Categories
ರಾಜ್ಯೋತ್ಸವ 2007 ರಾಜ್ಯೋತ್ಸವ ಪ್ರಶಸ್ತಿ ವೈದ್ಯಕೀಯ

ಡಾ. ಕೆ.ವಿ. ದೇವಾಡಿಗ

ಅಂತರರಾಷ್ಟ್ರೀಯ ಖ್ಯಾತಿಯ, ನಾಡಿನ ಪ್ರಸಿದ್ಧ ನರರೋಗ ತಜ್ಞರಲ್ಲಿ ಒಬ್ಬರು ಡಾ. ಕೆ.ವಿ. ದೇವಾಡಿಗ ಅವರು.
೧೯೩೬ರಲ್ಲಿ ಜನನ. ಮದರಾಸಿನಲ್ಲಿ ವೈದ್ಯಕೀಯ ಪದವಿ ಪಡೆದು ದೆಹ ಹಾಗೂ ವೆಲ್ಲೂರುಗಳಲ್ಲಿ ಉನ್ನತ ಪದವಿಗಳನ್ನು ಪಡೆದ ಡಾ. ಕೆ.ವಿ. ದೇವಾಡಿಗ ಅವರು ಹೆಚ್ಚಿನ ತರಬೇತಿ ಪಡೆದಿದ್ದು ಇಂಗ್ಲೆಂಡ್ ಹಾಗೂ ಅಮೆಲಕ ದೇಶಗಳಲ್ಲ. ದೆಹಲಿಯ ಗೋವಿಂದ ವಲ್ಲಭಪಂತ್ ಆಸ್ಪತ್ರೆಯ ನರರೋಗ ವಿಜ್ಞಾನ ವಿಭಾಗದ ಅಜಸ್ಟಾರ್ ಆಗಿ ಕಾರ್ಯನಿರ್ವಹಿಸಿರುವ ಡಾ. ಕೆ.ವಿ. ದೇವಾಡಿಗ ಅವರು ವೆಲ್ಲೂಲಿನ ಸಿ.ಎಂ.ಸಿ. ಆಸ್ಪತ್ರೆ, ಮಣಿಪಾಲದ ಕಸ್ತೂಲಬಾ ಆಸ್ಪತ್ರೆ ಹಾಗೂ ಮಂಗಳೂರಿನ ಸರ್ಕಾರಿ ಆಸ್ಪತ್ರೆಗಳಲ್ಲಿ ನರರೋಗ ವಿಭಾಗದ ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ.
ದೇಶ ಹಾಗೂ ವಿದೇಶಗಳ ಹಲವಾರು ವೈದ್ಯಕೀಯ ನಿಯತಕಾಅಕೆಗಳಲ್ಲಿ ೮೦ಕ್ಕೂ ಹೆಚ್ಚು ವೈದ್ಯಕೀಯ ಸಂಶೋಧನಾ ಲೇಖನಗಳನ್ನು ಪ್ರಕಟಿಸಿರುವ ಡಾ. ಕೆ.ವಿ. ದೇವಾಡಿಗ ಅಮೆಲಕ ಕಾಲೇಜ್ ಆಫ್ ಸರ್ಜನ್, ರಾಯಲ್ ಸೊಸೈಟಿ ಆಫ್ ಮೆಡಿಸನ್ ಸಂಸ್ಥೆ (ಲಂಡನ್)ಯ ಫೆಲೋ, ಅಂತರಾಷ್ಟ್ರೀಯ ಸರ್ಜನ್ ಕಾಲೇಜಿನ ಫೆಲೋ ಹೀಗೆ ಹಲವಾರು ಪ್ರತಿಷ್ಠಿತ ಕಾಲೇಜುಗಳಲ್ಲಿ ಫೆಲೋ ಆಗಿ ಕಾರ್ಯನಿರ್ವಹಿಸಿದ್ದು ಅಮೆಲಕಾದ ನರರೋಗ ತಜ್ಞರ ಕಾಂಗ್ರೆಸ್ನ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ.
ಭಾರತೀಯ ವೈದ್ಯಕೀಯ ಸಂಸ್ಥೆಯ ಮಂಗಳೂರು ಶಾಖೆಯ ಅಧ್ಯಕ್ಷರಾಗಿದ್ದ ಡಾ. ದೇವಾಡಿಗ ಕರ್ನಾಟಕ ನರರೋಗ ಸೊಸೈಟಿಯ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ.
ಕಾಲೇಜು ದಿನಗಳಲ್ಲಿ ಕ್ರಿಕೆಟ್, ಗಾಲ್ಫ್, ಬ್ಯಾಸ್ಕೆಟ್ ಬಾಲ್ಗಳಲ್ಲೂ ಸಕ್ರಿಯವಾಗಿದ್ದ ಡಾ. ಕೆ.ವಿ. ದೇವಾಡಿಗ ಅವರು ಪ್ರಸ್ತುತ ಮಂಗಳೂಲಿನಲ್ಲಿ ನರರೋಗ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಹಕಾರ ಕ್ಷೇತ್ರದಲ್ಲೂ ಹೆಸರಾಗಿದ್ದು ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಹಾಗೂ ಅಕಾಡಮಿಕ್ ಕೌನ್ಸಿಲ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.
ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಸಾಧನೆಗಳನ್ನು ಮಾಡುತ್ತಿರುವ ಪ್ರಸಿದ್ಧ ನರರೋಗ ತಜ್ಞರು ಡಾ. ಕೆ.ವಿ. ದೇವಾಡಿಗ ಅವರು.