೧೦೬
ಒಂದೇ ಹೂವು ಒಂದೇ ಅಗ್ಘವಣಿ.
ಒಂದೇ ಓಗರ ಒಂದೇ ಪ್ರಸಾದ.
ಒಂದೇ ಮನ, ಒಂದೇ ಲಿಂಗ.
ಒಂದೇ ನಂದಾನಂದದ ದೀವಿಗೆ ಕುಂದದ ಬೆಳಗು.
ಸ್ವತಂತ್ರದ ಪೂಜೆ ಒಂದೇ
ಅನಾಹತವೆರಡೆಂದು ಬರುಮುಖರಾಗಿ
ಕೆಟ್ಟುಹೋದರು ಗುಹೇಶ್ವರಾ. ||೫೪||
ಅಂತಪ್ಪತಿ ನುಣ್ಪುಳ್ಳ ವಜ್ರದ ಕಂಬದ ಮೇಲೆ ಸನ್ನರ್ಧವಾದ ಮಹಾ ವೃಷಭೇಶ್ವರನು ಆ ಅನುಭವ ಮೇರು ಮಂದಿರದ ವಿಶಾಲ ಮಂಟಪವ ನೋಡಿ ಕಂಡ ಠಾವಿಂಗೆ ಮಹಾಜ್ಯೋತಿರ್ಮಯ ಲಿಂಗ ಸಮೇತವಾದನಂತಕೋಟಿ ಶರಣರುಗಳನು ಬಿಜಯಂಗೆಯಿಸಿ ತರಲಿಂದೆಚ್ಛೈಸಲೊಡನೆ ತನ್ನ ವಾಮಭಾಗದ ಕರ್ಣ, ಬೆಳೆದು ಉತ್ತರ ದಿಕ್ಕಿಗೆ ಒಂದು ಸೋಪಾನವಾಗಿ ನಿಂದಿತ್ತು. ಮತ್ತಂತುಮಲ್ಲದೆ, ಆ ನಂದಿಕೇಶ್ವರನ ಬಲದ ಕರ್ಣ ಬೆಳೆದು ದಕ್ಷಿಣ ದಿಕ್ಕಿಗೆ ಒಂದು ಸೋಪಾನವಾಗಿ ನಿಂದಿತ್ತು. ಮತ್ತಂತುಮಲ್ಲದೆ, ಆ ಸಕಲ ಚೈತನ್ಯಾತ್ಮಕವೆಂಬ ಶರಣನ ಘ್ರಾಣದೊಳಗೆ ಇಪ್ಪ ಸದ್ವಾಸನೆ ಇಡಾಪಿಂಗಳ ನಾಳದಲ್ಲಿಂದ ಸೂಸಿ ಸ್ವರೂಪಾಗಿ ಬೆಳದು ಘಟ್ಟಿಗೊಂಡು ಪೂರ್ವ ದಿಕ್ಕಿಗೆ ಒಂದು ಸೋಪಾನವಾಗಿ ನಿಂದಿತ್ತು. ನಿಲಲಿಕೆಯಾಗಿ, ಆ ನಾಲ್ಕು ದಿಕ್ಕಿನ ಒಂದು ಸೋಪಾನವಾಗಿ ನಿಂದಿತ್ತು. ನಿಲಲಿಕೆಯಾಗಿ, ಆ ನಾಲ್ಕು ದಿಕ್ಕಿನ ಸೋಪಾನಂಗಳಲು ಮೂವೇಳುನೂರುಕೋಟಿ ಯೋಜನ ಪ್ರಮಾಣಿನ ನಿಜ ಭಕ್ತಿಯೆಂಬ ಹಸೆಯಲ್ಲಿಂಗೆರಗಿ ಒಪ್ಪಿನಿಂದಿರಲು ಅಲ್ಲಿ ಪರಮಾನಂದವಾಗಿರ್ದ ಪರಶಿವ ಮೊದಲಾದ ಪರಮಪ್ರಕಾಶದ ಪ್ರಮಥರೆಲ್ಲರು ಕಂಡಾಕ್ಷಣ ಆ ನಾಲ್ಕು ದಿಕ್ಕಿನ ಶರಣ ನಿಚ್ಚಣಿಗೆಯ ತೊಂಬತ್ತಾರು ಸಾವಿರ ಶರಣರೆಲ್ಲರು ಸಹಿತ ಶರಣು ಶರಣೆನುತ್ತ ಮೇಲಕ್ಕೇರಿ ನಿಡುಸಾಲಿಟ್ಟು ಬಿಜಯಂ ಮಾಡುತ್ತಿರುವಾಗ, ಆ ಭಕ್ತಿ ಹಸೆಯ ಮೇಲುಳಿದನಂತಕೋಟಿ ಶರಣರುಗಳು ನಾಲ್ಕು ದಿಕ್ಕಿನ ಸೋಪಾನವನೇರಿ ಮೊದಲಾದ ಭಕ್ತಿಹಸೆಯ ಮೇಲಿರ್ದಂತಿರ್ದು ಪರಮ ಸಂತೋಷದಿಂ ಕೈವಾರಿಸಿ ಉಘೆ ಚಾಂಗು ಭಲಾ ಎನುತಿಪ್ಪರಾ ಸಮಯದಲ್ಲಿ ಆ ಪ್ರಸಾದ ಮಂಟಪವೆಂಬ ವಜ್ರದ ಮಹಾ ಮೇರು ಮಂದಿರದ ಶಿಖಾಗ್ರದಮೇಲೆ ಸಂಧಾನವಾಗಿರ್ದ ಮಹಾ ವೃಷಭೇಶ್ವರನ ನಾಲ್ಕು ಭಾಗದಲ್ಲಿ ಮೂಡಿ ವಟವೃಕ್ಷದ ಬಿಳಲುಗಳಂತೆರಗಿದ ಸೋಪಾನದ ಬುಡನಾಳದೊಳಗಿಂದ ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮದೇವರುಗಳುದೈ ಸಜ್ಜನವೆಂಬ ಕೆಂಚೆಡೆ
೧೦೭
ಪಾತಾಳದಗ್ಗವಣಿಯ ನೇಣಿಂದಲ್ಲದೆ ತೆಗೆಯಬಹುದೆ?
ಶಬ್ದ ಸೋಪಾನವ ಕಟ್ಟಿ ನಡೆಸಿದರೆಂದು ಪುರಾತನರು,
ಮರ್ತ್ಯ ಲೋಕದವರ ಮನದ ಮೈಲಿಗೆಯ ಕಳೆಯಲೆಂದು
ಗೀತಮಾತೆಂಬ ಜ್ಯೋತಿಯಬೆಳಗಿ ಕೊಟ್ಟು ಹೋದರು
ಕೂಡಲ ಚೆನ್ನಸಂಗನ ಶರಣರು. ||೫೫
೧೦೮
ಗಿಡುವಿನ ಮೇಲಣ ತುಂಬಿ ಕೂಡೆ ವಿಕಸಿತವಾಯಿತ್ತು.
ತುಂಬಿ ನೋಡಾ? ಆತುಮ ತುಂಬಿ ತುಂಬಿ ನೋಡಾ?
ಪರಮಾತುಮ ತುಂಬಿ ತುಂಬಿ ನೋಡಾ!
ಗುಹೇಶ್ವರನೆಂಬ ಲಿಂಗಕ್ಕೆ ಱಗಿ ನಿಬ್ಬೆಱಗಾಯಿತು ತುಂಬಿ ನೋಡಾ. ||೫೬||
೧೦೯
ಮಾಣಿಕ್ಯದ ಮಂಟಪದೊಳಗೆ
ಏಳು ಚಿತ್ರಕರೊಡನೆ ಮೇಳವಿಸಿದನು ಮಹಾಮಂತ್ರಗಳನು.
ಮೂಲಮಂತ್ರದ ಮೇಲೆ ಪ್ರಾಣಲಿಂಗದ ಬೆಳಗು.
