Categories
ರಾಜ್ಯೋತ್ಸವ 2018 ರಾಜ್ಯೋತ್ಸವ ಪ್ರಶಸ್ತಿ ಹೊರನಾಡು/ಹೊರದೇಶ ಕನ್ನಡಿಗ

ಡಾ.ಎ.ಎ. ಶೆಟ್ಟಿ

ಕುಂದಾಪುರದ ಅಸೋಡೆಯವರಾದ ಡಾ. ಎ.ಎ.ಶೆಟ್ಟಿ ಜಗತ್ತಿನ ಹೆಸರಾಂತ ಎಲುಬು ಮತ್ತು ಮೂಳೆ ಶಸ್ತ್ರಚಿಕಿತ್ಸಕರು. ವಿದೇಶದಲ್ಲಿ ಕನ್ನಡದ ಕೀರ್ತಿ ಬೆಳಗಿದ ವೈದ್ಯಕೀಯ ವಿಜ್ಞಾನಿ.
ವೈದ್ಯಕೀಯ ವೃತ್ತಿಯಲ್ಲಿ ಅತ್ಯುತ್ತಮ ಸಾಧನೆಗೈದಿರುವ ಡಾ. ಎ.ಎ.ಶೆಟ್ಟಿ ಅವರು ಲಂಡನ್ನಲ್ಲಿ ಸ್ನಾತಕೋತ್ತರ ವೈದ್ಯಕೀಯ ಪದವಿ, ಪಿ.ಎಚ್.ಡಿ ಪದವಿ ಪಡೆದವರು. ಮಣಿಪಾಲದ ಕೆ.ಎಂ.ಸಿ., ವೈದ್ಯಕೀಯ ಕ್ಷೇತ್ರದಲ್ಲಿ ‘ಸರ್ಜನ್ರ ಸರ್ಜನ್’ ಎಂದೇ ಪ್ರಖ್ಯಾತರಾದ ಅವರು ಇಂಗ್ಲೆಂಡಿನಲ್ಲಿ ಪ್ರತಿ ವರ್ಷ ನೂರಾರು ಸರ್ಜನ್ರನ್ನು ತರಬೇತಿಗೊಳಿಸುತ್ತಿದ್ದಾರೆ. ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಕಾಗ್ನಿಜ್ ಟ್ರಾನ್ಪ್ಲಾಂಟ್ ಶಸ್ತ್ರಚಿಕಿತ್ಸೆ ನಡೆಸಿದ ಹೆಗ್ಗಳಿಕೆ. ಕ್ಯಾನ್ಸರ್ ಹಾಗೂ ತಲಸ್ಸೇಮಿಯ ರೋಗಗಳ ನಿರ್ಮೂಲನೆಗೆ ನೆರವಾಗುವ ಔಷಧ ತಯಾರಿಕೆಯಲ್ಲಿ ಸಫಲರಾದವರು. ಸ್ಟೆಮ್ಸೆಲ್ ಸಂಶೋಧನೆಯಲ್ಲಿ ಪೇಟೆಂಟ್ ಹೊಂದಿರುವವರು. ಕೀಲುನೋವು, ಮೂಳೆನೋವು, ಅಕರ ಜೀವಕೋಶ ಚಿಕಿತ್ಸೆಯ ಮೂಲಕ ಮೂಳೆ ಬೆಳವಣಿಗೆಯಾಗುವಂತಹ ಚಿಕಿತ್ಸಾ ಸಂಶೋಧನೆಯು ಅತ್ಯಂತ ಕಡಿಮೆ ದರದಲ್ಲಿ ಜನಸಾಮಾನ್ಯರಿಗೆ ಲಭ್ಯವಾಗುವಂತೆ ಮಾಡಿದವರು. ಅನೇಕ ರಾಜ್ಯ-ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿರುವ ಹೆಮ್ಮೆಯ ಕನ್ನಡಿಗರು.