ಇರಿದ ಘಾಯಕೆ ಬಿದ್ದ ಕೊರೆಹೆಣಗಳ ಕಣ್ಣ ಹಾಕಿದರು ಹರಿಗೆ ಬಿಲ್ಲು ಸಬಳವ ಮುರಿದು ಬರಲು ಕ . . . . . ರಸಿಂಹರಾಯ ತನ್ನ ಹುಲಿಯ ಮುಖವನು ಹೊಗಗೊಡದೆ ತಿರುಗಿದರು ಹೊಕ್ಕಿರಿದೊಕ್ಕಲಿಕ್ಕುತ ಲೆಕ್ಕವಿಲ್ಲದೆ ಗಂಡಭೇರುಂಡ ಕರಿಸಿಂಹದ ಗುಟ್ಟು ಮುದ್ದು ಮಲ್ಲಣ . . . . . .ನಗುತ ಸಿರುಮ ತನ್ನ ಮಿಗೆ ವೈರಿಯ ಬಾಯೊಲು ಮಾಡಿಸಿ ತಾ ಢಾಳಿಪ ಸನ್ನೆಯದೊಳು ಮೃತಾ ಸರ್ವ ಲಕ್ಷ ಪಾಯದಳ ಬೂದಿಹಾಳ ಕೋಟೆಯ ಉರಿಕೊಂಡ ಕರ್ಪುರವ ಉಡುಗಿ ಕಟ್ಟದರುಂಟೆ ಎಂದ ನುಡಿಗೆ ಭುಗಿಲೆಂದು ರಾಯನ ದಳ ಅಗ್ಗಳೆಯ ಮನ್ನೆಯರು ನರಸಿಂಹರಾಯಗೆ . . . . . . . . . ನಿಲೆಂದು ಹೊರಕರಿಬೆಯಲು ಒತ್ತಿ ನರಸಿಂಹನವರೊಳಕೋಟೆಯ ಮಂಡಿಸಿ ತಲೆವಿಲ್ಲುಗೊಂಡಾಗ ಕೋಟೆಯ ಮೈಜೋಡ ತೊಟ್ಟು ಮಾರಾಂತು ಕೊತ್ತಳಗಳ ಕುದಿವೆಣ್ಣೆ ಸುಣ್ಣ ಮಳಲ ಕಾಸಿ ಹೊಯ್ದೆಲ್ಲ ಕೊರಡು ಖಂಡಿಸಿದುರಿದಾ . . . . . .ರಿಸುವ ಶ್ರೋಣಿತ ಅಗಳೊಳು ಹೊರಗೆ ಹೆಣನ ಹಡಿಕೆಗಳಿಂದ ಕೋಳು ಹೊಯಿದು ಗೆಡು ಕೋಟೆ ಆಳೆಷ್ಟು ಸತ್ತಿತು ವಿಪರೀತ ಕಾಳಗ ಇಳೆಯೊಳಾಯಿತು . . . . . . . . ಆ . . . . . . . .ಥವ ನೋಡಿ ಮೆಲ್ಲಡಿಗೂಡಿ ಇಳೆಗೆ ಆಕಾಶದಿ ನೆಳಲ ಕತ್ತಲೆಯೊಳು ಹಿಡಿದ ಪಂಜುಗಳೆಡೆಯಾಡೆ ಪಾಳೆಯದೊಳಾ ಸಾಳುವ ನರಸಿಂಹರಾಯನ ಪಾಳ್ಯದ ಅರಿರಾಯದಲ್ಲಣ ಪರರಾಯ ಮ . . . . . ಕಾಳೆ . . . . .ಕೇಳುತ ನರಸಿಂಹನ ಕರೆಸಿದ ತನ್ನ ಪ್ರಧಾನ ಕಲ್ಲರಸಗೆ ಬಂದನು ನಡೆಗೋಟೆಯ ಮಲ್ಲ ತೋಡೆಯ ಸಂಗ ಬಂದನು ಕಾಲಭೈರವ ಜುಂಜ ಧುರಧೀರ ಬಂದನು ತುಳುವರ ಪೆಮ್ಮ ಕೆಂಡದ ಬೊಮ್ಮ ರಣಬೋಧೆ ಏಕೆ ಬಲಿಂ . . . . . . .