Categories
ರಾಜ್ಯೋತ್ಸವ 2020 ರಾಜ್ಯೋತ್ಸವ ಪ್ರಶಸ್ತಿ ಸಮಾಜಸೇವೆ

ಮೋಹಿನಿ ಸಿದ್ದೇಗೌಡ

ಶೋಷಿತ ಮಹಿಳೆಯರನ್ನು ಸಲುಹಿದ ಅಪರೂಪದ ಸಮಾಜಸೇವಕಿ ಮೋಹಿನಿ ಸಿದ್ದೇಗೌಡ, ಸಾಮಾಜಿಕ ಪಿಡುಗುಗಳ ನಿವಾರಣೆಗೆ ಶ್ರಮಿಸಿದ ಅಪ್ಪಟ ಅಬಲೆಯರ ಆಶಾಕಿರಣ.
ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ಅಂಜುಗೊಂಡನಹಳ್ಳಿಯಲ್ಲಿ ಜನಿಸಿದ ಮೋಹಿನಿ ಸಿದ್ದೇಗೌಡ ಚಿಕ್ಕಮಗಳೂರಿನ ಸೊಸೆ. 23ನೇ ವಯಸ್ಸಿನಿಂದಲೇ ಮಹಿಳಾ ಸಮಾಜದ ಸದಸ್ಯೆಯಾಗಿ ಸಮಾಜಸೇವಾ ಕಾರ್ಯಾರಂಭ. ಮಹಿಳಾ ಶೋಷಣೆ, ಮದ್ಯಪಾನ, ವರದಕ್ಷಿಣೆ ಕಿರುಕುಳ, ಸಾರಾಯಿ ಮಾರಾಟದ ವಿರುದ್ಧ ಗುಡುಗಿದ ಸ್ತ್ರೀದನಿ. ಕಸ್ತೂರಿಬಾ ಕೌಟುಂಬಿಕ ಸಲಹಾ ಕೇಂದ್ರದ ಕಾರ್ಯದರ್ಶಿಯಾಗಿ ನೊಂದ ಮಹಿಳೆಯರಿಗೆ ಆಸರೆ. ನಾಲ್ಕು ದಶಕದ ಅನನ್ಯ ಸೇವೆ. ವಿದ್ಯುಚ್ಛಕ್ತಿ ಮಂಡಳಿಯ ಮಹಿಳೆಯರ ಕ್ಲಬ್ ಕಾರ್ಯದರ್ಶಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಿಮ್ಯಾಂಡ್ ಹೋಂ ಸದಸ್ಯೆ, ಭಾರತ ಸೇವಾದಳದ ಜಿಲ್ಲಾ ಸಮಿತಿ ಸದಸ್ಯೆ, ಸಹಕಾರಿ ಸಂಘದ ಸದಸ್ಯೆ, ನಗರಸಭೆಯ ಸದಸ್ಯೆ ಸೇರಿದಂತೆ ಹತ್ತಾರು ಸಂಸ್ಥೆಗಳ ವಿವಿಧ ಹುದ್ದೆಗಳ ನಿರ್ವಹಣೆ-ಅನುಗಾಲವೂ ಸಮಾಜಸೇವೆ. ಕಿತ್ತೂರುರಾಣಿ ಚೆನ್ನಮ್ಮ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಂದ ಭೂಷಿತರು.