Categories
e-ದಿನ

ಫೆಬ್ರವರಿ-27

ದಿನಾಚರಣೆಗಳುದಿನಾಚರಣೆಗಳು

ಮರಾಠಿ ಭಾಷಾ ದಿನ

ಮಹಾರಾಷ್ಟ್ರದಲ್ಲಿ ಫೆಬ್ರವರಿ 27 ದಿನವನ್ನು ಮಹಾನ್ ಕವಿ ‘ಕುಸುಮಾಗ್ರಜ್’ ಕಾವ್ಯ ನಾಮಾಂಕಿತರಾದ ಜ್ಞಾನಪೀಠ ಪುರಸ್ಕೃತ ವಿಷ್ಣು ವಾಮನ ಶಿರ್ವಾಡ್ಕರ್ ಅವರ ಜನ್ಮದಿನಕ್ಕೆ ಹೊಂದಿಕೊಂಡಂತೆ ಮರಾಠಿ ಭಾಷಾ ದಿನವನ್ನಾಗಿ ಆಚರಿಸಲಾಗುತ್ತಿದೆ.

ಪ್ರಮುಖಘಟನಾವಳಿಗಳು:

425: ಚಕ್ರವರ್ತಿ ಎರಡನೇ ಥಿಯೋಡಿಯಸ್, ತಮ್ಮ ಪತ್ನಿ ಏಲಿಯಾ ಯೂಡೋಸಿಯಾ ಆಗ್ರಹದ ಮೇರೆಗೆ ‘ಕಾನ್ಸ್ಟಾಂಟಿನೋಪಲ್ ವಿಶ್ವವಿದ್ಯಾಲಯ’ವನ್ನು ಸ್ಥಾಪಿಸಿದರು.

1700: ನ್ಯೂ ಬ್ರಿಟನ್ ದ್ವೀಪವು ಪತ್ತೆಯಾಯಿತು. ಈ ದಿನದಂದು ವಿಲಿಯಂ ಡ್ಯಾಂಪಿಯರ್ ಎಂಬಾತ ಇಲ್ಲಿಗೆ ಭೇಟಿ ನೀಡಿದ ಪ್ರಥಮ ಯೂರೋಪಿನ ವ್ಯಕ್ತಿ ಎನಿಸಿದರು. ಆ ಸಮಯದಲ್ಲಿ ಈ ಸ್ಥಳಕ್ಕೆ ಆಟ ಲ್ಯಾಟಿನ್ ಭಾಷೆಯಲ್ಲಿ ‘ನೊವಾ ಬ್ರಿಟಾನಿಯಾ’ ಎಂದು ಕರೆದರು.

1812: ಹೌಸ್ ಆಫ್ ಲಾರ್ಡ್ಸ್ ಸದಸ್ಯರಾಗಿ ಮೊದಲ ಬಾರಿಗೆ ಅಧಿವೇಶನವೊಂದರಲ್ಲಿ ಮಾತನಾಡಿದ ಕವಿ ಬೈರನ್ ಅವರು ತಮ್ಮ ತವರಾದ ನಾಟಿಂಗ್ಹ್ಯಾಮ್ ಷೈರ್ ಪ್ರಾಂತ್ಯದಲ್ಲಿ ಕೈಗಾರಿಕಾ ಬೆಳವಣಿಗೆಯ ವಿರುದ್ಧ ಜರುಗಿದ ‘ಲುಡಿಟ್ಟೆ ಹಿಂಸಾಚಾರ’ವನ್ನು ಸಮರ್ಥಿಸಿದರು.

1860: ಅಬ್ರಹಾಂ ಲಿಂಕನ್ ಅವರು ಕೂಪರ್ ಯೂನಿಯನ್ ಉದ್ದೇಶಿಸಿ ಮಾತನಾಡಿದರು. ಇದು ಅವರಿಗೆ ಅಮೆರಿಕದ ರಾಷ್ಟ್ರಾಧ್ಯಕ್ಷತೆ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿತು.

