ಕುಸುಮಕಾಲದೊಳಲು ಕೊಯ್ದೊಂ
ದಿಸದೆ ಫಲಕಾಲದಲಿ ಪುಷ್ಪ
ಪ್ರಸರವಱೆಯಲ್ಕಾಂಟೆ ಮಾಡುವ ಕೆಲವು ಕಾರ್ಯಗಳ
ಎಸಗಿ ತತ್ಕಾಲದಲಿ ನಿರ್ವ
ರ್ತಿಸದೆ ಬಱೆಕೊಂದಿಸುವೆನೆನಲದು
೪ಬಸವ
ಅಱಲಿದೊಡೆ ಫಲವೇನು ವಂಶ[3]ವ
ನುಱುಹಬೇಕೆಂದೆನುತಲತಿ ಕೌ
ಶಳದಿ ಕೇಕೀಯಂತ್ರ[4]ದಲಿ[5] ಗಗನಸ್ಥಳಕೆ ನೆಗೆದು
ಸುಳಳಿತಾರಾಮದಲಿ ನಿಂದಾ
ಹೊಱಲಿಗೊಡ[6]ನೆ ಮಗುಱ್ದು ಬರ್ಪಂ[7]
ತಿಳೆಯ ಪತಿ ಮಾಡಿಸಿದನವನೀಪಾಲ ಕೇಳೆಂದ ೪೨
ಆ ಮಯೂರದ ಯಂತ್ರದಲಿ ಕಾಂ
ತಾಮಣಿಯನೇಱೆಸಲ[8]ದೆದ್ದಾಂ[9]
ರಾಮಕಂಬರಗತಿ[10]ಯೊಳುಯ್ಯೆ[11] ಗಜಾಶ್ವಯಾನದಲಿ
ಕಾಮಿನೀ ಜನಸಹಿತ ಭೂಪ ಲ
ಲಾಮ[12]ನೆಯ್ತಂ[13]ದಲ್ಲಿ ಸತಿಗಭಿ
ರಾಮಪುಂಸ[14]ವನಾ[15]ದಿ ಶೋಭನಗಳನು ಮಾಡಿಸಿದ ೪೩
ಸತಿಯನಿಂತು ದಿನಂಪ್ರತಿ[16]ಯೊಳಾ[17]
ಕ್ಷಿತಿ[18]ಪನಾರಾಮಕ್ಕೆ ಕೇಕೀ[19]ವಿತತ ಯಂತ್ರದೊಳು[20]ಯ್ದು ವನಜಲ[21]ಕೇಳಿಯಲಿ ಸತಿಯ
ಅತಿಶಯದ ದುಃಖಾತುರವ ನೆಱೆ
ಹತಿಸಿ ಪರಮೋತ್ಸಾಹದಲಿ ಭೂ
ಸತಿಯ ಕಾಷ್ಠಾಮಗಾರಗಿತ್ತಿರ್ದನು ಮಹೀಪಾಲ ೪೪
ಧರೆಯೊಳುತ್ತಮ[22]ರಿಂಗಿತದೊಳುರು
ತರದೊಳಱೆವರು ಮಧ್ಯಮರು ಕೇ
ಳ್ದಱೆವರಧಮರು ಕಂಡಱೆವರತ್ಯಧಮರಾದವರು
ದರುಶನ ಶ್ರವಣೇಂ[23]ಗಿತದೊಳಱೆ
ಯರು[24] ಸುನಿಶ್ಚಯವಖಿಳ ಕಳೆಯಲಿ
ಪರಿಣತನು ನೃಪನಱೆಯದಿಹುದಿದು ಕ[25]ರ್ಮವಶವೆಂದ ೪೫
ಧಾರಿ[26]ಣೀಪತಿ ಕೇಳು ಕಾಷ್ಠಾಂ
ಗಾರನಾ ವಿಷಯದ ಸಮಸ್ತ ಮ
ಹೀರಮಣರನು ಮಕುಟವರ್ಧನ[27]ಮಂಡಳೀಕರನು
