ಕಳೆದ ಎಂಟು ದಶಕಗಳಿಂದ ಸೋಬಾನೆ ಪದಗಳನ್ನು ಹಾಡುತ್ತಿರುವ ತಿಮ್ಮಮ್ಮ ನಂಜನಗೂಡಿನ ನಂಜುಂಡೇಶ್ವರ, ಚಾಮುಂಡೇಶ್ವರಿ, ಮಂಟೇಸ್ವಾಮಿ, ಬಸವಣ್ಣನವರ ಮೇಲೆ ಜನಪದ ಗೀತೆಗಳನ್ನು ಹಾಡುತ್ತಾರೆ.
ಬೆಂಗಳೂರು ಆಕಾಶವಾಣಿಯಲ್ಲಿ ಜನಪದ ಗೀತೆಗಳಿಗೆ ದನಿಯಾಗಿರುವ ತಮ್ಮ ಮಕ್ಕಳಿಗೂ ಸೋಬಾನೆ ಪದಗಳನ್ನು ಕಲಿಸಿದ್ದಾರೆ. ಹಿರಿಯ ಜನಪದ ತಜ್ಞರಾದ ಎಚ್.ಎಸ್.ನಾಗೇಗೌಡ ಮತ್ತು ಕಾಳೇಗೌಡ ನಾಗವಾರ ಅವರ ಸಮ್ಮುಖದಲ್ಲಿ ಹಾಡಿ ಅವರ ಪ್ರಶಂಸೆ ಗಳಿಸಿದ್ದಾರೆ.
ತಿಮ್ಮಮ್ಮ ಅವರ ಜನಪದ ಸೇವೆಯನ್ನು ಗುರುತಿಸಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವಗಳು ಇವರಿಗೆ ಸಂದಿವೆ.
Categories