ಸುಭಟರು . . . . . . ಟ್ಟಿರೊದಗಳು ಕಂಡು ಸಿರುಮೇಂದ್ರ ಕಡುಗಲಿ ಭಟರು ಕಗ್ಗೊಲೆಗೆ ಹೋಗುವರೆಲ್ಲ ತುಳುವನ ಗುಂಡಿಗೆಯನು ಬಲ್ಲೆ ಹೊಯ್ಯಲಿ ಕಗ್ಗೊಲೆಯೊಳು ಮಾರಿಯ . . . .ಣುವೆಯಲಂದು . . . . .ಡೆಯನ ಮುಂದೆ ಪಂಥವನಾಡಿ ಹುಯ್ಯಲ ಬಟ್ಟು ಗಂಟಿನ ವೀಳೆಯವನಾಂತು ಬೇಡುವ ಗಬ್ಬಿನ ಪಂಥವೇತಕೆ ನಿನಗೆಯೆಂದು ಆನೆ ಕುದುರೆ ಸೇನೆಯ ಕಡಿದೊಟ್ಟುವೆ ತೊರೆಯನೀಸುವ ಹರುಗೋಲಪ್ಪ ತೆರನಂತೆ ಅರೆಬಿರಿದಿನ ಚೋಹದ ನಡೆಗೋಟೆಯ ತನ್ನ ಪ್ರಾಣಕೆ ಸರಿಮಿಗಿಲೆಂಬ ಭಟರಿಗೆ ಕಡುಗಲಿ ಸಿರುಮಗೆರಗಿ ಬಂಟರು ಮುಂದೆ ಕಾರ ಮಿಂಚಿನ ಬಳಗದವೊಲು ಸುಭಟರು ಮಹರಾತ್ರಿಯಲಿ ಬೂದಿಹಾಳಿನ ಸಿರುಮನ ಅಗ್ಗಳೆ ಸಿರುಮನ ವೀರಾಧಿವೀರರು ಸಿಡಿಲ ರವಸದಂತೆ ತಮ್ಮೊಳು ತಾವಾಡಿಸಿ ಏಳಲೀಸದೆ ಬೀಳಲಿರಿದು ಮಲಗಿದರ ಕರಿಗಳ *[7][ಹಿಂಡ ಒತ್ತರಿಸಿ]*[8] ಕೋಪದಿ ಕೇ ಮುಂದಲೆಗಳ ಪಿಡಿದಿರಿದಾಡಿತು ತಮ್ಮ ಉರುಬಿ ಹೊಕ್ಕರು ಕಲಿ ಮಾಸಾಳು ಪಂಥದಿ ಒಬ್ಬರೊಚ್ಚೆರಸಿ ಒಬ್ಬರು ಚೀರಿ ಮೊರೆಯಿಟ್ಟು [1] ೧೩ “ಶಿ” ಪ್ರತಿಯಲ್ಲಿ ಇಲ್ಲಿಂದ ಮುಂದೆ ನಾಲ್ಕು ಗರಿಗಳು (೯೯, ೨೦, ೭೧, ೭೨) ಕಳೆದುಹೋಗಿವೆ. ಹೀಗಾಗಿ “ಹಾಕಿದರು ಹರಿಗೆ . . . . . .” ಪದ್ಯದಿಂದ “ಒಟ್ಟು ಗಂಟಿನ” ಪದ್ಯ ಒಳಗೊಂಡ ಭಾಗವನ್ನು “ಹ” ಪ್ರತಿಯಿಂದ ಸ್ವೀಕರಿಸಲಾಗಿದೆ (ಸಂ.) [2] *–* ಕೆರೆವ (ಹ). [3] ೧೪-೧೪ ಖಡ್ಗವು ತಲೆಯೊಳು (ಶಿ) [4] ೧೪-೧೪ ಖಡ್ಗವು ತಲೆಯೊಳು (ಶಿ) [5] ೧೫ ಈ ಪದ್ಯಗಳು “ಹ” ಪ್ರತಿಯಲ್ಲಿ ಹಿಂದುಮುಂದಾಗಿವೆ (ಸಂ.) [6] ೧೫ ಈ ಪದ್ಯಗಳು “ಹ” ಪ್ರತಿಯಲ್ಲಿ ಹಿಂದುಮುಂದಾಗಿವೆ (ಸಂ.) [7] * – * ಹಿಂಡುವ ತರಿಸಿ (ಶಿ, ಹ). [8] * – * ಹಿಂಡುವ ತರಿಸಿ (ಶಿ, ಹ).
