ದೇಶಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಮೇಜರ್ ಪ್ರದೀಪ್ ಶೌರಿ ಆರ್ಯ ಅವರು ನಾಡಿನ ಹೆಮ್ಮೆ. ಉಗ್ರಗಾಮಿಗಳ ವಿರುದ್ಧ ಹೋರಾಟದಲ್ಲಿ ತೋರಿದ ಧೈರ್ಯ-ಸಾಹಸಕ್ಕೆ ಪ್ರತಿಷ್ಠಿತ ಶೌರ್ಯ ಚಕ್ರಗೌರವಕ್ಕೆ ಪಾತ್ರರಾದವರು.
೨೦೦೪ರ ಭಾರತೀಯ ಕಂದಾಯ ಸೇವಾ ಅಧಿಕಾರಿಯಾಗಿರುವ ಮೇಜರ್ ಪ್ರದೀಪ್ ಆರ್ಯ ಅವರು ಮೂಲತಃ ಬೆಂಗಳೂರಿನವರು, ಬೆಂಗಳೂರಿನ ಫ್ರಾಂಕ್ ಆಂಥೋನಿ ಪಬ್ಲಿಕ್ ಸ್ಕೂಲ್ನಲ್ಲಿ ಶಾಲಾ ಶಿಕ್ಷಣ, ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಪದವಿ ಪಡೆದವರು. ಮಂಗಳೂರಿನಲ್ಲಿ ಸಹಾಯಕ ಆಯುಕ್ತ, ಬೆಂಗಳೂರಿನಲ್ಲಿ ಉಪ ಆಯುಕ್ತ ಹಾಗೂ ಬೆಳಗಾವಿಯಲ್ಲಿ ಜಂಟಿ ಆಯುಕ್ತರಾಗಿ ಕಾರ್ಯನಿರ್ವಹಿಸಿದವರು. ಸಮಾಜಶಾಸ್ತ್ರ, ವ್ಯಾಪಾರ ಆಡಳಿತ, ಕಾನೂನು ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿವರು ಅವರು ಪಿಎಚ್ಡಿ ಪದವೀಧರರು ಸಹ. ವೃತ್ತಿಯಲ್ಲಿ ವಾಣಿಜ್ಯ ಪೈಲೆಟ್ ಆಗಿರುವ ಅವರು ೧೦೬ಟಿಎ ಪ್ಯಾರಡೂಟ್ ರೆಜಿಮೆಂಟ್ಗೆ ನೇಮಕಗೊಂಡರು. ಕರ್ನಾಟಕ ಮತ್ತು ಉತ್ತರ ಈಶಾನ್ಯ ರಾಜ್ಯವಾದ ನಾಗಾಲ್ಯಾಂಡ್ನಲ್ಲಿ ಚುನಾವಣಾ ಅಕ್ರಮಗಳನ್ನು ಪತ್ತೆಹಚ್ಚಿದ್ದಕ್ಕಾಗಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಂದ ಪ್ರಶಸ್ತಿ ಪಡೆದವರು. ಕಾಶ್ಮೀರ ಕಣಿವೆಯ ಬಾರಾಮುಲ್ಲಾದ ಎಲ್ಓಸಿ ಬಳಿ ಉಗ್ರರ ನಿಮೂರ್ಲನೆಗೈದಿದ್ದಕ್ಕಾಗಿ ೨೦೧೮ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಗೌರವಾನ್ವಿತ ಶೌರ್ಯ ಪ್ರಶಸ್ತಿಗೂ ಪಾತ್ರರಾಗಿದ್ದಾರೆ.
Categories