆನುತ ವಿ
ಲಾಸದೊಳಗವನುಸುರಿದನು ||೧೯೯||
ಹಿಂದಕ್ಕೆ ಮುತ್ತಿಗೆದೆಗೆಸಿ
ಬಂದು ಗೋವಿಂದನಾಯಕನ ಮಂತ್ರಿಗಳೊಳು
ಸಂಧಾನದ ಮಾತನಾಡಿ ||೨೦೦||
ತೆರು ಮೂರು ಲಕ್ಷ ವರಹೊನ್ನ
ನೆರೆ ಸಾರಿದೆನು ಕೇಳು ಗೋವಿಂದನಾಯಕ
ಮರೆಯ ಮಾತಿನ್ನೇಕೆ ಕೇಳು ||೨೦೧||
ಭಿನ್ನವಿಲ್ಲದೆ ಕೈಸೆರೆಯ
ಇನ್ನು ಒಪ್ಪಿಸು ನರಸಿಂಹಗೆ ಗೋವಿಂದ
ಮನ್ನಣೆಯಲಿ ಸುಖವಿಹುದು ||೨೦೨||
ಬೇಗೆವರಿದು ತನ್ನ ಮನದಿ
ಬಾಗೂರ ಪ್ರಜೆಗಳ ಭಂಗಬಡಿಸದೆ ನಾ
ಹೋಗುವೆನೆಂದ ಶ್ರೀರಂಗ ||೨೦೩||
ರಾಣಿವಾಸವನೆಲ್ಲ ನೋಡಿ
ಖೇಣದೊಳಿರಿದು ಕೊಲ್ಲುವೆನೆಂದು ತನ್ನಯ
ಪ್ರಾಣಕೆ ಹರುವನೆಣಿಸಿದನು ||೨೦೪||
ಶರಿರಕೆ ನೀನಂಜಬೇಡ
ಹರಣಕೆ ಮರಣ ತಪ್ಪದು ಎಂದಿದ್ದರೆ
ಕರ ದುಃಖ ಬೇಡ ನಮ್ಮಣ್ಣ ||೨೦೫||
ಲಕ್ಷ ವರ ಹೊನ್ನೊಡಂಬಟ್ಟು
ಧೊಕ್ಕನೆ ತನ್ನ ತಮ್ಮನ ಕೈಸೆರೆಗೊಟ್ಟು ಕ
ಬ್ಬಕ್ಕಿಯಂದದಿ ಬಾಯ ಬಿಟ್ಟ ||೨೦೬||
ಬಾಗಿಲ ಬೀಗ ಮುದ್ರೆಯನು
ಬೇಗ ಈಶ್ವರಿನಾಯಕಗೊಪ್ಪಿಸಿ ತಲೆ
ವಾಗಿ ಕೈಮುಗಿದು ನಿಂದಿಹರು ||೨೦೭||
ಭಾವಿಸಿ ಪುರ ಪರಿಜನರ
ಗೋವಿಂದನಾಯಕನ ಮನೆಗೆ ಕಾವಲನಿಕ್ಕಿ
ತಾವೀವ ಹೊನ್ನ ಬೇಡಿದನು ||೨೦೮||
ಮ್ಮಕ್ಕಳ ತೊಡಿಗೆ ಎಲ್ಲವನು
ಲೆಕ್ಕವ ಮಾಡಿ ಹಣ ಹೊನ್ನು ಬಂಗಾರವ
ಲಕ್ಷ ವರ[ವ]ನೆಣಿಸಿದನು ||೨೦೯||
ಹೊಕ್ಕು ತೊಳಲಿ ಅರಮನೆಯ
ರೊಕ್ಕ ಬೆಳ್ಳಿಯ ಚಿನ್ನ ತಾಮ್ರ ಸ್ವರೂಪವ
ಧೊಕ್ಕನೊಪ್ಪಿಸಿ ಕಂಚು ಮುಟ್ಟ ||೨೧೦||
ಕಟ್ಟಾಣಿಲ್ಲದ ೮೨[3]ಜೀಬಿನಾಣ್ಯ೮೨[4]
ಒಟ್ಟಿಸಿ ಬಣ್ಣ ಪರಿಯ ದುಪ್ಪಟಿಯಿಂದ