ಬಿರಿ ನೆರೆ ಬಿಟ್ಟು ಬಾಯಿಗಳ
ತೆರೆದು ಮೊರೆಯಿಟ್ಟು ಬೀಳೆ ರಾಯನ ದಂಡು
ಒರಲಿತು ಮುರಿದು ಮುಂಗೆಟ್ಟು೧೩
ನೂಕು ಠಾಕಿಲಿಯೆ . .. . . . . . . . .
. . . ಯೆದೆ ಬಂದೆವೊ ಬೂದಿಹಾಳಿಗೆ ವಿಧಿಯೆಂದು
ಭೂಕಿಸುತೊಡನೆ ಬೆನ್ನಿತ್ತು ||೪೭||
ಸರ್ವದಳವು ವಾಡವು ಸಹಿತ
ಉರಿಬಿ ಸಿರುಮನವರ ಊರ ಬಾಗಿಲಿಗೆ
ನುರುಬಿ . . . . . . . . . . . . ನಿಲಿಸಿದರು ||೪೮||
ಚಲದಂಕ ಕುಮಾರನಾಯಕರು
ಎಲಲೊ ತೊಲಗುಯೆಂದೊಬ್ಬೊಬ್ಬನ
ಬಲು ಬಿರಿದ ಸೆಳೆಕೊಳ್ಳೆನುತ ||೪೯||
ಸಿಕ್ಕಿಸಿ ಹಿಡಿಯಾಳ ಹಿಡಿದು
ಸೊ . . . . . . .ರಾಯನ ಬಿರಿದಿನ
ರೆಕ್ಕೆಯ ಸೆಳೆಕೊಳ್ಳೆನುತ ||೫೦||
. . . . . . . . . . .ಳಯ ಬಂದಂತೆ
ಹಿಂಡು ಬಿರಿದು ಠೆಕ್ಕೆಯ ಸಹಿತ ಕೊಮಾರಮಲ್ಲ
ಲೆಂಡ ಸಿರುಮಗೊಪ್ಪಿಸಿದ ||೫೧||
ಕಂದ ಮಲ್ಲಣ ಬಾಯೆಂದು
ಸಂದಿತ್ತು ಪಂಥವೆಂದುಡುಗೊರೆ ವೀಳ್ಯ
ಗಂಧ ಪರಿಮಳವಿಕ್ಕು . . . . . . . . . ||೫೨||
ನುಗುಳುವ ಪಡುಗವ ತೆಗೆಸಿ
ಜಗ ಬಿರಿದಿನ ಠಕ್ಕೆಯದ ತುಡಿಗೆ ಕಟ್ಟಿ
ನೆಗಹಿಸಿದನು ಸಿ . . . . . . . . . . ಜಜ೫೩||
ಸೂಳೈಸಲು ಊರು ಸುತ್ತ
ಕಾಳೆಯ ಹಿಡಿಸಲು ಮೇರಲು ಕಂಡರು
ಸಾಳುವ . . . . . . . . . . . . . . . . . . ||೫೪||
ದಿಕ್ಕು ದಿಕ್ಕನೆ ಹಂಚಿಕೊಂಡು
ಸೊಕ್ಕಿದ ಗೊಲ್ಲ ಸಿರುಮ ನಮ್ಮ ಠೆಕ್ಕೆವ
ಸಿಕ್ಕದೆ ಕೊಡಬೇಗಲಾಗ . . . . . . . . . . ಜಜ೫೫||
ತುಡುಕಿ ಚೂಣೆಯಲಿ ಮುಂದಲೆಯ
ಪಿಡಿದಿರಿದಾಡು . . . .ಕೊಡು ನೆಳ್ಜರ ಕವ
