ಘೋಳಿಟ್ಟು, ಪಾಳೆಯವೆಲ್ಲ ಘೀಳಿಟ್ಟು
ಬೇಳುವೆಗೊಂಡು ನರಸಿಂಹ
ಆಳೋಚನೆಗೊಂಡು ಮರುಗಿ ದುಃಖವ ತಾಳಿ
ಕಾಳಗಕವ ತಿರುಗಿದನು ||೧೯೮||
ಎಚ್ಚಾಡಿ ಮಡಿದ * ಗೊಲ್ಲ ಸಿರುಮನ ಮಗ ವೀರಣ್ಣನೊಡನಿದ್ದ ಹೊಂದಲೀಸದೆ ಬೂದಿಹಾಳ ಕೋಟೆಯ ಸುತ್ತ ಬೆರಳ ತೋರಿದರಿಟ್ಟೇನೆಂಬ ಡೆಂಕಣಿ ತಿಪ್ಪ ಸತ್ತಿಗೆಯನ ತಾಗಲಿಡಲೊ ಗೊಲ್ಲ ವೀರನ ಗಿಂಡಿಯವನ ತಾಗಲಿಡಲೊ ಗೊಲ್ಲ ವೀರನ ಕುದುರೆಯವನ ಬೀಳಲಿಡಲೊ ವೀರನ ಎಂದ ಮಾತನು ಕೇಳಿ ನರಸಿಂಹರಾಯನು ವೀಳ್ಯವ ತೆಕ್ಕೊಂಡು ಡೆಂಕಣಿಯ ತಿಪ್ಪ ಆಡಿದ ಮಾತಿಗೆ ಎವೆ ಹಳಚದೆ ರಾಯನು ಚಿತ್ತವಧಾನ ಪರಾಕು ಇಲ್ಲದೆ ರಾಯ ಒದರುತ ಬರುವ ಗುಂಡನೆ ಕಂಡು ವೀರಯ್ಯ ಘಡು ಘಡು ಢಮ್ಮೆಂದು ನುಡಿವ ಡೆಂಕಣಿಗುಂಡು ಬೊಟ್ಟ ತೋರಿದರಿಡುವನು ಹುಸಿಯಲ್ಲವೊ ಇತ್ತ ಕೊತ್ತಳದೊಳು ವೀರ ಬಿದ್ದುರುಳಲು ಧುರಗಲಿ ವೀರನ ಮರಣವ ಕಂಡೊಬ್ಬ ಮಕ್ಕಳೊಳಗೆ ತನ್ನ ಮೋಹದ ಕಂದನ ಕಲ್ಲ ಘಾಯವೊ ಬಿಲ್ಲಂಬಿನ ಘಾಯವೊ ಬಿಂಕದಿ ಪಂಥದಿ ಅಂಕಕೆ ನಡೆದನು ಬಂದು ಹೇಳಿದರು ಚಿಕ್ಕರಸಿ ನಿನ್ನ ಕಿರಿಯ ಒಡಹುಟ್ಟಿದನ ಸುದ್ದಿಗೇಳಿ ಅಣ್ಣದಿರು ಕಟ್ಟಿ ಕುಳ್ಳರಿಸಿ ಚಿಮ್ಮುರಿ ಸುತ್ತಿ ವೀರಗೆ ಹೆತ್ತ ತಂದೆ ತಾಯಿ ಸಿರುಮ ಹೆಣ ಕಂಡು ಎದೆ ಬಸಿರನು ಹೊಯಿಕೊಳುತ ವಿಧಿಯೆ ಎಂದು ಕೆಟ್ಟೆನೆನುತ ಸಿರುಮೇಂದ್ರನ ಮೋಹದ ಬಸವಳಿವುತ ಒಳಯಕೆ ಬಂದು ಚಿಕ್ಕಮ್ಮ ಕಾಲ ಕುಪ್ಪಸಗಳ ತೊಡಿಸಿ ರವುಕಿಗಳ ಕನ್ನಡಿ ಕಠಾರವ ಪಿಡಿದೊಲವಿಂದ ನೆರೆ ನೋಂಪಿಯ ನೋಂತುದಿಲ್ಲವೆನುತಲಿ ನಳಿತೋಳು ಕದಪಿಗೆ ತನು ಒಪ್ಪುತಿದೆ ವೀರ ನೋಡುವ ಕಣ್ಣು ಕೇಳುವ ಕಿವಿ ಸವಿಮಾತ ಚಿಕ್ಕ ಹರೆಯದಲಿ ಮುತ್ತೈದೆತನಗಳ ಮುಂದೆ ಪರಿದು ನರ[ಸಿಂಹನ] ದಂಡ ನೆನೆದೆಯ ನಿನ್ನರಮನೆಯ ರಮಣಿಯರ ಚಿಕ್ಕತ್ತೆ ಮಾವ ಸಿರುಮೇಂದ್ರಗೆ ಶರಣೆಂದು ನಿರಿಯ ತಿದ್ದುತ ಮುಂಗುರುಳ ನೇವರಿಸುತ ಸೋಗೆನವಿಲ ಸೊಂಪಿಲಿ ನಲಿದಾಡುತ ಹೊಳೆವ ಕನ್ನಡಿ ಮುಖ ಕಳಸ ಕುಚಗಳೆವೆ ನಗೆವೆಣ್ಣುಗಳು ತಾವು ತರ್ಕೈಸಿ ಮುಂಡಾಡಿ ಸೊಸೆಯ ಮಗನ ಸಿರುಮ ಚಿಕ್ಕರಸಿ ಕಂಡು ಶೋಕವಿಡುತ ಬೂದಿಯಹಾಳ ಪ್ರಜೆಗಳೆಲ್ಲ ನಂಬುಗೆಯನು ಕೊಟ್ಟು ವೀರನ ತರ್ಕೈಸಿ ಮುಂಚೆ ನೀ ಪೋಗಿ ಶಿವನ ಪಾದಕೆ ಬಿದ್ದು ಹಿಂದಣ ಭವಪಾಶ ಹರಿದು ವೀರಣ್ಣ ನೀನು ಎತ್ತಿಕೊಂಡೊಯ್ದು ಕುಮಾರ ವೀರಣ್ಣನ ಮಗನ ಸೊಸೆಯರ ಮೊಗ ನೋಡಿ ಮಾತಾಡಿ ನಾಳೆ ನಿನ್ನೊಡನೆ ಬರುತ್ತಲೀವೆ ನೀ ಹೋಗಿ ಕಂದ ನಿನ್ನೊಡನೆ ನಿನ್ನಂತೆ ಬರುವ ಹಾಗೆ ಪುತ್ರಶೋಕವನು ನನಗೆ ಮುಂದು ತೋರಿದೆ ಮುಂದೆ ಕೈಲಾಸಕ್ಕೆ ನಡೆದೆ ವೀರಣ್ಣ ನಿನ್ನ ಉಘೆ ಉಘೆ ಎನುತ ಸಮಾಧಿಯನಿಕ್ಕಿ ಬಂದು
ಹೆಚ್ಚಿ ಕೋಪದಿ ಭುಗಿಲೆನುತ
ಬೆಚ್ಚಿ ತಲ್ಲಣಗೊಂಡು ಮಂದಿಯ ನೋಡಲು
ಮುಚ್ಚಿತಗುಳ ಹೊರವಳೆಯ ||೧೯೯||
ಬಿಲ್ಲು ಹರಿಗೆ ಪೆಟಲವರು
ನಿಲ್ಲದೆ ಚೀರುವ ತೆಲುಗರ ಗಾಯವ ಕಂಡು
ತಲ್ಲಣಿಸಿದ ನರಸಿಂಹ ||೨೦೦||
ನೊಂದ ಮಂದಿಯ ಕಾಣುತಲಿ
ಅಂದವಳಿದ ಕೋಪದಲಿ ನರಸಿಂಹರಾಯ
ನಿಂದು ಕರೆಸಿದ ಪೆಟಲಿನವರ ||೨೦೧|| (||೧೦-೩೬)
ಬರಸು ಪಂಥವನೆಂದ ರಾಯ
ಬಿರುದಿನ ಉಡುಗೊರೆ ಕೊಟ್ಟು ಕೊಲ್ಲು ವೀರನ
ಉರಕಿಟ್ಟು ಧರೆಗೆ ಕೆಡಹೆಂದ ||೨೦೨|| (||೧೦-೩೨)
ಸತ್ತಿಗೆ ಹಾರುವಂತಿಡಲೊ