ಆಲಿ ಕಲ್ಲಲ್ಲಿ ವಜ್ರದ ಕೀಲು;
ಕೂಟ ಜಾಳಂದ್ರದೊಳಗೆ ಮಾಣಿಕ್ಯದ ಪ್ರತಿಬಿಂಬ;
ಏಳು ರತ್ನದ ಪುತ್ಥಳಿಗಳು; ಮಣಿ ಮಾಲೆಗಳ ಹಾರ,
ಹೊಳವ ಮುತ್ತಿನದಂಡೆ, ಎಲೆಯ ನೀಲದ ತೊಡಿಗೆಯನೆ ತೊಟ್ಟು
ಸುಳಿದು ಮುದ್ದಳೆಗಾರರೊಳಗೆ ಧಂಧಳವೆನಲು
ಕುಣಿವ ಪರಿ ಬಹುರೂಪುಗಳ ನಾಟಕ.
ತಾಳಧಾರಿಯ ಮೇಳ ಕಹಳೆಕಾರನ ನಾದ
ಕೊಳಲ ಸರಗಳ ರವದೊಳಗಾಡುತ್ತ
ಒಳ ಹೊರಗೆ ಕಾಣಬರುತ್ತಿದೆ ಚಿತ್ರದಬೊಂಬೆ.
ಫಣಿಪತಿಯ ಕೋಣೆಸಂದಣಿಸುತ್ತಿರಲು ಗಣಮೇಳ
ಕೂಡಲಚೆನ್ನಸಂಗಯ್ಯನಲ್ಲಿ ಕಳಾಸ
ಪ್ರಾಣಲಿಂಗದ ಬೆಳಗಿನೊಳು ಬೆಳಗಿತ್ತು. ||೫೭||
೧೧೦
ಗಿರಿಗಳ ಕಂದರವ ವಿವರಿಸಿ
ಶಿವಸಂಸ್ಕಾರಿಗಳು
ಸಜ್ಜನ – ಕೆಂಜೆಡೆ – ಮುಡಿ – ತ್ರಿಪುಂಡ್ರ – ದರ್ಶನ
ಓರೆ ನೋಟವು ಲಿಂಗದ ಭಾವ
ಆಚಾರವೆಂಬೋತಿಯನಿಟ್ಟು,
ಜ್ಞಾನವೆಂಬ ವಸ್ತ್ರವನುಟ್ಟು,
“ಶರಣಸತಿ ಲಿಂಗಪತಿ”ಯಾದರು. ೧
ಎಕ್ಕೆ ಗೃಹವಾಗಿ , ಮರನೆ ಮಡಕೆಯಾಗಿ,
ಹಣ್ಣೆ ಓಗರವಾಗಿ,
ತಣ್ಣನಡಕಿಲು ಸಿತಾಳವಾಗಿ
ಉಣ್ಣಲಿಕ್ಕಿ ಅಣಿಲೆದಂಬುಲಗೊಟ್ಟರು.ಲ ೨
ಬೇಡನಾರಂಬವ ಮಾಡುವಪರಿ !
ಬೇರಿಂದ ಕಂದ ಮೂಲಾದಿಗಳ
ಶಾಕವಿಲ್ಲದೆ ಪಾಕವಕಮಾಡಿ,
ತಮ್ಮ ಗಂಡರಿಗಿಕ್ಕಿ ತಾವುಮೇಲುವರಯ್ಯಾ. ೩
ಎರಳೆ ಸಾರಂಗ ಪುಲಿ ಮೃಗ
ಪಶುವಾನರ ನೆರೆಯಾಗಿರಲು,
ಕೂಗುವ ಕೋಗಿಲೆ (ಕಳಹಂಸೆ)
ಕುಣಿ ಕುಣಿದಾಡುವ ನವಿಲುಗಳು. ೪
ಸತ್ತು ಸಂಯೋಗದಿಂದ ಭಕ್ತಿರತಿಯ ಕೂಡಲು,
ಸಮತೆಯೆಂಬ ಬಸಿರಾಗಲು,
ಪರಿಣಾಮವೆಂಬ ಮಗ ಹುಟ್ಟಲು
ರೇಕನಾಥಯ್ಯನೆಂದು ಹೆಸರಿಟ್ಟರು. ೫
೧೧೧
ಪರಿಮಳವಿದ್ದು ಹೃದಯ ಗಮನಾಗಮನವಿಲ್ಲದವಿದೇನೊ?