ಕಡೆ . . . . . . . .ಲು ||೫೬||
ಕಲಿ ಕಾಲಿಡವರೆ ಬಿಡುವುದೆದೆ
ನರಸಿಂಹರಾಯನ ಬಿರಿದಿನ *[2][ಠೆಕ್ಕೆವ]*
ಸಿರುಮನ . . . . . . . .ಕ್ಕೆ ಬರುವವೆ ||೫೭||
ಇಂದು ಹಿಡಿದು ಗೊಲ್ಲ ಸಿರುಮನ
ಹಿಂದು . . . . . . .ದಕೆ ಕುರುಹುಗಳ ಮಾಡುವೆನೆಂದು
ಒಂದಾಗಿ ಲೆಗ್ಗೆ ಮಾಡಿದರು ||೫೮||
. . . . . . . . . . . . .ಧನವಾಡಿ
ಒಗ್ಗಲಿ ಹೊರಕೋಟೆ ಹುಲಿಮುಖಗಳ ಹೊತ್ತ
ನುಗ್ಗದೆ ಕಡಿದಾಡಿದರು ||೫೯||
ಸಿರುಮನ ಕಪೂರ ನಾಯಕರು
ಥರಥರದಲ್ಲಿ ಒಳಕೋಟೆ ಕೊತ್ತಳಗಳ
ಸರಿಮಾಡಿ ಹಂಚಿಕೊ. . . . . . . . . . . . . . ||೬೦||
ಹತ್ತಲು ಸಿರುಮಣ್ಣನವರು
ಬತ್ತೀಸಾಯುಧದಲ್ಲಿ ಇರಿದಗಳಿಗೆ ಹಾಕಿ
ಎತ್ತುಗಳಿ . . . . . . . . . .ದರು ||೬೧||
ದಂಡೆಗೆ ಸೇರಿಕೊಂಡಿರಲು
ಭಂಡಿಯ ಗಾಲಿಯ ನೂಂಕಿ ತೆಲುಗರ
ದಂಡನಿಳಿಯೆ ಕೆಡಹಿದರು ||೬೨||
ಹುಯ್ಯಲಿಡುತ ಹತ್ತುತಿರಲು
ಕೈದುಗಾರರು ಬೀಸುದೊಲೆಯ ಬಿಡಲು ಮೇಲೆ
ಹೊಡೆದಪ್ಪಳಿಸಿ ಬಿದ್ದರೆಲ್ಲ ||೬೩||
ಬಿದ್ದುರಿಯಲು . . . . . . . . ಕೈ ಕಳೆಯ
ಹೆದರಿ ಕಂಗೆಟ್ಟು ಕಣ್ಮುಚ್ಚಿ ಮುಂಗಾಣದೆ
ಬೆದರಿ ಬಿದ್ದಿಹರಗಳೊಳಗೆ ||೬೪||
ಹೊರ ಸುತ್ತಿನಗಳೊಳು ತುಂಬಿ
ತೆರಹಿಲ್ಲದುರುವ ಧೂಮದಿ ಬಿದ್ದ ಕೊರೆವೆಣ
ಒರಲು . . . . . . . . . . ಳಿಗೇಳುತ್ತಿರಲು ||೬೫||
ಹೊಗಬಾರದು ಹಗಲಿರುಳ
ಜಗಳ ಇಂದಿಗೆ ಸಾ . . . . . . . . .ರಾಯ
ದುಗುಡದಿ ಪಾಳಯಕೆ ಬಂದ ||೬೬||
ಹೇಳು ಈಶ್ವರಿನಾಯಕ . . . . . . . . . .
