ವಾರ್ಧಕ (ಅರ್ಧ)
ಮುನಿ ಋಷ್ಯ ಶಂಗರಾಮಂತ್ರಣವ ಸ್ವೀಕರಿಸಿ |
ಧನು ಶರವ ಧರಿಸುತ್ತ ಪೊರಟು ಬರೆ ವಸುಷೇಣ |
ವನದತುಳ ಪ್ರಾಕತಿಕ ಶೋಭೆಯಂ ಕಾಣುತತಿ ವಿಯದಿಂದೆರಗಿ ಮುನಿಗೆ ||210||
ರಾಗ ಮಧುಮಾಧವಿ ತ್ರಿವುಡೆತಾಳ
ಕಂದ ಬಾರೈ ಇನತನೂಭವ | ಇಂದು ರಕ್ಕಸನುಪಟಳದಿ ನಾವ್ |
ಬೆಂದಿಹೆವು ನೀ ಸುಖವನೊದಿಗಿಸು |
ಕೊಂದು ಖಳನನು ವೇಗದಿ ||211||
ಎಂದು ನೇಮಿಸೆ ರವಿಜ ತಾ ಬಲ | ವಂದು ಮುನಿಗರೆಗುತ್ತ ಪರಕೆಯ |
ಹೊಂದಿ ನಡೆದನು ಖಳನನರಸುತ |
ಮುಂದೆ ಮುಂದಕೆ ವಹಿಲದಿ ||212||
ಭಾಮಿನಿ
ಜನಪ ಕೇಳಾ ವನದೊಳು ಜರಾ |
ಮನ್ಯು ದನುಜನು ನೆಲಸಿ ಮುನಿಜನ |
ರನ್ನು ಕಂಗೆಡಿಸಿರುತ ಬೇಟೆಯೆನುತ್ತ ನಡೆತಂದು ||
ವನದಿ ನೆಲಸಿಹ ಹಂದಿ ಕಾಳ್ಮಿಗ |
ಗಣವ ಸಂಹರಿಸುತ್ತ ಬರುತಿರೆ |
ಧನುಶರವ ಪಿಡಿದತ್ತ ಸುಳಿದಿಹ ತರಳನನು ಕಂಡು ||213||
ರಾಗ ಮಾರವಿ ಅಷ್ಟತಾಳ
ಆರೆಲೊ ತರಳ | ಬಂದಿಹೆ ವನ | ಕಾರೆಲೊ ತರಳ ||ಪಲ್ಲವಿ||
ಆರೊ ಮಾರಿಯ ಹಸಿದ ಹೊತ್ತಿಗೆ | ಸಾರಿಬಂದಿಹ ಕುರಿಯ ತೆರದಲಿ |
ಭೂರಿಮದಗೊಬ್ಬಿನಲಿ ಸಾಹಸ | ತೋರಿ ಧನುಶರ ಪಿಡಿದು ಬಂದವ || ಆರೆಲೊ ||ಅ.ಪ.||
ಎಲೊ ನರಮಾಂಸವ ಮೆಲದೆ ದಿನ | ಹಲವಾಯ್ತು ನಿನಗಾಗಿ ಸುಳಿದೇ ||
ಗಳವ ಕಡಿಯುತ ರಕ್ತ ಹೀರುವೆ | ಎಲುಬು ಮಾಂಸವ ಹುರಿದು ಮುಕ್ಕುವೆ |
ಹುಲು ಮನುಜ ನೀನೆನ್ನ ತುತ್ತಿಗೆ | ಸುಳಿದು ಸಿಲುಕಿದೆ ಭಲರೆ ಭಾಪುರೆ || ಆರೆಲೊ ||214||
ರಾಗ ಮಾರವಿ ಏಕತಾಳ
ದನುಜನೆ ಕುಳೆಲೊ ಇನಿತೇಕೊರಲುವೆ | ಘನತರ ಪೌರುಷವ |
ವನದೊಳು ತಪವಿಹ ಮುನಿಗಳ ಬೆದರಿಸಿ | ಕೆಣಕಿದ ಪರಿಯಲ್ಲ ||215||
ಬೆಡಗಿನ ನುಡಿಗಳ ಬಡಬಡಿಸದೆ ನಡೆ | ಕಡುಹಿನ ನುಡಿಯೇಕೆ ||
ಬಡ ಕಿತ್ತಡಿಗಳ ನುಡಿಕೇಳುತ ಬರೆ | ಕೆಡುವೆಯ ಫಡ ಜೋಕೇ ||216||
ರಾಗ ಘಂಟಾರವ ಅಷ್ಟತಾಳ
ಬಾರೆಲೋ ಜರಾಮನ್ಯುವೆನ್ನೊಳು ಶೌರ್ಯ |
ತೋರಿದಡೆ ಶಿರಕಡಿದು ಕಾಲನ |
ಊರ ದಾರಿಯ ಪಿಡಿಸುವೆ ||217||
ಕುಟ್ಟಿ ಕೊಲ್ಲುವೆನೀಗಲೆ ತರಳನೆ |
ಅಟ್ಟಿರುವ ಮುನಿಕುಲವತರಿವೆನು |
ಸುಟ್ಟು ಸೂರೆಯ ಗೊಂಬೆನು ||218||
