ರಾಗ ಮಾರವಿ ಏಕತಾಳ
ತಿರುಗಿ ಸಕಲ ನಪರೀಕ್ಷಿಸುತಿವನನು |
ಬಿರುನೆಯಿಂದುಸಿರಿದರು ||
ಮರುಳೊ ಜಡನೊ ಬಹನಾರೀತನು ಭೂ |
ಸುರವೇಷದ ಸುರಪತಿಯೊ ||367||
ನಾವೇ ಮರುಳುಗಳಕಟ ಮನ್ಮಥನ ಶ |
ರಾವಳಿಯೆಸುಗೆಗಳುಕದ ||
ಭಾವಿಕರಾರೆಂದರು ಭೂಪಾಲರು |
ತಾವು ಮನದಿ ನಗುತ ||368||
ಧನುವ ನೆಗಹುವಡೆ ಶಾಲಗ್ರಾಮವೊ |
ಕೊನೆದರ್ಭೆಯೊ ಸಮಿಧೆಗಳೊ ||
ವಿನುತದುಪಾಸನಸವನಿಯೊ ಮಝರೆಂ |
ದೆನುತಿರ್ದರು ನಪತಿಗಳು ||369||
ರಾಗ ತೋಡಿ ಅಷ್ಟತಾಳ
ಮುಂದೈದುತಿಹ ಪಾರ್ಥನಂದವೀಕ್ಷಿಸಿ ಸಖಿ |
ವಂದ ದ್ರೌಪದಿಯೊಡನೆ ||
ಎಂದರು ನೋಡೆಲೆ ಚಂದಿರಮುಖಿ ನವ |
ಕಂದರ್ಪನೀತನಲ್ಲೆ ||370||
ಕುಲದಲುತ್ತಮನೈಸೆ ವಿಪ್ರನು ಮತ್ತಿವ |
ನಳುಕದೆ ಧನುವನೆತ್ತೆ ||
ಸಲೆ ಮತ್ಸ್ಯಯಂತ್ರವನೆಸುವ ಗಡೆಂದರು |
ಒಲಿದು ದ್ರೌಪದಿಯೊಡನೆ ||371||
ಎನೆ ಕೇಳಿ ತಲೆಗುತ್ತಿ ನಾಚಿಯುಂಗುಟದಿ ಮೇ |
ದಿನಿಯನ್ನು ಬರೆಯುತಿರೆ ||
ವನಿತೆ ನೋಡಮಲ ವಿಭೂತಿಯ ಸ್ಮರದರ್ಭೆ |
ಯಿನಿತೆಲ್ಲ ಬೇಗೆಂದರು ||372||
ಚೆಲುವ ಮನ್ಮಥ ಧೋತ್ರದಮಲ ಕಷ್ಣಾಜಿನ |
ದಲರಂಬ ನೋಡೆ ನಿನ್ನ ||
ಒಲಿಸುವನೀಗಲೆ ನಾಚಿಕೆಯಾದರೆ |
ತಲೆವಿಡಿದಪೆವೆಂದರು ||373||
ಇದೊ ನೋಡು ವೀರ ಹಲಾಯುಧ ವಿಪ್ರಮ |
ಧ್ಯದಿ ಬಹ ಪಾರ್ಥನನು ||
ವಿದಿತ ಮೇಘದ ಹೊದಕೆಯ ರವಿಯದೆ ವಿಪ್ರಾಂ |
ಗದ ಸವ್ಯಸಾಚಿಯನು ||374||
ವಸುದೇವನಾಣೆ ತೋರುವೆನೆಂದ ಮಾತಿಗೆ |
ಹುಸಿದೆನೆ ನೋಡು ಹಿಂದೆ ||
ವಸುಧೆಪಾಲಕ ಭೀಮಾದ್ಯರು ಕುಂತಿ ಸಹ ವಿಪ್ರ |
ವಿಸರದೊಳಿಹರೆಂದನು ||375||
ಭಾಮಿನಿ
ಮದನಪಿತನಿಂತೆನಲು ಸೀರಾ |
ಯುಧನು ನಸುನಗುತೆಂದನೆಂತಿದ |
ರುದಿತವನು ತಿಳಿದಿರ್ಪೆ ಬಹುಮಾಯಕನು ನೀನೆನುತ ||
ಮುದದಿ ಫಲುಗುಣನಿತ್ತ ವಿಪ್ರರ |
ಸುದತಿಯರ ಭೂಭುಜರ ಘನ ಹಾ |
ಸ್ಯದ ನುಡಿಯನಾಲಿಸುತ ಬರುತಿರ್ದನು ಸಭಾಂತರದಿ ||376||
ರಾಗ ಭೈರವಿ ತ್ರಿವುಡೆತಾಳ
ಬರುತ ಭೀಷ್ಮ ದ್ರೋಣ ಕೃಪರಿಂ | ಗೆರಗಿ ಮನದಲಿ ಯಾದವೇಂದ್ರಂ |
