ಹಿಂದುಳಿದವರು, ಅಲ್ಪಸಂಖ್ಯಾತರು, ರೈತರ ಕುರಿತು ವಿಶೇಷ ಕಾಳಜಿ ಹೊಂದಿರುವ ಪ್ರಖ್ಯಾತ ವೈದ್ಯರು ಡಾ. ಎ.ಸಿ. ಮುನಿವೆಂಕಟೇಗೌಡ ಅವರು.
ಹಾಸನ ಜಿಲ್ಲೆಯಲ್ಲಿ ವಿಚಾರ ವೇದಿಕೆ, ನವ ನಿರ್ಮಾಣ ಸಮಿತಿ, ರೈತ ಸಂಘ, ದಲಿತ ಸಂಘಟನೆಗಳ ಬೆಳವಣಿಗೆಗೆ ಪೂರಕವಾಗಿದ್ದವರು. ಸಮಾಜದ ಪರವಾಗಿ ಸದಾ ಚಿಂತನೆ ಮೂಡುವ ಅವರು, ನಗರದಲ್ಲಿ ಅನೇಕ ಕ್ರೀಡಾ ಸಂಸ್ಥೆಗಳ ಸ್ಥಾಪನೆ ಮತ್ತು ಬೆಳವಣಿಗೆಗೆ ಸಹಕಾರ ನೀಡಿದ್ದಾರೆ.
ಪ್ರಗತಿ ಪರ ಚಿಂತಕರು, ಸಾಮಾಜಿಕ ಕಳಕಳಿ ಉಳ್ಳವರು, ವಿಚಾರವಾದಿಗಳು, ಪ್ರಾಮಾಣಿಕರೂ ಆದ ಹಾಸನದ ಖ್ಯಾತ ವೈದ್ಯರು ಡಾ. ಎ.ಸಿ. ಮುನಿವೆಂಕಟೇಗೌಡ ಅವರು.
Categories