1900: ಬ್ರಿಟಿಷ್ ಲೇಬರ್ ಪಕ್ಷವು ಸ್ಥಾಪನೆಗೊಂಡಿತು.

1933: ಜರ್ಮನಿಯ ‘ರೀಚ್ ಸ್ಟಾಗ್’ ಪಾರ್ಲಿಮೆಂಟ್ ಭವನಕ್ಕೆ ಅಗ್ನಿ ಸ್ಪರ್ಶವಾಯಿತು. ಡಚ್ ಕಮ್ಯೂನಿಸ್ಟ್ ಯುವಕ ಮರಿನಸ್ ವಾನ್ ಡೆರ್ ಲುಬ್ಬೆ ಎಂಬ ಯುವಕ ಇದಕ್ಕೆ ತಾನೇ ಕಾರಣಕರ್ತ ಎಂದು ಘೋಷಿಸಿದ. ‘ನಾಜಿ’ ಗುಂಪು ಈ ‘ಅಗ್ನಿ’ ಘಟನೆಯನ್ನು ತಮ್ಮ ಅಧಿಕಾರವನ್ನು ವೃದ್ಧಿಸಿಕೊಳ್ಳಲಿಕ್ಕೆ ಮತ್ತು ಕಮ್ಮ್ಯೂನಿಸ್ಟರನ್ನು ನಾಮಾವಶೇಷಗೊಳಿಸಲಿಕ್ಕೆ ಯಶಸ್ವಿಯಾಗಿ ಬಳಸಿಕೊಂಡಿತು.

1940: ಅಮೆರಿಕದ ಮಾರ್ಟಿನ್ ಕಾಮೆನ್ ಮತ್ತು ಸಂ ರೂಬೆನ್ ಅವರಿಂದ ಕಾರ್ಬನ್-14 ಅಥವಾ ರೇಡಿಯೋ ಆಕ್ಟೀವ್ ಕಾರ್ಬನ್ ಸಂಶೋಧನೆ ನೆರವೇರಿತು.

1951: ಅಮೆರಿಕದ ಅಧ್ಯಕ್ಷರ ಅಧಿಕಾರಕ್ಕೆ ಎರಡು ಅವಧಿಗಳ ಮಿತಿ ವಿಧಿಸುವ 22ನೇ ಸಂವಿಧಾನದ ತಿದ್ದುಪಡಿ ಅಂಗೀಕೃತಗೊಂಡಿತು.

1964: ಪೀಸಾ ಗೋಪುರವು ಉರುಳಿ ಬೀಳದಂತೆ ರಕ್ಷಿಸುವುದಕ್ಕೆ ಸಹಾಯ ಮಾಡುವಂತೆ ಇಟಲಿಯ ಸರ್ಕಾರವು ಜನ ಸಾಮಾನ್ಯರ ಸಲಹೆ ಸಹಕಾರಗಳನ್ನು ಕೋರಿಕೊಂಡಿತು.

1991: ಕುವೈತ್ ವಿಮೋಚನೆಗಾಗಿ ಇರಾಕ್ ವಿರುದ್ಧ, ಅಮೆರಿಕ ಮತ್ತು ಅದರ ಮಿತ್ರಪಡೆಗಳು ನಡೆಸಿದ ಕೊಲ್ಲಿ ಯುದ್ಧವು ಇರಾಕಿನ ಸೋಲಿನೊಂದಿಗೆ ಅಂತ್ಯಗೊಂಡಿತು.

1998: ಇಂಗ್ಲೆಂಡಿನ ಸಿಂಹಾಸನ ಏರಲು 1000 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಪುರುಷ ಸಂತತಿಗೆ ಇದ್ದ ಆದ್ಯತೆಯನ್ನು ಕೊನೆಗೊಳಿಸಲು, ರಾಣಿ ಎಲಿಜಬೆತ್ ಅವರ ಒಪ್ಪಿಗೆಯೊಂದಿಗೆ ಹೌಸ್ ಆಫ್ ಲಾರ್ಡ್ಸ್ ಮಂಜೂರಾತಿ ನೀಡಿತು. ಇದರಿಂದ ಇಂಗ್ಲೆಂಡಿನ ಸಿಂಹಾಸನ ಏರಲು ಮೊದಲ ಪುತ್ರನಿಗೆ ಇರುವಷ್ಟೇ ಅಧಿಕಾರ ಮೊದಲ ಪುತ್ರಿಗೂ ಲಭಿಸುವಂತಾಯಿತು.