ಶೂರ ಸುಭಟಾಮಾತ್ಯಕುಲಪರಿ
ಚಾರ ಮನ್ನೆಯನಾಯಕ[28]ರ ಸುವಿ
ಚಾರದಿಂದೊಳಹೊಯ್ದು ಕೊಂಡನುಪಾಯಕುಶಲದಲಿ ೪೬
ದುರುಳ ಕಾಷ್ಠಾಂಗಾರನೊಂದಿನ
ದಿರುಳು ರಾಜದ್ರೋಹವನು ನೆನೆ[29]
ದುರುತರದೊಳಿಂತೆಂ[30]ದನನ್ಯಾ[31] ಧೀನವಾಗಿರ್ದ
ಧರಣಿಯೊಡೆತನವೇಕೆ ಸಕಲೈ
ಶ್ವರಿಯವೇಕದಱೆಂದಲಾತಗೆ
ಮರಣ ಲೇಸೆಂದೆನುತ ಚಿಂತಿಸುತಿರ್ದನಾತ್ಮದಲಿ ೪೭
ಮೌನವಿಲ್ಲದ ಬ್ರಹ್ಮಚರ್ಯ ಸು
ದಾನವಿಲ್ಲದ ವಸ್ತುಚಯವ[32]ಭಿ
ಮಾನವಿಲ್ಲದ ನಾರಿ ಸಜ್ಜ[33]ನರಿಲ್ಲದಾಸ್ಥಾನ
ಮಾನಿತ ಪ್ರಿಯವಿಲ್ಲದೋಲಗ
ಗಾನವಿಲ್ಲದ[34] ನೃತ್ಯ[35]ತನ್ನಾ
ಧೀನವಿಲ್ಲದ ಸಂಪದವ ಸುಡಲೆಂದು ಬಿಸುಸು[36]ಯ್ದು ೪೮
ಧರೆಯೊಳನ್ಯಾಧೀನವಾಗಿಹ
ನರಗೆ ತನ್ನಯ ಬಂಧುಬಳಗವ
ಹೊರೆಯ[37]ಲಿಲ್ಲಭಿಮತವ[38] ವಿಬುಧರಿಗೀಯಲಿಲ್ಲೆಸೆವ
ಕರಿ ತುರಗ ಮಹಿಳಾಜನವ[39] ವಿ
ಸ್ತರದಿ[40] ಜೋಡಿಸಲಿಲ್ಲವನು ಪಾ
ಮರನು ಸೇವಾಪರನ ಬಾಱು ನಿರರ್ಥವವನಿಯಲಿ ೪೯
ಉರಗನಾಥಗಹಿತ್ವ[41]ವನು ಕೇ
ಸರಿಗೆ ಮೃಗರಾಜತ್ವ [42]ವನು[43] [44]ಮಿಗೆ[45]
ಗರುಡಗೆ[46] ಖಗೇಂದ್ರತ್ವ [47]ವಿತ್ತ[48] ವರಾರು ತಂ[49]ತಮ್ಮ
ಉರುಭುಜದ ಬಲದಿಂದಲಂತವ
ಕರಸುತನವಾಯ್ತಂತೆ ಸತ್ಯಂ
ಧರನ ತಱೆದೀ ರಾಜ್ಯಕಧಿಪತಿಯಹೆನು ತಾನೆಂದ ೫೦
ಎಂದು ರಾಜಘ್ನವನು ನೆನೆದದ
ಕೊಂದು ಕಪಟೋಪಾಯವನು ಕಂ
ಡೊಂ[50]ದಿ ಮಂತ್ರಿ ಪಸಾಯಿ[51]ತರ ತಾ ಕರೆಸಿ ಸಭೆಯೊಳಗೆ
ಒಂದ[52]ದು ರಾಜದ್ರೋಹದೇವತೆ