ಎಂದ ಮಾತನು ಕೇಳುತ್ತಲಧಿರಥಿ |
ಅಂಧಕಾರಿಯ ತೆರದಿ ಗರ್ಜಿಸಿ |
ಸಂಧಿಸಿದ ಕೂರ್ಗಣೆಯನು ||219||
ಭಳಿರೆ ಭಾಪುರೆ ಪರಮಸಾಹಸಿ ನಿನ್ನ |
ತಲೆಯ ಕಡಿದೀಡಾಡಿ ಕಾಲನ |
ನಿಳಯಕಟ್ಟುವೆ ನೋಡೆಲೋ ||220||
ಭಾಮಿನಿ
ಭಾಪೆನುತ ರವಿಜಾತ ವಜ್ರವ |
ಕೋಪದಿಂದಿಸೆದವನ ವಧಿಸಿದ |
ತಾಪಸನ ಬಳಿಗೈದಿ ನಮಿಸಲು ಎತ್ತಿ ಹರಸಿದನು ||221||
ರಾಗ ಕಾಂಭೋಜಿ ಝಂಪೆತಾಳ
ಬಲವಂತ ನೀನೆನಿಸಿ ಭುವಿಯೊಳಗೆ ಪೆಸರಾದೆ |
ಕಲಿಗಳೊಳಗಿದಿರಿಲ್ಲ | ಮೆಚ್ಚಿದೆನು ರವಿಜ ||
ಖಳನ ಕೊಂದೆಮ್ಮ ತಪ | ನಿಳಯವನು ರಕ್ಷಿಸಿದೆ |
ಒಲಿದೀಗ ನಾನಿನಗೆ ವರವೀವೆ ಕೇಳು ||222||
ಆದರಣೆ ಬುಧರ, ನೂರೈದು ಮಕ್ಕಳು, ಸತತ |
ಬೇಡಿದುದ ತಾನೀವ ವರಚಾಗ ಬುದ್ಧಿ ||
ಭೂಧವನ ಸಖತನವು | ಮಾಧವನ ದರುಶನವು |
ಕಾದಿ ಮಡಿವೆಡೆಯಹುದು ವೀರವಿಖ್ಯಾತ ||223||
ಕಂದ
ಇಂತಾ ಮುನಿಪತಿ ಹರಸಲು |
ಸಂತಸಿಂದೆರಗುತ ರವಿಜನು ಬೀಳ್ಕೊಳುತಾಗಂ ||
ಸ್ವಂತಾಶ್ರಮಕೈದಿರೆ ಸುರಪಾ |
ಲಂ ತಳೆಯುತ ಬುಧವೇಷವ ನಡೆತರುತೆಂದಂ ||224||
ರಾಗ ದೇಶಿ ಅಷ್ಟತಾಳ
ಕೇಳಯ್ಯ | ವೀರ | ಕೇಳಯ್ಯ ||ಪಲ್ಲವಿ||
ಕೇಳಯ್ಯ ವೀರ ನಾ ಪೇಳುವ ಮಾತ ||
ಕೇಳಿ ಬಂದೆನು ನಿನ್ನ ಬಳಿಗೆ ವಿಖ್ಯಾತ ||ಅ.ಪ.||
ಹಿಂದೆ ದಧೀಚಿ ಶಿಬಿ ನಪವರರು |
ಬಂದರು ಕಷ್ಟವ ದಾನ ಗೈದಿಹರು ||
ಇಂದು ನೀನವರಿಗೆ ಕಿರಿಯನಲ್ಲೆಂದು ||
ಬಂದಿಹೆ ಮನದಿಷ್ಟ ಕೊಡು ದಯಾಸಿಂಧು ||225||
ಕೊಡುವೆಯಾದರೆ ಕೊಡು ಕರ ನಂಬುಗೆಯ |
ನುಡಿವೆನು ನಂತರ ಎನೆ ರವಿ ತನಯ ||
ಕೊಡಲು ನಂಬುಗೆಯ ಭೂಸುರನು ಸಂತಸದಿ |
ಕೊಡು ಕವಚವ ತರಿದೆನಗೆನೆ ಭರದಿ ||226||
ಭಾಮಿನಿ
ಪೃಥ್ವಿಸುರನಿಂತೆನಲು ರವಿಜನು |
ಮತ್ತೆ ಯೋಚನೆಗೈದ ತನ್ನೊಳು |
ಮಿಥ್ಯ ಭೂಸುರನಿವನು ಯನ್ನನು ಪರಿಕಿಸಲು ಬಂದ ||
ಉತ್ತಮನು ಇವನಾರೆಯಾಗಲಿ |
ಕತ್ತರಿಸಿ ಕವಚವನು ಕೊಡವೆನೆ |
ನುತ್ತ ಧಾರೆಯನೆರೆದ ದಾನಿಗಳರಸ ರವಿಜಾತ ||227||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಮತ್ತೆ ಸೂತಜ ಹಿರಿದು ಖಡ್ಗವ |