2002: ಧರ್ಮಾಂದ ದುಷ್ಕರ್ಮಿಗಳು ಗೋಧ್ರಾ ರೈಲಿಗೆ ಬೆಂಕಿ ಇಟ್ಟದ್ದರಿಂದ ಆ ರೈಲಿನಲ್ಲಿ ಪಯಣಿಸುತ್ತಿದ್ದ 59 ಯಾತ್ರಿಗರು ನಿಧನರಾದರು.

2008: ಮಹಿಳೆಯರಿಗೆ ಹೆರಿಗೆ ಸೌಲಭ್ಯಗಳನ್ನು ಕಲ್ಪಿಸುವ ‘ಹೆರಿಗೆ ಭತ್ಯೆ ತಿದ್ದುಪಡಿ ಮಸೂದೆ-2007′ ರಾಜ್ಯಸಭೆಯಲ್ಲಿ ಧ್ವನಿಮತದಿಂದ ಅಂಗೀಕಾರಗೊಂಡಿತು. ಇದರಿಂದಾಗಿ ಇದುವರೆಗೆ ಸರ್ಕಾರಿ ನೌಕರರು ಮಾತ್ರ ಪಡೆಯುತ್ತಿದ್ದ ಹೆರಿಗೆ ಸೌಲಭ್ಯಗಳನ್ನು ಖಾಸಗಿ ಸಂಸ್ಥೆಗಳಲ್ಲಿ, ಕಾರ್ಖಾನೆಗಳಲ್ಲಿ ಹಾಗೂ ತೋಟಗಳಲ್ಲಿ ದುಡಿಯುತ್ತಿರುವ ಮಹಿಳೆಯರೂ ಸಹ ಪಡೆದುಕೊಳ್ಳಲು ಸಹಾಯಕವಾಗಿದೆ.

ಪ್ರಮುಖಜನನ/ಮರಣ:

272: ರೋಮನ್‌ ದೊರೆ ಕಾನ್ಸ್ವಾಂಟೈನ್‌ ಜನಿಸಿದರು.

1500: ಉದಾತ್ತ  ಉದಾತ್ತವ್ಯಕ್ತಿ, ವಿದ್ವಾಂಸ ಎಂದು ಪರಿಗಣಿತರಾದ ಪೋರ್ಚುಗೀಸ್ ಭಾರತದ ನಾಲ್ಕನೆಯ ವೈಸರಾಯ್ ಆಗಿದ್ದ ಜೋವೋ ಡಿ ಕ್ಯಾಸ್ಟ್ರೋ, ಲಿಸ್ಬನ್ ನಗರದಲ್ಲಿ ಜನಿಸಿದರು.

1891: ರೇಡಿಯೋ ಕಾರ್ಪೊರೇಷನ್ ಆಫ್ ಅಮೆರಿಕ’ ಸ್ಥಾಪಕ ಡೇವಿಡ್ ಸರ್ನಾಫ್ ಅವರು ರಷ್ಯನ್ ಸಾಮ್ರಾಜ್ಯದ ಮಿನ್ಸ್ಕ್ ಬಳಿಯ ಉಸ್ಲಿಯೆನಿ ಎಂಬಲ್ಲಿ ಜನಿಸಿದರು.

1899: ಇನ್ಸುಲಿನ್ ಕಂಡುಹಿಡಿದವರಲ್ಲಿ ಒಬ್ಬರಾದ ಕೆನಡಾ ದೇಶದ ಜೀವವಿಜ್ಞಾನಿ ಚಾರ್ಲ್ಸ್ ಹರ್ಬರ್ಟ್ ಬೆಸ್ಟ್ ಅವರು ಅಮೆರಿಕದ ಮೈನೇ ಪ್ರಾಂತ್ಯದ ವೆಸ್ಟ್ ಪೆಂಬ್ರೋಕೆ ಎಂಬಲ್ಲಿ ಜನಿಸಿದರು.

