ಕಡುಕು ಕಂಠಮಾಲೆ ಕೊಡುವೆ ಬೇಡಿದ ನಾಡ
ಕೊಡುವೆನು ನರಸಿಂಹನಾಣೆ
ಕೆಡಬೇಡ ಸಿರುಮನ ಬಿಟ್ಟು ಬನ್ನಿರೊ ಎಂದು
ನುಡಿದ ಈಶ್ವರಿನಾಯಕನು ||೪೨||
ಆಸೆಯ ಮಾತನಾಡಲು ಕೇಳಿ ಸಿರುಮನ
ಲೇಸಿನ ಬಂಟ ಗುಜ್ಜಲೋಬ
ಮೋಸದಿ ನೂರಾಳು ಸಹಿತಲಳಿದು ಬಂದು
ಈಶ್ವರನಾಯ್ಕನ ಕಂಡ ||೪೩||
ತಡೆಯದೆ ನರಸಿಂಹನೆಡೆಗೈದಿ ಗುಜ್ಜಲೋಬ
ಒಡನಡ್ಡಬಿದ್ದು ಕೈಮುಗಿದ
ಕಡಗ ಕಂಠಮಾಲೆಯುಡುಗೊರೆ ವೀಳ್ಯವ
ತಡೆಯದಲಿತ್ತು ಮನ್ನಿಸಿದ ||೪೪||
ಹೇಳೆಲೊ ಗುಜ್ಜಲೋಬ ಬೂದಿಹಾಳ ಸಿರುಮನ
ಆಳು ಕುದುರೆ ಬಲುಮೆಯನು
ಕೇಳು ದೇವರ ದೇವ ಎಕ್ಕಟಿಗನಾಯಕರೆಲ್ಲ
ನಾಳೆ ಡಿಳ್ಳಿಸಿ ಬಹರೆಂದ ||೪೫||
ಎಂದ ಮಾತಿಗೆ ನರಸಿಂಹರಾಯನ ಮನ
ದಂದ ಕಾರ್ಯವು ಪರಿದಂತೆ
ಬಂದು ಗುಜ್ಜಲೋಬ ಸಮರಸ ದೊರೆಗಳು
ಮುಂದೆ ನಿಲ್ಲಿಸಿ ಕೋಟೆಯೊಳಗೆ ||೪೬||
ಕಂಗೆಟ್ಟು ಬೆಲಗೂರ ಭೈರವ ತಾನಿಳಿಯಬಿದ್ದ
ಸಂಗಡದಾಳು ಸಹಿತಲಿ
ಅಂಗ ಹೆಸರಿ ಆನೆಪನಾಯಕ ಬೂದಿಹಾಳ
ಭಂಗ ಬಡದೆ ಹೊರವಂಟ ||೪೭||
ಆನೆಪ್ಪನಾಯಕ ಬೆಲಗೂರ ಭೈರನು
ಪ್ರಾಣಕೆ ಸಾರಿ ಸಿರುಮನ
ಏನೆಂದಣಿಸದೆ ರಾಯನ ಪಾದಕೆ
ಕಾಣಿಕೆಯಿಕ್ಕಿ ಕಂಡವರು ||೪೮||
ಹೆಚ್ಚಿದ ನರಸಿಂಗರಾಯನುಡುಗೊರೆಯನು
ಪಚ್ಚದ ಕಡಗ ಪದಕವನು
ನಿಶ್ಚೈಸಿ ಕೊಡಲಿತ್ತ ಸುದ್ದಿಯ ಕೇಳಿದ
ಆಶ್ಚರ್ಯದಿ ಸಿರುಮೇಂದ್ರ ||೪೯||