ಬಂದಿರುಳು ತನ್ನದೆಯ ಮೆಟ್ಟಿಯೆ
ಬಂದಿಸುವಳದನೇನ ಪೇಂ[53]ಱವೆನೆಂದು ಖಳ ನುಡಿದ ೫೧
ನುಡಿವುದನುಚಿತ ನುಡಿದೆನಾದೊಡೆ
ತೊಡರುವುದು ಪಾತಕವು ಮೇಣದ
ನುಡಿದೆನಾದೊಡೆ ಜಗಕೆ ಹುಸಿಯಾಗಿಪ್ಪುದದಱೆಂದೆ
ನುಡಿಯದಿರೆ ತಾ ಹಿತವ ರಾಷ್ಟವು
ಕೆಡುವುದದು ಸಿದ್ಧಾಂತವದಱೆಂ
ನುಡಿಯಬೇಕೆಂದಾ ದುರಾತ್ಮನು ನುಡಿದನೊಲವಿನಲಿ ೫೨
ಜನಪ ಕೇಳ್ ಲೋಕದಲಿ[54] ದುಷ್ಟರ
ನೆನಹದೊಂದಾಗಿಹುದವರ ಮಾ
ತಿನಲಿ ಬೇಱೊಂದವರು ಮಾಡುವ ಕೃತ್ಯ ತಾನೊಂದು
ಇನಿಸು[55] ಗುಣ ದುರ್ಜನರಿಗದು ಮಂ
ಡನವದಾ[56]ಹುದಾಗಿ ಕಪಟದ
ನೆನಕಿ ನಿಂದಾ *ಖಳನು ನುಡಿದನು ಸಭೆಯೊಳಾ ಹದನ* ೫೩
*ಅನುದಿನವು ಬಂದಾ ಕುದೇವತೆ
ಜನಪನನು ನೀ ವಧಿಸದಿರೆ ನಿ
ನ್ನನುಪಮಾ[57]ನ್ವಯ ಸಹಿತ ಸವಱುವೆನೆಂದೊ[58]ಡೀಸುದಿನ*
ನೆನೆವುದನುಚಿತವೆಂದು ತಾನೇ
ಮುನಿಸಿನಿಂದಿರುಳೆದೆಯ ಮೆಟ್ಟಿದ
ಳೆನಗುಪಾಯವನಿದಕೆ ಪೇ[59]ಱುವು[60]ದೆಂದು ಖಳ ನುಡಿದ ೫೪
ಮುನಿಪ ಹಿಂಸೆಯ ಹಂಸೆ ಮೇಘ
ಧ್ವನಿಯನಹಿ [61]ತಾರ್ಕ್ಷ್ಯಾಗಮವ[62] ನಿ
ರ್ಧಿನಿಕ ದುರ್ಭೀಕ್ಷವನು ಗ[63]ಜಪತಿ ಕೇಸರಿಯ ಬರವ
ಜನನಿ ತನಯನ ಮರಣವನು ಧವ
ನಿನಿಯಳೊಲ್ಲದ ವಾರ್ತೆಯನು[64] ಕೇ
ಳ್ದನಿತು ಮನದಲಿ ಹೆದಱೆತಾ ಸಭೆ ಖಳನ ವಚನದಲಿ ೫೫
ಖಳ ನುಡಿಯಲಾಸ್ಥಾನ ಶೋ[65]ಕದ[66]
ಜಲಧಿಯೊಳಗದ್ದಂ[67]ತೆ ಭೀತಿಯೊ
ಳಲುಗ[68]ದಿರೆ ವರಧರ್ಮದತ್ತಾಮಾತ್ಯನೊಡಲೊಳಗೆ[69]ಅಲಗು[70] ಮುರಿದಂತೀಗಳಸು ಹೋ
