ರಾಗ ನೀತಾಂಬರಿ ಏಕತಾಳ
ತಂಗೀನೋಡಿದೆಯಾನೀನು | ರಾಯನಚಿತ್ತ | ದಿಂಗಿತವೆಲ್ಲವನು |
ತುಂಗಾವಿಕ್ರಮತಾನಾಗೀ | ನಮ್ಮಾಯಮಾನ | ಭಂಗವನೆಸಗಿದನು| ||79||
ಹರಿಹರೀಪಥವಿಡಿದೂ | ಬಂದುದ್ಯಾತಕೆ | ತುರಗವುತಾನೊಲಿದು |
ಅರುಹಲೀತನೊಳ್ಯಾತಕೇ | ಮನದಿರವನ್ನು | ಬರಿದಾದುದೆಮ್ಮಬಾಳು| ||80||
ಎಷ್ಟುಹೇಳಿದರಿವನು | ವಾಜಿಯನೀಗ | ಕಟ್ಟಿಪಲೊಲ್ಲತಾನು |
ಇಷ್ಟಾದಮೇಲೆನಾವು | ಈರಾಯನ | ಬಿಟ್ಟುಪೋಪುದೆಘನವು| ||81||
ರಾಗ ಕೇತಾರಗೌಳ ಅಷ್ಟತಾಳ
ಎಂದುತಮ್ಮೊಳುಮಾತನಾಡಲುಕೇಳುತ್ತ | ಲಂದತಿಶೌರ್ಯದಲಿ | ||82||
ಮಂದಗಮನೆಯರನೀಕ್ಷಿಸಿಅವರೊಡ | ನೆಂದನುಪ್ರೀತಿಯಲೀ|
ಪರಿಕಿಸಲೆಂದುನಾಬರಿದೆ ಚಾಳಿಸಿದರೆ | ಪರಿಹಾಸ್ಯಗೈದಿರಲ್ಲ |
ತರಿಸುವೆನೀಕ್ಷಣತುರಗವನೆನುತಲಿ | ಚರರೊಡನುಸುರಲಾಗ| ||83||
ಕೇಳಿತುರಗವತಂದೀಯಲುನೋಡುತ | ಭಾಳದಲಿಖಿತವನು |
ಲೀಲೆಯಿಂವಾಚಿಸಿಬಾಲೆಯರಿದಿರೊಳು | ಪೇಳಿದಬಹುಸಾಹಸಿ| ||84||
ರಾಗ ಮೆಚ್ಚುಗೌಳ ಅಷ್ಟತಾಳ
ಬರದಿಹನಿದಿರೊಳುರಾಮಾ | ತಾನೆ | ಧುರಧೀರನೆಂದು ನಿಸ್ಸೀಮಾ |
ಹರನೊಲಿದಿಹನಮಗೆಂದು | ತಾನು | ಅರಿಯದಾದನೊಯಿದನೊಂದು| ||85||
ಭೂತಳದೊಳಗೆನ್ನಪಿತನೂ | ಬಹು | ಖ್ಯಾತಿಯಪಡದಿಹತಾನು |
ಸೋತಪೆನೆಂಬುದರಿಯದೇ | ಬಿಟ್ಟ | ನೀತುರಗವತಾನುಬರಿದೆ| ||86||
ಈಗಲಿರಣದೊಳುತಾನೇ | ನಿಲ | ಲಾಗಿಗೆಲುವರನ್ನುಕಾಣೇ |
ಯಾಗದಶ್ವವುಸಹಿತಾನು | ಪೋಪೆ | ನೀಗಲೆಪುರಕೆಯಿಂನೇನು| ||87||
ಎಂದುರುಕ್ಮಾಂಗದನಾಗ | ಕರ | ದೆಂದನುಚರರೊಳುಬೇಗ |
ಇಂದುನೀವೀತುರಗವನೂ | ಬೇಗ | ದಿಂದೆಂಮಪುರಕೈವುದಿನ್ನು| ||88||
ಭಾಮಿನಿ
ಇಂತುಚರರೊಳುಪೇಳಿದುದನಾ |
ಕಾಂತೆಯರುಕೇಳುತ್ತ ಆತನ |
ಚಿಂತಿತವಸಲಿಸಲ್ಕೆ ಬಳಿಕಾಹಯವುಸಹಿತಾಗ |
ಸಂತಸದಿಪುರಕೈದಿಮತ್ತಾ |
ದಂತಿಗಮನೆಯರುಗಳಮನ್ನಿಸಿ |
ಅಂತರಂಗದಿತನ್ನ ಪಿತನಡಿಗೆರಗುತಿಂತೆಂದ| ||89||
ರಾಗ ಸೌರಾಷ್ಟ್ರ ಆದಿತಾಳ
ವನಕೇಳಿಗೆಂದು ನಾಪೋಗಿರಲಡವಿಗೆ | ತಂದೆಕೇಳು | ವಾಜಿ |