ಕತ್ತರಿಸಿ ತೆಗೆದಾಗ ಕವಚವ |
ನಿತ್ತ ಸಹನೆಯನೇನೆನಲಿ ನೊರೆ | ನೆತ್ತರೊಸರೆ ||228||
ಭಾಪು ಮಝರೇ ದಾನಶೂರನೆ |
ಈ ಪರಿಯೊಳಿತ್ತವರ ಕಾಣೆನು |
ತಾಪ ಗಾಯಗಳ್ಮಾಣಲೆನ್ನುತ | ತಾ ಪರಸಿದ ||229||
ದಾನಿ, ನಿನ್ನ ಪರೀಕ್ಷಿಸಿದೆ ಸುರ |
ಪಾನು ಮೆಚ್ಚಿದೆನಿದಕೊ ಶಕ್ತಿಯ |
ನೀನೆಸೆಯೆ ಕೊಲುತೊಬ್ಬನನು ಬಹು | ದೆನ್ನ ಬಳಿಗೆ ||230||
ಎತ್ತಿದನು ಮಣಿದವನ, ಕರ್ಣ, ವಿ |
ಕರ್ತನಾದಿಯ ನಾಮದಲಿ ಮೆರೆ |
ಯುತ್ತ ಬಾಳೈ ಕಂದನೆನ್ನುತ | ಮಾಯವಾದ ||231||
ಇತ್ತ ಕರ್ಣನು ಪರ್ಣಶಾಲೆಯ |
ನಿತ್ತು ಬುಧರಿಗೆ, ಸಿಂಧುದೇಶಕೆ |
ನುತ್ತ ಬರೆ ನಪ ಪೇಳ್ದ ಪೋಗಿಭ | ಪುರಿಗೆ ನೀನೂ ||232||
ಸುತ ಜಯದ್ರಥನಿಹನು ವಿದ್ಯೆಯ |
ಜತೆಯೊಳ್ ನೀ ಕಲಿಯೆನಲು ಬಂದಿರೆ |
ಕ್ಷಿತಿಪ ಸುತ ದುಃ | ಶ್ಶಾಸ ಬೇಟೆಗೆ | ನಡೆದ ವನದಿ ||233||
ರಾಗ ತುಜಾವಂತು ಏಕತಾಳ
ಬಂದ ದುಶ್ಶಾಸ ಬೇಟೆಗೆಂದು | ಆನಂದದಿಂದ |
ಬಂದಾ ದುಶ್ಶಾಸ ಬೇಟೆಗೆಂದು ||ಪಲ್ಲವಿ||
ಬಂದನಾಗ ಮಗ | ವಂದವ ಹುಡುಕುತ |
ಮುಂದರಿಯುತ ಶರ | ಸಂಧಿಸಿ ವನದೊಳು || ಬಂದಾ ||ಅ.ಪ||
ಕರಿ ಶಾರ್ದೂಲ ವರಾಹವ ಹುಲಿಗಳ |
ಹರಿಣಂಗಳ ತರಿದೊರಗಿಸಿ ಧರೆಯೊಳು || ಬಂದಾ ||234||
ಭಾಮಿನಿ
ಕಾಡಿನೊಳು ದುಶ್ಶಾಸ ಬೇಟೆಯ |
ನಾಡುತಾಡುತ ಮುಂದೆ ಬರುತಿರೆ |
ನೋಡಿದನು ಕೇಸರಿಯನಾಕ್ಷಣ ಧನುವನೊದರಿಸುತ ||
ಜೋಡಿಸಿದಶರಗಳನು ಎಸೆಯುತ |
ಲೋಡಿಸುತ ಬರುತಿರಲು ಕೇಸರಿ |
ಗಾಢ ಗರ್ವದಿ ಕೆರಳಿ ಗರ್ಜಿಸತೊಡಗಿತೇನೆಂಬೆ ||235||
ರಾಗ ಮಾರವಿ ಏಕತಾಳ
ಕರಕರ ದಂತವ ಕಡಿಯುತ ಕೇಸರಿ | ಧರೆ ನಡುಗುವ ತೆರದಿ ||
ಕೆರಳುತ ಶರಗಳ ಮುರಿಯುತ ಗರ್ಜಿಸಿ | ತಿರುಗಿತು ರೋಷದಲಿ ||236||
ಸಾಣೆಯಶರಗಳನೆಸೆಯಲು ಕೇಸರಿ | ಮಾಣದೆ ಮುಂದರಿಯೆ ||
ಕಾಣುತ ಮುಸುಲ ಭಶುಂಡಿಯ ಮುದ್ಗರ ಜಾಣತನದೊಳೆಸೆದ ||237||
ಶರಗಳ ಲಕ್ಷಿಸದೆರಗಲು ಬರುತಿಹ | ಹರಿಯನು ಕಾಣುತಲಿ ||
ಥರಥರ ನಡುಗಿದ ಗತಿಯೇನೆನುತಲಿ | ಮರಣದ ಭೀತಿಯಲಿ ||238||