1902: ಅಮೆರಿಕದ ಪತ್ರಕರ್ತ ಮತ್ತು ಸಾಹಿತಿ ಜಾನ್ ಸ್ಟೀಯಿನ್ ಬೆಕ್ ಅವರು ಕ್ಯಾಲಿಫೋರ್ನಿಯಾದ ಸಾಲ್ನಿಯಾಸ್ ಎಂಬಲ್ಲಿ ಜನಿಸಿದರು. ‘ಎ ಜಯಿಂಟ್ ಆಫ್ ಅಮೆರಿಕನ್ ಲೆಟರ್ಸ್’ ಎಂಬ ಪ್ರಖ್ಯಾತಿಯ ಇವರಿಗೆ 1962 ವರ್ಷದ ನೊಬೆಲ್ ಸಾಹಿತ್ಯ ಪುರಸ್ಕಾರ ಸಂದಿತು.

1912: ಪ್ರಖ್ಯಾತ ಮರಾಠಿ ಲೇಖಕ, ಕವಿ, ನಾಟಕಕಾರ ‘ಕುಸುಮಾಗ್ರಜ್’ ಕಾವ್ಯನಾಮದ ವಿಷ್ಣು ವಾಮನ ಶಿರ್ವಾಡ್ಕರ್ ಅವರು ಪುಣೆಯಲ್ಲಿ ಜನಿಸಿದರು. ಜ್ಞಾನಪೀಠ ಪ್ರಶಸ್ತಿ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತರಾದ ಇವರ ಜನ್ಮದಿನದ ಅಂಗವಾಗಿ ‘ಫೆಬ್ರವರಿ 27 ದಿನ’ವನ್ನು ಮಹಾರಾಷ್ಟ್ರದಲ್ಲಿ ಮರಾಠಿ ಭಾಷಾದಿನವನ್ನಾಗಿ ಆಚರಿಸಲಾಗುತ್ತಿದೆ.

1912: ಭಾರತೀಯ-ಫ್ರೆಂಚ್ ಬರಹಗಾರ, ಕವಿ ಮತ್ತು ನಾಟಕಕಾರ ಲಾರೆನ್ಸ್ ಡರ್ರೆಲ್ ಅವರು ಪಂಜಾಬಿನ ಜಲಂಧರ್ ಪಟ್ಟಣದಲ್ಲಿ ಜನಿಸಿದರು. ಅವರ ‘ಅಲೆಗ್ಸಾಂಡ್ರಾ’ ಕೃತಿ ಪ್ರಖ್ಯಾತವಾಗಿದೆ.

1922: ನ್ಯಾಯಾಧೀಶರಾಗಿ, ಸ್ವಾತಂತ್ರ್ಯ ಮತ್ತು ಏಕೀಕರಣ ಹೋರಾಟಗಾರರಾಗಿ ಮತ್ತು ಕನ್ನಡದ ಹಿರಿಯ ಬರಹಗಾರರಾಗಿ ಪ್ರಸಿದ್ಧರಾದ ನ್ಯಾಯಮೂರ್ತಿ ಕೋ. ಚೆನ್ನಬಸಪ್ಪನವರು ಬಳ್ಳಾರಿ ಜಿಲ್ಲೆ ಆಲೂರಿನ ಸಮೀಪದ ಕಾನಮಡುಗು ಎಂಬಲ್ಲಿ ಜನಿಸಿದರು. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವವೂ ಸೇರಿದಂತೆ ಅನೇಕ ಗೌರವಗಳು ಸಂದಿವೆ.