ಹಿತವನು ಬೆಲಗೂರ ಭೈರ ೬ ಚಿಕ್ಕಾಯಿ ನಿನ್ನ ತಮ್ಮ ಕಕ್ಕುಲತೆಯ ಮಾಡಿ ನನ್ನೊಡಹುಟ್ಟಿದ ಬೆಲಗೂರ ಭೈರನು ಎಂದಿದ್ದರೆ ಸಾವು ತಪ್ಪದು ಸಿರುಮೇಂದ್ರ ಹೋದವರೆಲ್ಲ ಹೋಗಲಿ ಈ ಊರೊಳು ಹೆಂಡತಿಯ ಮಾತ ಕೇಳುತ ಸಿರುಮೇಂದ್ರ ಜಗ ಬಿರಿದಿನ ಜನರೊಳು ಶೃಂಗಾರಕೆ ಚಿನ್ನಗಾವಿಯನುಟ್ಟು ಹರುಷದಿ ಸಿರುಮೇಂದ್ರ ಉತ್ತಮ ನಾಯಕ ಸಿರುಮನಾಯತವಾಗಿ ರಮಣ ರಮಣರ ರೂಪು ದರ್ಪಣದೊಳಿದಿರಿಟ್ಟು ಬಂದು ಕುಲದೈವ ಸೌರಾಷ್ಟ್ರಸೋಮೇಶಂಗೆ ಅಂಗನೆ ಸಹಿತ ಸಿರುಮ ಸೋಮೇಶಗೆ ಹಿಡಿಹೊನ್ನ ಕಾಣಿಕೆಯಿಕ್ಕಿ ವೀರೇಶಗೆ ಗಂಡ ಹಂಡಿರ ಮನ ಒಂದಾಗಿಯೆ ಬೇಡಿ ಆಶೆಯಿಲ್ಲದ ನಿರಾಶೆಮಠಕೆ ಬಂದ ಕಟ್ಟಾಣಿ ಮುತ್ತು ಮಾಣಿಕ ವಜ್ರ ನೀಲದ ಪರಮಪಾವನ ಪುಣ್ಯಪುರುಷ ವಿಭೂತಿಯ ಕಂಡೆವು ಸಿರುಮೇಂದ್ರ ನಿನ್ನ ಕೈಯಲಿ ಪೂಜೆ ಕೇಡುಬುದ್ಧಿಗಳನೆಣಸದಿರಿ ಹಾಸ್ಯವ ಯಾನ ಮಾಡಲು ನರಸಿಂಹನೋಡಿಸಿ ನಮ್ಮ ಹೀಗೆಂದು ಹೇಳೆ ಹಾಗಹುದೆಂದು ಮಹಂತು ಬಂದು ಬಣ್ಣದ ಚಾವಡಿಯೊಳು ಸಿರುಮೇಂದ್ರ ಅಣ್ಣನ ಮನದ ನಿಶ್ವಯವರಿತು ಮ ನಮ್ಮ ಕೈಸೆರೆಯ ಕಪ್ಪವ ಕೊಟ್ಟು ಬದುಕಣ್ಣ ಕಂಗೆಟ್ಟು ಹೆಂಬೇಡಿ ಕಾಣಹೇಳಿದ ನರ- ಬದುಕಬಲ್ಲವರೆಲ್ಲ ಬಿಟ್ಟು ಹೋಗಿರೊ ನಮ್ಮ ಹಡಪದ ಹಲಗನು ಒಡಗೂಡಿ ಊಳಿಗದ ಎಷ್ಟು ದಿನವು ಬಾಳೆ ಕಾಯವಳಿದು ಕೀರ್ತಿ ಅಗ್ಗಳೆ ಅಳಿಯ ತಿಪ್ಪಣ ನಂಬಿನಾಯಕ ಮೆಚ್ಚಿದ ಮಾತಿಗೆ ನಿಶ್ಚಯ ಮನದಲ್ಲಿ ಹೆಬ್ಬುಲಿ ಕರಿಸಿಂಹದ ಗಂಡವಭೇರುಂಡ ಬರಸಿಡಿಲು ತರಿವಾಯುಧ ಹರಿಗೆಯ ಇತ್ತಲಿ ಬೇಗ ಈಶ್ವರಿನಾಯಕನ ಕೂಡೆ ಎನ್ನ ಭಾವನ ಗೊಲ್ಲ ಸಿರುಮನ ಬಿಟ್ಟೀಗ ಕೇಳಯ್ಯ ನರಸಿಂಹ ಬೂದಿಹಾಳ ಸಿರುಮನ