ಯನು ಕಂಡುಪಿಡಿದುವಾಚಿಸಿದೆನುಲಿಖಿತವ | ತಂದೆಕೇಳು| ||90||
ಸಾಕೇತ ಪುರವರಧೀಶ ರಾಘವನಂತೆ | ತಂದೆಕೇಳು ||
ಮೂರು ಲೋಕದಿಬಹುಖ್ಯಾತನಾಗಿರುತಿಹನಂತೆ ತಂದೆಕೇಳು| ||91||
ಬ್ರಹ್ಮಹತ್ಯಾಪಾಪಪರಿಹಾರಕೊೀಸುಗ | ತಂದಕೇಳೂ | ಬಲು
ಹೆೆಮ್ಮೆಯಿಂದಲಿ ತನ್ನತಮ್ಮಂದಿರೊಡಗೂಡಿದ | ತಂದೆಕೇಳು| ||92||
ಯಾಗವರಚಿಸಿತುರಗವಬಿಟ್ಟಿಹನಂತೆ | ತಂದೆಕೇಳೂ | ಮತ್ತೆ
ರಾಘವನನುಜಶತ್ರುಹನುಬಂದಿಹನಂತೆ | ತಂದೆಕೇಳು| ||93||
ಶೂರರೀವಾಜಿಯಕಟ್ಟುವದೆನುತಲೆ | ತಂದೆಕೇಳೂ | ರಾಮ
ನೀರೀತಿಬರದುದನೋಡಿಲ್ಲಿತಂದಿಹೇ | ತಂದೆಕೇಳು| ||94||
ವೃತ್ತ
ಕಂದನವಾಕ್ಯವನಾಲಿಸಿ |
ಚಂದದಿಭೂಪಾಲಕ |
ನಂದನನಂಮಂನಿಸೆಚಿತ್ತದೊಳಾಗಳ್ |
ಇಂದುಧರನಬಳಿಗೈದುಸುರುವೆ |
ನೆಂದೆನುತತಿಮುದದಿಂ | ಬಂದಾ |
ತಗೆನಮಿಸುತ ಲಿಂತೆಂದವನಾಗಳ್ ||95||
ರಾಗ ಸೌರಾಷ್ಟ್ರ ಏಕತಾಳ
ಚಿತ್ತವಿಸಾನೆಂಬಮಾತ | ಯೆಲೆಸಾಂಬಾ | ಎನ್ನ
ಪುತ್ರನೆಸಗಿದಪರಾಧವ | ಯೆಲೆಸಾಂಬ| ||96||
ಪಥ್ವೀಪಾಲರಾಮಚಂದ್ರಎಲೆಸಾಂಬ | ಬ್ರಹ್ಮ
ಹತ್ಯ ನಿವತ್ತಿಗೋಸುಗಾಯೆಲೆಸಾಂಬ | ||97||
ಬಿಟ್ಟಮಖದವಾಜಿಯನ್ನು | ಎಲೆಸಾಂಬ | ರುಕ್ಮ
ಕಟ್ಟಿತಂದನೀಗಳಲ್ಲಿ | ಯೆ | ಲೆಸಾಂಬ| ||98||
ಸೃಷ್ಟಿಗೊಡೆಯನಾದರಾಮ ಯೆಲೆಸಾಂಬಾ | ನಮ್ಮ
ಧಿಟ್ಟತನಕಂಜುವನೆ | ಯೆಲೆಸಾಂಬಾ| ||99||
ಶತ್ರುಗಳಗೆಲುವುದಕ್ಕೆ | ಎಲೆಸಾಂಬ | ಬಹುವಿ
ಚಿತ್ರವಾಗಿಬಂದುದಲ್ಲಯೆಲೆಸಾಂಬ| ||100||
ಕ್ಷತ್ರಿಪಂಥಕ್ಕಾಗಿನಾವುಯೆಲೆಸಾಂಬಾ |
ನಿನ್ನಮಿತ್ರಗಹಿತರಾದೆವಲ್ಲೋ | ಯೆಲೆಸಾಂಬಾ| ||101||
ಬುದ್ಧಿಯೇನಿದಕ್ಕೆಪೇಳು | ಎಲೆಸಾಂಬಾ | ರಣ
ಸಿದ್ಧಿಯಾಗುವಂತೆಮಾಡು | ಎಲಸಾಂಬ| ||102||
ರಾಗ ಕೇತಾರಗೌಳ ಝಂಪೆತಾಳ
ಎಂದುದನುಕೇಳುತಾಗ | ಪರಮನದಿಹನೊಂದುಗ್ರಹಿಸುತಲಿಬೇಗ |
ಮುಂದಾಹಕಾರ್ಯಕೆಮಗೆ | ಹಸನಾದುದೆಂದೆನುತ ನುಡಿದನವಗೇ| ||103||
ಪೊಡವಿಪತಿಕೇಳುನೀನು | ತವಕುವರಪಿಡಿದ ಯಾಗದಹಯವನು |