ಭಾಳಲಿಪಿಯ ತೊಡೆದ ಬ್ರಹ್ಮನುಕ್ಕುಡದಿಹದಿ
ಏಳು ಸಾವಿರ ಸತ್ತಿತೆಂದ ||೬೭||
ತಪನೋಡಿ ಆಕಾಶದಿಂದ
ಉಪಮಿಸಿಂದಿಗೆ ಬಾಳ್ದಲೆಯ ಕಾಯುವೆನೆಂ
ದಪರಾಂಬುಧಿಯ ಸೇರಿದನು ||೬೮||
ಮುಗಿದವಂಬುಜಮುಖ ಬಾಡಿ
ಮಿಗೆ ಸಂಜೆಗೆಂಪನು ಸೂಡಿಯಾ ಮಿಹನೆನುದೆ
. . . . . .ಮೂ ಒಡದಳು ತಮ್ಮತ್ತಗೂಡಿ ||೬೯||
ತಳಿತ ನಕ್ಷತ್ರ ಮಧ್ಯದಲಿ
ಹೊಳೆವ ಚಂದ್ರನ ಕಿರಣವು ನರಸಿಂಹನ
ಬಳದ ಮಂದಿಯ ನೋಡುವಂತೆ ||೭೦||
ಸುಡಿ . . . . . . . . .ವ ಹೆಣ ಲೆಕ್ಕವಿಲ್ಲ
ಮಿಡು ಮಿಡುಕಲು ಗಾಯವ ಕಾಸಿ ಕಟ್ಟುವ
. . . . . . . . . . . . . . . . . . . ||೭೧||
ಗೋಳ ನೋಡಿ. . . . .ದ ಸಿರುಮ
ಆಳವೇರಿಯ ಹತ್ತಿ ಕಾಳೆಯ ಹಿಡಿಸಿದ
ಕಾಳಗ ಕದನಪ್ರಚಂಡ ||೭೨||
ಧೀರ ಶರಭಶಾರ್ದೂಲ
ಸಿರುಮಭೂವರಗಿಳೆಯೊಳು ಸಮನಿಲ್ಲವೆಂದು
ಒರಲಿತು ಕಾಳೆ ಮೂದಲಿಸಿ ||೭೩||
ಪಾಳೆಯ ಬೇಳುವೆಗೊಂಡು
ಏಳಲಮ್ಮದೆ ಮಲಗಿರೆ ಕಂಡು ಸಿರುಮೇಂದ್ರ
ಆಳೋಚಿಸಿದ ಬ . . . . . . .ನು ||೭೪||
ಪರಿಮಳ ವೀಳ್ಯವ ಕೊಡಿಸಿ
ಬರಹೇಳು ಹಳೆಯ ಪೈಕವನೆಂದಾ . . . . .ರಲು
ಉರವಣಿಸಿತು ಕಲಿ ಭಟರು ||೭೫||
ಬಂದನು ಸಿಡಿಲ ಮರಿಯಾ
ಬಂದನು ಹೆಗ್ಗೇರ ಭದ್ರ ಉಗ್ರದ ರುದ್ರ
ಬಂದ ಮಾಸಾಳ ಹಮ್ಮೀರ ||೭೬||
ಬಂದನು ಚೊಕ್ಕನ ಬುಳಿಗ
ಬಂದನು ರೂಢಿಯ ಹರಿಗೆಯ ಕಲಿವೀರ
ಬಂದನು ಬಿರಿದಿನ ದಂಡ ||೭೭||
ಬಂದನು ಕೆಂಡ . . . . . . . . . .ತಿಮ್ಮ
