Loading Events

« All Events

ಚಕ್ರಕೋಡಿ ನಾರಾಯಣ ಶಾಸ್ತ್ರಿ

July 4

..೧೯೧೩ ..೧೯೯೩ ಸಂಗೀತ ಕಚೇರಿಗಳಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿದ ನಾರಾಯಣಶಾಸ್ತ್ರಿಗಳು ಹುಟ್ಟಿದ್ದು ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲ್ಲೂಕಿನ ಕೋಳ್ಯೂರು ಗ್ರಾಮದ ಚಕ್ರಕೋಡಿಯಲ್ಲಿ. ತಂದೆ ಶಾಮಾ ಶಾಸ್ತ್ರಿಗಳು, ತಾಯಿ ಸರಸ್ವತಿ. ಮಗುವಾಗಿದ್ದಾಗಲೇ ಚಮಚೆಯಿಂದ ಪಾತ್ರೆಯ ಮೇಲೆ ಕುಟ್ಟಿ ಸಂಗೀತ ಪ್ರೀತಿ ತೋರಿದ ಬಾಲಕ. ಪಾಲಘಾಟ್‌ ವೀರಮಣಿ ಭಾಗವತರಿಂದ ಪ್ರಾರಂಭಿಕ ಶಿಕ್ಷಣ, ಉಡುಪಿ ಲಕ್ಷ್ಮೀ ಬಾಯಿಯವರಲ್ಲಿ ಕೆಲಕಾಲ. ದೇಶಾಂತರ ಹೊರಟ ತಂದೆಯವರೊಡನೆ ಸೇರಿದ್ದು ಕೊಲ್ಕತ್ತಾ, ಸಂಗೀತ ಕಚೇರಿ, ಪಾಠ ಹೇಳಿ ಜೀವನ ನಿರ್ವಹಣೆ, ಮೈಸೂರಿಗೆ ಬಂದು ಬಿ. ದೇವೇಂದ್ರಪ್ಪನವರಲ್ಲಿ ಶಿಷ್ಯವೃತ್ತಿ, ವಚನಗಳಿಗೆ ರಾಗ, ತಾಳ ಹಾಕಿ ಕಲಿತ ಸಂಗೀತ, ವೀರಶೈವ ಸಮಾಜ ಸೇವಾ ಸಂಘದವರ ಕಾರ್ಯಕ್ರಮದಲ್ಲಿ ಮೊದಲಬಾರಿಗೆ ನಡೆಸಿಕೊಟ್ಟು, ‘ಶಿವಶರಣ ವಚನ ಸಂಗೀತದ’ ಕಾರ್ಯಕ್ರಮ. ಆದ್ಯ ಪ್ರವರ್ತಕರೆನಿಸಿದರು. ಪ್ರೊ. ದೇವಧರ್ ಸಂಗೀತ ವಿದ್ಯಾಲಯದಲ್ಲಿ ವಿದ್ವಾಂಸರಾದ ವಿಶ್ವೇಶ್ವರ ಪಂಡಿತರಲ್ಲಿ ಕಲಿತ ಹಿಂದೂಸ್ತಾನಿ ಸಂಗೀತ. ಮಡಕೇರಿಯ ಗೌರ್ನಮೆಂಟ್‌ ಹೈಸ್ಕೂಲಿನ ಟೀಚರ್ಸ್ ಟ್ರೈನಿಂಗ್‌ ವಿಭಾಗದಲ್ಲಿ, ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಸಂಗೀತ ಅಧ್ಯಾಪಕರಾಗಿ ಕೆಲಕಾಲ ಸೇವೆ. ಮೈಸೂರು ಆಕಾಶವಾಣಿ ನಿಲಯದ ಕಲಾವಿದರಾಗಿ ನೇಮಕ. ಆಕಾಶವಾಣಿ ಬೆಂಗಳೂರು, ಧಾರವಾಡವಲ್ಲದೆ ರಾಷ್ಟ್ರೀಯಜಾಲದಲ್ಲಿ ದೆಹಲಿ, ಕೋಲ್ಕತ್ತಾ, ಹೈದರಾಬಾದ್‌, ಚೆನ್ನೈ, ತಿರುವನಂತಪುರ ಕೇಂದ್ರಗಳಿಂದಲೂ ಕಾರ್ಯಕ್ರಮ ಪ್ರಸಾರ. ಅಕ್ಕಮಹಾದೇವಿಯವರ ವಚನಗಳನ್ನು ಕೊಲಂಬಿಯಾ ಗ್ರಾಮಾಫೋನ್‌ ಕಂ. ಧ್ವನಿಮುದ್ರಿಸಿ ಹೊರತಂದ ಗ್ರಾಮಫೋನ್‌ರೆಕಾರ್ಡ್‌. ವಾಗ್ಗೇಯಕಾರರಾಗಿಯೂ ಹಲವಾರು ಕೃತಿಗಳ ರಚನೆ. ರಮಣಮಹರ್ಷಿಗಳ ಮೇಲೆ ರಚಿಸಿದ ಹಲವಾರು ಕೃತಿಗಳು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಕಟಗೊಂಡ ಗ್ರಂಥ “ಕರ್ನಾಟಕ ಸಂಗೀತ ವೈಭವ” ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯಿಂದ ಕರ್ನಾಟಕ ಕಲಾತಿಲಕ, ಹನುಮಜ್ಜಯಂತಿ ಉತ್ಸವದಲ್ಲಿ ಗಾನಾಲಂಕಾರ, ಸಂಗೀತ ನಾಟಕ ಅಕಾಡಮಿಯಿಂದ ಹರಿದಾಸ ಸಂಗೀತ ಸುಧಾಕರ ಅಲ್ಲದೆ ವಚನಗಾಯನ ಹರಿಕಾರ,  ಮುಂತಾದ ಬಿರುದು ಪ್ರಶಸ್ತಿಗಳು. ಇದೇ ದಿನ ಹುಟ್ಟಿದ ಕಲಾವಿದರು ಇಂದಿರಾ ವೆಂಕಟೇಶ್‌ – ೧೯೩೬ ವಿದ್ಯಾಭೂಷಣರು – ೧೯೫೨ ಶ್ರೀನಿವಾಸ್‌.. ಟಿ – ೧೯೫೮ ವೃಂದಾ ಎಸ್‌.ರಾವ್‌ – ೧೯೬೩

* * *

Details

Date:
July 4
Event Category: