Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಚಂದ್ರಕಾಂತ ಕರದಳ್ಳಿ

ಲೇಖಕ, ಪ್ರಕಾಶಕ, ಶಿಕ್ಷಕ ಹಾಗೂ ಮಕ್ಕಳ ಸಾಹಿತಿ ಚಂದ್ರಕಾಂತ ಕರದಳ್ಳಿ ಸಾರಸ್ವತ ಲೋಕದ ಗಟ್ಟಿಪ್ರತಿಭೆ. ಶಿಶುಸಾಹಿತ್ಯದಲ್ಲೇ ತಮ್ಮದೇ ಛಾಪು ಮೂಡಿಸಿರುವ ಪ್ರತಿಭಾವಂತರು.
ಯಾದಗಿರಿ ಜಿಲ್ಲೆಯ ಶಹಾಪುರ ಚಂದ್ರಕಾಂತ ಕರದಳ್ಳಿ ಅವರ ಮೂಲನೆಲೆ, ಬಾಲ್ಯದಿಂದಲೂ ಓದು- ಬರಹದೆಡೆಗೆ ತೀವ್ರಾಸಕ್ತಿ. ಕನ್ನಡದಲ್ಲಿ ಸ್ನಾತಕೋತ್ತರ ಪದವಿ, ಬಿ.ಇಡಿ ಪಡೆದವರು. ಶಹಾಪುರದ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಬಾಲಕಿಯರ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಶಿಕ್ಷಕರಾಗಿ ಅನನ್ಯ ಸೇವೆ. ಮಕ್ಕಳ ಮನೋಭೂಮಿಯೇ ಬರಹದ ತಪೋಭೂಮಿ. ಮಕ್ಕಳಿಗಾಗಿ ಆರು ಕವಿತಾಸಂಕಲನ, ೫ ಕಥಾಸಂಕಲನ, ೬ ಕಾದಂಬರಿ, ೨ ಶಿಶುಪ್ರಾಸಗಳು, ೧ ಒಗಟುಗಳು ಸೇರಿದಂತೆ ೨೫ಕ್ಕೂ ಹೆಚ್ಚು ಕೃತಿಗಳು, ಪ್ರೌಢ ಸಾಹಿತ್ಯದಲ್ಲಿ ೨೫ ಕೃತಿಗಳನ್ನು ರಚಿಸಿರುವ ಸಾಹಿತಿಗಳು. ಸುರಪುರದ ಮಕ್ಕಳ ಸಾಹಿತ್ಯ ಸಮ್ಮೇಳನ, ಶಹಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ, ಯಾದಗಿರಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಪುಸ್ತಕ ಆಯ್ಕೆ ಸಮಿತಿಯ ಸದಸ್ಯತ್ವ, ಸಿಸು ಸಂಗಮೇಶ ಪ್ರಶಸ್ತಿ, ಸಗರನಾಡ ಸಿರಿ, ಉತ್ತಮ ಶಿಕ್ಷಕ ರಾಷ್ಟ್ರ-ರಾಜ್ಯ ಪ್ರಶಸ್ತಿಗಳಿಗೆ ಭಾಜನರು, ಸದ್ದಿಲ್ಲದೆ ಆದರಣೀಯ ಸಾಧನೆಯ ಕೃಷಿಗೈದ ಸಾಧಕರು.