Categories
ಜಾನಪದ ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ

ಚನ್ನಮಲ್ಲೇಗೌಡ

ಜಾನಪದ ಕ್ಷೇತ್ರಕ್ಕೆ ಗಡಿಜಿಲ್ಲೆ ಚಾಮರಾಮನಗರದ ಕೊಡುಗೆ ಚನ್ನಮಲ್ಲೇಗೌಡರು. ಅಳಿವಿನಂಚಿನಲ್ಲಿರುವ ಗೊರವರ ಕುಣಿತದ ಪುನರುತ್ಥಾನಕ್ಕಾಗಿ ಶ್ರಮಿಸಿದ ಕಲಾವಿದರು.
ಚನ್ನಮಲ್ಲೇಗೌಡರಿಗೆ ಗೊರವರ ಕುಣಿತ ಅಪ್ಪನಿಂದ ಬಂದ ಬಳುವಳಿ. ಜಾನಪದ ಶ್ರೀ ಪ್ರಶಸ್ತಿ ಪುರಸ್ಕೃತ ಪುಟ್ಟಮಲ್ಲೇಗೌಡರ ಗರಡಿಯಲ್ಲಿ ಅರಳಿದ ಕಲಾವಿದ. ಬಾಲ್ಯದಲ್ಲೇ ಒಲಿದ ಗೊರವರ ಕುಣಿತವನ್ನು ಹಳ್ಳಿಗಾಡಿನ ರಥೋತ್ಸವ, ಜಾತ್ರೆ, ಹಬ್ಬಗಳಲ್ಲಿ ಪ್ರದರ್ಶಿಸುತ್ತಲೇ ಮುಂಚೂಣಿಗೆ ಬಂದವರು. ರಾಜ್ಯದ ಹಲವೆಡೆ ಮಾತ್ರವಲ್ಲದೇ ಹೈದರಾಬಾದ್, ಅಂಡಮಾನ್, ನವದೆಹಲಿ, ನಾಗಪುರ, ಭೂಪಾಲ್ನಲ್ಲೂ ಗೊರವರ ಕುಣಿತದ ದರ್ಶನ ಮಾಡಿಸಿರುವ ಹೆಗ್ಗಳಿಕೆ. ಚನ್ನಮಲ್ಲೇಗೌಡರಿಗೆ ಈ ಕಲೆ ಕೇವಲ ಪ್ರತಿಭಾಪ್ರದರ್ಶನ ಮಾತ್ರವಲ್ಲ ಅದೇ ಬದುಕು-ಭಾವ-ಜೀವ ಎಲ್ಲಾ. ಆರು ದಶಕಗಳ ನಿರಂತರ ಕಲಾಪ್ರದರ್ಶನದ ಸಾರ್ಥಕತೆಯ ಚನ್ನಮಲ್ಲೇಗೌಡರು ಇದೀಗ ಯುವಪೀಳಿಗೆಗೆ ಕಲೆಯ ಧಾರೆಯೆರೆಯುವ ಕಾರ್ಯದಲ್ಲಿ ಮಗ್ನರು.