ಪ್ರಮುಖ ಘಟನಾವಳಿಗಳು:
1848: ಅಮೇರಿಕಾದ ಮೊದಲ ಮಹಿಳಾ ವೈದ್ಯಕೀಯ ಶಾಲೆಯನ್ನು ತೆರೆಯಲಾಯಿತು.
1866: ಮೊದಲ ನಾಗರೀಕರ ಹಕ್ಕುಗಳ ಮಸೂದೆಯನ್ನು ಅಂಗೀಕರಿಸಲಾಯಿತು
1894: ದಿಫ್ತೀರಿಯಾ ಕಾಯಿಲೆಗೆ ಔಷಧಿಯನ್ನು ಕಂಡುಹಿಡಿದಿರುವುದಾಗಿ ಡಾ.ರೌಕ್ಸ್ ಘೋಷಿಸಿದರು.
1939: ಕೃತಕ ಗರ್ಭಧಾರಣೆಯ ಮೂಲಕ ಜನಿಸಿದ ಮೊದಲ ಪ್ರಾಣಿ ಮೊಲವನ್ನು ಪ್ರದರ್ಶಿಸಲಾಯಿತು.
1954: ಫ್ರೆಂಚ್ ವಸಾಹತುಗಳಾದ ಪಾಂಡಿಚೆರಿ, ಕಾರೈಕಾಲ್, ಯಾನಮ್ ಮತ್ತು ಮಾಹೆಯನ್ನು ಭಾರತಕ್ಕೆ ವರ್ಗಾಯಿಸಲಾಯಿತು.
1956: ಭಾರತದ ರಾಜ್ಯಗಳಾದ ಕೇರಳ, ಆಂಧ್ರಪ್ರದೇಶ ಮತ್ತು ಮೈಸೂರನ್ನು ರಾಜ್ಯ ಪುನರ್ ಸಂಘಟನೆಯ ಕಾಯಿದೆ ಅಡಿ ಔಪಚಾರಿಕವಾಗಿ ರಚಿಸಲಾಯಿತು ಹಾಗೂ ಕನ್ಯಾಕುಮಾರಿ ಜಿಲ್ಲೆಯನ್ನು ಕೇರಳದಿಂದ ತಮಿಳುನಾಡಿಗೆ ಸೇರಿಸಲಾಯಿತು.
1973: ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರು ನಾಮಕರಣ ಮಾಡಲಾಯಿತು.
2006: ಬ್ಯಾಂಗಲೂರನ್ನು ಬೆಂಗಳೂರು ಎಂದು ಮರುನಾಮಕರಣ ಮಾಡಲಾಯಿತು.
2007: ಭಾರತೀಯ ಸರ್ಕಾರವು ನಿವೃತ್ತ ಸೈನಿಕರನ್ನು ಹುಲಿಗಳ ಅಭಯಾರಣ್ಯಕ್ಕೆ ಗಸ್ತು ಮಾಡಲು ನೇಮಕ ಮಾಡಲು ಪ್ರಸ್ತಾಪಿಸಲಾಯಿತು.
ಪ್ರಮುಖ ಜನನ/ಮರಣ:
1915: ಸರ್ವೋಚ್ಛ ನ್ಯಾಯಾಲಯದ ನ್ಯಾಯಮೂರ್ತಿ ವಿ.ಆರ್.ಕೃಷ್ಣ ಐಯ್ಯರ್ ಜನಿಸಿದರು.
1940: ಭಾರತದ 35ನೇ ಮುಖ್ಯ ನ್ಯಾಯಮೂರ್ತಿಯಾದ ರಮೇಶ್ ಚಂದ್ರ ಲಹೋಟಿ ಜನಿಸಿದರು.
1945: ಮಹಾರಾಷ್ಟ್ರ ಅಂಧಶ್ರದ್ಧ ನಿರ್ಮೂಲನ್ ಸಮಿತಿ ಸಂಸ್ಥೆಯ ಸಂಸ್ಥಾಪಕ, ಮತ್ತು ಲೇಖಕ ನರೇಂದ್ರ ದಾಬೋಲ್ಕರ್ ಜನಿಸಿದರು.
1959: ತಮಿಳು ಚಿತ್ರರಂಗದ ನಟ, ನಿರ್ಮಾಪಕ, ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ ಎಂ.ಕೆ.ತ್ಯಾಗರಾಜ ಭಾಗವತಾರ್ ನಿಧನರಾದರು.
1963: ಖ್ಯಾತ ಉದ್ಯಮಿ ನೀತಾ ಅಂಬಾನಿ ಜನಿಸಿದರು.
1965: ಖ್ಯಾತ ಹಿನ್ನೆಲೆ ಗಾಯಕಿ ಪದ್ಮಿನಿ ಕೊಲ್ಹಾಪುರಿ ಜನಿಸಿದರು.
1973: ಖ್ಯಾತ ನಟಿ, ವಿಶ್ವ ಸುಂದರಿ ಐಶ್ವರ್ಯ ರಾಯ್ ಜನಿಸಿದರು.
1974: ಖ್ಯಾತ ಕ್ರಿಕೆಟ್ ಆಟಗಾರ ವಿ.ವಿ.ಎಸ್.ಲಕ್ಷ್ಮಣ್ ಜನಿಸಿದರು.
1991: ಚಲನಚಿತ್ರ ಸಂಗೀತ ಸಂಯೋಜಕ ಅರುಣ್ ಪೌದ್ವಾಲ್ ನಿಧನರಾದರು.
2007: ಭಾರತದ ಚಿತ್ರ ನಿರ್ದೇಶಕ ಮತ್ತು ಚಿತ್ರಕಥೆ ರಚನೆಕಾರ ಎಸ್.ಅಲಿ ರಜಾ ನಿಧನರಾದರು.