ಅನಿತರೊಳಲ್ಲಿಗೆ ಹರಿ ಮೊರೆಯಾಲಿಸು | ತಿನಜನು ನಡೆತಂದು ||
ಕನಲಿದ ಹರಿಯನು ಬೆದರಿದ ನಪತನು | ಜನ ಇರವನು ಕಂಡು ||239||
ಶರಗಳನೆಸೆಯುತ ಹರಿಯೊಳು ಕಾದಿದ | ಪರಿಗಳನೇನೆಂಬೆ ||
ಪರಿಪರಿ ಗರ್ಜಿಸಿ ಯೆರಗಲು ಬರುತಿಹ | ಹರಿಯನು ತಡೆದೆಂದ ||240||
ರಾಗ ಭೈರವಿ ಏಕತಾಳ
ಭಳಿಭಳಿರೆಲೆ ಬಡಸಿಂಹ | ಕಾ | ಡೊಳು ಬಡಮಗ ಹಿಡಿತಿಂಬ ||
ಬಲು ತರ ಹೆಮ್ಮೆಯ ಬಳಸೀ | ಬರೆ | ಕೊಲುವೆನು ಶರಗಳ ಚಲಿಸೀ ||241||
ಮೊರೆಮೊರೆದಳಲುವದೇಕೆ | ಮುಂ | ದರಿದರೆ ಕೊಲುವೆನು ಜೋಕೆ ||
ಥರ ಥರ ಶರಗಳ ಸುರಿದ | ಕೇ | ಸರಿ ಬಾಲವ ತುಂಡರಿದ ||242||
ಕೆರಳಿತು ಹರಿ ಹರನಂತೆ | ಮುಂ | ಬರಿಯಿತು ವರ ಖಗನಂತೆ ||
ಸರಿದನು ತಪ್ಪಿಸುತಾಗ | ಬಲು | ಶರದಿಂ ಕೊಂದನು ಬೇಗ ||243||
ಭಾಮಿನಿ – ಅರ್ಧ
ಹರಿಹರಣವಳಿಯಲ್ಕೆ ಕರ್ಣನ |
ಸರಿಸಕೈದುತೆ ನುಡಿದನು ಭಯ |
ಭರಿತ ಭಕ್ತಿಯಲೊಂದಿಸುತ ದುಶ್ಶಾಸನನು ತಾನೂ ||
ರಾಗ ಕಾಂಭೋಜಿ ಝಂಪೆತಾಳ
ಆರು ನೀನೆಲೆ ವೀರ ಸಾರಿರುವುದೆಲ್ಲಿಂದ |
ಭೂರಿ ಕರುಣಾನ್ವಿತನೆ ಗುಣನಿಧಿ ನಿನ್ನ ||
ಚಾರು ಕುಲ ಶೀಲಾದಿ ತಿಳಿಯಲಾಶಿಸುವೆ |
ಸಾರಿಯುಳುಹಿದೆ ಕರುಣದಿ ಈಗಲೆನ್ನ ||244||
ಕುರುಕುಲಾಂಬುಧಿ ಚಂದ್ರ ದುರಿಯೋಧನನ ತಮ್ಮ |
ಕರೆವರೈ ದುಶ್ಶಾಸನಾಖ್ಯನೆಂದೆನುತಾ ||
ಗುರು ಕುಲದಿ ವಿದ್ಯೆಯನು ಪಠಿಸುತಿರೆ ನಾನೋರ್ವ |
ತೆರಳಿಬಂದೆನು ಉತ್ಸಹದಿ ಬೇಟೆಗೆನುತ ||245||
ಊರೇನು ಕಾಡೇನು ನತದಷ್ಟ ನಾನೊಬ್ಬ |
ಸಾರಿದೆನು ಗತಿಹೀನ ಊರೂರತಿರುಗಿ ||
ಭೂರಿಕಷ್ಟವ ಹೊಂದಿ ಜೀವನದ ಬೇಸರದಿ |
ಸಾರೆ ವನದೊಳಗಿಂದು ತವ ಭೇಟಿಯಾಯ್ತು ||246||
ಹರಣವುಳುಹಿದ ನಿನ್ನ ಶರಣನಾಗಿಹೆನೆನ್ನ |
ಪರಮಾನುಗ್ರಹ ತೋರಿ ಅರಮನೆಗೆ ಬಂದು ||
ಪರಮ ತೋಷವಗೊಳಿಸಿ ತೆರಳಬೇಹುದು ಎನುತ |
ಕರೆದೊಯ್ದನಂಧನಪ | ತನುಜಾತ ಮನೆಗೆ ||247||
ಕಂದ
ಅರಮನೆಗೈತರಲುಭಯರು |
ದುರಿಯೋಧನನಿಗೆ ನಮಿಸಲು ತೋಷದೊಳಾಗಂ ||
ಪರಿಚಯ ಕೇಳಲು ಕರ್ಣನ |
ವರ ದುಃಶ್ಯಾಸನನೊರೆದನು ನಡೆದಿಹ ಪರಿಯಂ ||248||
ಸಾಂಗತ್ಯ ರೂಪಕತಾಳ
