ಪಲ್ಲವಿ : ವಿಧ ವಿಧ ಬೊಂಬೆಯ ಮಾಡಿದ ಬ್ರಹ್ಮನು
ಅರಿಷಡ್ವರ್ಗವ ಮನದಲಿ ತುಂಬಿ
ಚರಣ : ಸೂತ್ರಧಾರಿ ಹರಿ ಆಡಿಸಿ ಕುಣಿಸಿದ
ಕೆಟ್ಟುಹೋದ ಬೊಂಬೆಗಳ ಕರ್ಮವು ಅಂದ
ಬಗೆ ಬಗೆ ಕಥೆಗಳ ನಾಟಕ ರಂಗ
ಪಾತ್ರಧಾರಿಗಳ ಪ್ರೇಕ್ಷಕರೆಲ್ಲಾ
ಸುಖದುಃಖಗಳ ಬಣ್ಣದ ತೆರೆಯು
ಬಯಲಾಟವಿದು ಮುಗಿಯದ ಕಥೆಯು
ಕೊನೆಮೊದಲಿಲ್ಲ ಅರ್ಥವಾಗದು
ಸಚ್ಚಿದಾನಂದನೆ ಸಾಕ್ಷಿಭೂತನು
Leave A Comment