ಕಿರಿಯ ವಯಸ್ಸಿನಲ್ಲೇ ಕಬಡಿ ಕ್ರೀಡೆಯಲ್ಲಿ ಹಿರಿಯ ಸಾಧನೆ ಮಾಡಿ ನಾಡಿನ ಕ್ರೀಡಾರಂಗದ ಹಿರಿಮೆಯನ್ನು ಅಂತರ ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ನಾಡಿನ ಹೆಮ್ಮೆಯ ಪಟು ಶ್ರೀ ಬಿ.ಸಿ. ರಮೇಶ್,
೧೯೭೧ರಲ್ಲಿ ಬೆಂಗಳೂರು ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನ ಬೈರಾಪಟ್ಟಣದಲ್ಲಿ ಹುಟ್ಟಿದ – ಶ್ರೀ ರಮೇಶ್ ಚಿಕ್ಕಂದಿನಿಂದಲೇ ಕ್ರೀಡೆಯಲ್ಲಿ ಅತ್ಯಾಸಕ್ತಿಯನ್ನು ಬೆಳೆಸಿಕೊಂಡು ಒಂದೊಂದೇ ಮಟ್ಟಿಲು ಏರುತ್ತಾ ಅಂತರರಾಷ್ಟ್ರೀಯ ಕ್ರೀಡಾ ಪಟು ಎನಿಸಿದರು. ರಾಷ್ಟ್ರೀಯ ತಂಡಕ್ಕೆ ಮೂರು ಬಾರಿ ನಾಯಕರಾಗಿ ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದರಲ್ಲದೆ ಎರಡು ಬಾರಿ ಏಷ್ಯನ್ ಕ್ರೀಡೆಯಲ್ಲಿ ಚಿನ್ನದ ಪದಕ, ಹಾಗೂ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಎರಡು ಬಾರಿ ಚಿನ್ನದ ಪದಕ, ಹಾಗೂ ಏಷ್ಯನ್ ಚಾಂಪಿಯನ್ಶಿಪ್ ನಲ್ಲಿ ಚಿನ್ನದ ಪದಕ ಪಡೆದ ಹೆಮ್ಮೆ ಇವರದು.
ಏಕಲವ್ಯ ಪ್ರಶಸ್ತಿ (೧೯೯೯), ಕೆಂಪೇಗೌಡ ಪ್ರಶಸ್ತಿ (೨೦೦೦), ಅರ್ಜುನ ಪ್ರಶಸ್ತಿ (೨೦೦೧), ಒಲಂಪಿಕ್ ಅಸೋಸಿಯೇಷನ್ ಪ್ರಶಸ್ತಿ (೨೦೦೧), ಹೀರೋ ಇಂಡಿಯನ್ ಪ್ರಶಸ್ತಿ (೨೦೦೨), ಮುಂತಾದ ರಾಜ್ಯ, ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕಾರಗಳು ಇವರ ಪ್ರತಿಭೆಗೆ ಸಂದ ಸಮ್ಮಾನಗಳು.
ನಿರಂತರ ಪರಿಶ್ರಮ ಮತ್ತು ಸ್ವಯಂಸ್ಪೂರ್ತಿಯಿಂದ ಏನನ್ನಾದರೂ ಸಾಧಿಸಬಹುದೆನ್ನುವ ಯುವ ಜನತೆಗೊಂದು ಮಾದರಿ ಶ್ರೀ ಬಿ.ಸಿ. ರಮೇಶ್ ಅವರು.
Categories
ಬಿ.ಸಿ. ರಮೇಶ್