ಬಿಡಲುನಪರೆಲ್ಲನಗರೆ | ಜರೆವುತಡಿರೆಗಡಿನಿಂದಿಸದಿರುವರೇ ||104||
ಹರಿಯುಶ್ರೀರಾಮನೆಂದು | ತಿಳಿಯದೀ | ತುರಗವನುಪಿಡಿದುತಂದು |
ಧುರಕೆಸಂನಹಗೈದನು | ನಿನ್ನಮಗ | ಬರಿದೆಚಿಂತಿಸದಿರಿನ್ನು ||105||
ಸಂಗರದೊಳಾರಾಮನು | ಬರುವನಾವಂಗದಿಂದಾದರಾನು |
ಅಂಗಜನಪಿತನಿಮ್ಮನು | ರಕ್ಷಿಸುವಹಾಂಗೆಯತ್ನವಗೈವೆನು ||106||
ಭಾಮಿನಿ
ಧಾರುಣೀಪತಿಕೇಳುನಿರ್ಜರ |
ವಾರಸಹಿತಾನಿರಲುರಕ್ಷೆಗೆ |
ಮೀರಿತುರಗವನೊಯ್ಯಲಸದಳ ವಂದ್ಯರಿಂಗಿನ್ನು ||
ಮಾರಮಣನೈತರಲಿಕಾತನ |
ಚಾರುಚರಣಕೆನಮಿಸುತಾ | ರಘು
ವೀರನನುವಲಿಸುವೆನು | ಯುದ್ಧವಗೈವುದೀಗೆಂದ| ||107||
ರಾಗ ಮಧ್ಯಮಾವತಿ ತ್ರಿವುಡೆತಾಳ
ಎಂದುದನುಕೇಳುತ್ತಲಾನೃಪ | ಮಂದಹಾಸದಿಧುರವನೆಸಗಲಿ |
ಕೆಂದುಸನ್ನಹಗೈವುತಿರೆ ರಘು | ನಂದನನುಬಳಿಕತ್ತಲು | ಸೇನೆಯೊಡನೇ| ||108||
ಬರುತಿರಲಿಕಶ್ವವನುಕಾಣದೆ | ತರಹರಿಸುತಾಕ್ಷಣದಿತಮ್ಮೊಳಗು
ಗುಸುರುತೋರ್ವರನೋರ್ವನೀಕ್ಷಿಸು | ತಿರಲುಶತ್ರುಹಕೇಳ್ದನು | ಸೇನೆಯೊಡನೇ| ||109||
ಭೂರಿಬಲವಿರೆತುರಗವನು ನೀ | ವಾರುಕಾಣದ ತೆರದೊಳೊಯ್ಯಲು |
ಕಾರಣವದೇನೆನಲು ಕೇಳುತ | ಧಾರುಣೀಶನನೊಳೆಂದರು | ಬೆದರುತಾಗಾ| ||110||
ಮನದವೇಗದಿಮುಂದಕೈದುವ | ದನುಪಮಿತಬಲಬೆಂಬಳಿಯಲಿರೆ |
ಕ್ಷಣದಿದೃಷ್ಟಿಯಮರಸಿತಪ್ಪುವುದೆನುಯತ್ನವಗೈದರು | ಕಾಣದಂತೆ| ||111||
ಚರರವಾಕ್ಕವಕೇಳಿಶತ್ರುಹ | ಕರೆದುಮಂತ್ರಿಯೊಳೆಂದಯಾಗದ |
ತುರಗವೇನಾಯ್ತೆಂಬುದನು | ನೀ | ನರಿತುದುಸುರೆನಲೆಂದನು | ಮಂತ್ರಿತಾನೂ || ||112||
ರಾಗ ಭೈರವಿ ಝಂಪೆತಾಳ
ಶತ್ರುಹನೆಲಾಲಿಸೈ | ಉತ್ತುಮದದೇವಪುರ |
ಪಥ್ವಿಪತಿವೀರಮಣಿ | ಕತೀವಾಸನನು| ||1|13|
ವಲಿಸಲವನೀಪುರದಿ | ನೆಲಸಿಹನುಗಣಸಹಿತ |
ಗೆಲವಿಂದಲೀರ್ಪನಾ | ಇಳೆಯಪಾಲಕನು| ||114||
ಧರಣಿಪಾಲನಸುತನು | ತುರಗವನುಕಟ್ಟಿಹನು |
ಹರನಬಲದಿಂದೆಮ್ಮ | ಧುರಕಂಜನವನು| ||115||
ಎಂದುಪೇಳಲುಕೇಳು | ತಂದುಶತ್ರುಹಸುಭಟ |
ವಂದಯುದ್ಧವಗೈವುದೆಂದುನೇಮಿಸಿದ| ||116||
