ರೇವಣ ಸಿದ್ಧನ ಮಹಿಮೆ
ಹರಹರಾ ಮಹಾದೇವರು ಜತಾದಿ
ಎಂಬ ಪರ್ವತದಲ್ಲಿ ||೧||
ಶ್ರೀಮಾನ್ ಮಹಾದೇವರ ಓಲಗದೋಳು
ಎಂತೆಂತ ಶರಣರಿದ್ದಾರು ||೨||
ಇಪ್ಪತ್ತೇಳು ಕೋಟಿ ಅಮರರಗೆಕಂಗಳು
ಮೂವತ್ತಾರು ಕೋಟಿ ರಾಕ್ಷಸರು ||೩||
ಮೂವತ್ತ ಮೂರು ಕೋಟಿ ದೇವ ದೇವತೆಯರು
ಕೋಟಿ ಸೂರ್ಯ ಕೋಟಿ ಚಂದ್ರರು ||೪||
ಕಿನ್ನೂರ ಕಿಂಪುರುಷ ಗಂಗಿ ಓಲಗ
ನಂದಿ ವಾಹನರು ಇರುತಿಹರು ||೫||
ನೋಡ್ಯಾರ ಶ್ರೀಮಾನ್ ಮಹಾದೇವರಿಗೆ
ಕುಡಿಶಡಗರದಿ ಶೆರಣು ಮಾಡುವರು ||೬||
ಹರುಷದಿಂದ ಆಗ ಅಡಿನೆರಗಿಂತಲಿ
ಶಿರವಬಾಗಿಸಿ ಶರಣು ಮಾಡಿದರೋ ||೭||
ಶರಣು ಮಾಡುದ ಪಾರ್ವತಿ
ಅಂತಾಳು ಶಿವನಿಗೆ ಶರಣು ಮಾಡಿದರು ||೮||
ಶಿವನಿಗೆ ಶರಣು ಮಾಡಿದರ
ಶಿವನಸತಿ ನಾನಂದಾಳೋ ||೯||
ಸತಿಯಾದ ಕಾರಣ ನನಗೊಂದು ಹಸ್ತ
ಈಶ್ವರಗೊಂದು ಹಸ್ತ ಅಂದಾಳೋ ||೧೦||
ಅದರೊಳಗೊಬ್ಬವ ರೇಣುಕನೆಂಬ
ನಾಧೀಶ್ವರ ಬಂದಾನು ||೧೧||
ರೇವಣಧೀಶ್ವರ ಬಂದು ಒಂದು
ಕರಿದಿ ಶರಣು ಮಾಡಿದನು ||೧೨||
ಶರಣು ಮಾಡುದ ಕಂಡು ಪಾರ್ವತಿದೇವಿಯು
ಈಶ್ವರನ ಬೆಸಗೊಂಡಾಳು ||೧೩||
ಕೇಳು ಪರಮೇಶ್ವರಾ ಈ ಶರಣನು
ಒಂದು ಕರದಿ ಶರಣು ಮಾಡಿದನು ||೧೪||
ಆಗ ಪರಮೇಶ್ವರ ಪಾರ್ವತಿಗೆ ಹೇಳಿದಾ
ನಿನಗೆ ಶರಣು ಮಾಡಬಾರದೆಂದಾನು ||೧೫||
ಕೇಳು ಪರಮೇಶ್ವರಾ ಈತನಿಗಿಂತ ಹೆಚ್ಚು
ನಾರುನುಂದು ಕೇಳಿದಳು ||೧೬||
ಅದನು ಕೇಳಿ ಈತನು ಮುನಿಗಿಂತ
ಬಲ್ಲಿದಾತನೆಂದು ಹೇಳಿದನೂ ||೧೭||
ಅದನು ಕೇಳಿ ಘಡ ಘಡಿಸಿ ಅಂಕುರಶಿ
ಖಡ್ಗ ಅವತಾರ ತಾಳಿದಳು ||೧೮||
ಮಾಯ ಕೋಲಾಹಲ ಮಾಯ ಮದನನ
ಇಂದ್ರ ತ್ರಿಶೂಲವತಾಳಿದಳು ||೧೯||
ಅಂಗಲಗಣ್ಣಿನವರು ಹುಲಿಬಣ್ಯದವರು
ನಸಲಗಣ್ಣು ಜಟಧಾರೆಗಳು ||೨೦||