ಅಣ್ಣ ಕೇಳೆಲೊ ನಾನು | ನಿನ್ನೆ ಬೇಟೆಗೆ ಪೋದ |
ರಣ್ಯದೊಳಿಹುದೊಂದು ಸಿಂಹ |
ತಿನ್ನುವೆನೆನ್ನುತ ಕ್ರೋಧದಿ ಬರೆ ಕೊಲು |
ತೆನ್ನನುಸಲಹಿದನೀತ ||249||
ಯಾರೆಂದರೊರೆಯನು | ದಾರಿಹೋಕನ ತೆರ |
ತೋರಿದೆ ಬೇಸರ ಜಗದಿ ||
ಭಾರಿ ಒತ್ತಾಯದಿ ಕರೆತಂದೆನಿಲ್ಲಿಗೆ |
ವೀರನಿಂಗೆಣೆಗಾಣೆ ನಾನು ||250||
ಯಾರಯ್ಯ ವೀರ ನಿನ್ನಯ ಕುಲ ಪೇಳದ |
ಭೂರಿ ಕಷ್ಟಗಳೇನು ನಿನಗೆ ||
ಯಾರಲ್ಲಿ ಕಲಿತೆ ನೀ ಬಾಣವಿದ್ಯೆಯನೆನೆ |
ಸೂರ್ಯನ ಸುತನಾಗ ನುಡಿದ ||251||
ಭಾಮಿನಿ
ಕುರುವರನೆ ಲಾಲಿಪುದು ಸೂತಜ |
ಪರಮ ವಿದ್ಯೆಯ ಕಲಿವೆನೆನ್ನುತ |
ಪರಶುಧರನನು ಸೇರಿ ಸೇವಿಸಿ ಕಲಿತೆ ವಿದ್ಯೆಗಳ ||
ಪರಮ ಗೌರವದೊರಕದದರಿಂ |
ತೊರೆದು ಸಂಯಮ ವನವ ಸೇರಿದೆ |
ಹರಿಯ ತುತ್ತಿನೊಳಿರುವ ನಿನ್ನಯ ಸಹಜನನು ಕಂಡೇ ||252||
ರಾಗ ರೇಗುಪ್ತಿ ಅಷ್ಟತಾಳ
ಎಂದ ನುಡಿಗಳ ಕೇಳಿ ಕೌರವನು | ಮನದೊಳಗೆ ಯೋಚಿಸು
ತೆಂದನಿವನಿಂ ಪಾಂಡುಸುತರನ್ನು ||
ಹೊಂದಿಸುವೆ ನಾ ಯಮನ ಪುರವನ್ನು | ಶಸ್ತ್ರಾಸ್ತ್ರದಲ್ಲಿವ |
ನಿಂದ್ರಸುತನಿಮ್ಮಿಗಿಲು ಭಯವೇನು ||253||
ಅನುಜನನು ನೀನೊಲಿದು ಸಲಹಿರುವೇ | ನಿನ್ನಯ ಋಣವ |
ನೆನಿತು ತೀರಸಲಯ್ಯ ಎನ್ನಳವೇ ||
ಅನುಜರಾ ತೆರನಿಹುದು ನಮ್ಮೊಡನೆ | ಕುಲ ಹುಟ್ಟನೆಲ್ಲ |
ವೆಣಿಸುವವರಾವಲ್ಲ ನೋಡ್ನೀನೇ ||254||
ಕಂದ
ತಳೆಯುತ ಕರ್ಣಾನಂದವ |
ಗೆಳೆತನದಿಂದಿರೆ ಕಲಶಜ ಭೀಷ್ಮನ ಬಳಿಗಂ ||
ಸುಳಿಯುತಲೊರೆದನು ತರಳರು |
ಕಲಿತಿಹ ವಿದ್ಯೆಯ ಪರಿಕಿಪುದೆನಲಾ ನದಿಜಂ ||255||
ರಾಗ ಸೌರಾಷ್ಟ್ರ ತ್ರಿವುಡೆತಾಳ
ವರಮುಹೂರ್ತವನಿರಿಸಿ ಬಯಲಲಿ | ಭರದಿ ಸನ್ನಹಗೈದು ತರಳರ |
ಹಿರಿಯರನು ಕರೆಸುತ್ತ ಮನ್ನಿಸೆ | ಸರುವರನ್ನು ||256||
ಭರದಿ ಭಾರದ್ವಾಜ ಬಂದನು | ಪರಮ ಶಿಷ್ಯರ ಗಡಣದೊಂದಿಗೆ |
ಸರುವ ಜನ ಗೌರವದಿ ನಮಿಸಿದ | ರ್ಗುರುವರಂಗೆ ||257||
ಸ್ವೀಕರಿಸುತಲಿ ಪರಮ ಗೌರವ | ತಾ ಕರೆದು ಶಿಷ್ಯರಿಗೆ ಪೇಳಿದ |
ನೀವ್ಕಲಿತ ಶರವಿದ್ಯೆ ತೋರಲು | ಬೇಕು ಈಗಾ ||258||
ಎನಲು ಧರ್ಮಜನೆದ್ದು ನಮಿಸುತ | ಧನು ಶರವಗೊಂಡಾಗ ಸಾರ್ದನು |
