ವೈದ್ಯಕೀಯ ಕ್ಷೇತ್ರದಲ್ಲಿ ನಿಸ್ವಾರ್ಥತೆಯಿಂದ ರೋಗಿಗಳ ಸೇವೆಯಲ್ಲಿ ತೊಡಗಿರುವ ಸಂಸ್ಥೆ ಬೆಂಗಳೂರಿನ ರಂಗದೊರೆ ಸ್ಮಾರಕ ಆಸ್ಪತ್ರೆ
ಶ್ರೀ ಶೃಂಗೇರಿ ಶಾರದಾಪೀಠ ಪರಮಪೂಜ್ಯ ಜಗದ್ಗುರುಗಳಾದ ಶ್ರೀಭಾರತೀತೀರ್ಥ ಮಹಾಸ್ವಾಮಿಗಳ ದೂರದೃಷ್ಟಿಯ ಸಂಕಲ್ಪದಲ್ಲಿ ಪ್ರಾರಂಭಿಸಲ್ಪಟ್ಟಿರುವ ರಂಗದೊರೆ ಸ್ಮಾರಕ ಆಸ್ಪತ್ರೆ ರಾಜ್ಯದ ಪ್ರತಿಷ್ಠಿತ ಸುಸಜ್ಜಿತ ಆಸ್ಪತ್ರೆಯಾಗಿದೆ. ಸವಲತ್ತು, ವಿಶೇಷ ಪರಿಣಿತಿ, ತಜ್ಞವೈದ್ಯರ ನಿರಂತರ ಸಲಹೆ-ಸೂಚನೆ, ಮಾರ್ಗದರ್ಶನ ಮತ್ತು ಅನುಭವದ ಸಂಪರ್ಕ ಸಾಧನದಿಂಧಾಗಿ ರಾಜ್ಯದ ವಿಶೇಷ ಆಸ್ಪತ್ರೆಯಾಗಿ ಸ್ಥಾನ ಪಡೆದಿದೆ. ಚಿಕಿತ್ಸೆ, ವೈದ್ಯೋಪಚಾರಗಳೆಲ್ಲವೂ ಇಲ್ಲಿ ‘ಸೇವೆ’ಯೇ. ರೋಗಿಗಳ ಸಮುದಾಯದ ಸೇವೆಯಲ್ಲಿ ಒಂದು ದಶಕದ ಹೆಜ್ಜೆಗುರುತು ಈ ಆಸ್ಪತ್ರೆಯದ್ದು. ವ್ಯಾಪಾರಿ ಮನೋಭಾವವಿಲ್ಲದೆ, ವೈದ್ಯೋಪಚಾರವನ್ನು ಶ್ರೀಸಾಮಾನ್ಯನಿಗೆ ಸುಲಭ ದರದಲ್ಲಿ ಒದಗಿಸಿದ ಹೆಗ್ಗಳಿಕೆ ಈ ಆಸ್ಪತ್ರೆಯದ್ದಾಗಿದ್ದು ಮಾದರಿಯಾಗಿದೆ.
Categories
ರಂಗದೊರೆ ಸ್ಮಾರಕ ಆಸ್ಪತ್ರೆ