ಏನ ಕಾಲೋಳು ಕಣ್ಣು ಸರಮಾಲಿಯೆ
ಇರುತ್ತೇವೆಂದು ಹೇಳಿದಳು ||೨೧||
ಇತ್ತ ನನ್ನ ಮರ್ತ್ಯುಲೋಕದಲ್ಲಿ
ಕೈ ಸೇರಿತರುವೆನೆಂದು ಹೇಳಿದಳು ||೨೨||
ಪಾರ್ವತಿಗೆ ಈಶ್ವರ ಹೇಳಿದ
ಮುಂಚೆ ಆಗಬೇಕೆಂದಾನು ||೨೩||
ಪಾರ್ವತಿದೇವಿಗೆ ಅಪ್ಪಣೆ ಕೊಟ್ಟು
ಇತ್ತ ಏನು ಕನಸು ಕಂಡಾನು ||೨೪||
ಧರಣಿಯೊಳಗ ನನ ಶಿದ್ಧರಗೆಲ್ಲ
ಗುರುವಾಗಿರು ಹೋಗು ಅಂದಾನು ||೨೫||
ಆಗ ರೇಣುಕನು ನೋಡಲ್ಲಯ್ಯ
ಕೊಲ್ಲಿಪಾಕಿಯಲ್ಲಿ ಹುಟ್ಟಿದಮ ||೨೬||
ಇತ್ತ ಪಾರ್ವತಿ ತನ್ನ ತಾಮಸರೆಂಬ
ಶಕ್ತಿಯ ಕರೆದು ಹೇಳಿದಳು ||೨೭||
ಮಲ್ಲಾಪುರಕ್ಕಿಂತ ಕೊಲ್ಲಾಪುರಧಿಕವೆಂದು
ತಿಳಿದು ಅಲ್ಲಿಗೆ ಬಂದಾರು ||೨೮||
ಬಲ್ಲಿದ ಮಹಾಂಕಾಳಿಯಾಗಿ
ಪಾರ್ವತಿದೇವಿಯ ರೂಪವತಾಳಿದಳು ||೨೯||
ಇಲ್ಲಿಗಿ ಶಿದ್ಧರು ಬರುವರೆಂದು
ಮನದೊಳು ಧ್ಯಾನಿಸಿಕೊಂಡಾಳು ||೩೦||
ಅದ್ಧರಿಗೆ ತಕ್ಕಂತೆ ವಿದ್ಯೆಯ ಬೇಕು
ಮೂಡನ ದೇಶಕ ಬಂದಾಳೊ ||೩೧||
ತನ್ನ ವಿಪರೀತ ಬುಕಡಿ ಮಾಡಿಕೊಂಡು
ಪರ್ವತಕ್ಕೆ ಹೋಗಿನಿಂತಾಳು ||೩೨||
ಆಗ ರಾಕ್ಷಸ ಪಾದಕೆ ಬಿದ್ದು
ಎದುರಿಗೆ ನಿಂತುಕೊಂಡಾನು ||೩೩||
ಆಗ ಮಾಯಿಗೆ ನಮಸ್ಕರಿಸಿ
ಅಷ್ಟ ಶಿದ್ಧಿ ಕೊಡತೇನಿ ಅಂದಾನು ||೩೪||
ಆಗ ರಾಕ್ಷಸನು ಮೂರು ಖಂಡಗ
ವಿಷವನ್ನು ತಂದುಕೊಟ್ಟಾನು ||೩೫||
ಸಾಸ್ವಿಕಾಳಷ್ಟು ವಿಷವ ತೆಗೆದುಕೊಂಡು
ಭೂಮಿಗೆ ನೀಡೆಂದನೋ ||೩೭||
ಭೂಮಿಗೆ ವಿಷವ ನೀಡಿದರೆ
ಪಾತಾಳಲೋಕ ಕಂಡಾವು ||೩೮||
ಅಂದ ಕಂಡು ಮಾಯಿ ಬೆರಗಾಗಿ ನಿಂತು
ಇದು ಏನಂತ ಕೇಳಿದಳು ||೩೯||
ಆಗ ರಾಕ್ಷಸ ಮಾಯಿಗೆ ಹೇಳಿದ
ಇದು ಮಾಟವೆಂದಾನೋ ||೪೦||
ಅದ ಕಂಡು ಮಾಯಿ ಹರನವ ತಾಳಿ
ಇನ್ನಷ್ಟು ವಿಷ ಕೊಡಂದಾಳು ||೪೧||