ಬಂದನು ಹಗಲು ಕಗ್ಗೊಲೆಯ ಮಾದಿಗ ಜಂಪ
ಬಂದರು ವೀರಾದಿ ಭಟರು ||೭೮||
ಬಣಗು ಭೂತದ ಕೈಸೆಳೆದು
ನೆಣನ ಹಿರಿದು ಹಿರಿತಿಂಬ ನಲಿವ ಬಲು
ರಣವಕ್ಕಿಯಂತೊದಗಿದರು ||೭೯||
ಉಬ್ಬಿ ನಲಿದು ಹರುಷದಲಿ
ಹೆಬ್ಬುಲಿಗಳ ಜಂಗುಳಿಯಂತೆ ಮುಸುಕಿತ್ತು
ಉ . . . . . . .ಯ ಭಟರು ||೮೦||
ಹಿಡಿ ಕರ್ಪುರ ವೀಳೆಯವಾ
ನಡೆಗೋಟೆಯ ಮಲ್ಲ ಬಂ. . . . . . .ಡಿಯಲಾಗ
ತಡೆದನು ತುಳುವರ ಪೆಮ್ಮ ||೮೧||
ಗಳುಕುವಾ . . . . . . ದು ನೆರೆ ಜಂಪಾ
ಹೊಳಕೆಯ ಮಾಸಾಳು ಬಂದು ನಡೆದನಾಗ
ಸೆಳೆಗತ್ತಿ ಮಾದಿಗ ಜಂಪ ||೮೨||
ಮುಗ್ಗಿ ಬೀಳಲು ನಾನಿವನ
ಸ್ವರ್ಗ ಪರಿಯಲೆತ್ತಿ ತಂದೆ ಸಿರುಮಯೆಂದು
ನುಗ್ಗು ನುರಿಯ ತಮ್ಮ ನುಡಿದ ||೮೩||
ಕಡೆಯ ನೋಡದೆ ಬರಿಮಾತ
ನುಡಿವರ ಗಂಡ ನಾನೆನುತ ಚೊಕ್ಕನ ಬುಳ್ಳ
ನಡೆದು ಬೇಡಿದ ವೀಳೆಯವ ||೮೪||
ಕಿರುಕುಳ ಬಂಟರ ಗಂಡ
ಬರಸಿಡಿಲಿನ ಭದ್ರ ಬಂದು . . . . . . .ನಾಗ
ಜರೆದುಬ್ಬಿ ನಡೆದನೋಲಗದಿ ||೮೫||
ಹೆಬ್ಬುಲಿ ಕೆಂಡದ ಬಸವ
ಇಬ್ಬರ ಹೊಣಕೆಯ ಬರಸು ನರಸಿಂಗನ
ಸಬ್ಬ ದಳಕೆ ಸಿರುಮೇಂದ್ರ ||೮೬||
ನಾನಿಂದಿನಿರುಳು ಕಗ್ಗೊಲೆಯ
ಜೇನಕಲ್ಲ ಬೈಚಣ್ಣ ನುಡಿಯೆ ಕಂಡು
ಮೀನಿಗ ಲಕ್ಕಯ್ಯ ತಡದ ||೮೭||
ಸರ್ವ ದಂಡಿನ ಬುದ್ಧಿಯನು
ಹೊರವಂಟು ಬಾಳುವ ದಿನವುಂಟು ನಮಗಿನ್ನು
ಮೆರವೆನು ವೀರಗಾಳಗವ ||೮೮||
ಮೆರೆವ ಗುಬ್ಬಿಯ ಜಗಝಂಪ
ತುರುಗಿದ ಝಲ್ಲಿ ಎಳವ ಸರಪಣಿಗಳ
