Categories
ಜಾನಪದ ರಾಜ್ಯೋತ್ಸವ 2017 ರಾಜ್ಯೋತ್ಸವ ಪ್ರಶಸ್ತಿ

ವಿಷ್ಣಪ್ಪ ಗೋವಿಂದಪ್ಪ ಪುರದವರ

ಜನಪದ ಪರಂಪರೆಯಲ್ಲಿ ತಮ್ಮ ಕುಲದೈವವಾದ ಬೀರಪ್ಪ ದೇವರ ಧಾರ್ಮಿಕ ಕಾರ್ಯಗಳಲ್ಲಿ ಡೊಳ್ಳಿನ ಪದಗಳನ್ನು ಸಾದರ ಪಡಿಸುವ ಮೂಲಕ ತತ್ವಗಳನ್ನು ಪ್ರಸ್ತುತ ಪಡಿಸುವ ಕಲಾವಿದರಲ್ಲಿ ವಿಷ್ಣಪ್ಪ ಗೋವಿಂದಪ್ಪ ಪುರದವರ ಅವರು ಪ್ರಮುಖರು.

ಕಳೆದ ನಾಲ್ಕು ದಶಕಗಳಿಂದ ನಿರಂತರವಾಗಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮ ತತ್ವಪದಗಳು ಮತ್ತು ಭಜನಾ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುವ ವಿಷ್ಣಪ್ಪ ಅವರು ತಮ್ಮ ಆಶುಕವಿತ್ವದಿಂದ ತತ್ವಗಳನ್ನು ಕಟ್ಟಿಕೊಡುವಲ್ಲಿ ಸಹ ಜನಪ್ರಿಯರು. ಆಸಕ್ತ ಮಕ್ಕಳಿಗೆ ತತ್ವಪದ ತರಬೇತಿ ಕಾರ್ಯವನ್ನು ನಡೆಸಿಕೊಡುತ್ತ ಬಂದಿದ್ದಾರೆ.

ಉತ್ತರ ಕರ್ನಾಟಕದ ಪ್ರಮುಖ ಪ್ರದೇಶಗಳಲ್ಲಿ ಕಾರ್ಯಕ್ರಮಗಳನ್ನು ನೀಡುತ್ತ ಬಂದಿರುವ ವಿಷ್ಣಪ್ಪ ಗೋವಿಂದಪ್ಪ ಪುರದವರ ಅವರ ಡೊಳ್ಳಿನ ಪದ ಗಾಯನವನ್ನು ವೃತ್ತಿಯಾಗಿಯೂ ಪ್ರವೃತ್ತಿಯಾಗಿಯೂ ರೂಢಿಸಿಕೊಂಡು ಬದುಕಿದವರು. ಇವರ ಸೇವೆಯನ್ನು ಗುರುತಿಸಿ ಹಲವು ಸಂಘ-ಸಂಸ್ಥೆಗಳು ಗೌರವಿಸಿವೆ.