ಒತ್ತಿನ ಚಾಮರದವನ ಇಡಲೊ ಎಂದು
ಮತ್ತೆ ಮೂದಲಿಸಿದ ತಿಪ್ಪ ||೨೦೩|| (||೧೦-೩೮)
ಮಂಡೆಯ ಹಾರುವಂತಿಡಲೊ
ದಂಡೆಯೊಳೋಲೈಸಿ ಬರುವಂತ ಹಡಪದ
ಕೊಂಡಲ ತಿಮ್ಮನ ನಿಡಲೊ ||೨೦೪|| (||೧೦-೩೯)
ಕುದುರೆಯ ಹಾರುವಂತಿಡಲೊ
ಚದುರತನದಿ ಅವನೊತ್ತಿಲಿ ನಿಂದಿಹ
ಕುದುರೆಯ ಭೀಮನನಿಡಲೊ ||೨೦೫||
ನೊಂದು ಕೋಪದಲುರಿದೆದ್ದು
ಚಂದದಿ ಕಾದುವ ವೀರನ ಇಡು ಎಂದು
ನಿಂದು ವೀಳ್ಯವ ಕೊಡಿಸಿದನು ||೨೦೬||
ಭಾಳ ಜತನದಲ್ಲಿ ನೋಡಿ
ಕೋಳುಗೊಂಬೆನು ಸಿರುಮನ ಮಗ ವೀರನ
ಹೇಳಿದ ನರಸಿಂಹನೊಡನೆ೩೨[3] ||೨೦೭||
ನೋಡೆ ಹೂಡಿದ ಡೆಂಕಣಿಯ
ಜೋಡಿಸಿ ತಕ್ಕಡಿ ಗುಂಡಿನ ಸೂತ್ರಗ
ಳಾಡುವ ಪಾತ್ರದಂದದಲಿ ||೨೦೮||
ಇತ್ತ ನೋಡೆನ್ನ ಕೈಪರಿಯ
ಒತ್ತಿ ಡೆಂಕಣಿಯ ಸಿಡಿಯ ಬಗ್ಗಿಸಿ ತಿಪ್ಪ
ಹತ್ತಿಸಿ ಇಡಲಾರ್ಭಟಿಸಿ ||೨೦೯|| (||೧೦-೪೨)
ಹೆದರದೆ ನಿಂದು ನೋಡಿದನು
ಕದಲಿ ಹಿಂದಕೆ ಹೋದರೆ ದೇವೇಂದ್ರ
ಪದವಿಲ್ಲವೆಂದು ಮುಂದೆ ನಡೆದ ||೨೧೦||
ಕಡುಗಲಿ ಸಿರುಮನ ಮಗನ
ಕೆಡಹಿ ಎದೆಯ ತಾಕಿಬಿಡಲು ವೀರನು ಪ್ರಾನ
ಒಡನೆ ಇದ್ದವರು ಘೋಳಿಡಲು ||೨೧೧|| (||೧೦-೪೩)
ದೃಷ್ಟವ ಕಂಡೆನೆಂದೆನುತ
ತೊಟ್ಟ ಮೈದೊಡಿಗೆಯ ನರಸಿಂಹ ತಿಪ್ಪಗೆ
ಕೊಟ್ಟನು ಬಿರದು ಬಾವಲಿಯ ||೨೧೨|| (||೧೦-೪೪)
ಒತ್ತಿನೊಳಿರ್ದ ಪರಿವಾರ
ಎತ್ತಿ ತರ್ಕೈಸಿ ಅಂಗದ ಜೀವವ ನೋಡಿ
ಮತ್ತಿ ಕಾಣದೆ ಅಳುತಿರಲು ||೨೧೩|| (||೧೦-೪೫)
ಹರಿದು ಸಿರುಮನಡಿಗೆರಗಿ
ಕರವ ಮುಗಿದು ಬಿನೈಸಲು ಕಂಬನಿ
ಸುರಿದವು ನೆರೆದೋಲಗದಿ ||೨೧೪|| (||೧೦-೪೬)
ಚಿಕ್ಕವೀರನ ಸುದ್ದಿಗೇಳಿ