ನಿನ್ನ ನಡುವಿನ ಮಾಲಿಯಲ್ಲಿ
ಮಾಯಿ ಮೂರು ಖಂಡಗ ವಿಷ ಕೊಟ್ಟೆನು ||೪೨||
ಆಗ ಮಾಯಿ ವಿಷವನ್ನು ತೊಕ್ಕೊಂಡು
ತನ್ನ ದೈತ್ಯರ ಕೈಯ್ಯಲ್ಲಿ ಕೊಟ್ಟಾಳು ||೪೩||
ಶಾಕಿನಿ ಡಾಕಿನಿ ಎಂಬ ದೇವತೆಯರು
ವಿಷವ ಬಂಡಿ ಮೇಲೆ ಹೇರಿದರು ||೪೪||
ಕಟ್ಟು ಕಾವಲು ಮಂಡಿಕೊಂಡು ಮಾಯಿ
ಹಸ್ತಿನಾಪುರಕ್ಕೆ ಬಂದಾರು ||೪೫||
ಹಸ್ತಿನಾಪುರದೊಳು ಒಬ್ಬಾಕಿ
ಸತ್ಯ ಶಿವಶರಣಿಯಿದ್ದಾಳೋ ||೪೬||
ಮಾಯಿ ಗದ್ದಲವ ಕಂಡು ಆಗ ಶಿವಶರಣಿ
ರಥವ ನೋಡಬೇಕೆಂದಾಳು ||೪೭||
ರಥವ ಹಿಡಿದು ಬಂದ ಶಿದ್ದಾರಿತೈನದ
ಶಿವದು ನೀಡಿದಳು ||೪೮||
ಹಸ್ತಿನಾಪುರದಿಂದ ಮೂರು ದಿ
ಕೊಲ್ಲಾಪುರಕ್ಕೆ ಬಂದಾಳು ||೪೯||
ಮೂರು ದಿವಸಕ್ಕ ಬಂದು ಮಾಯಿ
ಆರು ಮನಿಯ ಕಟ್ಟಿಸ್ಯಾಳು ||೫೦||
ಆರು ಮನಿಯ ಬಾಗಿಲಿಗೆ
ಒಂದು ಕಾವಲಿ ಇಟ್ಟಾಳೋ ||೫೧||
ಮೊದಲಿನ ಬಾಗಿಲದಲ್ಲಿ ಕಾವಲಿ
ಕರಡಿ ಸಿಂಹಗ ಇಟ್ಟಾಳೋ ||೫೨||
ಎರಡನೆಯ ಬಾಗಿಲಕ ನೋಡಲ್ಲಯ್ಯ
ಹುಲಿರಾಜನ ಕಾವಲಿಯೋ ||೫೩||
ಮೂರನೆಯ ಬಾಗಿಲಿಗೆ ಸಿಂಹನೂ
ನಾಲ್ಕನೆಯ ಬಾಗಿಲಿಗೆ ಚಾಮುಂಡೇಶ್ವರಿಯೊ ||೫೪||
ಐದನೆಯ ಬಾಗಿಲಿಗೆ ರುಂಡಾನೊ
ಆರನೆಯ ಬಾಗಿಲಿಗೆ ರುಂಡಾನೋ ||೫೫||
ಏಳನೆಯ ಬಾಗಿಲಿಗೆ ಸರ್ಪನ ಕಾವಲಿ
ಎಂಟನೆಯ ಬಾಗಿಲಿಗೆ ಚಂಡವೀರನೋ ||೫೬||
ಒಂಭತ್ತನೆಯ ಬಾಗಿಲಿಗೆ
ಗಂಡಬೇರುಂಡನ ಕಾವಲಿಯೋ ||೫೭||
ಇಂತಿಷ್ಟ ಕಾವಲು
ಅರಮನಿ ಕಾವಲಿಗೆ ಬಂದುಬಸ್ತ ಮಾಡಿಟ್ಯಾಳು ||೫೮||
ಭೂಮಿಯೊಳಗಿನ ಗವಿಶಿದ್ಧರನೆಲ್ಲ
ತರಬೇಕೆಂದಾಳೋ ||೫೯||
ಭಿಕ್ಷೆಯಂಬುವ ಶಬ್ದ ಶಿವಶರಣಿ ಕೇಳಿತೈನದಿ
ಶಿವಡು ನೀಡಿದಳೋ ||೬೦||
ಶರಣಿ ನೀಡಿದ ಶಿವಡು ತಕ್ಕೊಂಡು