ಗಿರದೆ ನೇತ್ರದಿ ನಮಿಸಿ ಶಕ್ರಾ | ದ್ಯರಿಗೆ ಗುಹಗಣನಾಥ ದಿಕ್ಪಾ |
ಲರಿಗೆ ರುದ್ರಾದಿತ್ಯ ವಸು ಮು | ಖ್ಯರಿಗೆ ವಂದಿಸಿ ಬಂದನಗ್ಗದ |
ಧರಣಿಪಾಲರ ಮಾನಭಂಗವ | ವಿರಚಿದ ಧನುವಿರ್ದ ಬಳಿಗದ |
ನೇನನೆಂಬೆ | ಚೋದ್ಯವ | ನೇನನೆಂಬೆ ||377||
ಮೊದಲಲಂಬುಜಭವನನಾ ಮ | ಧ್ಯದಿ ಮಧುಸೂದನನ ಬಿಲು |
ತುದಿಯಲಾವಾಹಿಸಿ ಮಹೇಶನ | ನಿದು ಮಹಾ ಭೂಮಿಪರ ಬಿಂಕವ |
ನೊದೆದ ಧನುವೇ ಪೂತುರೆನುತೆ | ತ್ತಿದನು ಬಾಗುತ ತುತ್ತ ಬೆರಳಲಿ |
ಸದರವಲ್ಲಾ ಚಾಪವೆಂದೆನು | ತೊದರಿ ತಿರುವಿಂಗೇರಿಸಿದನದ |
ನೇನನೆಂಬೆ | ಸಾಹಸ | ವೇನನೆಂಬೆ ||378||
ತೆಗೆದು ಶರ ಪಂಚಕವನಾ ಧನು | ವಿಗೆ ಸರಾಗದಿ ಪೂಡಿ ಕಿವಿವರೆ |
ಗುಗಿದ ಯಂತ್ರದ ಹೊಳವನೀಕ್ಷಿಸಿ | ಮೊಗಸಿ ಬೀಳೆನುತೆಚ್ಚು ಕೆಡಹಲು |
ಹೊಗಳಿದರು ಮಝಪೂತುರೆಂದನು | ತಗಲದಲಿ ಜನಜಾಲವಮರರು |
ಗಗನದಲಿ ಪೂಮಳೆಯ ಕರೆದರು | ಸೊಗಯಿಸುವ ದುಂದುಭಿಯ ರವಮಿಗಿ |
ಲೇನನೆಂಬೆ | ಹರುಷವ | ನೇನನೆಂಬೆ ||379||
ವಾರ್ಧಕ
ಹಾಯೆನುತ ಕುಣಿದಾಡಿದರ್ ವಿಪ್ರರಬಲೆ ನಿ |
ರ್ದಾಯದಿಂ ಪಾರ್ವಂಗೆ ಸೇರಿದಳೆನುತ್ತ ಮೇಣ್ |
ರಾಯಸಭೆಯೈದೆ ಬೆರಗಾಗಿ ಮೂಗಿನ ಬೆರಳೊಳ್ ಕುಳ್ಳಿರ್ದರ್ ಮೌನದಿಂದ ||
ಪ್ರೀಯದ ವಿಲಾಸಿನಿಯ ಜನವೆಸೆಯುತಿರೆ ಸುತ್ತ |
ಲಾಯೆಡೆಗೆ ಬಳುಕುತ್ತ ಪಾಂಚಾಲೆಯೈತಂದು |
ಘೇಯೆನಲು ಸುರನಿಕರವರ್ಜುನನ ಕೊರಳಿಗಿಕ್ಕಿದಳು ಸುಮಮಾಲಿಕೆಯನು ||380||
ಭಾಮಿನಿ
ಹತ್ತು ಸಾವಿರ ಕಂಚುಕಿಗಳುರೆ |
ಕಿತ್ತಡಾಯುಧದಿಂದ ಸುತ್ತಲು |
ಮುತ್ತಿರಲು ಮೈಗಾವಲಿಂ ಪಾರ್ಥನನು ಸತಿ ಸಹಿತ ||
ಸತ್ಕರದಲರಮನೆಗೆ ಕರೆತರ |
ಲಿತ್ತ ಖತಿಯಲಿ ಕುರುನಪಾಲಕ |
ನುತ್ತಮಾಂಗವ ತೂಗುತೆಂದನು ತನ್ನವರೊಳಂದು ||381||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಕಂಡಿರೇ ಪಾಂಚಾಲನಪನು | ದ್ದಂಡತನವನು ಸಕಲ ಪಥ್ವೀ |
ಮಂಡಲೇಶರ ಮಾನವನು ಸಲೆ | ಖಂಡಿಸಿದುದ ||382||
