ಸೋಬಾನೆ ಪದಗಳನ್ನು ತಾಯಿಯ ಮಡಿಲಿನಲ್ಲೇ ಕಲಿತ ತಾಯಮ್ಮ ಅವರು ಬಾಲ್ಯದಿಂದಲೇ ಜನಪದ ಪರಂಪರೆಗೆ ತೆರೆದುಕೊಂಡವರು.
ಸೋಬಾನೆಪದ, ಸಿದ್ಧರಾಮನ ಪದ, ಅಂತರಘಟ್ಟ ಅಮ್ಮನ ಪದ, ಬೀಸೋಕಲ್ಲು ಪದಗಳನ್ನು ಹಾಡುತ್ತ ಬಂದಿರುವ ತಾಯಮ್ಮ ಅವರು ತಮ್ಮ ವಿವಾಹಾನಂತರವೂ ಕಲೆಯನ್ನು ಮುಂದುವರೆಸಿದ್ದಾರೆ.
ಆಕಾಶವಾಣಿಯಲ್ಲಿ ಸಹ ತಮ್ಮ ಕಲಾ ಪ್ರದರ್ಶನ ಮಾಡಿರುವ ತಾಯಮ್ಮ ಅವರ ಬದುಕಿನ ಬಡತನ ಕಲೆಗೆ ಎರವಾಗಿಲ್ಲದಿರುವುದು ಗಮನೀಯ.
ತಾಯಮ್ಮ ಅವರಿಗೆ ಚಿಕ್ಕಮಗಳೂರು ಜಿಲ್ಲಾ ರಾಜೋತ್ಸವ ಪ್ರಶಸ್ತಿ, ಜಾನಪದ ಲೋಕ ಪ್ರಶಸ್ತಿಗಳು ಸೇರಿದಂತೆ ಹಲವು ಗೌರವಗಳು ಸಂದಿವೆ.