ರಾಗ ಪಂಚಾಗತಿ ಮಟ್ಟೆತಾಳ
ಬಳಿಕಸುಭಟರೆಲ್ಲರೋಷದಿಂದಲರಿಗಳ |
ಬಲವಮುಸುಕುತೆಸದರಾಗತೀವ್ರಕಣೆಗಳ |
ಅಳುಕದಾಗವೀರ ಮಣಿಯಸೈನ್ಯಕೋಪದೀ |
ಶರದುಬಿಟ್ಟರಸ್ತ್ರಚಯವಸಲೆಪ್ರತಾಪದೀ| ||117||
ಉಭಯಬಲವುತಂಮೊಳಿಂತುಕದನವೆಸಗಲು |
ರಭಸದಿಂದರಾಮ ಸೈನ್ಯಬೆದರದಾಗಳು |
ಸಬಳಶಕ್ತಿತೋಮರಂಗಳಿಂದಲವರನು |
ಪ್ರಬಲವದಗಿಸಲ್ಕೆಕಂಡುನಪಕುಮಾರನು| ||118||
ತುಂಗಭುಜಬಲಾಢ್ಯರುಕ್ಮಾಂಗದಾಖ್ಯನು |
ಮುಂಗಡೆಯಲಿನಿಂತುಮಾರ್ಗಣಗಳೆಸೆದನು |
ಸಂಗರದಲಿಬಲವನೆಲ್ಲಸವರುತೀರ್ದನು |
ಕಂಗೆಡಿಸುತಧೈರ್ಯದಿಂದಕರದುಸೂರ್ದನು | ||119||
ಎಲವೊನಿಂಮಬಲದೊಳೆಂಮಗೆಲುವವೀರರು |
ಗೆಲುವರೀಗಬರಲಿಯಿದಿರುಸಮರಶೂರರು
ಕೊಲುವೆನವರನೆನುತಲಾರ್ಭಟಿಸಲಾತನು |
ಕಳುವದದನುಕೇಳುತಾಗಪುಷ್ಕಳಾಖ್ಯನು| ||120||
ಹುಲುನಪಾಲನಣುಗನಂಮಬಲವಗೆಲಿದುದ |
ಬಲುಹನೋಳ್ಪೆನಿಲ್ಲುರಣಕೆಸಲೆಸಮರ್ತ್ಯದ |
ಫಲವತೋರ್ಪೆಘಳಿಗೆಯೊಳಗೆನೋಡುಸಹಸವ |
ತಳುವದೀಗಲೆನುತ ಸರಳಸುರಿಯಲಭ್ರವ| ||121||
ಭಾಮಿನಿ
ತುರಗಕಸ್ತ್ರವನಾಲ್ಕುಸಾರಥಿ
ಗೆರಡುಧ್ವಜಕೊಂದೆಸವರೋಷದೊ
ಳಿರದೆಸ್ಯಂದನರಕ್ಷಕರಿ | ಗೆರಡೊಂದನಪಸುತಗೆ ||
ಕರದಧನುಹಯಸೂತರಥಸಹ |
ಧರೆಗುರುಳಿಸಿದನೆಲ್ಲಬಲವನು |
ಕರೆಸಿಪುಷ್ಕಳನೊಡನೆಕರೆದಿಂತೆಂದರೋಷದಲೀ ||122||
ರಾಗ ಕೇತಾರಗೌಳ ಅಷ್ಟತಾಳ
ಸಮರದೊಳಿದಿರಾಗಿನಿಲದೀಗ ಪುಷ್ಕಳ | ಗಮಿಸುವದಾವಲ್ಲಿಗೇ |
ಕ್ರಮದಿಂದ ತವಸ್ಯಂದನವ ಹಾರಿಸುವೆನೊಂದು | ಕ್ಷಣದೊಳಗಂಬರಕೇ ||123||
ಎನುಸತ್ತ್ರವೆಸೆಯೆಪುಷ್ಕಳನರಥವನೊಂದು | ಕ್ಷಣನೂರ್ಯ್ಯೋಜನತನಕಾ |
ತೊಲಗುತ್ತಲಲ್ಲಲ್ಲಿತಿರುಗಲುಕಾಣುತ್ತ | ಕಣೆಯಿಂದ ಪುಷ್ಕಳನೂ ||124||
ಎಸದುಸಮಾಧಾನಗೊಳಿಸುತ್ತವನೊಡ | ನುಸುರೀದಪುಷ್ಕಳನು |
ವಿಶಿಖವನೀಗಳಾನೆಸೆವುತ್ತನಿಂದಾನು | ವಸುಧೆಯೊಳೊರಸುವೆನು| ||125||
ಎನುತೆಚ್ಚಬಾಣವತನರಥವನುಕೊಂಡುವಾಯಿನಮಂಡಲಕೆಪೋಗಲು |
ಘನತರಕಿರಣಜ್ವಾಲೆಗೆಸೂತಹಯಮತ್ತೆ | ಸ್ಯಂದನದಹಿಸಲಾಗ ||4||
ಹರನಸ್ಮರಿಸುತರುಕ್ಮಾಂಗದಮೂರ್ಛಿಸಿ | ಧರೆಗುರುಳಲುಕಾಣುತ್ತ್ತ |
