ಮಕ್ಕಳ ಮೂಳೆ ತೊಂದರೆ ಕುಲಿತಂತೆ ವಿಶೇಷ ಅಧ್ಯಯನ ನಡೆಸಿ, ಮೂಳೆಶಾಸ್ತ್ರದಲ್ಲಿ
ವಿಶೇಷ ಪಲಣತಿ ಪಡೆದವರು ಡಾ. ಶರಣ್ ಶಿವರಾಜ್ ಪಾಟೀಲ್ ಅವರು.
ರಾಯಚೂಲಿನ ಮಲಾಂದ್ಕಲ್ ಗ್ರಾಮಕ್ಕೆ ಸೇರಿದವರಾದ ಡಾ. ಶರಣ್ ಶಿವರಾಜ್ ಪಾಟೀಲ್ ಪ್ರಸ್ತುತ ಬೆಂಗಳೂಲಿನ ಸ್ಪರ್ಶ್ ಆಸ್ಪತ್ರೆಯ ಅಧ್ಯಕ್ಷರು.
೧೯೬೫ರಲ್ಲಿ ಜನನ. ಗುಲ್ಬರ್ಗಾದಲ್ಲಿ ವೈದ್ಯಕೀಯ ಶಿಕ್ಷಣ ಪೂರೈಸಿದ ಡಾ. ಶರಣ್ ಮಣಿಪಾಲದ ಕಸ್ತೂಲಬಾ ವೈದ್ಯಕೀಯ ಕಾಲೇಜಿನಲ್ಲಿ ಮೂಳೆಶಾಸ್ತ್ರದಲ್ಲಿ ವಿಶೇಷ ತರಬೇತಿ ಪಡೆದವರಲ್ಲದೆ ವೈದ್ಯಕೀಯ ಸ್ನಾತಕೋತ್ತರ ಪದವಿಯನ್ನು ಗಳಿಸಿದರು.
ಬೆಂಗಳೂಲಿನ ಎಂ.ಎಸ್. ರಾಮಯ್ಯ ವೈದ್ಯಕೀಯ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ಡಾ. ಶರಣ್ ಬ್ರಿಟನ್ಗೆ ತೆರಳಿ ಅಲ್ಲಿಯ ಅನೇಕ ಆಸ್ಪತ್ರೆಗಳಲ್ಲಿ ಅನುಭವ ಪಡೆದರು.
ಮತ್ತೆ ಸ್ವದೇಶಕ್ಕೆ ವಾಪಸ್ಸಾದ ಡಾ. ಶರಣ್ ಮಕ್ಕಳ ಮೂಳೆ ಸಮಸ್ಯೆ ಕುಲತಂತೆ ವಿಶೇಷ ತಜ್ಞರೆಂದು ಹೆಸರು ಮಾಡಿ ರಾಜ್ಯ ಹಾಗೂ ರಾಷ್ಟ್ರದ ಸುಮಾರು ೫,೦೦೦ಕ್ಕೂ ಹೆಚ್ಚು ಮೂಳೆ ಚಿಕಿತ್ಸೆಗಳನ್ನು ನಡೆಸಿ ಹೆಸರಾದವರು. ಮೂಳೆಶಾಸ್ತ್ರಕ್ಕೆ ಪ್ರತ್ಯೇಕವಾದ ಸುಸಜ್ಜಿತ ಆಸ್ಪತ್ರೆಯೊಂದನ್ನು ಆರಂಭಿಸಬೇಕೆಂಬ ಡಾ. ಶರಣ್ ಶಿವರಾಜ್ ಪಾಟೀಲ್ ಅವರ ಇಚ್ಛೆ ೨೦೦೬ರಲ್ಲಿ ಪೂರೈಸಿತು. ನಾರಾಯಣ ಹೆಲ್ತ್ ಸಿಟಿಯಲ್ಲಿ ಡಾ. ಶರಣ್ ನೇತೃತ್ವದ ಸ್ಪರ್ಶ್ ಆಸ್ಪತ್ರೆ ಆರಂಭವಾಗಿದ್ದು, ಮೂಳೆ ರೋಗಗಳಿಗೆ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ನೀಡುವ ವಿಶೇಷ ಆಸ್ಪತ್ರೆ ಇದಾಗಿದೆ. ಕೀಲುನೋವು, ಬೆನ್ನುಹುಲಿ ತೊಂದರೆ, ಮೂಳೆಗಳ ಸಮಸ್ಯೆ, ಮಂಡಿಚಿಪ್ಟಿನ ನೋವು ಮೊದಲಾದ ರೋಗಗಳಿಗೆ ವಿಶೇಷ ಚಿಕಿತ್ಸೆ ನೀಡುವ ಡಾ. ಶರಣ್ ಅವರ ಸ್ಪರ್ಶ್ ಆಸ್ಪತ್ರೆ ಗ್ರಾಮೀಣ ಪ್ರದೇಶಗಳಲ್ಲಿ ಕೀಲುನೋವು ಚಿಕಿತ್ಸಾ ಶಿರಗಳನ್ನು ಏರ್ಪಡಿಸುತ್ತಿದೆ.
ವೈದ್ಯಕೀಯ ಪ್ರವಾಸೋದ್ಯಮದ ಬಗ್ಗೆ ಹೆಚ್ಚಿನ ಅನುಭವ ಪಡೆದಿರುವ ಡಾ. ಶರಣ್ ದೇಶವಿದೇಶಗಳ ಅನೇಕ ಸಮ್ಮೇಳನಗಳಲ್ಲಿ ಹಾಗೂ ವೈದ್ಯಕೀಯ ಸಂಸ್ಥೆಗಳಲ್ಲಿ ಉಪನ್ಯಾಸ ನೀಡಿದ್ದಾರೆ. ಕಡಿಮೆ ಖರ್ಚಿನಲ್ಲಿ ಸಾಮಾನ್ಯ ಜನರು ಅತ್ಯುತ್ತಮ ಚಿಕಿತ್ಸೆ ಪಡೆಯಲು ಅನುಕೂಲವಾಗುವ ರೀತಿಯಲ್ಲಿ ಕಾರ್ಯಕ್ರಮಗಳನ್ನು ರೂಪಿಸುತ್ತಿರುವ ಡಾ. ಶರಣ್ ಅವರು ಅನೇಕ ವೈದ್ಯಕೀಯ ಸಂಸ್ಥೆಗಳಲ್ಲಿ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ.
ಯುವ ವೈದ್ಯರಾಗಿ ಅನೇಕ ಸಾಧನೆಗಳನ್ನು ಮಾಡಿರುವ ಡಾ. ಶರಣ್ ಶಿವರಾಜ್ ಪಾಟೀಲ್ ಅವಲಗೆ ಭಾರತೀಯ ವೈದ್ಯಕೀಯ ಸಂಸ್ಥೆಯ ಪ್ರೊ ಗೋಪಾಲಕೃಷ್ಣ ಸ್ಮಾರಕ ಬಹುಮಾನವು ಸೇಲದಂತೆ ಅನೇಕ ಗೌರವ, ಸನ್ಮಾನಗಳು ಸಂದಿವೆ. ನಾಡಿನ ಪ್ರಸಿದ್ಧ ಮೂಳೆ ತಜ್ಞರು ಡಾ. ಶರಣ್ ಶಿವರಾಜ್ ಪಾಟೀಲ್ ಅವರು.
Categories
– ಡಾ. ಶರಣ್ ಶಿವರಾಜ್ ಪಾಟೀಲ್