ಕೊಟ್ಟು ಗೋವಿಂಧ ಬಾಯ್ಬಿಟ್ಟ ||೨೧೧||
ಹೊಳಹಿ ಅನಂತ ವಸ್ತುಗಳ
ದಳಪತಿ ಈಶ್ವರಿನಾಯಕಗೊಪ್ಪಿಸಿ
ಕಳೆಯಗುಂದಿದನು ಗೋವಿಂದ ||೨೧೨||
ನೆಟ್ಟನೆ ಬಿಟ್ಟು ಹೊರಡಿಸಿದ
ಕಟ್ಟಳೆ ಮಾಡಿ ಗೋವಿಂದನಾಯ್ಕನ ಮೇಲೆಂ
ದಟ್ಟಿದ [ತೆ]ರಕಾರರನು ||೨೧೩||
ಭಂಗಕೆ ಒಳಗಾದೆನೆನುತ
ಕಂಗಳಲುದಕವ ತುಂಬಿ ಅರಮನೆಯ
ಹೆಂಗಳುಸಹಿತ ಹೊರಹೊಂಟ ||೨೧೪||
ಸೆರಗಿಂದ ಒರಸಿಕೊಳುತಲಿ
ಉರ್ವಿಗುನ್ನತ ಬಾಗೂರ ಹೊರಟುಬಂದು
ಹೊರ ಪಾಳ್ಯದಿ ನಿಂದರೆಲ್ಲ ||೨೧೫||
ಇಕ್ಕಿ ಈಶ್ವರಿನಾಯಕನು
೮೩[5][ರೊಕ್ಕವ]೮೩[6] ಕೇಳಲು ಬಂದು ಹೇಳಿದ[ನು]
ರಕ್ಕಸ ಸಮಗಾರ ಮಲ್ಲ ||೨೧೬||
ಎನ್ನ ಬಿನ್ನಪವ ಕೇಳಯ್ಯ
ಸನ್ನೆಯ ಮಾಡಿ ಒತ್ತಲಿ ನಿಂತಿರ್ದನು
ಚೆನ್ನಿಗ ಸಮಗಾರ ಮಲ್ಲ ||೨೧೭||
ಈತ ದುರ್ಮಂತ್ರಿ ಲಿಂಗರಸ
ಈತನು ಹಣವುಳ್ಳ ಮಣಿ[ಹಾ]ರಿ ಓಬಯ್ಯ
ಈತ ಚಿನಿವರದ ಹಂಪರಸ ||೨೧೮||
ಬೇಗ ಕರಣಿಕ ತಿಮ್ಮರಸ
ನಾಗರಸಗಳಣ್ಣ ಲಗುಮರಸನ ಕಟ್ಟಿ
ತೂಗಿ ಹಣನ ತರಿಸೆಂದ ||೨೧೯||
ಒಡನಕ್ಕಸಾಲೇರ ಗಿರಿಯಗೆ
ಹಿಡಿತನ್ನಿ ಹಂಪರಸನ ತಿಮ್ಮರಸನ
ನಡುವಿಗೊನಕೆಯ ಹಾಕೆಂದ ||೨೨೦||
ಹಿಡಿತನ್ನಿ ಚಿಂದಿ ಪುಟ್ಟಣ್ಣನ
ಹಿಡಿತನ್ನಿ ನೀರುಗುಂದದ ಗಿರಿಯಣ್ಣನ
ಹಿಡಿತನ್ನಿ ಜಾಡರ ಚಿಕ್ಕನ ||೨೨೧||
ಗಡ್ಡವ ಪಂಜಿಲಿ ಸುಡಿಸಿ
ಮಡ್ಡನೆತ್ತಿಸಿ ಮಾಜದೆ ಹಣಗೊಡಿಯೆಂದ
ಗೊಡ್ಡೇರ ಕೊಲೆಗಳ ಕೊಂದು ||೨೨೨||
ಗಂಭೀರ ಸಮಗಾರ ಮಲ್ಲ
ಅಭಿನ್ನವ ಮುಟ್ಟಿ ಈಶ್ವರಿ[ನಾ]ಯಕಗಾಗ
ಕುಭಿತ ಕುಚಿತವ ಸೂಚಿಸಿದನು ||೨೨೩||
