Categories
ಜಾನಪದ ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ

ಮಲ್ಲಯ್ಯ ಹಿಡಕಲ್

ಜಮಖಂಡಿ ತಾಲೂಕಿನ ಮಧುರಕಂಡಿ ಕಲಾವಿದರ ಊರು. ಈ ಊರಿನಲ್ಲಿ ಹುಟ್ಟಿದ ಮಲ್ಲಯ್ಯನವರು ದಿ. ಸಿದ್ದಗಿರಿಸ್ವಾಮಿ ಮಠಪತಿ ಇವರ ಸಾರಥ್ಯದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಎಂಬ ಬಯಲಾಟವನ್ನು ಅರ್ಥಪೂರ್ಣವಾಗಿ ಪ್ರಯೋಗಿಸಿ, ಕರ್ನಾಟಕ ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರಗಳಲ್ಲಿ ಹೆಸರುಗಳಿಸಿದ್ದಾರೆ.
ಈ ಬಯಲಾಟದಲ್ಲಿ ಬರುವ ಎಲ್ಲಾ ಸ್ತ್ರೀಪಾತ್ರಗಳನ್ನು ಸಮರ್ಥವಾಗಿ ಅಭಿನಯಿಸಿ ಜನಮೆಚ್ಚುಗೆ ಗಳಿಸಿದ್ದಾರೆ. ಸುಮಾರು ಆರು ದಶಕಗಳ ಕಾಲ ಕಲಾ ಸೇವೆ ಸಲ್ಲಿಸಿ ಅದರ ಜೊತೆಗೆ ಭಜನೆ ಹಾಡುಗಾರಿಕೆ ಹಾಗೂ ಪುರಾಣ ಹೇಳುವುದನ್ನು ರೂಢಿಸಿಕೊಂಡಿದ್ದಾರೆ ಇವರಿಗೆ ೭೦ ವರ್ಷಗಳು ತುಂಬಿವೆ ಆದರೂ ಕಲಾ ಜೀವನದಲ್ಲಿ ನಿರತರಾಗಿದ್ದಾರೆ.