Categories
e-ದಿನ

ಮೇ-03

ಪ್ರಮುಖಘಟನಾವಳಿಗಳು:

1715: ಎಡ್ಮಂಡ್ ಹ್ಯಾಲಿ ಅವರ ಊಹೆಗೆ ಕೇವಲ ನಾಲ್ಕು ನಿಮಿಷಗಳ ವೆತ್ಯಾಸದಲ್ಲಿ ಪೂರ್ಣಸೂರ್ಯಗ್ರಹಣವು ಉತ್ತರ ಯೂರೋಪ್ ಮತ್ತು ಉತ್ತರ ಏಷ್ಯಾ ಪ್ರದೇಶಗಳಲ್ಲಿ ಗೋಚರಗೊಂಡಿತು.

1802: ವಾಷಿಂಗ್ಟನ್ ಡಿ. ಸಿ ನಗರವಾಗಿ ಸ್ಥಾಪಿತಗೊಂಡಿತು.

1901: ಫ್ಲೋರಿಡಾದ ಜಾಕ್ಸನ್ ವಿಲ್ಲೆ ಎಂಬಲ್ಲಿ ಭೀಕರ ಬೆಂಕಿ ಅನಾಹುತ ಮೊದಲುಗೊಂಡಿತು.

1913: ದಾದಾ ಸಾಹೇಬ್ ಫಾಲ್ಕೆ ಅವರ ಪೂರ್ಣ ಪ್ರಮಾಣದ ಚಲನಚಿತ್ರವಾದ ರಾಜಾ ಹರಿಶ್ಚಂದ್ರ ಬಿಡುಗಡೆಗೊಂಡು, ಭಾರತದಲ್ಲಿ ಚಲನಚಿತ್ರೋದ್ಯಮದ ಆರಂಭಕ್ಕೆ ನಾಂದಿಯಾಯಿತು.

1915: ಮೊಟ್ಟ ಮೊದಲ ಕನ್ನಡ ಸಾಹಿತ್ಯ ಸಮ್ಮೆಳನವು ಬೆಂಗಳೂರಿನಲ್ಲಿ ಅಧಿವೇಶನಗೊಂಡು ಈಗ ‘ಕನ್ನಡ ಸಾಹಿತ್ಯ ಪರಿಷತ್ತು’ ಎಂದಿರುವ ‘ಕರ್ಣಾಟಕ ಸಾಹಿತ್ಯ ಪರಿಷತ್ತು’ ಎಂಬ ಸಂಸ್ಥೆಗೆ ಚಾಲನೆ ದೊರಕಿತು. ಈ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ಎಚ್. ವಿ. ನಂಜುಡಯ್ಯನವರು ಕರ್ಣಾಟಕ ಸಾಹಿತ್ಯ ಪರಿಷತ್ತಿನ ಮೊಟ್ಟ ಮೊದಲ ಅಧ್ಯಕ್ಷರು ಎಂದೆನಿಸಿದರು.

1937: ಮಾರ್ಗರೆಟ್ ಮಿಚೆಲ್ ಅವರ ಗಾನ್ ವಿಥ್ ದಿ ವಿಂಡ್ ಕಾದಂಬರಿಯು ಕಾಲ್ಪನಿಕ ಕೃತಿಯಾಗಿ ಪುಲಿಟ್ಜರ್ ಬಹುಮಾನ ಗಳಿಸಿತು.

1939: ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ‘ಅಖಿಲ ಭಾರತ ಫಾರ್ವರ್ಡ್ ಬ್ಲಾಕ್’ ಸ್ಥಾಪಿಸಿದರು.

1973: ಚಿಕಾಗೊದಲ್ಲಿನ 108 ಅಂತಸ್ತುಗಳುಳ್ಳ 1451 ಅಡಿಗಳ ಎತ್ತರದ ಸಿಯರ್ಸ್ ಟವರ್ ಕಟ್ಟಡವು ಅಂದಿನವರೆಗಿನ ವಿಶ್ವದ ಅತಿ ದೊಡ್ಡ ಕಟ್ಟಡವಾಗಿ ನಿರ್ಮಾಣಗೊಂಡಿತು.