ಅಕ್ಕಟೆನುತ ಬಾಯ ವೀಳ್ಯವನುಗುಳುತ್ತ
ದುಃಖದಿ ಸಿರುಮ ಕೇಳಿದನು ||೨೧೫|| (||೧೦-೪೭)
ಭಲ್ಲೇದ ಘಾಯವೂ ಮಗಗೆ
ಎಲ್ಲಿ ತಾಕಿತು ಕುಮಾರ ವೀರಣ್ಣಗೆಂದು
ಗೊಲ್ಲ ಸಿರುಮ ಕೇಳಿದನು ||೨೧೬|| (||೧೦-೪೮)
ಶಂಕೆ ಇಲ್ಲದೆ ಆಳ ತರಿದ
ಭೋಂಕದಿ ಸಿಡಿಲ ರವದಿ ವೀರನೆದೆಯನು
ಡೆಂಕಣಿ ಗುಂಡು ತಾಕಿದುದು ||೨೧೭|| (||೧೦-೪೯)
ಕಂದ ವೀರಣ್ಣ ಕಾದಿ ಮಡಿದ
ಸಂದನೆ ಶಿವನ ಪಾದಕೆ ಎಂದು ಶೋಕದಿ
ಮಂದಿರದ ಸತಿಯರಳಲಿದರು ||೨೧೮|| (||೧೦-೫೦)
ಹುಡಿ*[4][ಯಲ್ಲಿ]*[5] ಹೊರಳಿ ಬಿದ್ದಳುತ
ನಡೆದು ಹರಿಗೆಯೊಳು ಹಾಕಿ ವೀರನ ಹೊತ್ತು
ಕಡೆಯ ಚಾವಡಿಗೆ ತಂದಿಳುಹಿ ||೨೧೯|| ||೧೦-೫೧)
ಇಟ್ಟರು ಗಂಧ ಕಸ್ತುರಿಯ
ಕಟ್ಟಳಿಲ್ಲದೆ ಬಂಗಾರ ಶೃಂಗಾರ ಮಾಡಿ
ಪಟ್ಟಾವಳಿಯ ಹೊದಿಸಿದರು ||೨೨೦|| (||೧೦-೫೧)
ಚಿತ್ರದ ಚಾವಡಿಯೊಳಗೆ
ಮೊತ್ತದ ಸತಿಯರೆಲ್ಲರು ಕೂಡಿ ವೀರಗೆ
ಒತ್ತಿ ಒದರಿ ಚಿಕ್ಕಮ್ಮ ||೨೨೧||
ಮದನ ಕಂಭವ ಹಾಯ್ದಳುತ
ಹದನರಿಯದೆ ಹಾರೈಸಿ ವೀರನ ಮೇಲೆ
ಬಿದುಮುಖಿಯರು ಬಿದ್ದು ಹೊರಳೆ ||೨೨೨|| (||೧೦-೫೩)
ಪಟ್ಟದ ರಾಣಿ ಚಿಕ್ಕಮ್ಮ
ಮುಟ್ಟಿ ಮುದ್ದಿಸಿ ವೀರಗೆ ಹೆತ್ತೊಡಲನು ನೀನು
ಸುಟ್ಟುಹೋಗುವರೆ ಕಂದಯ್ಯ ||೨೨೩||
ಸೊಸೆಯರ ಶೃಂಗರಿಸಿದಳು
ಶಶಿಮುಖಿಯರು ಸಹ ಬೆರಸಿ ಊಟವ ಮಾಡಿ
ಒಸರಿ ಕಣ್ಜಲ ಕುಚಕಿಳಿಯೆ ||೨೨೪|| (||೧೦-೫೪)
ಮೇಲೆ ಚಿತ್ರಾಂಬರ ಉಡಿಸಿ
ಬಾಲೆಯರು ಮೊದಲಿಟ್ಟ ಬಂಗಾರ ತೆಗೆಯದೆ
ಸಾಲಂಚೆಗಮನೇರು ಮೆರೆಯೆ ||೨೨೫|| (||೧೦-೫೫)
ಹೊನ್ನ ಪುತ್ಥಳಿಗಳಂದದಲಿ
ಚೆನ್ನಾಗಿ ಮಣಿದು ಕುಣಿದು ಅತ್ತೆ ಮಾವಗೆ