ಮೇಟಿ ನೆರವಿ ಎಂದೆನುತ
ಕಟ್ಟ ಕರಿಕೆಯಗಳ [ನಡು]ವಿಗೊನಕೆಗಳ
ಕೊಟ್ಟರೆ ಬಿಡಿ ಹಣಗಳನು ||೨೨೪||
ತಪ್ಪದೆ ಈ ಕ್ಷಣ ತರಿಸು
ತುಪ್ಪವ ಮಾರುವವರ ಕೈಯ್ಯಲಿ ಮಿಗೆ
ಒಪ್ಪಾಕೆ ಮುನ್ನೂರ ತರಿಸು*[8] ||೨೨೫||
ಒಡವೆ ಬಾಳವ ತರಿಸೆಂದ
ಮಡಕೆಯ ಮಾರುವ ಕುಂಬಾರನ ಕೈಯ್ಯ
ಕುಡಿಕಿ ತುಂಬಲಿ ತರಿಸೆಂದ ||೨೨೬||
ಸೇರಿದ ಹಣವ ಹೇಳಿದನು
ಮೀರಿ ಹುಲುಸು ಹಾಗ ಹಣವ ತೆಕ್ಕೊಂಬಳು
ವಾರಿಜಮುಖಿಯು ಮಲ್ಲರಸಿ ||೨೨೭||
ಏಳುನೂರನು ತರಿಸೆಂದ
ಹೇಳಿದ ಪೇಟೆಯ ವಿರುಪಯ ಕೈಯ್ಯಲಿ
ಅಳೆದು ಗಿದ್ದನ ಹೊನ್ನ ತರಿಸೊ ||೨೨೮||
ಮಾಜದೆ ಕೊಡಿ ಎಂದೆನುತ
ಗಾಜಿನ ಕರಿಮಣಿ ಸಹಿತಾಗಲೊಪ್ಪಿಸಿ
ತ್ಯಜಿಸಿಲ್ಲಿಗೆ ಬೇಡವೆಂದ ||೨೨೯||
ಮೊಲೆಗೆ ಗಿರಿಕೆಗಳನು ಕಟ್ಟಿ
ಹಲವು ಬಗೆಯ ಗಳಿಕೆಯ ಹಣಗಳ ಬೇಡಿ
ತೊಲಗಲೀಸದೆ ಬಾಧಿಸಿದರು ||೨೩೦||
ಆಗ ತಮ್ಮಯ ಮೈದೊಡಿಗೆಗಳ
ತೂಗಿ ತಂದೊಪ್ಪಿಸಿ ಈಶ್ವರಿನಾಯಕ
ಮೂಗಿಗೆ ಬೆರಳಿಟ್ಟು ನೋಡಿ*[9] ||೨೩೧||
೮೪[10]ತಂದು ನರಸಿಂಹರಾಯನಿಗೆ೮೪[11]
ಮುಂದೆ ರಾಸಿಯ ಮಾಡಿ ಈಶ್ವರಿನಾಯಕ
ನಿಂದಡ್ಡಬಿದ್ದು ಕೈಮುಗಿದ ||೨೩೨||
ರೂಢಿಗುನ್ನತ ಈಶ್ವರಗೆ
ಈಡಿಲ್ಲದುಡುಗೊರೆ ಕರ್ಪುರ ವೀಳ್ಯವ
ಜೋಡಿಸಿ ಕೊಟ್ಟು ಮುನ್ನಿಸಿದ ||೨೩೩||
ಸಿರುಮಭೂವರನಾ ದಿನದಿ
ಬರಸಿದೋಲೆಯ ಬರಲೆಂದು ಭಟ್ಟರ ಕೈಯ
ಕರೆಯ ಕಳುಹಲೆರಡು ಸಂಧಿ೮೫[12] ||೨೩೪||
(ಶಿ), ಅಂತು ಸಂಧಿ ೨ಕ್ಕಂ ಪದನು ೨೩೯ಕ್ಕಂ ಮಂಗಳ ಮಹಾಶ್ರೀ ಶ್ರೀ (ಹ).
Leave A Comment