ಶಿದ್ಧರು ಕೊಲ್ಲಾಪುರಕ್ಕೆ ಬಂದಾರೋ ||೬೧||
ಶಿದ್ಧಬೀರ ಚರಿತ್ರೆ
ಒಂದನೇ ಸಂದು :
ಸಣ್ಣತಮ್ಮನನ ಶಿದ್ಧಬೀರ ಮಂಡಿಗಿ
ಮಾರಾ ವಂದಾನೋ ||೧||
ಮಂಡಿಗಿ ಮಾರಾ ವಂದಾನೋ ಆಗ
ಅಕ್ಕನ ಮುಂದ ಹೇಳ್ಯಾನೋ ||೨||
ಅಕ್ಕನೋ ಮಾಯವ್ವನೋ ಆಗ
ತಮ್ಮನ ಮಾತೊಂದ ಕೇಳ್ಯಾಳೋ ||೩||
ತಮ್ಮನ ಮಾತೊಂದ ಕೇಳ್ಯಾಲು ಮಾಯವ್ವ
ಒಳ್ಳೆದೊಳ್ಳೇದಂದಾಳೋ ||೪||
ಒಳ್ಳೆದೊಳ್ಳೇದಂದಾಳು ಮಾಯವ್ವ
ಧರ್ಮರ ಮಗಳು ಕಾಮಾಲಿಯೋ ||೫||
ಧರ್ಮರ ಮಗಳು ಕಾಮಾಲಿ ಕರದು
ಏನಂತಾಗ ಹೇಳಿದಳೋ ||೬||
ಬಾರು ಬಾರ ಕಾಮಾಲಿದೇವಿ ನಿನ್ನ
ಪುರುಷನ ನೋಡವ್ವ ||೭||
ನಿನ್ನ ಪುರುಷನ ನೋಡವ್ವ ಕಾಮಾಲಿ
ಮಂಡಿಗಿ ಮಾರಾವಂತಾನೋ ||೮||
ಮಂಡಿಗಿ ಮಾರಾವಂತಾನವ್ವ ನನ್ನ
ತಮ್ಮನ ಯೇರಿಬೇಕಂತಾಳೋ ||೯||
ತಮ್ಮನ ಯೇರಿಬೇಕಂತಾಳು ಮಾಯವ್ವ
ನೀರಿಗೆ ಹೋಗಬೇಕಂತಾಳೋ ||೧೦||
ಧರ್ಮರ ಮಗಳು ಕಾಮಾಲಿದೇವಿ
ಒಳ್ಳೆದೊಳ್ಳೇದಂದಾಳೋ ||೧೧||
ರನ್ನದ ಕೊಡವು ಚಿನ್ನದ ಸಿಂಬಿ ಕಾಮಾಲಿ
ನೀರಿಗೆ ಹೊಂಟಾಳೋ ||೧೨||
ಬಡಬಡ ಹೋದಾಳು ಕಾಮಾಲಿ
ಕುರುಬಗೇವಿ ಹೊಕ್ಕಾಳೋ ||೧೩||
ಕುರುಬಗೇರಿನ್ನ ಅಕ್ಕಗಳಿರಾ
ನೀರಿಗೆ ಹೋಗೋಣ ಬನ್ನೀರೇ ||೧೪||
ಅಗಲಿ ಕೊಡಗಳ ತಂದೆ ಕಾಮಾಲಿ ಈಗೆಲೆ
ಕೊಡಗಳೆ ಇಳಿವೇವೆ ||೧೫||
ರನ್ನದ ಕೊಡವು ಚಿನ್ನದ ಸಿಂಬಿ ಕಾಮಾಲಿ
ನೀರಿಗೆ ಹೊಂಟಾಳೋ ||೧೬||
ಬಡಬಡ ಹೋದಾಳು ಕಾಮಾಲಿ
ಒಕ್ಕಲಿಗರೋಣಿ ಹೊಕ್ಕಾಳೋ ||೧೭||
ಒಕ್ಕಲಗೆರೆನ್ನ ಅಕ್ಕಗಳಿರಾ ನೀರಿಗೆ
ಹೋಗೋಣ ಬನ್ನೀರೇ ||೧೮||
ಆಗಲಿ ಕೊಡಗಳ ತಂದೆವಿ ಈಗಲೆ
ಕೊಡಗಳ ಇಳಿವೇವಿ ||೧೯||
ರನ್ನದ ಕೊಡವು ಚಿನ್ನದ ಸಿಂಬಿ ಕಾಮಾಲಿ
ನೀರಿಗೆ ಹೊಂಟಾಳೋ ||೨೦||
ಬಡಬಡ ಬಂದಾಳು ಕಾಮಾಲಿ
