೧೯೧೧ |
ಮುರುಗೋಡಿನಲ್ಲಿ ಬಾಳಪ್ಪ ಹುಕ್ಕೇರಿಯವರ ಜನನ ೨೧ ನೆಯ ಆಗಸ್ಟ್ |
೧೯೨೫-೨೮ |
ಮುರುಗೋಡಿನ ಶಿವಲಿಂಗಯ್ಯಸ್ವಾಮಿಯವರ ಹತ್ತಿರ ಸಂಗೀತ ಅಧ್ಯಯನ |
೧೯೩೦ |
ಕಾಯ್ದೆ ಭಂಗ ಚಳುವಳಿಯಲ್ಲಿ ಭಾಗವಹಿಸಿದ ಪ್ರಯುಕ್ತ ಆರು ತಿಂಗಳ ಕಾಲ ಕಾರಾಗೃಹ ವಾಸ |
೧೯೩೨-೪೦ |
ನಾಟಕ ಕ್ಷೇತ್ರದಲ್ಲಿ ಸಾಧನೆ |
೧೯೪೨-೭೯ |
“ಹೆಚ್ಚು ಆಹಾರಧಾನ್ಯ ಬೆಳೆಯಿರಿ” ಎಂಬ ಆಂದೋಲನದಲ್ಲಿ ಕ್ಷೇತ್ರ ಪ್ರಚಾರ |
೧೯೫೨ |
ಪುಣೆಯಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಕನ್ನಡ, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಗಾಯನ |
೧೯೫೪ |
ಹುಬ್ಬಳ್ಳಿಯಲ್ಲಿ ನಡೆದ ಒಕ್ಕಲುತನ ಪ್ರದರ್ಶನದಲ್ಲಿ “ಸಭಾ ಭೂಷಣ” ಬಿರುದು ಪ್ರಧಾನ |
೧೯೫೫ |
ದೆಹಲಿಯಲ್ಲಿ ನೆಹರು ನಿವಾಸದಲ್ಲಿ ನೆಹರೂರೊಡನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು |
೧೯೫೫ |
ದೆಹಲಿಯಲ್ಲಿ ನಡೆದ ಯುವ ಜನ ಮೇಳದಲ್ಲಿ ಭಾಗವಹಿಸಿದ್ದಾರೆ |
೧೯೫೬-೫೯ |
ಭಾರತ ಯಾತ್ರೆ |
೧೯೫೯ |
ಡಾ.ರಾಜೀಂದ್ರ ಪ್ರಸಾದರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ |
೧೯೬೨ |
ಬಿಜಾಪುರದಲ್ಲಿ ನಡೆದ ಇಂದಿರಾ ಗಾಂಧಿಯವರ ತುಲಾಭಾರ ಕಾರ್ಯಕ್ರಮದಲ್ಲಿ ಗಾಯನ |
೧೯೬೭ |
ದೆಹಲಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಗಾಯನ |
೧೯೬೭ |
ದೆಹಲಿಯ ಅಪೆಕ್ಸ್ ಥೇಟರಿನಲ್ಲಿ ರಾಷ್ಟ್ರಪತಿ ಡಾ. ಝಕೀರ ಹುಸೇನರೊಂದಿಗೆ ಕಾರ್ಯಕ್ರಮ |
೧೯೭೧ |
ಹೈದರಾಬಾದಿನ ಟಿ.ವಿ. ಸಂಸ್ಥೆಯಿಂದ ಬಾಳಪ್ಪನವರ ಹಾಡುಗಳ ಪ್ರಸಾರ |
೧೯೭೫ |
ವಿಜಯನಗರ ಉತ್ಸವದಲ್ಲಿ ಭಾಗವಹಿಸಿದ್ದಾರೆ |
೧೯೭೭ |
ದೆಹಲಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಭಾಗವಹಿಸಿದ್ದಾರೆ |
೧೯೭೮ |
ಗೋವಾ ಕನ್ನಡ ಸಂಘದಲ್ಲಿ ಬಾಳಪ್ಪನವರ ಭಾಷಣ ಕಾರ್ಯಕ್ರಮ |
೧೯೭೯ |
ಹುಬ್ಬಳ್ಳಿಯಲ್ಲಿ ನಡೆದ ರೈತ ಸಮ್ಮೇಳನದಲ್ಲಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡೀಸ್ ಅವರಿಂದ ಅಭಿನಂದನೆ |
೧೯೮೦ |
ರಾಮದುರ್ಗದ ಕಾಲೇಜಿನಲ್ಲಿ ಗದುಗಿನ ಜಗದ್ಗುರು ಶ್ರೀ ತೋಂಟದಾರ್ಯ ಮಹಾಸ್ವಾಮಿಗಳವರಿಂದ ಆಶೀರ್ವಾದ |
೧೯೮೦ |
ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಖ್ಯಾತ ಪತ್ರಕರ್ತ ಪಾಟೀಲ ಪುಟ್ಟಪ್ಪನವರಿಂದ ಅಭಿನಂದನೆ |
೧೯೮೦ |
ರಾಷ್ಟ್ರಪ್ರಶಸ್ತಿ ಪ್ರಧಾನ |
೧‘೯೮೧ |
ದೆಹಲಿಯ ರವೀಂದ್ರ ಕಲಾಕ್ಷೇತ್ರದಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷೆ ಶ್ರೀಮತಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರಿಂದ ಬಾಳಪ್ಪನವರಿಗೆ ಪ್ರಶಸ್ತಿ ಪಧಾನ |
೧೯೮೨ |
ಕೇರಳದ ತಿರುವಾಂಕೂರಿನ ದಕ್ಷಿಣ ಹಿಂದೂಸ್ತಾನದ ಸಾಂಸ್ಕೃತಿಕ ಸೊಸೈಟಿಯವರಿಂದ ೧೯೮೨ ರ ಪ್ರಶಸ್ತಿ ಪ್ರಧಾನ |
೧೯೮೪ |
ಕನ್ನಡ ಜಾನಪದ ಅಕಾಡೆಮಿ ಸನ್ಮಾನ |
೧೯೮೬ |
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ |
೧೯೯೦-೯೧ |
೧೯೯೧ ನೇ ಸಾಲಿನ ಮಧ್ಯಪ್ರದೇಶ ಸರಕಾರದ “ತುಳಸೀ ಸಮ್ಮಾನ” ಪ್ರಶಸ್ತಿ |
Leave A Comment