ಹರಿಗೆಯಕಾರರ ಕರೆಸಿ ||೮೯||
ಮನ್ನಿಸಿ ಸಮ ವೀಳ್ಯವಿತ್ತು
ಭಿನ್ನವಿಲ್ಲದೆ ಕಗ್ಗೊಲೆಗೆ ಕಳುಹಿದ
ಚೆನ್ನಿಗ ಸಿರುಮಭೂವ[ರ]ನು ||೯೦||
ನಡೆದರೊಗ್ಗಾಗಿ ಸುಭಟರು
ಉಡಿದಾರಗಳ ಕಿತ್ತು ಕಡಿದಲೆಗಳ ಹೊತ್ತು
ಜಡಿವ ೧೪[3]ಕಾರ್ಗತ್ತಲೆಯೊಳಗೆ೧೪[4] ||೯೧||
ಸೇರಿ ರಾಯನ ಪಾಳೆಯವ
ದಾರೆ ಕಿಗ್ಗಟ್ಟಿ ಸುರಗಿಗಳ ಕಿತ್ತೆತ್ತಿ
ಧೀರರು ನಡೆದರೊಗ್ಗಿನಲಿ ||೯೨||
ಸಾಹಸದ ಎಕ್ಕಟಿಗರು
ಕಾಹು ಮಾಡದೆ ಊರ ಹೊರಡಿಸಿ ದಂಡನು
ನುಗ್ಗುನುರಿಯ ಮಾಡೆಂದ ||೯೩||
ಉಗ್ರದಿಂದಲಿ ಹೊರಟರು
ಸ್ವರ್ಗದ ಬಾಗಿಲ ಕಿತ್ತೆತ್ತಿ ಹೊಕ್ಕಂತೆ
ಕಗ್ಗೊಲೆಯಲಿ ರಾಯನವರ ||೯೪||
ದೊಡನೆರಗುವ ತೆರನಂತೆ
ಗುಡಿ ಗಜ ತುರಗ ಕಾಲಾಳು ಪವುಜನೆಲ್ಲ
ಕಡಿದೊಟ್ಟಿದರು ಬೇಸರದೆ೧೫[5] ||೯೫||
ತೋಳ್ತೊಡೆ ನಡು ಹರಿಯ ಹೊಯ್ದು
ಸೀಳೆ ಹೊಟ್ಟೆಯ ಕರ್ಗಳಳ ಚೆಲ್ಲಿ ತೆಲುಗರ
ಪಾಳ್ಯವ ಧುಮ್ಮೇಳಲಿರಿದು೧೫[6] ||೯೬||
ಸರಿಯೊಳು ಸೆಣಸುವಂದದಲಿ
ಸಿರುಮನ ಭಟರು ಮೂದಲಿಸಿರಿದಾಡಿತು
ನರಸಿಂಹನ ಭಟರೊಡನೆ ||೯೭||
ಕಂದುವೆಗಳ ಬಲಿಬಲಿದು
ಮುಂದುವರಿಯಗೊಡದವರ ತರುಬಿದರು
ಚಂದದಿ ರಾಯನ ಭಟರು ||೯೮||
ಕುರಿವಿಂಡ ತೋಳ ಹೊಕ್ಕಂತೆ
ಕರುಳ ಹಿರಿದು ಖಂಡಗಳ ತೆಗೆದೀಡಾದಿ
ಮರುಳ ತಂಡವ ತಣಿಸಿದರು ||೯೯||
ಬೊಬ್ಬುಳಿಗೊಂಡು ತೆಲುಗರು
ತಬ್ಬಿಕೊಂಡರು ಗಿಡ ಮರಗಳ ಹೊಕ್ಕು
ಸಬ್ಬ ದಂಡೆಲ್ಲ ಬೆದರಿತು ||೧೦೦||
Leave A Comment