Categories
ಜಾನಪದ ರಾಜ್ಯೋತ್ಸವ 2006 ರಾಜ್ಯೋತ್ಸವ ಪ್ರಶಸ್ತಿ

ಪ್ರೊ. ಹಿ. ಶಿ. ರಾಮಚಂದ್ರೇಗೌಡ

ಜಾನಪದ ವಿದ್ವಾಂಸರಾದ ಪ್ರೊ. ಹಿ. ಶಿ. ರಾಮಚಂದ್ರೇಗೌಡರು ಸ್ವತಹ ಜನಪದ ಕಲಾವಿದರೂ ಹೌದು.
ಹಾಸನದ ರಂಗನಾಥಪುರದವರಾದ ರಾಮಚಂದ್ರೇಗೌಡರು ಕೇರಳದ ತಿರುವನಂತಪುರ ಹಾಗೂ ಕಲ್ಲಿಕೋಟೆಗಳಲ್ಲಿ ಮಲಯಾಳಂ ಸಾಹಿತ್ಯ ಸಂಸ್ಕೃತಿ ಸಂಶೋಧನೆ ನಡೆಸಿ ಬಳಿಕ ಮೈಸೂರು * ವಿಶ್ವವಿದ್ಯಾನಿಲಯದಲ್ಲಿ ಜಾನಪದ ಅಧ್ಯಾಪನ ಕೈಗೊಂಡವರು.
ಕರ್ನಾಟಕ ವಿಚಾರವಾದಿ ಒಕ್ಕೂಟ, ಕರ್ನಾಟಕ ರಾಜ್ಯ ರೈತಸಂಘ, ದಲಿತ ಸಂಘರ್ಷ ಸಮಿತಿಗಳಲ್ಲಿ ದಿ ಸಕ್ರಿಯವಾಗಿದ್ದ ಹಿ. ಶಿ. ರಾಮಚಂದ್ರೇಗೌಡರು ಕರ್ನಾಟಕ ಜಾನಪದ ಅಧ್ಯಯನದಲ್ಲಿ ವೈಜ್ಞಾನಿಕ ವೈಚಾರಿಕ ಪಂಥದ ರೂವಾರಿ.
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಅಧ್ಯಕ್ಷರಾಗಿದ್ದ ರಾಮಚಂದ್ರೇಗೌಡರು ಈಗ ಮೈಸೂರು ವಿಶ್ವವಿದ್ಯಾನಿಲಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು.
ಪ್ರಮುಖವಾಗಿ ಜಾನಪದಕ್ಕೆ ಸಂಬಂಧಿಸಿದ ೧೮ ಕೃತಿಗಳೂ ಸೇರಿದಂತೆ ೨೪ ಕೃತಿಗಳನ್ನು ರಚಿಸಿರುವ ರಾಮಚಂದ್ರೇಗೌಡರು ಬರೆದ ರೈತ ಹೋರಾಟದ ಹಾಡುಗಳು ಬಹುಜನಪ್ರಿಯ.