1926: ಕೆನಡಿಯನ್-ಅಮೇರಿಕನ್ ವೈದ್ಯವಿಜ್ಞಾನಿ ಡೇವಿಡ್ ಹೆಚ್ ಹ್ಯೂಬೆಲ್ ಅವರು ಕೆನಡಾದ ಒಂಟಾರಿಯೋ ಬಳಿಯ ವಿಂಡ್ಸರ್ ಎಂಬಲ್ಲಿ ಜನಿಸಿದರು. ‘ಇನ್ಫರ್ಮೇಷನ್ ಪ್ರೊಸೆಸಿಂಗ್ ಇನ್ ದಿ ವಿಷುಯಲ್ ಸಿಸ್ಟಮ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 1981 ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.

1932: ಇಂಗ್ಲೆಂಡ್-ಅಮೆರಿಕನ್ ಚಲನಚಿತ್ರ ಕಲಾವಿದೆ ಎಲಿಜಬೆತ್ ಟೇಲರ್ ಲಂಡನ್ನಿನಲ್ಲಿ ಜನಿಸಿದರು.

1942: ಅಮೆರಿಕದ ರಸಾಯನಶಾಸ್ತ್ರ ವಿಜ್ಞಾನಿ ರಾಬರ್ಟ್ ಹೆಚ್ ಗ್ರಬ್ಸ್ ಅವರು ಕೆಂಟಕಿಯ ಮಾರ್ಷಲ್ ಕೌಂಟಿ ಎಂಬಲ್ಲಿ ಜನಿಸಿದರು. ‘ಓಲೆಫಿನ್ ಮೆಟಾಥೆಸಿಸ್’ ಕುರಿತಾದ ಸಂಶೋಧನೆಗೆ ಇವರಿಗೆ 2005 ವರ್ಷದಲ್ಲಿ ನೊಬೆಲ್ ರಸಾಯನ ಶಾಸ್ತ್ರದ ಪ್ರಶಸ್ತಿ ಸಂದಿತ್ತು.

1971: ಅಮೆರಿಕದ ಪ್ರಸಿದ್ಧ ಮಹಿಳಾ ಉದ್ಯಮಿ ಸಾರಾ ಬ್ಲಾಕೆಲಿ ಫ್ಲೋರಿಡಾ ಬಳಿಯ ಕ್ಲಿಯರ್ ವಾಟರ್ ಎಂಬಲ್ಲಿ ಜನಿಸಿದರು. ಇವರು ‘ಸ್ಪಾಂಕ್ಸ್’ ಎಂಬ ಪ್ರಸಿದ್ಧ ಉಡುಪು ತಯಾರಿಕಾ ಸಂಸ್ಥೆಯನ್ನು ನಿರ್ಮಿಸಿದ್ದರು.

1931: ಚಂದ್ರಶೇಖರ ಆಜಾದರು‌ ಅಲಹಾಬಾದ್‌‌ನ ಆಲ್‌ಫ್ರೆಡ್‌ ಉದ್ಯಾನವನದಲ್ಲಿ ಆಜಾದರು ಏಕಾಕಿಯಾಗಿ ಹೋರಾಡಿದರಲ್ಲದೇ ಮೂವರು ಪೊಲೀಸರನ್ನು ಕೊಂದರಾದರೂ ಅವರ ತೊಡೆಗೆ ಗುಂಡೇಟು ಬಿದ್ದಿತ್ತು. ತಮ್ಮಲ್ಲಿದ್ದ ಬಹುತೇಕ ಮದ್ದುಗುಂಡುಗಳೆಲ್ಲಾ ಖಾಲಿಯಾದ ನಂತರ, ತಪ್ಪಿಸಿಕೊಳ್ಳಲು ಬೇರೆ ದಾರಿಯಿಲ್ಲವೆಂದು ಮನಗಂಡ ಅವರು ತಮ್ಮಲ್ಲಿ ಉಳಿದಿದ್ದ ಕೊನೆಯ ಗುಂಡಿನಿಂದ ತಲೆಗೆ ಗುಂಡು ಹೊಡೆದುಕೊಂಡು ಜೀವತೊರೆದರು.

