ಕವಿ, ವಿಮರ್ಶಕ, ಚಿಂತಕ, ಸಂಶೋಧಕ, ಬಂಡಾಯ ಸಾಹಿತಿ ಹಾಗೂ ಹೋರಾಟಗಾರರಾದ ಡಾ. ವಿ. ಮುನಿವೆಂಕಟಪ್ಪ ಬಹುಮುಖಿ ವ್ಯಕ್ತಿತ್ವದ ಸಾಧನಾಶೀಲರು.
ಕೋಲಾರ ಜಿಲ್ಲೆ, ಕೋಲಾರ ತಾಲ್ಲೂಕಿನ ಯಡಹಳ್ಳಿಯಲ್ಲಿ ಜನಿಸಿದ ಮುನಿವೆಂಕಟಪ್ಪ ಅವರು ಕೃಷಿ ಪದವಿ, ಸ್ನಾತಕೋತ್ತರ ಪದವೀಧರರು. ಪಿ.ಎಚ್ಡಿ ಪುರಸ್ಕೃತರು. ಬಂಡಾಯ ಸಾಹಿತ್ಯ-ದಲಿತ ಚಳವಳಿಯ ಅಂಗಳದಲ್ಲಿ ಅರಳಿದ ಸಮಸಮಾಜದ ಕನಸುಗಾರ. ದಲಿತ ಸಂಘರ್ಷ ಸಮಿತಿಯ ಮೂಲಕ ಸಾಮಾಜಿಕ ಬದುಕಿಗೆ ಪ್ರವೇಶ. ಬಂಡಾಯ ಸಾಹಿತ್ಯ ಚಳವಳಿಯ ಸಂಸ್ಥಾಪಕ ಸದಸ್ಯರು. ಕರ್ನಾಟಕ ವಿಚಾರವಾದಿ ಒಕ್ಕೂಟ, ಚೇತನ ಟ್ರಸ್ಟ್ನ ಅಧ್ಯಕ್ಷರಾಗಿ ದುಡಿದವರು. ಲೋಕಾಭನುವ ಒಳಬೇಗುದಿಯನ್ನೇ ಕಾವ್ಯವಾಗಿಸಿದ ಕವಿ. ಕೆಂಡದ ನಡುವೆ, ಸ್ವಾಭಿಮಾನದ ಬೀಡಿಗೆ, ಕಾಡು ಕಣಿವೆಯ ಹಕ್ಕಿ, ಬಾಲಕ ಅಂಬೇಡ್ಕರ್್ರ ಮುಂತಾದ ಮಹತ್ವದ ೬೨ ಕೃತಿಗಳ ಕರ್ತೃ, ವಿಚಾರವಾದಿ, ಲೇಖಕ, ಚಳವಳಿಗಾರರಾಗಿ ಅವರದ್ದು ಹೆಗ್ಗುರುತಿನ ಸಾಧನೆ. ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ, ಸಾಹಿತ್ಯಶ್ರೀ ಮತ್ತಿತರ ಪ್ರಶಸ್ತಿ ಪುರಸ್ಕೃತ ಸಶಕ್ತ ದಲಿತಧ್ವನಿ.
Categories