ಹುಲು ಧನುವನುರೆ ನೆಗಹಿ ಹಾರುವ | ಗೆಲಿದ ಗಡ ಯಂತ್ರವನು ಮತ್ತವ |
ಗೊಲಿದು ಮದುವೆಯ ಮಾಳ್ಪ ಗಡ ಸುತೆ | ಯಳನು ಭರದಿ ||383||
ಅಳಿಯನಾಗಲಿ ದ್ರುಪದನಿಗೆ ಕಿರುಕುಳಿಯು ನೀವಿನ್ನವನ ಲಲನೆಗೆ |
ಬಳುವಳಿಯ ಕೊಡಿ ನಿಮ್ಮ ಹೆಂಡಿರ | ನೊಲಿದು ಬೇಗ ||384||
ವಾಸಿಯುಳ್ಳಡೆ ಗೆಲಿದು ನಪನನು | ಭೂಸುರನ ತಿರಿದುಣಲು ಕಳುಹಿ ವಿ |
ಲಾಸಿನಿಯರೊಳು ಕೂಡಿಸುವುದವ | ನಾ ಸುದತಿಯ ||385||
ರಾಗ ಮಾರವಿ ಏಕತಾಳ
ಕುರುಪತಿಯೀಪರಿ ಜರೆದುನುಡಿಯೆ ಕೇಳ್ದ |
ರಿಮಸಗುತ ನಪವರರೆಲ್ಲರು ಖತಿ |
ವೆರಸಿಯೆ ದ್ರುಪದನ ಪುರವನು ಮುತ್ತಿದ |
ರರರೆ ಕವಿಯೆನುತಲುರು ಸಂಭ್ರಮದಿ | ಕೇಳೈ ಭೂಪ ||386||
ಕೂಡೆ ಭಯದಿ ಹರಿದೋಡಿತು ದ್ವಿಜಸಭೆ |
ಗಾಢದಲಾವಿಗೆಕೂಡಿದ ತಮ್ಮಯ |
ಬೀಡನು ಪಾಂಡವರೂಢಿಪರೈದುತ |
ನೋಡುತಲಿರ್ದರು ಗೂಢದಲಿದನು | ಕೇಳೈಭೂಪ ||387||
ರಾಗ ಶಂಕರಾಭರಣ ಮಟ್ಟೆತಾಳ
ಇತ್ತ ಸಕಲ ನಪರ ಕಟಕ | ಮುತ್ತೆ ಕಂಡು ದ್ರುಪದ ಸೇನೆ |
ಯಿತ್ತುದವರೊಳಾಹವವನು | ಸತ್ತ್ವದಿಂದಲಿ ||
ಹತ್ತಗೊಡದಿರಿರಿಯಿತಿವಿಯೆ | ನುತ್ತ ಶೂಲ ಸಬಳ ಕುಂತ |
ಕಿತ್ತ ಖಡುಗಗಳಲಿ ಹೊಯ್ದ | ರೆತ್ತಿ ಸುಭಟರು ||388||
ಚೂಣಿಯಲ್ಲಿ ದಳವು ಮುರಿಯೆ | ಕಾಣುತಿನಜ ಶಲ್ಯ ಮುಖ್ಯ |
ರೂಣೆಯಿಲ್ಲದಳವಿಗೊಟ್ಟ | ರೇನನೆಂಬೆನು ||
ಸಾಣೆಯಂಬನೆಚ್ಚು ಗಾಯ | ಗಾಣಿಸುತ್ತ ರಿಪುಭಟರನು |
ಹೂಣೆಹೊಕ್ಕು ಹೊಯ್ದರಾಗ | ಕ್ಷಿಣಸತ್ತ್ವದಿ ||389||
ಕಂದ
ಕೊತ್ತಳವಂ ಮುರಿದೊಳಗೆ ಪೊ |
ಗುತ್ತಿರೆ ರಿಪುರಾಯಕಟಕವೀಕ್ಷಿಸಿ ಚಾರರ್ ||
ಮತ್ತಾ ಪಾಂಚಾಲಂಗೀ |
ವತ್ತಾಂತವನೈದೆ ಪೇಳ್ದರತಿವೇಗದೊಳಂ ||390||
ರಾಗ ಮುಖಾರಿ ಏಕತಾಳ
ಲಾಲಿಸು ಬಿನ್ನಪವ ರಾಯ | ರಣದೊಳು ಜೀಯ |
ಲಾಲಿಸು ಬಿನ್ನಪವ ರಾಯ || ಪಲ್ಲವಿ ||
ಕೊತ್ತಳವನ್ನೆ ಮುರಿದಿಕ್ಕಿ | ಪುರದ ಬೀದಿಯೊ |
ಳೊತ್ತಿ ಬಂದರು ಮದ ಸೊಕ್ಕಿ ||
ಸುತ್ತಲು ನಪರಕಟ | ಕೊತ್ತರವಾಗಿದೆ ಪ್ರಸ್ತದ ಬೀಯಗ | ರಿತ್ತುಪಚರಿಸುವ