ಗತಿಗೆಟ್ಟು ಹೋದ ಸುದ್ದಿಯನು
ಸತಿಕುಲರನ್ನೆ ಚಿಕ್ಕರಸಿಗೆ ಹೇಳಿದ
ಶತಪತ್ರಸಖ ಸಿರುಮೇಂದ್ರ ||೫೦||
ಅಕ್ಕಟ ಪಾಪಿ ಕೆಡಿಸಿದನು
ಇಕ್ಕಿದ ಕಿಚ್ಚ ಇರುವೆಯ ಗೂಡಿಗೆ ಎಂದು
ವಿಕ್ರಮ ಸಿರುಮನಾಡಿದನು ||೫೧||
ತನ್ನ ಪ್ರಾಣಕೆ ಆಶೆಮಾಡಿ
ಮುನ್ನಲಿ ಕೊಲೆ ಹಗೆ ನರಸಿಂಹನ ಕಂಡ
ಇನ್ನು ನಿಶ್ಚೈಸೆಲೊ ಸಿರಮ ||೫೨||
ಇಂದಪಕೀರ್ತಿಯ ಮಾಡಿ
ಹಂದೆತನದಿ ಬೆಲಗೂರ ಭೈರಯ್ಯನು ನಮ್ಮ
ಕೊಂದು ಹೋದನು ಸ್ವಾಮಿದ್ರೋಹಿ ||೫೩||
ಕಾದಿ ಸಾಯಲು ಬೇಕು ಸಿರುಮ
ಬೋಧಿಸಿದಳು ಗಂಡಗೆ ಚಿಕ್ಕರಸಿಯು
ಮೇದಿನಿಯೊಳು ಕೀರ್ತಿವನಿತೆ ||೫೪||
ಮಂಡೆಯ ವೀರ ಜಡೆಹೆಣಿಸಿ
ಮಂಡಲದೊಳು ದಿವ್ಯಪರಿಮಳವನು ನೆರೆ
ಗಂಡು ಅಂಗಕೆ ಲೇಪಿಸಿದ ||೫೫||
ಮಿಗೆ ಬಿರಿದಾಂಕ ಬಿಂಕದಲಿ
ಪಗಲೊಡೆಯನ ಬಗೆಬಗೆಯಂದದೊಳಾಗ
ನಗೆಮುಖ ಸಿರುಮ ಶೌರ್ಯದಲಿ೭[3] ||೫೬||
ರನ್ನ ಗೊಂಡೇವ ಇಳಿಬಿಟ್ಟ
ಚೆನ್ನಗೊಂಡೆಯ ದಾರ ಮುತ್ತಿನ ಸರಗಳ
ಚೆನ್ನಿಗ ಸಿರುಮ ಕಟ್ಟಿದನು ||೫೭||
ಚಿತ್ತದೊಲ್ಲಭೆಯು ಚಿಕ್ಕಮ್ಮ
ಇತ್ತಂಡ ನಿಂದು ನಿಲುವುಗನ್ನಡಿಯನು
ಅರ್ತಿಯಿಂದಲಿ ನೋಡಿದರು ||೫೮||
ಸಮಗಾಣಿಸಲು ಸಾಹ[ಸ]ದಿ
ದ್ಯುಮಣಿ ವಿಕ್ರಮ ಜಯ ಜಯ ಎಂದು ಸಿರುಮನು
ಕ್ರಮದಿ ಕೈದುವ ಝಳಪಿಸಿದ ||೫೯||
ವಂದಿಸಿ ಕಾಣಿಕೆಯಿಕ್ಕಿ
ತಂದೆ ತಾಯಾಗಿ ಮುನ್ನಲಿ ಸಲಹಿದೆ ಸ್ವಾಮಿ
ಇಂದು ಮುಕ್ತಿಯನ್ಯೆದಿಸೆಂದ ||೬೦||
ಹಿಂಗದೆರಗಿ ಬೇಡಿಕೊಂಡ