ಬಯಲ ಸಿಡಿಲು ಹೊಯ್ದಡೆ
ಹಿಂದೆ ಹೆಣನ ಸುಡುವರಿಲ್ಲ ಗುಹೇಶ್ವರ. ||೫೯||
೧೧೨
ಏಳು ತಾಳಮೇಲೆ ಕೇಳುವ ಸುನಾದ;
ಸ್ಥೂಲ ಸೂಕ್ಷ್ಮಕಾರಣ ರಭಸ;
ಗಂಗೆ ವಾಳುಕ ಸಮಾರುದ್ರರ ತಿಂಥಿಣಿ
ಗಗನಗಂಭೀರದ ಶಿವಸ್ತುತಿಯ ನೋಡ ನೋಡಲು
ಪಿಂಡ ಬ್ರಹ್ಮಾಂಡವಾಯಿತ್ತು;
ಅಖಂಡಿತ ನಿರಾಲ ಗುಹೇಶ್ವರ. ||೬೦||
೧೧೩
ಬಿತ್ತಿದ ಬೀಜದ ಫಲವು ವಿಪರೀತ ನೋಡಾ.
ತನ್ನಲ್ಲಿ ತಾನೆಯಾಗಿ [19]ಆಗಮವನರಿಯರು.
ತಾನೆ[20] ಸ್ವಯಂಕೃತ ಸಹಜ
ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣ ನು. ||೬೧||
೧೧೪
ಜ್ಞಾನಚಕದ್ರ, ಪರಮತತ್ವ, ಪರಮಾರ್ಥ, ಪರಮಜ್ಞಾನ,
ಪರಾಪರ, ವಾಙ್ಮನಕ್ಕಗೋಚರ, ಶಬ್ದಗಂಭೀರ, ಉಪಮಾತೀತ
ಉನ್ನತ ಪರಶಿವಜ್ಞಾನಜ್ಯೋತಿ ಸುಜ್ಞಾನದ ಪ್ರಭೆಯ
ಬೆಳಗಿನೊಳಗೆ ಸುಳಿದಾಡುವ ಪರಮಾನಂದದ ಮಹಾಮಹಿಮಂಗೆ
ಶಿವಜ್ಞಾನವೇ ಶೃಂಗಾರ, ಮಹಾಬೆಳಗೇ ವಿಭೂತಿ,
ಪಂಚಬ್ರಹ್ಮವೇ ದರುಶನ, ಗಗನಸ್ಥಾನವೇ ಕಂಥೆ,
ಆಕಾಶವೇ ಕಪ್ಪರ, ಅಜಾಂಡಬ್ರಹ್ಮಾಂಡವೇ ಕರ್ಣಕುಂಡಲ;
ಆದಿಯಾಧಾರವೇ ಕಕ್ಷಪಾಳ, ಅನಾಹತವೇ ಒಡ್ಡ್ಯಾಣ,
ಅದ್ವೈತವೇ ಯೋಗವಟ್ಟಿಗೆ, ಅಗಮ್ಯವೇ ಯೋಗವಾವುಗೆ,
ಅಚಳಿತವೆ ಖರ್ಪರ, ಅಪ್ರಮಾಣವೇ ಲಾಕುಳ,
ಅವಿಚಾರವೇ ಸುಳುಹು, ಅಕಲ್ಪಿತವೇ ಭಿಕ್ಷ,