1978: ಪ್ರಪ್ರಥಮ ಅನಪೇಕ್ಷಿತ ಗ್ರೂಪ್ ಈಮೈಲ್ ಒಂದನ್ನು ಡಿಜಿಟಲ್ ಎಕ್ವಿಪ್ಮೆಂಟ್ ಕಾರ್ಪೊರೇಷನ್ ಸಂಸ್ಥೆ ಅಮೆರಿಕದ ಪೂರ್ವ ತೀರದ ಅರ್ಪಾನೆಟ್ ವಿಳಾಸ ಹೊಂದಿದ ಎಲ್ಲಾ ಬಳಕೆದಾರರಿಗೂ ಒಂದೇ ಬಾರಿಗೆ ಕಳುಹಿಸಿತ್ತು. ಇಂತಹ ಈಮೈಲ್ಗಳನ್ನು ಮುಂದಿನ ದಿನಗಳಲ್ಲಿ ಸ್ಪ್ಯಾಮ್ ಎಂದು ಪರಿಗಣಿಸಲಾಯಿತು.

2008: ಏಷ್ಯಾದ ಅತಿ ದೊಡ್ಡ ಮಾರುಕಟ್ಟೆಗಳಲ್ಲಿ ಒಂದಾದ ಗುಂಟೂರಿನ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ಕೋಟ್ಯಂತರ ರೂಪಾಯಿ ಮೌಲ್ಯದ ಫಸಲು ಸುಟ್ಟು ಭಸ್ಮವಾಯಿತು. ಮಾರುಕಟ್ಟೆಯಲ್ಲಿದ್ದ ಸುಮಾರು 500ಕ್ಕೂ ಹೆಚ್ಚು ದಲ್ಲಾಳಿ ಅಂಗಡಿಗಳು, ಒಂದೂವರೆ ಲಕ್ಷ ಮೆಣಸಿನಕಾಯಿ ಚೀಲಗಳು ಭಸ್ಮವಾದವು.

ಪ್ರಮುಖಜನನ/ಮರಣ:

1892: ಇಂಗ್ಲಿಷ್ ಭೌತವಿಜ್ಞಾನಿ ಜಾರ್ಜ್ ಪೆಗೆಟ್ ಥಾಮ್ಸನ್ ಅವರು ಕೇಂಬ್ರಿಡ್ಜ್’ನಲ್ಲಿ ಜನಿಸಿದರು. ‘ಎಲೆಕ್ಟ್ರಾನ್ ಡಿಫ್ರಾಕ್ಶನ್’‘ ಕುರಿತಾದ ಸಂಶೋಧನೆಗಾಗಿ ಇವರಿಗೆ 1937 ವರ್ಷದ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತ್ತು.

1897: ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಭಾರತದ ಪ್ರತಿನಿಧಿಯಾಗಿದ್ದ ಮತ್ತು ಭಾರತದ ರಕ್ಷಣಾ ಸಚಿವರಾಗಿದ್ದ ವಿ.ಕೆ. ಕೃಷ್ಣಮೆನನ್ ಕ್ಯಾಲಿಕಟ್ ಪಟ್ಟಣದಲ್ಲಿ ಜನಿಸಿದರು.

1902: ಜರ್ಮನ್-ಫ್ರೆಂಚ್ ಭೌತವಿಜ್ಞಾನಿ ಮತ್ತು ಕವಿ ಆಲ್ಫ್ರೆಡ್ ಕಾಸ್ಲರ್ ಅವರು ಜರ್ಮನ್ ಸಾಮ್ರಾಜ್ಯಕ್ಕೆ ಸೇರಿದ್ದ ಗುಯೇಬ್ ವಿಲ್ಲರ್ ಎಂಬಲ್ಲಿ ಜನಿಸಿದರು. ‘ಹೆರ್ಟ್ಸಿಯಾನ್ ರೆಸೊನಾನ್ಸಸ್ ಇನ್ ಆಟಮ್ಸ್’ ಕುರಿತಾದ ಸಂಶೋಧನೆಗಾಗಿ ಇವರಿಗೆ 1966 ವರ್ಷದ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತ್ತು.