ಜಂಗುಳಿ ದೈವದ ಗಂಡ ವೀರೇಶ್ವರ
ಲಿಂಗನ ಆಲಯಕೆ ಬಂದ ||೬೧||
ಹಿಡಿವ ಕಠಾರಿಯೊಪ್ಪಿಸಿದ
ಉಡಿಸಿದ ನಡುವಿಗೆ ಪಟ್ಟೆಯ ಕಾಸೆಯ
ಮೃಡಸುತ ವೀರಭದ್ರನಿಗೆ ||೬೨||
ಕೊಂಡರು ವೀರ ೮[4]ಸ್ವರ್ಗವನು೮[5]
ಇಂಡೆ ಪ್ರಸಾದವ ಕೈಕೊಂಡು ಹೊರಟ ಪ್ರ
ಚಂಡ ಸಿರುಮ ಮನ್ನೆಯನು ||೬೩||
ಭಾಸುರ ಕೋಟಿಪ್ರಕಾಶ
ಈಶನ ಲಾಂಛನ ಮಹಾಂತಿನಂಘ್ರಿಗೆ
ಆ ಸಮಯದಲೆರಗಿದನು ||೬೪||
ಕಟ್ಟಣಿಲ್ಲದೆ ಜಾಳಿಗೆಯ
ಪಟ್ಟೆಯ ಕಂಥೆ ಮಹಂತಿಗೆ ಶರಣೆಂದು
ಕೊಟ್ಟು ಕಾಣಿಗೆ ಸಿರುಮೇಂದ್ರ ||೬೫||
ಚರಲಿಂಗ ವರ ಕರುಣದಲಿ
ಸಿರುಮನ ದುರಿತ ದುರಕ್ಷರ ತೊಡೆವೊಲು
ಹರಸಿ ಭಸಿತವ ಧರಿಸಿದರು ||೬೬||
ಗೊಂಡೆವು ಕೆಲ ಕಾಲದಲಿ
ಕೊಂಡೊಯ್ವೆವು ಜಂಗಮವೇಷದಿ ನಿನ್ನ
ಮಂಡಲದೊಳು ಪೊಸತೆನಿಸಿ ||೬೭||
ಮಾಡುವರತಿ ಜಗದೊಳಗೆ
ಬೇಡ ನೀ ಕೇಳು ಜಂಗಮವೇಷದಿ ನಿನ್ನ
ಕೂಡಿಕೊಂಡೊಯ್ವೆವೇಳೆನಲು ||೬೮||
ಮಾನಭಂಗಿತರ ಮಾಡಿ ಹಿಡಿವ
ನಾನಾ ಬಂಧನಗಳಲಿ ಕಟ್ಟಿ ಬಾಧಿಸಿ ಮದ
ದಾನೆಗಳಲ್ಲಿ ಕೊಲಿಸುವನು ||೬೯||
ಭೋಗಿತ ಫಲ ತಪ್ಪದೆನುತ
ಹೋಗೆಂದು ಕಳುಹಲು ಸಿರುಮನು ಸತಿಸಹ
ವಾಗಿ ಬಂದರು ಅರಮನೆಗೆ ||೭೦||
ನಿಂದು ಸಂದೇಹವಿಲ್ಲದಿರಲು
ಹಿಂದು ಮುಂದೆಡಬಲದೊಳಿ[ದ್ದ]ವರನು
ಬಂಧುಜನರ ಮುಖ ನೋಡಿ ||೭೧||
ಲ್ಲಣ್ಣ ಕರವ ಮುಗಿದೊಡನೆ
ಹೆಣ್ಣು ಗಂಡೊಂದು ಕೋಟೆಯ ಕೆಡಿಸದೆ ಸಿರು-
ಮಣ್ಣ ಕಾಬೆನೊ ನರಸಿಂಹನ ||೭೨||
ಸುಮ್ಮನೆ ಸಾಯಲೇಕಣ್ಣ