ಅನಿಮಿಷರು ಪೊಗಳಲ್ಕೆ ವಿದ್ಯವ | ನೇನನೆಂಬೆ ||259||
ಆನೆ ಕುದುರೆಯನೇರಿ ತೋರಿದ | ಬಾಣ ಮುದ್ಗರ ಕುಂತ ಖಡುಗದಿ |
ಜಾಣನಿವಸರಿಯೆಂದು ಪೊಗಳಲು | ತಾನೆ ಸರಿದ ||260||
ಭರದಿ ದುಃಶ್ಯಾಸನನು ಬಂದನು | ವರವರೂಥವನೇರಿ ತೋರಿದ |
ಸರಳು ಗದೆ ಖಡುಗಾದಿ ವಿದ್ಯಾ | ಪರಿಣತೆಯನು ||261||
ರಾಗ ಮಾರವಿ ಏಕತಾಳ
ಬಂದನು ಭೀಮ ಭಯಂಕರ ವೇಗದಿ | ಸಂದಿಸಿ ಶರವಂದಾ ||
ಸ್ಯಂದನ ಕರಿಹಯವೇರುತ ತೋರಿದ | ವಂದಾರಕರೆಲ್ಲ ||262||
ಭಳಿಭಳಿರೆಂದೆನೆ ಗದೆ ಖಡ್ಗಾಯುಧ | ಗಳ ಪರಿಣತೆಯಿಂದ ||
ಇಳೆಯೊಳಗಿವಗೆಣೆಯಿಲ್ಲೆ ಪರಶಿವ | ನಿಳೆಯೊಳಗುದಿಸಿದನೇ ||263||
ಎಂಬುವ ಸಮಯದಿ ದುರ್ಯೋಧನ ತಾ | ಮುಂಬರಿದಾಯುಧದೀ ||
ತುಂಬಿದನಂಬರ ಭೂಮಿಯ ಜನರಲಿ | ತುಂಬಿತು ಭಯಭೀತಿ ||264||
ಗದೆಯನು ತಿರುಹಿದ ಖಡುಗವ ಝಳಪಿಸು | ತೊದರಿದ ಕೇಳೆಲವೊ ||
ಮದ ಮುಖ ಭೀಮನೆ ಒದಗೈ ಯುದ್ಧಕೆ | ಬೆದರದೆ ಬಾ ಮುಂದೆ ||265||
ರಾಗ ಘಂಟಾರವ ಅಷ್ಟತಾಳ
ಎಂದ ಮಾತಿಗೆ ಕನಲಿ ಭೋರ್ಗರೆಯುತ್ತ |
ಅಂಧಕಾತ್ಮಜ ನಿಲ್ಲು ನಿಲ್ಲೆಲೊ | ಕೊಂದು ನಿಮಿಷದಿ ||266||
ಹುಂಬ ಭೀಮನೆ ಬಂದೆಯೊಳ್ಳಿತು ಕೇಳು |
ತಿಂಬಡಿಹುದೇನಿಲ್ಲ ಮತ್ತಿಕೆ | ತುಂಬುವೆನು ನಿನ್ನೊಡಲಲಿ ||267||
ಗರಳವಿಕ್ಕಿದೆ ಪಾಪಿ ನೀ ಜಲದಲ್ಲಿ |
ಉರುಳಿಸಿದ ಫಲ ತೋರಿ ಕೊಡುವೆನು | ಕರುಳು ತೆಗೆವೆನು ನಿಲ್ಲೆಲೊ ||268||
ಕಂದ
ಮದ್ದಾನೆಗಳಂದದಿ ಬಲು |
ಕ್ರುದ್ಧತೆಯಿಂದ ಮುಂದೊತ್ತುವ ತರಳರ ತಡೆದುಂ ||
ಉದ್ದಟತನ ಬಿಡಿರೆನುತಲಿ |
ಗದ್ದರಿಸಿದರಾ ಭೀಷ್ಮದ್ರೋಣರು ಜಡಿದುಂ ||269||
ರಾಗ ಪಂತುವರಾಳಿ ಮಟ್ಟೆತಾಳ
ಸುರಪಸುತನ ಕರೆಯಲಾಗ | ಗುರುವ ನದಿಜ ಮಾತೆ ಸಹಜ
ಸುರರಿಗೆರಗಿ ಧನುವ ಪಿಡಿದು | ಶರಸವ್ಯಾಪಸವ್ಯದಿಂದ |
ತರಿದ ಯಂತ್ರ ಶಬ್ದವೇಧಿಯ |
ತೋರ್ದನರರೆ | ಪರಮವ್ಯೆಹ ಬೇಧ ರಚನೆಯಾ ||270||
ನರನು ರಥವ ಕರಿಯ ಹರಿಯ | ಭರದೊಳೇರಿ ರಣವ ಮಾಳ್ಪ |
ಸರುವಶಸ್ತ್ರ ತೊಡುವ ಬಿಡುವ | ತಿರುಹು ಮುರುಹಿನಿಂದ ಸರಿವ |