ಶರಚಾಪವಿಡಿದುಕೋಪದಿವೀರಮಣಿಬಂದು | ಧುರಕನುವಾದನಿತ್ತ| ||126||
ಭಾಮಿನಿ
ವೀರಮಣಿಯೊಳುಧುರವನೆಸಗಲು |
ಮಾರುತಿಯುಬರುತಿರಲುಕಾಣುತ |
ಮಾರಜನಕನದೂತನಿಂ | ಗುಸುರಿದನುಪುಷ್ಕಳನೂ |
ಧೀರನೀನಹೆಸೈರಿಸುವದೀ |
ಬಾರಿಗೀತನೊಳಾನುಕಾದುವೆ |
ನೋಡುನೀನೆನಲೈದೆ ಪುಷ್ಕಳಗೆಂದನವನೀಶ | ||127||
ರಾಗ ಕಾಂಭೋಜಿ ಅಷ್ಟತಾಳ
ಕೇಳುಪುಷ್ಕಳನೆನೀನಿಂದೂ | ಎನ್ನ | ಮೇಲೆಯುದ್ಧಕೆನಡೆತಂದು |
ಬಾಳುವದೆಂತುನೀಬಾಲಕನಾಗಿಹೆ | ತಾಳುಕೋಪಿಸದಿರುಪೇಳುವೆನೀಗಳು ||128||
ಸುತನಕೆಡಹಿದಕೋಪವನ್ನೂ | ಬಿಟ್ಟು | ಖತಿಯಲ್ಲದೀಗಪೇಳುವೆನೂ |
ಜತನದಿಂದಲಿದೃಷ್ಟಿ ಪಥಕೆಬೀಳದವೋಲು | ಅತಿಶಯದಿಂಪೋಗುಹಿತದಿಂದುಲುಸುರುವೇ ||129||
ರಾಗ ಸೌರಾಷ್ಟ್ರ ತ್ರಿವುಡೆ
ಎಂದುದನುಕೇಳುತ್ತಪುಷ್ಕಳ | ನಂದದಾಬಾಲಕನಹುದುಯೆ |
ನ್ನಿಂದನೀನತಿವದ್ಧನಾತಹು | ದಿಂದುಸಹಜ ||130||
ಆದರೀಕ್ಷತ್ರಿಯರುರಣದಲಿ | ಕಾದಿಜಯಸುವ | ಸುಭಟಮುಖ್ಯರು |
ಮೇದಿನೀಪಾಲಕರಮತವಿದು | ನಾದರಿಸಲು| ||131||
ತವಸುತನಸಮರದಲಿಗೆಲಿದಿಹ | ಕವಲುಬಾಣವುನಿನ್ನ ಬಯಸುವ |
ದವನಿಪಾಲಕಜೋಕೆಯಿಂದಿನ | ಬವರದೊಳಗೇ| ||132||
ಎಂದುವಿಂಶತಿಶರವಬಿಡಲದ | ಕಂಡುನಪಮೂರಸ್ತ್ರವೆಸೆಯಲು |
ನಿಂದಿಸುತಪುಷ್ಕಳನಫಣಿಗದು | ಬಂದುನಾಂಟೇ| ||133||
ಬಿದ್ದುಚೇತರಿಸುತ್ತಭರತಜ| ಕ್ಷುದ್ರಭೂಪನೆಹರನಬಲದಲಿ |
ಭದ್ರನಾಗಿಹೆನಿಂನಸಮರದಿ | ನಿದ್ರೆಗೈಪೇ| ||134||
ರಾಗ ಶಂಕರಾಭರಣ ಮಟ್ಟೆತಾಳ
ಬಳಿಕನೂರುಶರವನೆಸೆಯಲಾಗಪುಷ್ಕಳ |
ಘಳಿಲನೈದಿವೀರಮಣಿಯಕುದುರೆತೇರ್ಗಳ |
ಹೊಳೆವಕವಚಧನು ಕಿರೀಟವಿಳೆಗೆಕೆಡಹಲೂ |
ಚಲುವದೇಹದಿಂದ ಅರುಣಜಲವುಸುರಿಯಲು| ||135||
ಧರಣಿಪಾಲಪೊಸವರೂಥವಡರುತಾಗಳು |
ಭರತಸುತನೊಳೆಂದಹರಿಯಚರಣ | ಕಪೆಯೊಳು |
ವಿರಥಗೈದರಿಂದಲೆಂಮನೀರಣಾಗ್ರದೀ |
ಹರಣವಳಿಯದಂತೆ ಕಾವುದುರುಪ್ರಯತ್ನದೀ| ||136||
ಧಾರುಣೀಶನಿಂತುನುಡಿಯಲಾಗಖತಿಯೊಳು |
ಕ್ರೂರಶರವಸಂಖ್ಯವೆಸದನಾರುಭಟೆಯೊಳು |
