Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು

ಡಾ. ಎಚ್.ವೈ. ರಾಜಗೋಪಾಲ್

ಹೊರನಾಡಿನಲ್ಲಿ ಕನ್ನಡ ನಾಡು-ನುಡಿಗಾಗಿ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಿರುವ ಹೊರನಾಡ ಕನ್ನಡಿಗ ಡಾ. ಎಚ್.ವೈ. ರಾಜಗೋಪಾಲ್ ಅವರು. ಬೆಂಗಳೂಲಿನಲ್ಲಿ ಜನಿಸಿ ಎಂಜಿನಿಯಲಿಂಗ್ ಸ್ನಾತಕ ಪದವಿ ಪಡೆದು ಅಮೆಲಕದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಡಾ. ಎಚ್.ವೈ. ರಾಜಗೋಪಾಲ್ ಅವರು ಅಮೆಲಕದ ಫಿಅಡೆಸ್ಟ್ರಿಯಾ ಹಾಗೂ ನ್ಯೂಜೆರ್ಸಿಗಳಲ್ಲಿ ಕನ್ನಡ ಸಾಹಿತ್ಯ ಸಂಸ್ಕೃತಿಗಳ ಸಂಬಂಧದಲ್ಲಿ ವಿಶೇಷವಾಗಿ ಶ್ರಮಿಸಿರುವ ರಾಜಗೋಪಾಲ್ ಅವರು ಪ್ರಸ್ತಾಪ ಹಾಗೂ ಕನ್ನಡ ಸಾಹಿತ್ಯರಂಗ ಎಂಬೆರಡು ಸಂಸ್ಥೆಗಳನ್ನು ಹುಟ್ಟುಹಾಕಿ ಅಮೆಲಕದ ಉದ್ದಗಲಕ್ಕೂ ಕನ್ನಡ ಕಾರ್ಯಕ್ರಮಗಳನ್ನು
ನಿರಂತರವಾಗಿ ನಡೆಸಿಕೊಂಡು ಬಂದವರು.
ಕನ್ನಡ ಸಾಹಿತ್ಯರಂಗದ ಅಧ್ಯಕ್ಷರಾಗಿ ಎಚ್.ವೈ. ರಾಜಗೋಪಾಲ್ ಫಿಅಡೆಸ್ಟ್ರಿಯಾ, ಲಾಸ್ ಏಂಜಲೀಸ್ ಹಾಗೂ ಚಿಕಾಗೋಗಳಲ್ಲಿ ಅಂತರರಾಷ್ಟ್ರೀಯ ಸಮ್ಮೇಳನಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರಲ್ಲದೆ ಕುವೆಂಪು ಸಾಹಿತ್ಯ ಸಮೀಕ್ಷೆ, ಆಚೀಚೆಯ ಕಥೆಗಳು, ನಗೆಗನ್ನಡಂ ಗೆಲೆ, ಕನ್ನಡ ಸಾಹಿತಿಗಳ ಭಾಷಣ ಮಾಲೆಗಳನ್ನು ತಮ್ಮ ಸಂಸ್ಥೆಗಳ ಮೂಲಕ ಪ್ರಕಟಿಸಿದ ಹೆಗ್ಗಆಕೆ ಶ್ರೀಯುತರದು.
ಅಂತರ್ಜಾಲದಲ್ಲಿ ಕನ್ನಡ ಕಅಸುವ ಎರಡು ಕಾರ್ಯಕ್ರಮಗಳನ್ನು ಸಿದ್ಧಗೊಳಿಸಿರುವ (ಕನ್ನಡ ದನಿ-ಕನ್ನಡ ಪಲಚಯ) ಡಾ|| ರಾಜಗೋಪಾಲ್ ಅಮೆಲಕದ ಒಂಬತ್ತು ಪ್ರಾಂತ್ಯಗಳಲ್ಲಿ ಕನ್ನಡ ಸಾಹಿತ್ಯ ಶಿಬಿರಗಳನ್ನು ವ್ಯವಸ್ಥೆ ಮಾಡಿರುವುದಲ್ಲದೆ ಕನ್ನಡ ಜನಪದ ಗೀತೆಗಳ ಧ್ವನಿಮುದ್ರಿಕೆಗಳ ನಿರ್ಮಾಣವನ್ನು ಕೈಗೊಂಡವರು. ಎಂಜನಿಯಲಂಗ್ ಬೋಧನೆಯ ಜೊತೆಗೆ ನಿರಂತರವಾಗಿ ಪತ್ರಿಕೆ, ನಿಯತಕಾಲಿಕೆಗಳಿಗೆ ಲೇಖನ ಬರೆಯುತ್ತಿರುವ ಡಾ| ರಾಜ್ಗೋಪಾಲ್ ಭಾರತೀಯ ಶಾಸ್ತ್ರೀಯ ಸಂಗೀತ ಹಾಗೂ ನಾಟ್ಯಕಲೆಗೆ ಸಂಬಂಧಿಸಿದಂತೆ ನಿಪುಣ
ಬರಹಗಾರರು.
ಕರ್ನಾಟಕದಿಂದ ಹಲವಾರು ಕನ್ನಡ ಕವಿ ಸಾಹಿತಿಗಳನ್ನು ಅಮೆಲಕಕ್ಕೆ ಆಹ್ವಾನಿಸಿ ಕನ್ನಡ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡುತ್ತಿರುವ ಕನ್ನಡಾಭಿಮಾನಿ ಡಾ|| ರಾಜಗೋಪಾಲ್ ಅವರು.