ಕೊಂಡುದೆ ಗಮನ, ನಿಂದುದೆ ನಿವಾಸ,
ನಿಶ್ಚಿಂತವೆಂಬಾಶ್ರಮದಲ್ಲಿ ನಿರಾಕುಳವೆಂಬ ಸಿಂಹಾಸನವನಿಕ್ಕಿ
ಗಗನ ಗಂಭೀರದ ಭಾವಿಯೊಳಗೆ, ಅಗೋಚರದ ಅಗ್ಗವಣಿಯತಂದು,
ಮಹಾಘನ ಪ್ರಾಣಲಿಂಗಕ್ಕೆ ಮಂಗಳದ ಬೆಳಗಿನಲ್ಲಿ ಮಜ್ಜನಕ್ಕೆರೆದು
ಬಿಂದ್ವಾಕಾಶವೆ ಗಂಧ, ಮಹದಾಕಾಶವೆ ಅಕ್ಷತೆ,
ಪರಾಪರವೆ ಪತ್ರಿಪುಷ್ಪ, ನಿರ್ಮಳವೆ ಲಿಂಗಾರ್ಚನೆ
ಮಹಾಪ್ರಕಾಶವೆ ಪೂಜೆ, ನಿತ್ಯನಿರಂಜನವೆ ಧೂಪ ದೀಪಾರತಿ
ಸಕಲ ಭುವನಾದಿ ಭುವನಂಗಳೆ ಸಯಿದಾನ,
ಆಚಾರವೇ ಅರ್ಪಿತ, ಮಹತ್ವವೆ ಸಿತಾಳ,
ಅಖಂಡಿತವೆ ಅಡಕೆ, ಏಕೋಭಾವವೆ ಎಲೆ,
ಶುದ್ಧ ಶಿವಾಚಾರವೆ ಸುಯಿಧಾನದ ಸುಣ್ಣ,
ವಿವೇಕ ವಿಚಾರದಿಂದ ವೀಳೆಯವನಧರಿಸುವುದು
ಮಹಾಲಿಂಗದ ಪರಿಣಾಮವೆ ಪ್ರಸಾದ.
ಸಮ್ಯಜ್ಞಾನವೆ ಸಂತೋಷ, ಸಹಜ ನಿರಾಭಾರಿಗಳ
ಮೇಳದಿಂದ ನಿಸ್ಸೀಮದ ನಿಭ್ರಾಂತಿನ ಸಂಗದಲ್ಲಿ
ನಿರಾಶಾಪದವೆ ಅನುಕೂಲ, ನಿಶ್ಶಬ್ದವೆ ಅನುಭಾವ
ಅನುಪಮದ ನಿಶ್ಯೂನ್ಯವೆ ವಿಶ್ರಾಮ, ನಿರಾಕಾರವೆ ಗಮನ
ನಿರಂತರ ಪಾತಾಳ, ಉರ್ಧ್ವಪವನ
ತ್ರಿಭುವನಗಿರಿಯೆಂಬ ಪರ್ವತವನೇರಿ,
ಕಾಯವೆಂಬ ಕದಳಿಯ ಹೊಕ್ಕು ಸುಳಿದಾಡುವ
ಮಹಾಮಹಿಮಂಗೆ ಇಹಲೋಕವೇನು, ಪರಲೋಕವೇನು?
ಅಲ್ಲಿಂದತ್ತ ಅಗಮ್ಯ ನಿರಾಳ ಪರಮಜ್ಞಾನಸಿದ್ಧಿ
ಮಹಾಲಿಂಗದ ಬೆಗಳು.