ದರ್ತಿಯನೀಗಳೆ | ಹತ್ತಿರವಳಿಯನ | ಬಿತ್ತರದೀಕ್ಷಣ | ಮತ್ತಾಗುವದೈ ||391||
ಭಾಮಿನಿ
ಚರರ ನುಡಿಯನು ಕೇಳಿ ಪಾರ್ಥನು |
ಕೆರಳಿ ತರಹೇಳ್ ಬಿಲುಸರಳ್ಗಳ |
ನರಿಯಬಹುದೆನ್ನಂಗವಣೆಯನೆನುತ್ತ ಸೂಟಿಯಲಿ ||
ವರ ನಿಷಂಗಶರಾಸ ಚಾಪಾ |
ದ್ಯುರುತರದ ಸನ್ನಾಹವೆರಸಿಯೆ |
ಭರದಿ ರಥವೇರ್ದಾಹವಕೆ ಪೊರಮಟ್ಟನಾ ಕ್ಷಣಕೆ ||392||
ಕಂದ
ಒಂದೆಸೆಯೊಳ್ ಭೀಮಂ ಕಡು |
ಪಿಂದಂ ಪೆರ್ಮರನ ಮುರಿದುೊಂಡರಿಬಲಮಂ ||
ಹಿಂದುಳಿಯದೆ ಹೊಯ್ವುತಲೈ |
ತಂದನದೇನನೆಂಬೆನಾಚೆಗೆ ಕಾಳಗಮಂ ||393||
ರಾಗ ಪಂಚಾಗತಿ ಮಟ್ಟೆತಾಳ
ವೀರ ಪಾರ್ಥನು | ವೈರಿದಳವನು ||
ಮೀರಗೊಡದೆ ತರುಬಿ ಸರಳ | ಮಳೆಯ ಕರೆದನು ||394||
ಸುರಪಸೂನುವ | ಸರಳ ಸಾರವ ||
ಧರಿಸಲಾರದರಿನಪೌಘ | ವೆರೆಯೆ ಚೋದ್ಯವ ||395||
ಕಂಡು ರವಿಜನು | ಚಂಡ ಧನುವನು ||
ಕೊಂಡು ಸವ್ಯಸಾಚಿಯನ್ನು | ತರುಬಿ ನುಡಿದನು ||396||
ರಾಗ ನಾದನಾಮಕ್ರಿಯೆ ಅಷ್ಟತಾಳ
ಎಲವೊ ಹಾರುವ ಹುಲು ಧನುವನು | ಎತ್ತಿ |
ಗೆಲಿದೆ ಯಂತ್ರವನೆನ್ನುತಲಿ ನೀನು ||
ಸಲೆ ಗರ್ವಗೊಳದಿರೀಕ್ಷಣದೊಳು | ನಿನ್ನ |
ತಲೆಯ ಚೆಂಡಾಡುವೆ ರಣದೊಳು ||397||
ನುಡಿಯ ಬಿಂಕಕೆ ಹೆದರುವರಿಲ್ಲ | ನಿನ್ನೊಳ್ |
ಕಡುಹಿರ್ದಡೀಗ ತೋರುವುದೆಲ್ಲ ||
ಬಿಡೆಯವೇಕೆನುತಲಿ ಪಾರ್ಥನು | ಬಾಣ |
ಗಡಣವ ಕೆದರ್ದನೇನೆಂಬೆನು ||398||
ನರನ ಶರೌಘಸಾರವನಂದು | ತಾಳ |
ಲರಿಯದೆ ರಾಧೇಯನುರೆ ನೊಂದು ||
ಧುರದಿ ಪಲಾಯನದೀಕ್ಷೆಯ | ನಾಂತ |
ನಿರದೆ ಬೆಂಬತ್ತಲು ಕೌಂತೇಯ ||399||
ರಾಗ ಶಂಕರಾಭರಣ ಮಟ್ಟೆತಾಳ
ಇತ್ತ ಭೀಮಸೇನನರಿಗಳನ್ನು ತರುವಿಲಿ |
ಎತ್ತಿ ಚೆಲ್ಲ ಬಡಿಯುತೈ ತರಲ್ಕೆ ರಣದಲಿ ||
ಸತ್ತ್ವದಿಂದ ತಡೆಯುತೊಡನೆ ಶಲ್ಯಭೂಪನು |
ಬಿತ್ತರದಲಿ ಸರಳ ಮಳೆಯ ಸುರಿಯುತೆಂದನು ||400||
ಎಲವೊ ವಿಪ್ರ ಕೇಳು ನಮ್ಮ ಬಲವನೆಲ್ಲವ |
ಗೆಲಿದೆನೆಂಬ ಗರ್ವ ಬೇಡ ನಿನ್ನ ಸತ್ತ್ವವ ||
ನಿಲಿಸದಿರಲದೆಂತು ಶಲ್ಯನಹೆನು ತಾನೆನೆ |
ಉಲಿದು ಪವನಜಾತನೆಂದನವನೊಳೊಯ್ಯನೆ ||401||
ಕಣ್ಣು ಮೂರೊ ತಲೆಗಳೈದೊ ಶಲ್ಯನಾದರೆ |
ಗಣ್ಯವೆನಗಿದಲ್ಲವೆಲವೊ ನಿನಗೆ ಸೋತರೆ ||
ಹೆಣ್ಣು ತಾನದೈಸೆ ನೋಡೆನುತ್ತ ಭೀಮನು |
ಬಣ್ಣಗುಂದುವಂತೆ ಹೆಮ್ಮರದಿ ಹೊಯ್ದನು ||402||
ವಾರ್ಧಕ
ಮಾರುತಿಯ ಮರನ ಹೊಯ್ಲಿಂದ ಮಾದ್ರಾಧಿಪಂ |
ಸಾರಥಿ ರಥಾಶ್ವಗಳ್ ಪುಡಿಯಾಗಿ ಭಯದಿ ಹೊರ |
ಸಾರಿ ಬೆಂಗೊಟ್ಟೋಡಿದಂ ಭೀಮನೊಡನೆ ಬೆಂಬತ್ತಿದಂ ಸಾಹಸದೊಳು ||
ಸೂರ್ಯಸುತನಿತ್ತಲರ್ಜುನನಿಂ ಪರಾಭವಕೆ |
ಸೇರಿ ಕಡು ದುಮ್ಮಾನದಿಂದಲೈತಂದು ಕುರು |
ವೀರನಂ ಕಾಣುತ್ತ ನುಡಿದನೀ ತೆರದೊಳಂ ಭೂಪ ಕೇಳ್ ಕೌತುಕವನು ||403||
ರಾಗ ಸಾವೇರಿ ಅಷ್ಟತಾಳ
ಕುರುವರ್ಯ ಕೇಳೆನ್ನ ಮಾತ | ನಿನ್ನೊ |
ಳರುಹುವೆನೊಂದು ಪ್ರಖ್ಯಾತ || ಪಲ್ಲವಿ ||
ಬೆದರದಿನ್ನಾವು ಕಾದಿದರೆ | ವಿಪ್ರ | ವಧೆ ದೊರೆಯದೆ ಮಾಣದಲ್ಲದೆ ಬೇರೆ ||
ಅದರಿಂದಲೆಮ್ಮಯ | ಸದನಕೈದುವ ಕೇ |
ಳಿದರಿಂದೇನವಮಾನ | ವೊದಗಿರ್ದುದೊದಗಲಿ ||404||
ಪಡಿಬಲ ಸಹಿತ ನಾವಿನ್ನು | ಬಂದು | ಪೊಡವಿಪ ದ್ರುಪದರಾಯನನು ||
ಪಿಡಿದು ಯುದ್ಧದಿ ಜವ | ಗೆಡಿಸಬೇಕೀಗೆನ್ನ |
ನುಡಿಗೊಪ್ಪಿ ಪುರಕಾಗಿ | ನಡೆವುದೆ ಹಿತವಿದು ||405||
ವಾರ್ಧಕ
ಭೂಮಿಪತಿ ಲಾಲಿಸಿಂತೆಂದು ಕುರುವರ್ಯನಂ |
ಸಾಮದಿಂದೊಡಗೊಂಡು ಕರ್ಣನೈದಿದನಿತ್ತ |
ಭೀಮನಾ ಶಲ್ಯನಂ ಸಲೆ ಪರಾಭವಿಸಿ ಸಾರ್ದಂ ಕುಲಾಲಗಹವನು ||
ತಾಮರಸಬಾಂಧವಕುಮಾರಕನನತ್ತ ಸಂ |
ಗ್ರಾಮದೊಳ್ ಬೆಂಬತ್ತಿ ಮರಳಿ ದ್ರುಪದಜೆಯೆಡೆಗೆ |
ಪ್ರೇಮದಿಂದೈತಂದು ಫಲುಗುಣಂ ನುಡಿದನೇಕಾಂತದೊಳಗಂದು ಮುದದಿ ||406||
ರಾಗ ತೋಡಿ ಅಷ್ಟತಾಳ
ವಾರಿಜಮುಖಿ ಕೇಳು ಬಾರೆನ್ನ ಸಂಗಡ | ಮೀರದೀ ವಚನವನು ||
ಕಾರಿಯ ಲೇಸಹುದಿದರಿಂದಲೆನುತಲೆ | ವೀರ ಪಾರ್ಥನು ಪೇಳ್ದನು ||407||
ಕಾಂತ ಸದ್ಗುಣವಂತ ಬರುವೆನು ನಿನ್ನೊಡ | ನಂತರವಿಲ್ಲಿದಕೆ ||
ಕಂತು ಸನ್ನಿಭನೆ ಚಿತ್ತವಿಸಬೇಕೆನುತಲಿ | ಕಾಂತೆ ಬಿನ್ನವಿಸಿದಳು ||408||
