ವೇದ ಪಾರಂಗತ ಸಂಸ್ಕೃತ ವಿದ್ವಾನ್ ಟಿ. ನರಸಿಂಹಮೂರ್ತಿ ಶಾಸ್ತ್ರಿ ಅವರು.
೧೯೩೨ರಲ್ಲಿ ಕೋಲಾರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕು ತಿಮ್ಮಸಂದ್ರ ಗ್ರಾಮದಲ್ಲಿ ಜನನ, ತಂದೆ ಟಿ. ಚಿದಂಬರಪ್ಪ ತಾಯಿ ಟಿ. ನರಸಮ್ಮ, ಅರ್ಚಕರ ಮಗನಾಗಿ ಜನಿಸಿ ಕೃಷ್ಣ ಯರ್ಜುವೇದ ಅಧ್ಯಯನ ಮಾಡಿ ವಿದ್ವತ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಸ್ಮಾರ್ತ ಪ್ರಯೋಗದಲ್ಲಿ ವಿದ್ವತೆ ಮತ್ತು ಶ್ವೇತ ವಿದ್ವತ್ ಪ್ರಯೋಗಗಳನ್ನು ಅಭ್ಯಾಸ ಮಾಡಿರುತ್ತಾರೆ.
ಪ್ರಸ್ತುತ ಮಾಗಡಿಕರಣಿಕರ ವೈದಿಕ ಧರ್ಮ ಪಾಠಶಾಲೆಯಲ್ಲಿ ವೇದ ಮತ್ತು ಸಂಸ್ಕೃತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವವರು ವಿದ್ವಾನ್ ಟಿ. ನರಸಿಂಹಮೂರ್ತಿ ಶಾಸ್ತ್ರಿ
ಅವರು.
Categories