ಭೂರಿಮಾರ್ಗಣಂಗಳೈವುತಾ ರಣಾಗ್ರದೀ |
ಮಾರಪಿತನಬಲವವಸವರಲುಗ್ರ ಕೋಪದೀ| ||137||
ರಾಗ ದೇಶಿ ಆಟತಾಳ
ನೋಡುತ್ತಾ ಸೇನೆಯಳಿಯಲುಪುಷ್ಕಳ |
ಹೂಡಿ ಬಾಣವರಿಪುಬಲವನೀ | ಡಾಡಿದನು ಕ್ಷಣಮಾತ್ರದೀ| ||138||
ಶೋಣಿತಾಂಗದಿಬಲವಿರೆನಪತಾನು |
ಕಾಣುತಲೆಪುಷ್ಕಳಗೆಸೆಯ ಸು | ತ್ರಾಣದಿಂಸಾಯಕವನು| ||139||
ಬಂದುಪುಷ್ಕಳಧರಿಸಿದಕವಚವು |
ಚಿಮ್ಮಿಸುತಶರಪಂಜರದವೋ | ಲ್ನಿಂದರುಣಜಲಸೂಸಲು| ||140||
ನಿಂದುರಾಮನಸ್ಮರಿಸುತ್ತಪುಷ್ಕಳ |
ನಂದುಪ್ರತಿಶರವೆಸದುನಪನೊಡ | ನೆಂದ ಕೋಪಗಳಿಂದಲೀ ||141||
ರಾಗ ಕಾಪಿ ಅಷ್ಟತಾಳ
ವದ್ಧನಿನ್ನನು ಕೊಲಲ್ಯಾಕೆಂದು | ಬಿಡ
ಲುದ್ಯೋಗಿಸಿರುತಿರಲೈತಂದು ||
ಯುದ್ಧಾವಗೈದಪೆನಿನ್ನಾನೂ | ಗೆಲ್ದ
ಶಬ್ದವನುಸುರುವೆಕೇಳು ನೀನು| ||142||
ಕಾಶಿಯ ನೈದಿದಮಾನವ | ತಾನು
ಲೇಸಿನೊಳಗೆಗಂಗಾಸ್ನಾನವ ||
ತೋಷದೊಳೆಸಗದೆಬಂದರೆ | ಆ
ದೋಷವುನಿನ್ನನುಗೆಲದಿರೆ| ||143||
ಎಂದುಶಪಥವಿಡೆಕೇಳುತ್ತ | ಶರ
ದಿಂದೆಚ್ಚನಪರೋಷತಾಳುತ್ತ ||
ಬಂದುಪುಷ್ಕಳನ ಹದಯವನು | ಹೊಕ್ಕು
ಮುಂದಕೈಯಲು ಕಾಣುತಾತನು| ||144||
ರಾಮನಹದಯದಿಸ್ಮರಿಸುತ್ತ | ಮತ್ತಾ
ಭೂಮಿಪಾಲಕನನು ನೋಡುತ್ತ ||
ಕಾಮಾರಿಯಂತುರೆಕೋಪದೀ | ಬಿಟ್ಟ
ನಾಮಹಾಸ್ತ್ರವನುಪ್ರತಾಪದೀ| ||145||
ಭಾಮಿನಿ
ಶರಹತಿಗೆನಪಮೂರ್ಛಿಸುತಲಾ |
ಧರಣಿಗೊರಗಲು ಕಾಣುತಾಗಳು |
ತರಹರಿಸಿನಪಸೈನ್ಯಬೆದರಲು ವೀರಸಿಂಹಾಖ್ಯ ||
ಬರುವುದನುರಣದೊಳಗೆ ಕಂಡಾ |
ಮರುತಸಂಭವಖತಿಯೊಳಾತನ |
ಕರೆದುಮೂದಲಿಸುತ್ತಲುಸುರಿದನುರುಸಗಾಢದಲಿ| ||146||
ರಾಗ ನಾದನಾಮಕ್ರಿಯೆ ಅಷ್ಟತಾಳ
ಖುಲ್ಲವೀರಸಿಂಹಮುಂದಾ
ವಲ್ಲಿಗೈದುತಿರುವೆ ನಿಲ್ಲು
ಬಲ್ಲೆ ನಿನ್ನ ಬಗೆಯ ರಣ | ದಲ್ಲಿ ಕೊಲುವೆನು ||147||
ಎಂದುನುಡಿಯಲಾಗಕೋಪ ||
ದಿಂದವೀರಸಿಂಹಶರವ |
ಸಂಧಿಸುತ್ತ ಬಿಟ್ಟವಾಯು || ನಂದನಗಂದು| ||148||
ತಟ್ಟ ನಂಬುತಾಗಲಾಗ |
ಸಿಟ್ಟಿನಿಂದಲನಿಲಸೂನು |
ಮುಷ್ಟಿಯಿಂದತಿವಿಯಲವನು | ಸೃಷ್ಟಿಗೊರಗಿದ| ||149||