ಬಿನ್ನೈಸಿ ಕರಗಳ ಮುಗಿದು ||೨೨೬||
ಅರೆ ನೋಂಪಿಯ ನೋಂತೆವೆನುತ
ಹರಸುತ ತಮ್ಮ ಗಂಡನ ನೆರೆ ರೂಪನು
ಪರಿಪರಿಯಲಿ ಕೊಂಡಾಡಿದರು ||೨೨೭|| (||೧೦-೫೬)
ಕಳಸ ಕುಚದ ಚೆಲುವಿಕೆಗೆ
ಅಳವಡಿಸಿವೆ ಕಸ್ತೂರಿ ಗಂಧಕೆ ಹೊಂದಿ
ಎಳೆಯ ಪ್ರಾಯದಿ ಹಿಂಗುವರೆ ||೨೨೮|| (||೧೦-೫೭)
ನಾಡುವ ಜಿಹ್ವೆ ನಾಸಿಕವು
ಜೋಡಗಲಿದೆಯೊ ಪಂಚೇಂದ್ರಿ ಪೃಥ್ವಿದೊರೆ
ರೂಢಿಸಿ ಕಾದಿದೊ ವೀರ ||೨೨೯|| (||೧೦-೫೮)
ಮುಕ್ಕು ಮಾಡಿದೆಯೊ ಕಲಿ ವೀರ
ಸಕ್ಕರೆ ಸವಿಬಾಯೊಳು ಬಾಯಿಕ್ಕದೆ
ಅಕ್ಕಟ ನೀ ಕಾದಿ ಮಡಿದೆ ||೨೩೦||
ಕೊಂದೆಯೊ ಪಾಡು ಪಂಥದಲಿ
ಹಿಂದು ಮುಂದೆಣಿಸದೆ ಎದೆಯ ಡೆಂಕಣಿಗುಂಡು
ಸಂಧಿಸಿ ಪ್ರಾಣ ಬಿಡುವಾಗ ||೨೩೧|| (||೧೦-೫೯)
ತನುಮನ ಮಚ್ಚುಗಿಚ್ಚೆಯಲಿ
ಜನನಿಯರಿಕ್ಕಿದ ದುಃಖವ ವೀರ
ಇನ ಶಶಿಕಳೆ ಪ್ರಭರಮಣ೩೩[6] ||೨೩೨|| (||೧೦-೬೦)
ಉಕ್ಕುವಳಲನು ಸಂತೈಸಿ
ವಿಕ್ರಮ ವೀರನ ಸತಿಯರು ಮೆರದರು
ಲೆಕ್ಕವಿಲ್ಲದ ವಾದ್ಯಗತಿಗೆ ||೨೩೩|| (||೧೦-೬೧)
ಸೆರಗ ಕಿಬ್ಬದಿಗೆ ಸಿಕ್ಕಿಸುತ
ಮೆರೆವುತ ಕಿರುನಗೆ ನಗುತ ವೀರನ ಮೇಲೆ
ಹೊರಳಿ ಗೋಳಿಟ್ಟೊರಲಿದರು ||೨೩೪|| (||೧೦-೬೨)
ಸಾಗಿಬಂದರು ಅರಮನೆಗೆ
ಅಗಲತ್ತೆ ಮಾವ ಭಾವಗಳಿಗೆ ತಲೆ
ವಾಗಿ ಕೈಮುಗಿದು ವೀರನಿಗೆ ||೨೩೫||
ಹಳಚದೆ ಕಣ್ಣಾರತಿಯ
ಬೆಳಗುತ ಜಯ ಜಯ ಎನುತ ವೀರನ ಮೇಲೆ
ತಳಿದರು ಮುತ್ತಿನ ಸೇಸೆಯನು ||೨೩೬||
ಬಗಸೆಗಂಗಳ ಬಾಲೆಯರು
ಮೊಗ ನೋಡಿ ಮಾತಾಡಿ ಅಕ್ಕಗಳಿರ ನಾವು
ಅಗಲಿ ಹೋಗುತಲಿವೆ ಎನುತ ||೨೩೭|| (||೧೦-೬೩)
ಬಸಿವ ಕಂಬನಿ ಕಾಹುರದಿ
