ಸೈದ್ಧಾಂತಿಕ ಮತ್ತು ಅನ್ವಯಿಕ ಜಾನಪದ ಕ್ಷೇತ್ರದಲ್ಲಿ ಆಳವಾದ ಪರಿಜ್ಞಾನ ಪಡೆದವರು ಡಾ. ಅಂಬಳಿಕೆ ಹಿರಿಯಣ್ಣ
ಅವರು.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಅಂಬಳಿಕೆಯಲ್ಲಿ ಜನನ, ಜಾನಪದ ಗೀತೆ, ಕಥೆ, ಲಾವಣಿ ಇವೇ ಮೊದಲಾದ ಪ್ರಕಾರಗಳಲ್ಲಿ ಅವರು ನಡೆಸಿರುವ ಅಧ್ಯಯನ, ಸಂಶೋಧನೆ, ನೀಡಿದ ಕೊಡುಗೆ ಅಪಾರ.
ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು ಮತ್ತು ಜಾನಪದ ಪ್ರಾಧ್ಯಾಪಕರಾಗಿ ಸೇವೆ. ಕರ್ನಾಟಕ, ಕುವೆಂಪು, ಗುಲ್ಬರ್ಗಾ, ಗುವಾಹತಿ, ಹೈದ್ರಾಬಾದಿನ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಎಂ.ಫಿಲ್, ಪಿಎಚ್.ಡಿ. ಕಾರ್ಯಕ್ರಮಗಳ ಮೌಲ್ಯ ನಿಷ್ಕರ್ಷಕರಾಗಿ ಸೇವೆ ಸಲ್ಲಿಕೆ. ಸುಮಾರು ೧೭ ವಿದ್ಯಾರ್ಥಿಗಳಿಗೆ ಪಿಎಚ್.ಡಿ ಮಾರ್ಗದರ್ಶನ ನೀಡಿದ ಹಿರಿಮೆ ಅವರದು.
ಶಿವಮೊಗ್ಗ ಜಿಲ್ಲೆಯ ಜಾನಪದ ಕಥೆಗಳು, ತೀರ್ಥಹಳ್ಳಿ ಸುತ್ತಿನ ಲಾವಣಿಗಳು, ಕಾಡುಗೊಲ್ಲರ ಜನಪದ ಗೀತೆಗಳು, ಜಾನಪದ ವಿವಕ್ಷೆ, ಹಚ್ಚೆ, ಕೌದಿ- ಇವು ಅವರು ರಚಿಸಿರುವ ಕೃತಿಗಳಲ್ಲಿ ಕೆಲವು.
ಮೂವತ್ತೂರು ವರ್ಷಗಳ ಕಾಲ ಕ್ಷೇತ್ರಕಾರ್ಯ ಸಂಶೋಧಕರಾಗಿ ಅಧ್ಯಯನ ನಡೆಸುವ ಮೂಲಕ ತಲೆತಲೆಮಾರುಗಳಿಂದ ಉಳಿದು ಬಂದಿದ್ದ ಕಂಠಸ್ಥ ಸಾಹಿತ್ಯಕ್ಕೆ ಗ್ರಂಥಸ್ಥ ರೂಪ ಕೊಟ್ಟವರು ಡಾ. ಅಂಬಳಿಕೆ ಹಿರಿಯಣ್ಣ ಅವರು.
Categories