ಹಿರಿಯ ತಾತಮೂರ್ಛಿಸಿರುವ |
ಪರಿಯನಾಭಾಂಗಾದ್ಯಾರು ||
ಅರಿತುಶರವನೆಚ್ಚರಾಗ | ಮರುತಜಾತಗೇ| ||150||
ತಾಳಿಕೋಪದಿಂದಹನುಮ |
ಬಾಲದಿಂದಸುತ್ತಿ ಬಡಿಯೆ ||
ಬೀಳೆಮೂರ್ಛೆಯಿಂದಲದರ | ಪೇಳಲೇನದ| ||151||
ಭಾಮಿನಿ
ರಾಮದೂತನಸಮರದಲಿ || ಸಂ |
ಗ್ರಾಮಕೊದಗಿದವೀರರಸುಗಳ ||
ಬೀಳಲೆಚ್ಚನುಬಲಸಹಿತ | ಮಲಗಿಸಿದಧರಣಿಯಲೀ ||
ಭೂಮಿಪತಿಸಹಿ ತೊರಗೆ ಕಾಣುತ |
ಕಾಮವೈರಿಯುನೊಂದುಮನದಲಿ |
ರಾಮಸೈನ್ಯವಮುರಿದು ಕೆಡಹುವೆ | ನೆನುತಲೈತಂದ| ||152||
ರಾಗ ಸವಾ ಏಕತಾಳ
ಈ ಪರಿಯಲಿಬಲವಳಿದುದ ಕಾಣುತ |
ಲಾಪಶುಪತಿಮನದಲಿನೊಂದು ||
ಕೋಪಿಸುತಲಿಬಲಸಹಿತೈತಂದ ರ|
ಮಾಪತಿ ಸೈನಿಕದೆಡೆಗಂದು| ||153||
ರಾಗ ಭೈರವಿ ತ್ರಿವುಡೆ
ಬಂದನಾಗಾ | ಸಾಂಬನು | ಬಂದನಾಗ |
ಬಂದನಾಕ್ಷಣರಾಮ ಸೈನ್ಯವ |
ಹೊಂದಿಸುವೆನೆಂದೆನುತವಹಿಲದಿ |
ಬಂದನಾಗ || ಸಾಂಬನುಬಂದನಾಗ| ||ಪಲ್ಲವಿ||
ಚಂದ್ರ ಕಿರಣದಕಾಂತಿರತ್ನಗ |
ಳಿಂದಮಕುಟವುಹೊಳೆಯಲು |
ಸ್ಯಂದನದಸತ್ತಿಗೆಯಮೌಕ್ತಿಕ |
ದಿಂದಜಲ್ಲಿಗಳುಲಿಯಲೂ |
ಮುಂದಲೆಯಜಡೆಯಿಂದಜಾನ್ಹವಿ |
ಬಿಂದುಗಳುಕೆಳಗಿಳಿಯಲು ||
ನಂದಿವಾಹನ ತನ್ನ ಭಕ್ತರು |
ನೊಂದರೆಂಬುದನರಿವುತಾರಘು |
ನಂದನನಸೈನ್ಯದೊಳುಕಾದುವೆ |
ನೆಂದುರೋಷದಿಮುಂದಕೈತರೆ |
ಬಂದನಾಗ | ಸಾಂಬನು | ಬಂದಾನಾಗ| ||154||
ಶಿರಗಳೈದರೊಳೆಸೆವಕಾರ್ತ |
ಸ್ವರಮಯದಕುಂಡಲಗಳು |
ಕರದಪುಟದಲಿಶೋಭಿಸುತ್ತಿಹ ||
ಪರಿಪರಿಯಮುದ್ರಿಕೆಗಳು |
ಸುರಚಿರದನವರತ್ನ ಖಚಿತದಿ |
ಮೆರುವುತಿಹಭೂಷಣಗಳೂ ||
ಪುರಹರನುಪ್ರಮಥಾದಿಗಣಗಳ |
ವೆರಸಿ ನಾನಾವಾದ್ಯಘೋಷದೊಳರೆಮಿಷದಲಿಪೊರಟುಬಂದನು ||
ಧುರವನೀಕ್ಷಿಪೆನೆನುತಭರದಲಿ |
ಬಂದನಾಗಾ | ಸಾಂಬನು | ಬಂದನಾಗಾ| ||155||
ಭಾಮಿನಿ
ಬಂದುರಣದಲಿಕಾದಿಮೂರ್ಛೆಗೆ |
ಸಂದು ಮಲಗಿದನಿಜಶರಣರನು ||
ನಿಂದುನೋಡುತಪ್ರಳಯಕಾಲದರುದ್ರನಾಗಿರಲೂ ||
ಇಂದು ಶೇಖರನಿರವಕಾಣುತ |
ಲಂದುಶತ್ರುಹನವನೆಡೆಗೆನಡೆ |
ತಂದು ಕೋಪಿಸುತಾಗಳಾ ಹರನುಡಿದನಿಂತೆಂದೂ| ||156||