ಗುಹೇಶ್ವರ, ನಿಮ್ಮ ನಿಜವನರಿದ ಮಹಾಮಹಿಮ ಶರಣಂಗೆ
ನಮೋ ನಮೋ ಎಂಬೆನು. ||೬೨||
ಇಂತೆಂಬ ಪ್ರಭುಸ್ವಾಮಿಯನು ಅನುಭವಪ್ರಸಾದರಸವಜ್ರವ ಮಂಟಪವೆಂಬ ಮೇರುವಿನ ಶಿಖಾಗ್ರದ ಮಧ್ಯದಲ್ಲಿ ಪಂದ್ಮಾಸನಂಗೈದಿರ್ದ ವೃಷಭ[21]ನ ಮೇಲೆ ಸ್ಥಾಪಿಸಿ, ಬಸವಣ್ಣ ತಾನು ಸಮಸ್ತ ಪ್ರಮಥರ ಕೂಡಿಕೊಂಡು ನೂರೊಂದು ಸ್ಥಲದನುಭಾವದ ಗಣ ಸುಖ ಸಂಕಥಾ ವಿನೋದದಿಂ ಮಹಾ ಭಕ್ತಿ ಸಾಮ್ರಾಜ್ಯ ಸಂಪತ್ತನಾಳುತ್ತಿರ್ದನು. ಇರು[22]ತಿರ್ದ ಬಳಿಕ ಬಸವರಾಜನು ಪರ ಶಿವತತ್ವನು, ಹನ್ನೆರಡುಸಾವಿರ ಪ್ರಮಥಗಣಂಗಳನು, ಲಕ್ಷದ ಮೇಲೆ ತೊಂಬತ್ತಾರು ಸಾವಿರ ಜಂಗಮದೇವರುಗಳನು, ವಜ್ರಪರ್ವತದ ಮೇಲೆ ಮೂರ್ತಿಗೊಳಿಸಿ, ಈ ವಜ್ರವಾಸವೆಂಬ ಕೈಲಾಸಕ್ಕೂ ಆ ಚಿದ್ಬ್ರಹ್ಮಾಂಡಕ್ಕೂ, ಆ ಚಿದ್ಬ್ರಹ್ಮಾಂಡದೊಳಗಡಗಿದ ಮಹಾ ಶಿವಲೋಕಂಗಳಿಗೆಯೂ ಮುಂದೆ ಬರುವ ಕೆಲಕಾಲದಿಂದತ್ತತ್ತ ಹುಟ್ಟುವ ಮನಮಾಯಾಕರ್ಮಂಗಳಿಗೆಯೂ, ಅವರಿಂದ ಹುಟ್ಟುವ ಷಡುದೇವತೆಗಳಿಗೆಯೂ, ಅವರಿಂದ ಹುಟ್ಟುವ ಪಂಚಭೂತಂಗಳು ಮುಖ್ಯವಾದ ಯುಗ ಏಳು ಲೋಕಂಗಳಿಗೆಯೂ, ಅವರೊಳಗಣ ಮನುಮುನಿ ದೇವದಾನವ ಮಾನವರುಗಳಿಗೆಯೂ ಕರ್ತೃವಾದಿರಿ. ನಾ ಮೊದಲಾದ ಸಕಲ ಶರಣರಿಗೆಯೂ ಗುರುವಾದಿರಿ. ವಜ್ರಪರ್ವತದ ಮಧ್ಯದಲ್ಲಿದ್ದ ಹಾಂಗೆಯೆ ಮನಕ್ಕೆ ಮನೋಹರವಾದಿರಿ. ಎಂದು ಸಮಸ್ತ ಗಣಂಗಳ ಮುಂದಿಟ್ಟು ಬಿನ್ನಹಂ ಮಾಡಿ ಚಿದ್ವಿಭೂತಿಯನು ಪರಶಿವನ ಲಲಾಟಕ್ಕೆ ಧರಿಸಿ, ಪಟ್ಟವಂ ಕಟ್ಟಿರಿಸಿ, ಅಡ್ಡ ಬಿದ್ದೆದ್ದು ನಿಮಗೆಯೂ, ನಮಗೆಯೂ ಎಂದೆಂದಿಗೆಯೂ ಭಿನ್ನವಿಲ್ಲವೆಂದೆನುತ್ತ ಬಸವೇಶ್ವರದೇವರು ಷಡುಸ್ಥಲ ಸಂಪನ್ನರನು ತಮ್ಮೆಲ್ಲರ ಸಮಯಾಚಾರದ ಎಂಬತ್ತುನಾಲ್ಕುಸಾವಿರ ಜಂಗಮದೇವರುಗಳನು ಬಿಜಯಂಗೈಸಿಕೊಳ್ಳುತ್ತ ಅನುಭವರಸವಜ್ರದ ಮಹಾ ಮೇರುಮಂದಿರದನಾಳಂಗಳ ಸೋಪಾನಂಗಳೊಳಗಿಳಿದು ಚಿತ್ತವಿಸುತ್ತ ನೂರೊಂದು ಸ್ಥಲದ ಮೇಲೆ ಹತ್ತಿ ಹೋದಂತೆ ಹೋಗಿ ಇಳಿವಂತಿಳಿದು ಬಂದೆವೆಂದು ಸಂತೋಷಂ ಮಾಡುತ್ತ ಆ ಮಹಾ ಪ್ರಸಾದರಸ ವಜ್ರಮಂಟಪದಡಿಯ ಒಂದು ನೆಲೆಯಂ ಬಿಟ್ಟು ಮೇಲಣ ನೆಲೆಯ ಪದ್ಮ ಪೀಠ ಮಧ್ಯದಲ್ಲಿ ಮೂರ್ತಿಗೊಂಡು ಬಸವಾದಿ ಭಕ್ತ ಗಣಂಗಳು ನೋಡುವಾಗ ನೆಲೆ ನವರಂಗವಾಗಿ ತೋರಿತ್ತು. ಒಂದು ಕೋಟಿಯೂ ಇಪ್ಪತ್ತೈದು ಲಕ್ಷವು ಇಪ್ಪತ್ತೈದುಸಾವಿರ ಯೋಜನ ಪ್ರಮಾಣವಾಗಿ ಇದ್ದಿತ್ತು. ಆ ನೆಲೆಯೊಳ ಉ ಹನ್ನೆರಡು ಸಾವಿರ ಜಂಗಮದೇವರುಗಳು ಯುಕ್ತವಾಗಿ ಭವನೆಂಬ ಷಡುಸ್ಥದ ಬ್ರಹ್ಮಿ ಶಿವ ಬಸವರಸರ ನಿರೂಪಣೆಯಿಂದಿರುತ್ತಿರ್ದನು. ಇರಲಾಗಿ ಬಸವಣ್ಣ ಗಣ ಸಂಯೋಗವಾಗಲಲ್ಲಿಂದ ಮೇಲೆ ನಾನೂರೂಕೋಟಿ ಯೋ ಜನ ಪ್ರಮಾಣಿನ ಎರಡು ನೆಲೆಗೆ ಅಖಂಡಿತತತ್ವದಿಂ ತೆರಳಿ ಗಣಸ್ತೋಮವನೆಲ್ಲ ನೋಡುವಾಗ, ಆ ನೆಲೆ ನವರಂಗವಾಗಿ ತೋರಿತ್ತು. ಒಂದು ಕೋಟಿಯು ಎಪ್ಪತ್ತ ಐದು ಲಕ್ಷವು ಇಪ್ಪತ್ತೈದು ಸಾವಿರ ಯೋಜನ ಪ್ರಮಾಣುವಾಗಿದ್ದಿತ್ತು. ಆ ನೆಲೆಯೊ ಳು ಹನ್ನೆರಡು ಸಾವಿರ ಜಂಗಮ ದೇವರುಗಳು ಯುಕ್ತವಾಗಿ ರುದ್ರನೆಂಬ ಷಡುಸ್ಥಲ ಬ್ರಹ್ಮಿ ಬಸವೇಶ್ವರನ ನಿರೂಪಣೆಯಿಂದಿರುತ್ತಿ[23]ರ್ದನು. ಬಳಿಕ ವಸವಣ್ಣನು ಗಣ ೨.