ಧುರದ ಸಕಲ ರೀತಿ ತೋರಿದಾ || ಅಗ್ನಿಯನಿಲ |
ಉರಗ ವರುಣ ಗರುಡ ತಿಮಿರವಾ || ಎಸೆದು ಕಡಿವ
ಪರಿಯ | ತೋರಿ ಭ್ರಮೆಯಗೊಳಿಸಿದಾ || ದಿವ್ಯ ಮಂತ್ರ | ಶರವೆಸೆದುಪಸಂಹರಿಸಿದಾ ||
ಪರಿಯ ಪೊಗಳಿ | ಸುರರು ಸುರಿಯೆ ಮಳೆಯ ಪುಷ್ಪದಾ ||
ಭಾಪು ಮಝರೆ | ಧರೆಯೊಳಿಲ್ಲ ಎಣೆಯು ಎನುವದಾ ||271||
ರಾಗ ಕೇತಾರಗೌಳ ಝಂಪೆತಾಳ
ಕೇಳಿ ಕನಲಿದ ಕರ್ಣನು | ಮುಂಬರಿದು | ತಾಳಿರೈ ನಾ ತೋರ್ಪೆನು ||
ಪೇಳಿ ಬಳಕುತ್ತಮರನು | ಬರಿದೆ ಚ | ಪ್ಪಾಳಿಕೆಯನಿಕ್ಕಲೇನು ||272||
ನರನು ತೋರಿದ ರೀತಿಯ ಸರ್ವಾಸ್ತ್ರ | ಗುರಿಯೆಸೆದು ತರಿದ ಪರಿಯ ||
ಪರಿಕಿಸುತ ಜನರಿವನನು | ಪಾರ್ಥನಿಗೆ | ಸರಿ ಜೋಡಿ ಎನೆ ಕರ್ಣನು ||273||
ಬಾರೊಬಾರೆಲವೊ ಪಾರ್ಥಾ | ಎನ್ನೊಡನೆ | ತೋರು ವಿಕ್ರಮ ಯಥಾರ್ಥ ||
ಧೀರನಾದೆಡೆ ರಣವನು | ಮಾಡೆನಲು | ತೋರಿ ಕೋಪವ ಭೀಮನೂ ||274||
ರಾಜಪುತ್ರನು ಪಾರ್ಥನು | ನೀ ಕಾದೆ | ರಾಜನಾವನ ಜಾತನು |
ಮಾಜದುಸುರೆಲೊ ಕುಲವನು | ಬಾಯ್ಬಡಿಕ ಆಜಿ ನಿನಗೇಕೆಂದನು ||275||
ಸೂತನಧಿರಥಜಾತನೆ | ದ್ವಂದ್ವ ನಿನಗೇತಕೆಲೊ ಬರಿ ಭ್ರಾಂತನೆ ||
ಪೂತ ಶಶಿವಂಶಜರೊಳು | ಸರಿಸಾಟಿ | ಸೂತನಿಗೆ ಸರಿಯೆ ಮರುಳು ||276||
ಭಾಮಿನಿ
ವಾತಸುತನೀ ತೆರದಿ ನಿಂದಿಸೆ |
ಸೂತಸುತನವಮಾನದಿಂದಲಿ |
ಭೂತಳಕೆ ವೆಸನಾತಿರೇಕದಿ ದೊಪ್ಪನುರುಳಿದನು ||
ಕಾತರಿಸಿ ಕಡುನೊಂದು ಶಿವಶಿವ |
ಜಾತಿಯೊಳಗೇನುಂಟು ಕಾಣೆನು |
ಪೂತವಿರೆ ಗುಣ ಸಾಲದೇ ಗುಣಹೀನನುತ್ತಮನೆ ||277||
ಕುಲವೆ ಎನಗೆ ಕುಠಾರವಾದುದು |
ನೆಲಕೆ ಭಾರಕನಾದೆ ಜೀವಿಸಿ |
ಫಲವ ಕಾಣೆನು ಮಾನವಿಲ್ಲದ ಹರಣವಿನ್ನೇಕೆ ||
ಕಳೆವೆನೆನ್ನುತಲಳುವ ಮಿತ್ರನ |
ಬಳಿಯ ಸಾರಿದು ನುಡಿದ ಕುರುವರ |
ನಳಲದಿರು ನಾ ಕಾವೆ ನಿನ್ನಯ ಮಾನಹರಣಗಳಾ ||278||
ರಾಗ ಮಾರವಿ ಏಕತಾಳ
ಕೇಳಿರಿ ಭೀಷ್ಮ ದ್ರೋಣ ಯುಧಿಷ್ಟಿರ | ಖೂಳ ವಕೋದರನೆ ||
ಕೇಳಿರಿ ಭೂಪಾಲಕ ದಿಕ್ಪಾಲರೆ | ಶೂಲಿಯ ಸಮನಿವಗೆ ||279||
ಭೂತಳಕಧಿಪತಿಯಾದಡೆ ಈತನ | ಸೂತಜನೆನಲುಂಟೆ ||
ಖ್ಯಾತಿಯ ಅಂಗಧರಾತಳದೊಡೆತನ | ಈ ತಕ್ಷಣವಿತ್ತೆ ||280||