ರಾಗ ಸಾಂಗತ್ಯ ರೂಪಕತಾಳ
ಅವನೀಂದ್ರ ಕೇಳ್ ಬಳಿಕಬಲೆಯನೊಡಗೊಂಡು |
ದಿವಿಜೇಂದ್ರ ಸೂನುವಾಕ್ಷಣದಿ ||
ತವಕದಿ ನಡೆತಂದನಾ ಕುಂಭಕಾರರ |
ಭವನವಿರ್ದೆಡೆಗಾಗಿ ಭರದಿ ||409||
ಚಂದಿರಮುಖಿಯನಾ ಭವನದ ಪೊರಗಿಟ್ಟು |
ಬಂದುಮಾತೆಯ ಪಾದಕೆರಗಿ ||
ತಂದೆನು ದಿವ್ಯ ಮೌಕ್ತಿಕವನು ಭೂಪಾಲ |
ವಂದವ ಗೆಲಿದು ತಾನೆಂದ ||410||
ಎನೆ ಹರುಷದಿ ನುಡಿತೊದಲಿಸಲೊಳಿ ತಾಯಿ |
ತನುವಿಂದೈವರು ಸಮವಾಗಿ ||
ವಿನಯದಿ ಭೋಗಿಪುದೆನಲು ಹಸಾದವೆಂ |
ದನು ಪಾರ್ಥ ಕುಂತಿಯ ನುಡಿಗೆ ||411||
ಬಳಿಕ ದ್ರೌಪದಿಯನ್ನು ಕರೆತಂದು ಮಾತೆಗೆ |
ಫಲುಗುಣನುರೆ ಪೊಡಮಡಿಸೆ ||
ಜಲರುಹ ನೇತ್ರೆಯ ಪಿಡಿದೆತ್ತಿ ನುಡಿದಳು |
ತಳವೆಳಗಾಗುತ್ತ ಪಥೆಯು ||412||
ರಾಗ ನೀಲಾಂಬರಿ ಆದಿತಾಳ
ಏನಿದು ಪೇಳೊ ಕಂದ | ತಂದ ಮೌಕ್ತಿಕವು |
ನೀನಿದ ಸುಗುಣ ವಂದ ||
ಈ ನಾರಿಮಣಿಯ ನೀವೆಲ್ಲ | ಸಮನಿಂದೈವರು |
ಮೇಣಾಳ್ವಂತಾದುದಲ್ಲ ||413||
ನುಡಿ ತೊದಲಿಸಿತೆನಗೆ | ಐವರು ಸಮ |
ವಡೆದುವಿ ನೀವೆಂತು ಹೀಗೆ ||
ಮಡದಿಯೊರ್ವಳನು ಇನ್ನು | ಆಳುವಿರೆನ |
ಲೊಡನೆಂದನಾ ಪಾರ್ಥನು ||414||
ರಾಗ ಘಂಟಾರವ ಏಕತಾಳ
ಮಾತೆ ನಿಮ್ಮಂು ನುಡಿ ತಪ್ಪಲರಿವುದುಂಟೆ |
ಮಾತೇನು ಹಲವು ನಾವೈವರಿಗಿನ್ನು ||
ಈ ತಳೋದರಿ ವಧುವಾಳು ತವ ವಾಕ್ಯ |
ಪಾಥೋಧಿಯೆಮಗೆಯಲಂಘ್ಯವದೈಸೆ ||415||
ಎನೆ ಕೇಳ್ದು ಪಾರ್ಥನ ನುಡಿಗೆ ಧರ್ಮಜ ನೈದೆ |
ಕನಲ್ದನು ಭೀಮನಲ್ಲೆಂದು ಪೇಳಿದನು ||
ಅನುಚಿತವೆಂದರು ಮಾದ್ರೇಯರದಕೆ ಮ |
ತ್ತನುನಯದಿಂದವರ್ಗೆಂದನಾ ನರನು ||416||
ರಾಗ ತೋಡಿ ತ್ರಿವುಡೆತಾಳ
ಬಲ್ಲವರು ನೀವಖಿಳವನು ಮೇ | ಣೆಲ್ಲ ಶಾಸ್ತ್ರ ಪುರಾಣ ವೇದಗ |
ಳಲ್ಲಿ ಸಾರಾಂಸವನು ನೋಡಲ್ಕೆ ||
ಇಲ್ಲ ತಾಯಿಂದಧಿಕವಾಕೆಯ | ಸೊಲ್ಲು ತತ್ಸುತರಿಂಗಲಂಘ್ಯವು |
ತಲ್ಲಣವದೇಕದಕೆ ನಿಮಗಿಂತು ||417||
ರಾಗಲೋಭಗಳಿಂದಲುರೆ ನೀ | ವೀ ಗರುವೆಗಳುಪಿದರೆ ಸದ್ಧಿ |
ರ್ಮಾಗಮವ ರಚಿವುದೆಯನುಷ್ಠಾನ ||