ರಾಗ ಕೇತಾರಗೌಳ ಅಷ್ಟತಾಳ
ಶತ್ರುಹಕೇಳ್ಸಮರದಲಿಪುಷ್ಕಳನು ಸದ್ಭಕ್ತರ | ಗೆಲಿದಿಹನೂ ||
ಎತ್ತ ಪೋದನು ಈಗತೋರಿದರವನ | ಕೊಂದಿಕ್ಕುವೆಸಮರದಲೀ| ||157||
ಎಂದಾಗವೀರಭದ್ರನಕರದವನೊಡ | ನೆಂದನುಕೋಪಾದಲಿ ||
ಇಂದುರಣಾ ಗೈದಿಪುಷ್ಕಳನನುಜಯಿ | ಸೆಂದೆನೆಕೇಳುತ್ತಲೀ| ||158||
ವೀರಭದ್ರನುಬರಲಿತ್ತಲುನಂದಿಯ | ಮಾರುತಿಯಿದ್ದೆಡೆಗೇ|
ಧೀರಕುಶದ್ವಜನೆಡೆಗೆಪ್ರಚಂಡನ | ಮಾರಾರಿಕಳುಹಿದನು| ||159||
ಭಂಗಿಯನಾಗಸುಬಾಹುವಿನೊಳುಸುಮು ದಂಗೆಚಂಡನನೇಮಿಸಿ ||
ಗಂಗಾಧರನುಂತಿರಲ್ಕೆಪುಷ್ಕಳನಿಂನುಬಾಣಂಗಳ ನೆಚ್ಚನಾಗಾ || ||160||
ಮಡನುತ್ರಿಶೂಲವಬಿಡಲು ಖಂಡಿಸಿದನು | ನಡುವೆಪುಷ್ಕಳನದರಾ |
ತಡೆಯದೀಕ್ಷಿಸಿ ವೀರಭದ್ರಖಟ್ವಾಂಗವ | ಪಿಡಿದಡಹಾದನಾಗ ||161||
ರಾಗ ಶಂಕರಾಭರಣ ಮಟ್ಟೆತಾಳ
ವೀರಭದ್ರಭರತಸುತನೊಳಾರು | ಭಟಿಸುತೆಂದನಾಗ |
ಮಾರಹರನಸೇವಕರವಿಚಾರವರಿಯದೇ ||
ಶೂರತನದಿಗೆಲಿದುಬಂದ | ವೀರವಿಕ್ರಮವನುನಿಲಿಸಿ |
ಚಾರಿವರಿವೆನೋಳ್ಪುದೀಗಳೀರಣಾಗ್ರದಿ| ||162||
ಎಂದುಖಟ್ವಾಂಗದಿಂದ | ಲಂದುಪೊಡೆಯೆಪುಷ್ಕಳನಿಗೆ ||
ಬಂದುಶಿರಕೆತಾಗೆಮೂರ್ಛೆ | ಯಿಂದಲೊರಗಿದ| ||163||
ಒಂದುಕ್ಷಣದಿ ಚೇತರಿಸುತ | ನಿಂದುಖಟ್ವಾಂಗವನ್ನು |
ಛಿಂದಿಸಿದನು ಸಂಪ್ರತಾಪ | ದಿಂದಪುಷ್ಕಳ| ||164||
ಕೆರಳಿ ಕೋಪದಿಂದ ಭರತ | ಸುತನುವೀರಭದ್ರನಂನು ||
ಧರೆಗೆಅಪ್ಪಳಿಸಲುಎದ್ದು | ಮರಳಿಯುದ್ಧದೀ| ||165||
ಬಳಿಕ ಮಲ್ಲಯುದ್ಧದಿಂದ | ಛಲದೊಳೈದುದಿವಸತನಕ ||
ಕಲಹಗೈವುತೀರ್ದರಾಗ | ಳಲಸದೀರ್ವರೂ| ||166||
ತಳದುಕೋಪದಿಂದ ಪು | ಷ್ಕಳನುವೀರಭದ್ರನನ್ನು |
ಕಳೆದುಬಡಿದನಂದುಪಥ್ವಿ | ಗೊರಗುತಾಕ್ಷಣಾ| ||167||
ನೊಂದು ವೀರಭದ್ರ ಭರತ | ನಂದನನಚರಣಪಿಡಿದು ||
ನಿಂದು ಪಥ್ವಿಗಿಡಲು || ಮೂರ್ಛೆ | ಯಿಂದಲೊರಗಿದ| ||168||
ಬಂದುಶಿರವನಾತ್ರಿಶೂಲ | ದಿಂದಬಡಿದುವೀರಭದ್ರ ||
ಇಂದುಧರನಬಳಿಗೆಪೋದ | ನಂದುತೋಷದೀ| ||169||
Leave A Comment