Categories
ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ ಸಾಹಿತ್ಯ

ಪ್ರೊ. ಕಾಳೇಗೌಡ ನಾಗವಾರ

ಕನ್ನಡದ ಪ್ರಗತಿಪರ ಚಳುವಳಿಗಳೊಂದಿಗೆ ಬೆಳೆದು ಬಂದ ಪ್ರೊ. ಕಾಳೇಗೌಡ ನಾಗವಾರ ಅವರು ಕಥೆಗಾರ, ಕವಿ, ವಿಚಾರವಾದಿ ಹಾಗೂ ಜಾನಪದ ತಜ್ಞರು.
ಕನ್ನಡದ ಸಾಂಸ್ಕೃತಿಕ ಇತಿಹಾಸದ ಪ್ರಮುಖ ಘಟ್ಟವಾದ ಬಂಡಾಯ ಸಾಹಿತ್ಯ ಚಳವಳಿಯ ಸ್ಥಾಪಕ ಸಂಚಾಲಕರಲ್ಲೊಬ್ಬರಾದ ಕಾಳೇಗೌಡರು ಪ್ರಸ್ತುತ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಅಧ್ಯಯನ ಸಂಸ್ಥೆಯ ಕನ್ನಡ ಪ್ರಾಧ್ಯಾಪಕರು.
ಗ್ರಾಮ ಸೊಗಡಿನಿಂದ ಎದ್ದು ಬಂದ ಕಾಳೇಗೌಡರು ಜಾನಪದ ಕಲೆ ಹಾಗೂ ಕಲಾವಿದರ ನೋವು ನಲಿವುಗಳ ಅಂತರಂಗ ಬಲ್ಲವರು. ಕರ್ನಾಟಕದ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಅಧ್ಯಕ್ಷರಾಗಿದ್ದ ಅವರು ರಾಮಮನೋಹರ ಲೋಹಿಯಾ ಅವರ ಸಮಾಜವಾದಿ ವಿಚಾರಗಳನ್ನು ಸಮಗ್ರವಾಗಿ ಕನ್ನಡಕ್ಕೆ ತರುವಲ್ಲಿ ಯಶ ಕಂಡರು.
ಕಥಾಸಂಕಲನ, ಕಾವ್ಯ, ವಿಚಾರ-ವಿಮರ್ಶೆ, ಜಾನಪದ ಗಿರಿಜನ ಕಾವ್ಯ ಹಾಗೂ ಸಂಸ್ಕೃತಿ ಹೀಗೆ ಹಲವಾರು ಕ್ಷೇತ್ರಗಳಿಗೆ ವಿಸ್ತರಿಸಿಕೊಂಡ ಪ್ರೊ. ಕಾಳೇಗೌಡ ನಾಗವಾರ ಅವರು ಜನಪರ ಆಲೋಚನೆಯುಳ್ಳ ಬರಹಗಾರರು.