ಈಗಳೀ ಗುರ್ವಚನ ಕರ್ಮ | ತ್ಯಾಗ ನಮಗಿದು ಧರ್ಮವೇ ಉಪ |
ಭೋಗವೈವರಿಗೆಂದು ತಿಳುಹಿದನು ||418||
ನಾಡಮಾತಿಂದೇನು ಶಾಸ್ತ್ರದ | ಗೂಢವನು ತಿಳಿದರ್ಗೆ ಸುಮ್ಮನೆ |
ಮಾಡದಿರಿ ಸಂಶಯವ ನೀವಿದಕೆ ||
ಗೂಡು ಹಲವಿಹ ಪಕ್ಷಿಯೊಂದರ | ರೂಢಿಯೆಮ್ಮದು ಸಾಕಿದಕೆ ಖಯ |
ಖೋಡಿಯಿಲೆಂದುಸಿರಿದನು ಪಾರ್ಥ ||419||
ವಾರ್ಧಕ
ಭೂಧವನೆ ಲಾಲಿಸೈ ಮಗುಳವರಿಗೆಲ್ಲರಿಂ |
ಗಾದುದೊಂದೇ ಮತಂ ಬಳಿಕೈವರೊಲವಿನಿಂ |
ದಾ ದ್ರುಪದಸುತೆಯನಂಗೀಕರಿಸೆ ದಿನಪನಿತ್ತ ಪಶ್ಚಿಮಾಂಬುಧಿ ಸೇರಲು ||
ಸಾದರದಿ ಸಂಧ್ಯಾದಿಕವನೆಸಗಿ ಮುರಹರನ |
ಪಾದಯುಗಮಂ ಸ್ಮರಿಸಿ ಮಾತೆಯಂಘ್ರಿಗೆಯೆರಗಿ |
ಆ ದಿನದ ರಾತ್ರಿಯೊಳ್ ಮಲಗಿ ಮಾತಾಡುತಿರ್ದರ್ ತಮ್ಮೊಳೊಲಿಯುತವರು ||420||
ಫಲುಗುಣಂ ಧರ್ಮಜನೊಳೆಂದನಂದಿನ ದಿನದ |
ಕಲಹದೊಳು ಕರ್ಣಾದ್ಯರಂ ಗೆಲಿದು ಗಜತುರಗ |
ದಳವೆಲ್ಲವಂ ಪರಾಭವಿಸಿದಾ ಪದ್ಧತಿಯನಾಯುಧದ ಲಕ್ಷಣವನು ||
ಹಲವು ನಪಧರ್ಮಮತ ಪೇಳುತ್ತಲಿವರು ಕ |
ತ್ತಲೆಯ ನೂಕುತ್ತಲಿರಲಲ್ಲಿವರ ಬೇವನರಿ |
ಯಲು ಬಂದು ನಿಂದು ಮರೆಯೊಳ್ ಕೇಳುತಿರ್ದನಾ ವೇಳೆ ಧಷ್ಟದ್ಯುಮ್ನನು ||421||
ಕಂದ
ಮೆಲ್ಲನೆ ಮರೆಯೊಳ್ನಿಂದಿದ |
ನೆಲ್ಲವನುಂ ಕೇಳ್ದು ಬಂದಾ ಧಷ್ಟದ್ಯುಮ್ನಂ ||
ಸೊಲ್ಲಿಸಿದಂ ಸ್ನೇಹದಿ ಭೂ |
ವಲ್ಲಭನಹ ದ್ರುಪದನೊಡನೆ ಸಾಂಗದೊಳಾಗಳ್ ||422||
ರಾಗ ಪಂತುವರಾಳಿ ಏಕತಾಳ
ಜನಕ ಕೇಳೈ ನಿನ್ನಿನಿರುಳು ಮುನಿರಾಯ ಕಾಶ್ಯಪರ |
ಅನುವಿನಿಂದ ಪೋಗಿ ತಿಳಿದೆನಿನಿತುವೆಲ್ಲ ವಿವರ ||
ಜನಪಾಲಕರಾಗಿ ತೋರುವರೆನಗೆ ನೋಡಲವರು |
ವಿನುತ ವಿಪ್ರರಹರೆ ಸದ್ಭೋಜನವಾರ್ತೆ ಪೇಳುವರು ||423||
ಮತ್ತೆ ದ್ವಿಜರಾಗಿರಲು ವೇದದರ್ಥ ತರ್ಕಾದಿಗಳ |
ಅರ್ಥದಿಂದ ಕಳೆಯಲಿಹರೇಯರ್ತಿಯಿಂದಲಿರುಳ ||
ಪೃಥ್ವಿಪತಿ ಗಜಾದಿಹಯ ಶಸ್ತ್ರಾಸ್ತ್ರವಿದ್ಯಾಧಿಕದಿ |
ಹೊತ್ತುಗಳೆವರಾರೆಂದವರ ಚಿತ್ತವಿಸು ನೀ ಮನದಿ ||424||
ವಾರ್ಧಕ
ಅವನೀಂದ್ರ ಲಾಲಿಸೈ ಚಿಂತೆಯಿನ್ನೇತಕಿದ |