1933: ಅಮೆರಿಕದ ಭೌತವಿಜ್ಞಾನಿ ಸ್ಟೀವನ್ ವೀಯೆನ್ ಬರ್ಗ್ ಅವರು ನ್ಯೂಯಾರ್ಕ್ ನಗರದಲ್ಲಿ ಜನಿಸಿದರು. ‘ಯೂನಿಫಿಕೇಶನ್ ಆಫ್ ದಿ ವೀಕ್ ಫೋರ್ಸ್ ಮತ್ತು ಎಲೆಕ್ಟ್ರೋ ಮ್ಯಾಗ್ನೆಟಿಕ್ ಇಂಟರಾಕ್ಷನ್ ಬಿಟ್ವೀನ್ ಇಂಟರಾಕ್ಟೀವ್ ಪಾರ್ಟಿಕಲ್ಸ್’’ ಕುರಿತಾದ ಸಂಶೋಧನೆಗಾಗಿ ಇವರಿಗೆ 1979 ವರ್ಷದ ನೊಬೆಲ್ ಭೌತಶಾಸ್ತ್ರದ ಪುರಸ್ಕಾರ ಸಂದಿತ್ತು.

1969: ಭಾರತದ ಮೂರನೇ ಮಾಜಿ ರಾಷ್ಟ್ರಪತಿಗಳಾದ ಜಾಕಿರ್ ಹುಸೇನ್ ಅವರು ನವದೆಹಲಿಯಲ್ಲಿ ನಿಧನರಾದರು. ಅವರಿಗೆ ಭಾರತರತ್ನ ಪ್ರಶಸ್ತಿ ಸಂದಿತ್ತು.

1981: ಪ್ರಸಿದ್ಧ ಹಿಂದೀ ಚಲನಚಿತ್ರ ನಟಿ ನರ್ಗಿಸ್ ದತ್ ನಿಧನರಾದರು. ಅವರ ಮದರ್-ಇಂಡಿಯಾದಲ್ಲಿನ ಅಭಿನಯ ಅಕಾಡೆಮಿ ಪ್ರಶಸ್ತಿ ಗೌರವಕ್ಕೆ ನಾಮಾಂಕಣಗೊಂಡಿತ್ತು. ಪದ್ಮಶ್ರೀ ಗೌರವ ಸಂದ ಪ್ರಪ್ರಥಮ ನಟಿಯಾದ ಇವರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ಫಿಲಂಫೇರ್ ಗೌರವಗಳು ಸಂದಿದ್ದವು. ಇವರ ಹೆಸರಿನಲ್ಲಿ ರಾಷ್ಟ್ರೀಯ ಪ್ರಶಸ್ತಿ ಸಹಾ ನೀಡಲಾಗುತ್ತಿದೆ.

2006: ತಮ್ಮ ಸೋದರ ಪ್ರವೀಣ್ ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡು 12 ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಮೋದ್ ಮಹಾಜನ್ ಅವರು ಇಂದು ತಮ್ಮ 56ನೆಯ ವಯಸ್ಸಿನಲ್ಲಿ ನಿಧನರಾದರು.

2008: ಕೊಂಕಣಿ ಲೇಖಕಿ ಗೋದೂಬಾಯಿ ಕೇಳ್ಕರ್ ಅವರು ತಮ್ಮ 83ನೆಯ ವಯಸ್ಸಿನಲ್ಲಿ ಪಣಜಿಯಲ್ಲಿ ನಿಧನರಾದರು.

2014: ಅಮೆರಿಕದ ಅರ್ಥಶಾಸ್ತ್ರಜ್ಞ ಗ್ಯಾರಿ ಬೆಕರ್ ಚಿಕಾಗೊದಲ್ಲಿ ನಿಧನರಾದರು. ಇವರಿಗೆ 1992 ವರ್ಷದ ನೊಬೆಲ್ ಅರ್ಥಶಾಸ್ತ್ರದ ಪುರಸ್ಕಾರ ಸಂದಿತ್ತು.