( ರಲಿಕ್ಕಾಗಿ ಬಸವಣ್ಣ ಗಣ ಮೇಳದ (ಬ). ಸಂಯೋಗವಾಗಿ ಅಲ್ಲಿಂದ ಮೇಲೆ ನಾನೂರು ಕೋಟಿ ಯೋಜನ ಪ್ರಮಾಣಿನ ಮೂರನೆಯನೆಲೆಗೆ ಬಿಜಯಂಗೈದು ನೋಡುವಾಗ ಆ ನೆಲೆ ನವರಂಗವಾಗಿ ತೋರಿ ಒಂದು ಕೋಟಿಯು ಎಪ್ಪತ್ತೈದು ಲಕ್ಷವು ಇಪ್ಪತ್ತೈದು ಸಾವಿರ ಯೋಜನ ಪ್ರಮಾಣುವಾಗಿದ್ದಿತ್ತು. ಆ ನೆಲೆಯೊಳು ಹನ್ನೆರಡು ಸಾವಿರ ಜಂಗಮ ದೇವರುಗಳು ಸಂಬಂಧವಾಗಿ ಸದಾಶಿವನೆಂಬ ಷಡುಸ್ಥಲ ಬ್ರಹ್ಮಿಯು ಬಸವಯ್ಯನ ವಾಕ್ಯವಿಡಿದಿರುತ್ತಿರ್ದನು. ಇ[24]ರಲಿಕೆ ಬಸವಣ್ಣನು ಆರನೆಯ ನೆಲೆಗೈದಿ ನೋಡುವಾಗ ಆ ನೆಲೆ ನವರಂಗವಾಗಿ ತೋರಿ ಒಂದು ಕೋಟಿಯು ಎಪ್ಪತ್ತೈದು ಲಕ್ಷವು ಇಪ್ಪತ್ತೈದು ಸಾವಿರ ಯೋಜನ ಪ್ರಮಾಣುವಾಗಿದ್ದಿತ್ತು. ಆ ನೆಲೆಯೊಳು ಹನ್ನೆರಡು ಸಾವಿರ ಜಂಗಮ ದೇವರುಗಳು ಸನ್ನಹಿತವಾಗಿ ಶಾಂತ್ಯಾತೀತನೆಂಬ ಷಡುಸ್ಥಲ ಬ್ರಹ್ಮಿ ಬಸವ ಗುರುವಿನ ನಿರೂಪಣೆಯಿಂದಿರುತ್ತಿರ್ದನು. ಇರುತ್ತಿರ್ದ[25] ಬಳಿಕಲ್ಲಿಂದಂ ಮೇಲೆ ನಾನೂರು ಕೋಟಿ ಯೋಜನ ಪ್ರಮಾಣಿನ ಏಳನೆಯ[26] ಶಿಖಾಗ್ರದಲ್ಲಿ ಲಕ್ಷದ ಮೇಲೆ ನೂರೆಂಟು ಸಾವಿರ ಜಂಗಮ ದೇವರುಗಳು ಯುಕ್ತವಾಗಿ ಪರಶಿವ ಬಸವ ಸ್ವಾಮಿಯ ಭಕ್ತಿ ನಿರೂಪಣೆಯಿಂದಿರುತ್ತಿರ್ದನು. ಇಂತಪ್ಪ ವಜ್ರದ ಮೇರುವಿನ ಅಡಿ ನಾನೂರು ಕೋಟಿ ಯೋಜನ ಪ್ರಮಾಣುವಾಗಿಪ್ಪುದು. ಅಂತಪ್ಪ ವಜ್ರದ ಮಹಾ ಮೇರು ಗುಂದಿರದಡಿ ಮುಡಿ ನಡುವೆಲ್ಲಾ ಠಾವಿನೊಳಗೆಯು ಬಸವರಾಜದೇವರು ಹನ್ನೆರಡು ಸಾವಿರ ಜಂಗಮ ದೇವರುಗಳು ಸಹಿತ ಪರಿಪೂರ್ಣತ್ವದಿಂದಿರುತಿರ್ದ್ದನು. ಇಂತೆಂಬ ಪುರಾತನಗ ಣಿತ ವಚನ ಸಾರಾಯವಪ್ಪ ಅಮೃತವಾಕುಗಳಿಗೆ ಸಾಕ್ಷಿ.
Leave A Comment