1936: ರಷ್ಯನ್ ವೈದ್ಯಶಾಸ್ತ್ರಜ್ಞ ಇವಾನ್ ಪಾವ್ಲಾವ್ ಅವರು ಸೋವಿಯತ್ ಯೂನಿಯನ್ನಿನ ಲೆನಿನ್ ಗ್ರಾಡ್ ನಗರದಲ್ಲಿ ನಿಧನರಾದರು. ಕ್ಲಾಸಿಕಲ್ ಕಂಡಿಷನಿಂಗ್ ಕುರಿತಾದ ಮಹಾನ್ ಸಂಶೋಧಕರೂ, ಇಪ್ಪತ್ತನೇ ಶತಮಾನದ ಮಹತ್ವದ ಕೊಡುಗೆ ಎಂದು ಪರಿಗಣಿಸಲಾಗಿರುವ ‘ರೆವ್ಯೂ ಆಫ್ ಜನರಲ್ ಸೈಕಾಲಜಿ’ ಕೃತಿಕಾರರೂ ಇವರಿಗೆ 1904 ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.

1956: ಸ್ವಾತಂತ್ರ್ಯ ಹೋರಾಟಗಾರ ಮತ್ತು ಲೋಕಸಭೆಯ ಪ್ರಥಮ ಸ್ಪೀಕರ್ ಗಣೇಶ್ ವಾಸುದೇವ್ ಮಾವಲಂಕರ್ ಅಹಮದಾಬಾದಿನಲ್ಲಿ ನಿಧನರಾದರು. ಸರ್ದಾರ್ ವಲ್ಲಭವಾಯ್ ಪಟೇಲ್ ಅವರೊಂದುಗೂಡಿ 1920ರ ದಶಕದ ವೇಳೆಗೆ ಇವರು ಗುಜರಾತಿನಲ್ಲಿ ಅನೇಕ ವಿದ್ಯಾಸಂಸ್ಥೆಗಳನ್ನು ಸ್ಥಾಪಿಸುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದರು.

1936: ಆಸ್ಟ್ರಿಯನ್ ಬಹುಮುಖಿ ವೈದ್ಯಶಾಸ್ತ್ರಜ್ಞ ಕಾನ್ರಾಡ್ ಲೊರೆನ್ಸ್ ಅವರು ವಿಯೆನ್ನಾ ನಗರದಲ್ಲಿ ನಿಧನರಾದರು. ಆಧುನಿಕ ‘ಎಥಾಲಜಿ’ ಜ್ಞಾನಶಾಖೆಯ ಸ್ಥಾಪಕರಲ್ಲಿ ಒಬ್ಬರೆಂದು ಪರಿಗಣಿತರಾದ ಇವರಿಗೆ 1973 ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.

1936: ಅಮೆರಿಕದ ವೈದ್ಯಶಾಸ್ತ್ರಜ್ಞ ಜಾರ್ಜ್ ಎಚ್. ಹಿಚಿಂಗ್ಸ್ ಅವರು ನಾರ್ತ್ ಕೆರೋಲಿನಾದ ಚಾಪೆಲ್ ಹಿಲ್ ಎಂಬಲ್ಲಿ ನಿಧನರಾದರು. ‘ಕೀಮೋತೆರಪಿ’ ಕುರಿತಾದ ಕೊಡುಗೆಗಾಗಿ ಇವರಿಗೆ 1988 ವರ್ಷದಲ್ಲಿ ನೊಬೆಲ್ ವೈದ್ಯಶಾಸ್ತ್ರದ ಪ್ರಶಸ್ತಿ ಸಂದಿತ್ತು.

2008: ‘ನ್ಯಾಷನಲ್ ರೆವ್ಯೂ’ ಸ್ಥಾಪಕ ವಿಲಿಯಂ ಎಫ್. ಬಕ್ಲಿ ಜೂನಿಯರ್ ಅವರು ಕನೆಕ್ಟಿಕಟ್ ಬಳಿಯ ಸ್ಟ್ಯಾಂಫೋರ್ಡ್ ಎಂಬಲ್ಲಿ ನಿಧನರಾದರು.