ಗಲಿ ನೃಪಾಲನಿಮಿತ್ತವೆಂ[71]ದತಿ[72]
ಮುಳಿದು ಮನದಲಿ ನೆನೆಯುತಿರ್ದನು ಭೂಪ ಕೇಳೆಂದ ೫೬
ನಾಡೊ[73]ತಿಪಾತಕರು ಹಿಂಸೆಯ
ಮಾಡೆ ಬೇಡೆನ್ನದಿರೆ ಕಂಡುದ
ನಾಡದಿರ್ದರೆ ಧರ್ಮವನುಪೇಕ್ಷಿಸಿ ರಣಾಗ್ರದಲಿ
ಓಡಿದರೆ ಗುರುಜನಕೆ ವಿನಯವ
ಮಾಡದಿರಲವಗಹುದಧೋಗತಿ
ರೂಢಿಯೊಳೆಂದಾತ್ಮದಲಿ ನೆನ[74]ದೆಂದನಾ ಖಳಗೆ ೫೭
ಗುರುವಿಗಾ[75]ಚಾರ್ಯ[76]ನಿಗೆ ತನ್ನನು
ಹೊರೆದ ದಾತಾರಂಗೆ ಧರ್ಮವ
ನೊರೆ[77]ದವಗೆ[78] ದುರ್ಭಿಕ್ಷದಲಿ ಸಲಹಿದ ಕೃಪಾಳುವಿಗೆ
ಉರಗ ಜಲ ಶಿಖಿ ಶಸ್ತ್ರಭಯವನು
ಪರಿಹರಿಸಿದವರಿಗೆ ಮಹಾತ್ಮರಿ
ಗೆರಡ ನೆನೆದ ದುರಾತ್ಮನಿರೈವ[79] ಮಹಾಂಧನರಕದಲಿ ೫೮
ಲಲಿತದೇವವ್ರಾತದೊಳು ಸ[80]ಲ್ಲಲಿ[81]ತಗುಣಸರ್ವ[82]ಜ್ಞನ[83]ದ್ರಿಗ
ಳೊಳು ಸುರಾಚಲವಿಭ[84]ದೊಳುರು ಚೌದಂತ ಚೌಷಷ್ಟಿ
ಕಲೆಗಳೊಳು ಸಾಹಿತ್ಯವ[85]ಬ್ಧಿಗ
ಳೊಳಗೆ ದು[86]ಗ್ಧ ಸಮುದ್ರ ಪಾತಕ
ದೊಳಗೆ ರಾಜದ್ರೋಹಕಿಂತ[87]ತ್ಯಧಿಕವಿಲ್ಲೆಂದ ೫೯
ಪರಸತಿಯರಲಿ ಹಿಂಸೆಯಲಿ ಸ
ದ್ಗುರುವಿನಲಿ ತಂದೆಯಲಿ ತಾಯಲಿ
ವರತಪಸ್ವಿಗಳಲಿ [88]ಲಸತ್[89]ಶ್ರುತದಲ್ಲಿ ಪಾಪಗಳ
ಪರಿಗತಿಗಳಲಿ ದೈವದಲಿ[90]ವಿಬು
ಧರಲಿ[91] ತೀರ್ಥಂಗಳಲಿ ಭೂಪರೊ
ಳಿರಲು ಬೇಕತಿ ಭೀತಿ ಮನುಜವ್ರಾತಕವನಿಯಲಿ ೬೦
* ತಸವರುವೆನೆಂದನೂ ಸುದಿನಾ (ಮ)
* ಇಷ್ಟು ಭಾಗವು ಮ ಪ್ರತಿಯಲಿಲ್ಲ
* ಇಷ್ಟು ಭಾಗವು ಮ ಪ್ರತಿಯಲಿಲ್ಲ
* ಇಷ್ಟು ಭಾಗವು ಮ ಪ್ರತಿಯಲಿಲ್ಲ
Leave A Comment