Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಡಿ.ಎನ್. ಅಕ್ಕಿ

ಆದರ್ಶ ಶಿಕ್ಷಕ, ಕವಿ, ಲೇಖಕ, ಚಿತ್ರಕಲಾವಿದ, ಇತಿಹಾಸ ಸಂಶೋಧಕ ಡಿ.ಎನ್. ಅಕ್ಕಿ ಸದ್ದುಗದ್ದಲವಿಲ್ಲದ ಅಪರೂಪದ ಸಾಧಕರು. ಕಲ್ಯಾಣ ಕರ್ನಾಟಕದ ಮೇರು ಪ್ರತಿಭೆ.
ಯಾದಗಿರಿ ಜಿಲ್ಲೆ ಶಹಾಪುರ ತಾಲ್ಲೂಕಿನ ಗೋಗಿ ಗ್ರಾಮದ ದೇವೀಂದ್ರಪ್ಪ ನಾಭಿರಾಜ ಅಕ್ಕಿ ಚಿತ್ರಕಲೆಯಲ್ಲಿ ಡಿಪ್ಲೋಮಾ-ಆರ್ಟ್ ಮಾಸ್ಟರ್ ಪದವೀಧರರು. ಮೂರೂವರೆ ದಶಕದ ಚಿತ್ರಕಲಾ ಶಿಕ್ಷಕ ವೃತ್ತಿಯ ಜೊತೆಗೆ ಚಿತ್ರಕಲೆ, ಕಾವ್ಯ, ಲೇಖನ, ಸಂಶೋಧನಾ ಬರಹಗಳಲ್ಲಿ ತೊಡಗಿಸಿಕೊಂಡ ಕ್ರಿಯಾಶೀಲರು, ಶಹಾಪುರ ತಾಲ್ಲೂಕು ದರ್ಶನ, ಮುಂಬೆಳಗು, ಚಿಗುರು ಚಿಂತನ, ಸಗರನಾಡು ಸಿರಿ, ಹಡದವ್ವ ಹಾಡ್ಯಾಳ, ಯಕ್ಷಪ್ರಶ್ನೆ ಮುಂತಾದ ಅನೇಕ ಮೌಲಿಕ ಕೃತಿಗಳನ್ನು ರಚಿಸಿದ ಹೆಗ್ಗಳಿಕೆ. ಇತಿಹಾಸದ ಕಾಲಘಟ್ಟಗಳ ಮೇಲೆ ಬೆಳಕು ಚೆಲ್ಲಿದ ಸಂಶೋಧಕರು. ಶಾತವಾಹನರ ಕಾಲದ ೨೦೦೦ ವರ್ಷಗಳ ಹಿಂದಿನ ಸೀಸದ ನಾಣ್ಯಗಳ ಶೋಧನೆ-ಸಂಗ್ರಹ ಸ್ಮರಣೀಯ ಕ್ಷೇತ್ರಕಾರ್ಯ. ರಾಜ್ಯ- ಕೇಂದ್ರದ ಆದರ್ಶ ಶಿಕ್ಷಕ ಸೇರಿ ಅನೇಕ ಪ್ರಶಸ್ತಿಗಳಿಂದ ಸಂಪನ್ನರು.