ಹುಬ್ಬಳ್ಳಿಯ ಡಾ. ವಿಠಲರಾವ್ ಗುರುರಾವ್ ನಾಡಗೌಡ ಅವರು ವೈದ್ಯಕೀಯ ವೃತ್ತಿಯಲ್ಲಿ ನಾಲ್ಕು ದಶಕಗಳಿಂದಲೂ ನಿರತರು. ರಕ್ತದೊತ್ತಡ ಮತ್ತು ಮಧುಮೇಹ ರೋಗಗಳಿಗೆ ಸಂಬಂಧಿಸಿದಂತೆ ನಿರಂತರ ಶಿಬಿರಗಳನ್ನು ನಡೆಸುತ್ತಿರುವ ವೈದ್ಯರು.
ಚರ್ಮರೋಗ, ನರರೋಗ, ಯಕೃತ್ ರೋಗ, ದಂತ, ಎಲುಬು ಕೀಲು ಹಾಗೂ ಫಿಸಿಯೋಥೆರಪಿ ವಿಭಾಗದಲ್ಲಿ ಸತತ ವೈದ್ಯಸೇವೆ ಇವರದ್ದು. ಧಾರವಾಡ, ಹಾವೇರಿ, ಗದಗ, ವಿಜಯಪುರ, ಬಾಗಲಕೋಟೆ, ಬೆಳಗಾಗಿ, ಕಾರವಾರ ಹಾಗೂ ಕೊಪ್ಪಳ ಜಿಲ್ಲೆಗಳ ಗ್ರಾಮೀಣ ಭಾಗಗಳಲ್ಲಿ ಬಡ ರೋಗಿಗಳಿಗಾಗಿ ವೈದ್ಯಕೀಯ ಶಿಬಿರಗಳನ್ನು ನಡೆಸಿದವರು. ಆಂಧ್ರಪ್ರದೇಶದ ಮಂತ್ರಾಲಯ ಹಾಗೂ ಗೋವಾದಲ್ಲಿಯೂ ಶಿಬಿರ ನಡೆಸಿದ ಹೆಗ್ಗಳಿಕೆ. ೪೧ ವರ್ಷಗಳ ವೃತ್ತಿಜೀವನದಲ್ಲಿ ಐದು ಲಕ್ಷದವರೆಗೆ ಔಷಧಿಗಳನ್ನು ವಿತರಿಸಿದ ಹೆಚ್ಚುಗಾರಿಕೆ. ವೈದ್ಯಕೀಯ ಸಂಘಟ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ಭಾರತೀಯ ವೈದ್ಯರ ಸಂಘದ ಕರ್ನಾಟಕ ಘಟಕದಿಂದ ಜೀವಮಾನ ಸಾಧನೆ ಪ್ರಶಸ್ತಿ, ಅಮೆರಿಕದ ‘ಟ್ರಯಲ್ಸ್ಟೇಜ’ ಗೌರವಕ್ಕೂ ಪಾತ್ರವಾಗಿರುವ ಅವರು ವೈದ್ಯಕೀಯ ಪ್ರಬಂಧಗಳ ಮಂಡನೆಯಲ್ಲೂ ಪ್ರವೀಣರು, ಬಂಗಾರದ ಪದಕಗಳ ವಿಜೇತರೂ ಸಹ,
Categories
ಡಾ. ವಿಠಲರಾವ್ ಗುರುರಾವ್ ನಾಡಗೌಡ
