ಕನ್ನಡ ಜನಪದ ಕ್ಷೇತ್ರವನ್ನು ಬೆಳಗಿದ ದೇಸೀ ಪ್ರತಿಭೆ ಭೀಮಸಿಂಗ್ ರಾಥೋಡ್, ಜಾನಪದ ಕ್ಷೇತ್ರಕ್ಕೆ ಜೀವ ಮುಡುಪಿಟ್ಟಿರುವ ಗ್ರಾಮೀಣ ಕಲಾವಿದರು.
ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಹಾಮುನಗರ ಭೀಮಸಿಂಗ್ ಅವರ ಹುಟ್ಟೂರು. ೧೯೫೬ರ ಏಪ್ರಿಲ್ ೭ರಂದು ಜನಿಸಿದ ಅವರಿಗೆ ಬಾಲ್ಯದಿಂದಲೂ ಜನಪದದತ್ತ ವಿಶೇಷ ಒಲವು. ಹಾಡು-ಭಜನೆಗಳೆಂದರೆ ಪಂಚಪ್ರಾಣ. ಜನಪದ ಗೀತೆ, ಭಜನಾ ಗೀತ ಗಾಯನ ಹಾಗೂ ನಾಟಕಗಳ ಅಭಿನಯ-ನಿರ್ದೇಶನ ನೆಚ್ಚಿನ ಹವ್ಯಾಸ. ಕಲೆಯ ಸೆಳತದಿಂದಾಗಿ ಯುವಕರಾಗಿದ್ದಾಗಲೇ ಶಿಕ್ಷಕ ವೃತ್ತಿಗೆ ರಾಜೀನಾಮೆ ನೀಡಿ ಕಲಾರಂಗದಲ್ಲಿ ತೊಡಗಿಕೊಂಡವರು. ಸಾಕ್ಷರತಾ ಮತ್ತು ಜನಜಾಗೃತಿ ಗೀತೆಗಳ ಗಾಯನದಲ್ಲಿ ನಿಸ್ಸಿಮರು, ಹತ್ತಾರು ನಾಟಕಗಳಲ್ಲಿ ನಟನೆ, ನಿರ್ದೇಶನದಿಂದ ಹೆಸರುವಾಸಿಯಾಗಿರುವ ಭೀಮಸಿಂಗ್ ರಾಥೋಡ್ ಬಂಜಾರು ಭಜನೆ ಹಾಡುವುದರಲ್ಲಿ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಸುಪ್ರಸಿದ್ಧರು. ಕನ್ನಡ ಸಾಹಿತ್ಯ ಪರಿಷತ್ತು, ಬಂಜಾರ ಸಮಾಜ, ಕರ್ನಾಟಕ ಬರಹಗಾರರ ಸಂಘ ಮತ್ತಿತರ ಸಂಸ್ಥೆಗಳಿಂದ ಗೌರವ ಸನ್ಮಾನಗಳಿಗೆ ಭಾಜನರಾಗಿರುವ ಭೀಮಸಿಂಗ್ ಕಲಾಧ್ಯಾನದಲ್ಲೇ ಧನ್ಯತೆ ಕಾಣುವ ವಿರಳ ಕಲಾವಿದರು.
Categories
ಭೀಮಸಿಂಗ್ ಸಕಾರಾಮ್ ರಾಥೋಡ್