ಕವರು ಪಾರ್ಥಿವಜಾತಿಯೊಳ್ ಪರಿಕಿಸಲ್ಕೆ ಪಾಂ |
ಡವರು ಸಂಶಯ ಬೇಡ ಬೇಗದೊಳ್ ಕರೆತಂದು ಮನ್ನಿಸುವುದವರನೆನುತ ||
ವಿವರವರಿದುಸಿರೆ ಧಷ್ಟದ್ಯುಮ್ನನಮಲ ವಾ |
ಕ್ಯವನೈದೆ ಕೇಳ್ದು ಪರಿತೋಷದಿಂದಾ ನಪಂ |
ರವಿಯುದಯದೊಳ್ ಸಕಲ ಸನ್ನಾಹವೆರಸಿ ಪೊರಮಟ್ಟನವರಿರ್ಪ ಬಳಿಗೆ ||425||
ಭಾಮಿನಿ
ಬಂದು ಬಳಿಕ ಕುಲಾಲಭವನದ |
ಲಂದಿವರನೀಕ್ಷಿಸುತ ನಪಕುಲ |
ನಂದನರು ಸರಿಯೆಂಬುದನು ಮುಖಕಾಂತಿಯಿಂದರಿದು ||
ಅಂದ ಮಿಗೆ ಮನ್ನಿಸುತವರ ನಪ |
ಮಂದಿರಕೆ ಪರಮೋತ್ಸವದಿ ಕರೆ |
ತಂದನೈವರ ಪಥೆಸಹಿತ ದ್ರುಪದಾವನೀಶ್ವರನು ||426||
ರಾಗ ಕಾಂಭೋಜಿ ಝಂಪೆತಾಳ
ಬಳಿಕೈವರೊಲಿದು ಮಂಗಳ ಮಜ್ಜನವನೆಸಗಿ |
ಲಲಿತ ದಿವ್ಯಾಂಬರವ ನುಟ್ಟು ||
ಜ್ವಲಿತ ಸರ್ವಾಭರಣದಿಂದಲಂಕತಿವೆತ್ತು |
ಲಲನೆಯರ ಶೋಭಾನವೆರಸಿ ||427||
ಬಾಸಿಗದ ನೊಸಲಲೈವರು ಮಂಟಪದಲಿ ಮೇ |
ಲ್ವಾಸಿನಲಿ ಬಂದು ಕುಳ್ಳಿರಲು ||
ಆ ಸೊಸೆಯು ಸಹಿತ ಕುಂತಿಯು ಕೆಲದೊಳಿರೆ ಜನ ವಿ |
ಲಾಸವನು ಕಂಡು ಬೆರಗಾಯ್ತು ||428||
ಜನವನಂಜಲಿಯಿಂದ ಕೊಂಡು ನಿಮ್ಮೈವರೊಳ |
ಗಳುಕದುರೆ ಮತ್ಸ್ಯಯಂತ್ರವನು ||
ಗೆಲಿದಾತನಾರು ಬರಲೆಂದು ದ್ರುಪದನು ನುಡಿಯ |
ಲಿಳಿದು ಬಂದನು ಭೂಪನೊಡನೆ ||429||
ಕೂಡೆ ಮಾರುತಿಯವನ ಸಂಗಡವಡೆ ಪಾರ್ಥನಾ |
ಗಾಢದಿಂ ಯಮಳರೈತರಲು ||
ನೋಡಿ ವಿಸ್ಮಯದಿ ಎವೆ ಹಳಚದರನು ನುಡಿದ |
ನೀಡಿ ಜಲವನು ಕೆಲಕೆ ನಪನು ||430||
ಆರು ನೀವಸುರರೋ ಸುರರೊ ಭುಜಗರೊ ದಿಟ ಮ |
ಹೀರಮಣಕುಲದಲುದಿಸಿದಿರೋ ||
ಬೇರೆ ಮಾನವ ಪರುಠವವದಲ್ಲವೆಂದನಾ |
ಧಾರಿಣೀಪತಿಯು ವಿಸ್ಮಯದಿ ||431||
ನರನಿವನು ಭೀಮನೀತನು ಯಮಳರಿವರೆಮಗೆ |
ಕಿರಿಯರೈ ನಾವು ಪಾಂಡವರು ||
ವರ ಮಾತೆ ಕುಂತಿಯವಳೀ ತಳೋದರಿಯೈವ |
ರರಸಿಯಹಳೆಂದನಾಭೂಪ ||432||
ಕಂಡು ತಿಳಿಯೆವು ಕೇಳೆವು ಸ್ಮೃತಿ ಶಾಸ್ತ್ರ ಭೂ |
ಮಂಡಲ ವಿರೋಧವಿದು ತಿಳಿಯೆ ||
ಪಾಂಡುತನಯರು ಮಹಾತ್ಮರದೆಂಬರೇತಕೀ |
ಭಂಡತನ ನಿಮಗೆಂದನರಸ ||433||
Leave A Comment