ಬಿಸಿಯೇರಿದುಸುರೊಡಲೊಳು ದೂಟಾಡುತ್ತ
ಮಸದಲಗೆದೆಯ ಕೊಂಡಂತೆ ||೨೩೮||
ಏಕೆ ಈ ಸಂಸಾರವೆನುತ
ಈ ಕಳೆ ಈ ರೂಪು ಸಿರುಮನ ಮಗ ಜಗ
ದೇಕವಿಕ್ರಮ ವೀರ ಮಡಿದ ||೨೩೯||
ಚುಂಬಿಸಿ ಹಣೆಗೊತ್ತಿಕೊಳುತ
ಇಂಬುಗೊಂಡಿಹ ಕೈಲಾಸದೊಳಗೆ ನಿನ್ನ
ಬೆಂಬಳಿ ತಪ್ಪದೆ ಬಹೆವು ||೨೪೦||
ವಂಚನಿಲ್ಲದೆ ಬೇಡಿಕೊಳ್ಳು
ಪಂಚಾಕ್ಷರಿಯ ಬಾಗಿಲ ಕಾವಲ ಬೇಡೊ
ಹಿಂಚದೆ ಬಹೆನೆಂದ ಸಿರುಮ ||೨೪೧|| (||೧೦-೬೫)
ಮುಂದೆ ಸ್ವರ್ಗವ ಸೂರೆಗೊಳ್ಳೊ
ಬಂದ ಜನರಿಗೆ ಬಿಡಾರವ ಮಾಡಿಸೊ
ಎಂದು ಹೇಳಿದ ಸಿರುಮೇಂದ್ರ ||೨೪೨||
ಮತ್ತೆ ಸಮಾಧಿಯೊಳಿರಿಸಿ
ಒತ್ತಿಲಿ ಅವನ ಸತಿಯರ ಕುಳ್ಳಿರಿಸಿದ
ಹೆತ್ತ ತಂದೆಯು ಸಿರುಮೇಂದ್ರ ||೨೪೩|| (||೧೦-೬೬||
ಬಗೆಗುಂದಿ ಬಾಯಲಕ್ಕಿಯನು
ಮಿಗೆ ಇಕ್ಕಿ ಸಿರುಮನ ರಾಣಿ ಚಿಕ್ಕಮ್ಮ
ಅಗಲಿ ಹೋಹರೆ ಎನ್ನ ಕಂದ ||೨೪೪|| (||೧೦-೬೭)
ಹೇಳಯ್ಯ ಪರಮೇಶ್ವರಗೆ
ಕೇಲಿ ಬಿನ್ನೈಸೊ ಬಾಗಿಲ ಕಾದೆವೆನುತಲಿ
ಭಾಳಾಕ್ಷನ ಬೇಡಿಕೊಳ್ಳೊ ||೨೪೫||
ತಂದಹನೆ ಶಿವ ನಮಗೆ
ಸಂದೇಹವೆಳ್ಳಿನಿತಿಲ್ಲ ಬರುವೆವೆಂದು
ಮುಂದಲೆವಿಡಿದು ಮುದ್ದಾಡಿ ||೨೪೬||
ಹೆತ್ತವರನು ಕಡೆಮಾಡಿ
ಸತ್ತುದಿಲ್ಲವೊ ಸಿಂಹದ ಮರಿ ನೀನೆಂದು
ಅತ್ತು ಮಗನ ಮುಖ ನೋಡಿ ||೨೪೭||
ವೊಂದಿ ಎಲ್ಲರು ಬಂದೆವೆನುತ
ಬಂದ ಜನರುಗಳು ನಂಬುಗೆಯನು ಕೊಟ್ಟು
ನೊಂದೆಲ್ಲ ಮಣ್ಣ ಮುಚ್ಚಿದರು ||೨೪೮||
ದುಗುಡದೆಲ್ಲರು ಮಂದಿರಕೆ
ಜಗದೊಳು ಪೊಸತೆನಿಸುವ ಸಿರುಮೇಂದ್ರಗೆ
ಮಿಗಿಲಾದುದು ಮೂರು ಸಂಧಿ೩೪[7] ||೨೪೯|| (||೧೦-೬೯)
Leave A Comment