ಹಾರಾರಗೇರಿ ಹೊಕ್ಕಾಳೋ ||೨೧||
ಹಾರುರಗೇರನ್ನ ಅಕ್ಕಗಳಿರಾ ನೀರಿಗೆ
ಹೋಗೋಣ ಬನ್ನೀರೇ ||೨೨||
ಆಗಲಿ ಕೊಡಗಳ ತಂದೆವಿ ಈಗಲೆ
ಕೊಡಗಳ ಇಳಿವೇವಿ ||೨೩||
ರನ್ನದ ಕೊಡವು ಚಿನ್ನದ ಸಿಂಬಿ ಕಾಮಾಲಿ
ನೀರಿಗೆ ಹೊಂಟಾಳೋ ||೨೪||
ಧರ್ಮದ ಮಗಳು ಕಾಮಾಲಿ
ಹರಸಪುರ ಪಟ್ಟಣವೋ ||೨೫||
ಊರ ಅಗಸಿಯ ಮುಂದ
ಎರಕೊಂದು ದಾರಿ ಹೋಗ್ಯಾವೋ ||೨೬||
ಎಡಕೊಂದು ದಾರಿ ಹೋಗ್ಯಾವಯ್ಯ ಬಲಕೊಂದು
ದಾರಿ ಹೋಗ್ಯಾವೋ ||೨೭||
ಬಲಕಿನ ದಾರಿ ಹಿಡಿದಳು ಕಾಮಾಲಿ
ಹಾಲುಹಳ್ಳಕ ಬಂದಾಳೋ ||೨೮||
ಶಿವನ ವರವಿನ ಶಿದ್ದಾನು ಆಗ
ಅರಮನಿಯ ಒಳಗೆಲ್ಲೊ ||೨೯||
ಅರಮನಿಯ ಒಳಗಲ್ಲಯ್ಯ
ಏನಂತ ಮಾತಾಡ್ಯಾನೋ ||೩೦||
ಕಾಮಾಲಿದೇವಿ ನೋಡಲ್ಲಯ್ಯ ಹಾಲು
ಹಳ್ಳದ ಒಳಗಲ್ಲೋ ||೩೧||
ಹಾಲುಹಳ್ಳದ ಒಳಗಲ್ಲೊ ನಾ ಮನಸ
ನೋಡಬೇಕೆಂದಾನೋ ||೩೨||
ಶಿವನ ವರವಿನ ಶಿದ್ದಾನು ಆಗ ದಂಡ
ತಯ್ಯಾರ ಮಾಡ್ಯಾನೋ ||೩೩||
ದಂಡ ತಯ್ಯಾರ ಮಾಡ್ಯಾನು ಸ್ವಾಮಿ ತಾ
ಏನ ತಯ್ಯಾರಗ್ಯಾನೋ ||೩೪||
ಹರಹರನೋ ನನ ಕರಿಯದೇವರು
ಹಾಲುಹಳ್ಳದ ದಂಡೀಲೆ ||೩೫||
ಹಾಲುಹಳ್ಳದ ದಂಡೀಲೆ ತನ್ನ
ದಂಡ ಇಳಿಸುತೈದಾನೋ ||೩೬||
ಧರ್ಮರ ಮಗಳು ಕಾಮಾಲಿದೇವಿ
ಹಾಲುಹಳ್ಳದ ಒಳಗಲ್ಲೊ ||೩೭||
ಹಾಲು ಹಳ್ಳದ ಒಳಗಲ್ಲೋ ಆಗ
ಏನಂತ ಮಾತಾಡ್ಯಾಳೋ ||೩೮||
ಅವು ರಾಯರ ದಂಡವ್ಯಾ ಇದು
ರಾಯರ ದರಬಾರೋ ||೩೯||
ಅವು ರಾಯರ ದರಬಾರೆಂದು ಹಾಲು
ಹಳ್ಳವ ಬಿಟ್ಟಳೋ ||೪೦||
ಇಲ್ಲಿಗೆ ಹರಹರ ಇಲ್ಲಿಗೆ ಶಿವಶಿವ ಇಲ್ಲಿಗೆ
ಇದು ಒಂದು ಸಂದೇಳೋ ||೪೧||
ಸಂದಿನ ಪದಗಳ ವಂದಿಸಿ ಹೇಳುವೆ
ತಂದಿ ಕರಿಯ ಶಿದ್ದಾನೋ ||೪೨||
ದೇವಾರು ಬಂದಾವು ಬನ್ನೀರೇssss
Leave A Comment