ತಮ್ಮ ಮಲ್ಲಣ್ಣ ಹೀಗೆನಲು ಸಿರುಮ ಕೇಳಿ
ಕೆಮ್ಮೀಸೆ ಮುರಿದು ಕೋಪದಲಿ ||೭೩||
ಸಿಂಗನ ನಮ್ಮ ಮಲ್ಲಣ್ಣ
ಹೆಂಗೂಸು ಮುಖ ನೋಡಿವನೆಂದು ಕೋಪದಿ
ಭಂಗಿಸಿದನು ಸಿರುಮೇಂದ್ರ ||೭೪||
ಮುದದಿಂದ ಪಣೆಯ ಅಕ್ಕರವ
ವಿಧಿ ಬರದನೊ ನರಸಿಂಹ ಬರದನೊಯೆಂದು
ಹೆದರಲೇಕೆಂದ ಸಿರುಮೇಂದ್ರ ||೭೫||
ಕಡುಗಲಿ ಭಟರೊಂದಾಗಿ
ಒಡೆಯ ಸಿರುಮ ಕೇಳೋ ಕಡಲೊಳು ಕಲ್ಪಿತ
ಪೊಡವಿಯೊಳಗೆ ಬಿಡುವದೆ ||೭೬||
ಸೃಷ್ಟಿಯೊಳಿಹುದು ಕೇಳಯ್ಯ
ಪಟ್ಟದ ಕುಮಾರ ಕಾಚಯ್ಯ ಸೋಮಣ್ಣ
ದಿಟ್ಟನು ಮಗ ಮಲ್ಲ ನುಡಿದ ||೭೭|
ಹೆಗ್ಗೆರೆ ನಾಗೊಂಡ ಸಹಿತ
ಉಗ್ರದ ಸಿರುಮ ನಿನ್ನೊಡನೆಲ್ಲರು ವೀರ
ಸ್ವರ್ಗ೯[6] ವೈವೆವೆಂದಾರಾಗ೯[7] ||೭೮||
ಉತ್ಸಾಹದಿ ಸಿರುಮೇಂದ್ರ
ಪಚ್ಚೆ ಕಡಗ ಪದಕಗಳ ಕೊಡಿಸಿದ
ಹೆಚ್ಚಿನ ವೀರಭಟರಿಗೆ ||೭೯||
ಅಬ್ಬರದಲಿ ಸಿರುಮೇಂದ್ರ
ಹಬ್ಬದ ಕುರಿ ನರಸಿಂಗನ ದಂಡನು
ಹೆಬ್ಬಾಗಿಲೊಳು ತರಿ ಎಂದ ||೮೦||
ಮರೆಗೊಂಡು ನಡೆದು ಬಂದವರು
ಉರ್ವಿಗುನ್ನತ ಬೂದಿಹಾಳ ಬಾಗಿಲುಗಳ
ತೆರಸಿ ನಿಂದೆಲ್ಲ ಕಾದಿದರು ||೮೧||
ಮಾತಾಡಿ ಬೆಲಗೂರ ಭೈರ
ಭೀತಿಲಿ ಸಾಷ್ಟಾಂಗವೆರಗಿದ ರಾಯಗೆ
ಅತ್ತ ಕೈಮುಗಿದು ಬಾಯೊಡನೆ ||೮೨||
ನಿನ್ನ ಪಾದವೆ ಗತಿಯೆನುತ
ಭಿನ್ನವಿಲ್ಲದೆ ಕಂಡೆ ರಾಯ ನಿನಗೆ ನಾನು
ಕನ್ನಡಿಸುವೆ ಕಂಡ ಸ್ಥಿತಿಯ ||೮೩||
ಆಳು ಜಾಳಿಸಿಹೋಯಿತೆಲ್ಲ
ಕೋಳುಗೊಂಬುದಕಿದು ವ್ಯಾಳೆವೆನುತಲಿ
ಹೇಳಿದ ಬೆಲಗೂರ ಭೈರ ||೮೪||
Leave A Comment