ಹೊಡಿಸೈ ಡಂಗುರ ಕರೆಸೈ ಬುಧರನು | ತೊಡಿಸೈ ಭೂಷಣವ ||
ಇಡುವೆ ಕಿರೀಟವನೆನೆ ದುಃಶ್ಶಾಸನ | ಹೊಡೆಸಿದ ಡಂಗುರವ ||281||
ಭಾಮಿನಿ
ಅರಸ ಕೇಳೈ ಬಳಿಕ ಕೌರವ |
ತರಿಸಿ ಸಿಂಹಾಸನವನೇರಿಸಿ |
ಕರೆಸಿ ಬುಧರಭಿಷೇಕಗೈಸಿದ ಸುರರುಘೇಯೆನಲೂ ||
ತರುಣಿಯರು ತಾವ್ಬೆಳಗೆಯಾರತಿ |
ಪರಮ ಸಂತಸ ಹೊಂದಿ ಕರ್ಣನು |
ಕುರುವರನ ಪದಕೆರಗಿ ನುಡಿದನು ಭಾವಶುದ್ಧಿಯಲೀ ||282||
ರಾಗ ಸೌರಾಷ್ಟ್ರ ತ್ರಿವುಡೆತಾಳ
ತಾಯಿ ತಂದೆಯನರಿಯೆನೆನ್ನಯ | ಕಾಯುತುಳುಹಿದೆ ಮಾನಹರಣವ |
ತಾಯಿ ತಂದೆಯು ಗುರುವು ಬಂಧುವು | ರಾಯ ನೀನೇ ||283||
ಸಾಯುತಿದ್ದಿಹ ತನುವು ನಿನ್ನಯ | ಕಾರ್ಯಕಿಂದಿಂ ಮೀಸಲಾ ಕೌಂ |
ತೇಯರಾದರು ಜನ್ಮ ಶತ್ರುಗಳ್ | ರಾಯ ಕೇಳೂ ||284||
ಆಯಿತಿದು ಭೂಭಾರ ಹರಣಕೆ | ರಾಯ ಮಾರ್ಗವಿದೆಂದು ಕಮಲದ |
ಳಾಯತಾಕ್ಷನ ನೆನೆದರಮರರು | ಘೇಯೆನುತ್ತಾ ||285||
ರಾಗ ಕಾಂಭೋಜಿ ಝಂಪೆತಾಳ
ಇಂತಿರುವ ಕಥನವನು ಕಂತುಪಿತ ದಯದಿಂದ |
ಮುಂತೋರಿಯನ್ನ ಕೈಪಿಡಿದು ಬರೆಸಿದನು ||
ಅಂತು ದುರ್ಮುಖಿ ಭಾದ್ರಪದ ಶುದ್ಧದಷ್ಟಮಿಗೆ |
ಅಂತ್ಯವಿಸಿ ಸಂತವಿಟ್ಟನು ದೇವನೆನ್ನ ||286||
ಹಿರಿಯಡಕ ಶ್ರೀ ವೀರಭದ್ರನಾ ಕಪೆಯೊಳಿಹ |
ಹಿರಿಯ ಶಾಲೆಯೊಳಿರುವ ವರ ಸಹಾಯಕನು ||
ಬರೆದೆ ಸೀತಾನದಿಯ ಗಣಪಯ್ಯ ಶೆಟ್ಟಿಯಿದ |
ನಿರಲು ತಪ್ಪನು ತಿದ್ದಿ ಬುಧಜನರು ಮೆರಸೀ ||287||
ಮಂಗಲ ಪದ
ಮಂಗಲಂ | ಜಯ | ಮಂಗಲಂ ||ಪಲ್ಲವಿ||
ಮಂಗಲ ವೇದೋದ್ಧಾರನಿಗೆ | ಮಂಗಲ ಕೂರ್ಮ ವರಾಹನಿಗೆ ||
ಮಂಗಲ ನರಹರಿ ವಾಮನಗೆ ಮಂಗಲ ಭಾರ್ಗವ ರಾಮನಿಗೆ ||288||
ಮಂಗಲಹಲ್ಯೋದ್ಧಾರನಿಗೆ | ಮಂಗಲ ವೇಣುವಿನೋದನಿಗೆ ||
ಮಂಗಲ ಬೌದ್ಧಗೆ ಕಲ್ಕ್ಯನಿಗೆ | ಮಂಗಲ ಹತ್ತವತಾರನಿಗೆ || ಮಂಗಲಂ ||289||
ಮಂಗಲಂ ಗಣಪತಿ ದೇವನಿಗೆ | ಮಂಗಲ ವೀರಭದ್ರನಿಗೆ ||
ಮಂಗಲಂ ಗಣಪತಿ ದೇವನಿಗೆ | ಮಂಗಲ ವೀರಭದ್ರನಿಗೆ ||
ಮಂಗಲ ಪದ್ಮನಾಭನಿಗೆ | ಮಂಗಲ ಉಡುಪಿ ಶ್ರೀಕೃಷ್ಣನಿಗೆ ||
ಮಂಗಲಂ | ಜಯ | ುಂಗಲಂ ||290||
* * *
Leave A Comment